ಮಹಾಲಿಂಗಪುರ: ನೌಕರಿ ಬಿಟ್ಟು ನರ್ಸರಿಯಲ್ಲಿ ರಾಜಾರಮೀಜ್‌ ಯಶ

ಹ್ಯಾಪಿ ಹೋಮ್‌' ಹೆಸರಿನ ಈ ನರ್ಸರಿಯಲ್ಲಿ 130ಕ್ಕೂ ಹೆಚ್ಚು ಸಸ್ಯಗಳನ್ನು ಇಟ್ಟು ಮಾರುತ್ತಿದ್ದಾರೆ.

Team Udayavani, May 30, 2023, 2:20 PM IST

ಮಹಾಲಿಂಗಪುರ: ನೌಕರಿ ಬಿಟ್ಟು ನರ್ಸರಿಯಲ್ಲಿ ರಾಜಾರಮೀಜ್‌ ಯಶ

ಮಹಾಲಿಂಗಪುರ: ಸಕ್ಕರೆ ಕಾರ್ಖಾನೆಯಲ್ಲಿ ಲೆಕ್ಕಾಧಿಕಾರಿ ಹುದ್ದೆ ತೊರೆದು ನರ್ಸರಿಯಲ್ಲಿದ್ದ ಆಸಕ್ತಿಯನ್ನೇ ಉದ್ಯಮವನ್ನಾಗಿಸಿಕೊಂಡು ಯಶಸ್ಸು ಕಂಡಿದ್ದಾರೆ ನವೋದ್ಯಮಿ ರಾಜಾರಮೀಜ್‌ ಡಾಂಗೆ.

ಎಂಬಿಎ ಮುಗಿದ ಮೇಲೆ ಗೆಳೆಯರೊಟ್ಟಿಗೆ ಬೆಂಗಳೂರಿನಲ್ಲಿ ವಾಟರ್‌ ಹೀಟರ್‌ ಕಂಪನಿ ಆರಂಭಿಸಿದ ರಾಜಾರಮೀಜ್‌ ಮನೆಯ
ಪರಿಸ್ಥಿತಿಯಿಂದ ಮಹಾಲಿಂಗಪುರಕ್ಕೆ ಹಿಂತಿರುಗಿ ಸಮೀಪದ ಸಕ್ಕರೆ ಕಾರ್ಖಾನೆಯಲ್ಲಿ ಸೇಲ್ಸ್‌ ಮ್ಯಾನೇಜರ್‌ ಆಗಿ ಸೇರಿದರು.ನಂತರ ಲೆಕ್ಕಾ ಧಿಕಾರಿ ಹುದ್ದೆ ಬಡ್ತಿ ಪಡೆದು ನೌಕರಿ ಮಾಡುತ್ತಲೇ ಆನ್‌ ಲೈನ್‌ನಲ್ಲಿ ಇಂಡಿಯನ್‌ ಹಾರಿಕಲ್ಚರ್‌ ಟೆಕ್ನಾಲಜಿ ವಿವಿಯಲ್ಲಿ ಗಾರ್ಡನಿಂಗ್‌ ಮತ್ತು ಲ್ಯಾಂಡ್‌ಸ್ಕೇಪ್‌ ಕೋರ್ಸ್‌ ಮುಗಿಸಿದರು.

ಟೆರೆಸ್‌ ಗಾರ್ಡನಿಂಗ್‌ ಪದ್ಧತಿ ಮೂಲಕ ಮನೆಯಲ್ಲಿ ಇರುವಷ್ಟೇ ಜಾಗದಲ್ಲಿ ಗಿಡಗಳನ್ನು ಬೆಳೆಸಲು ಮುಂದಾದ ರಾಜಾರಮೀಜ್‌ ಸ್ವಲ್ಪ ಪ್ರಮಾಣದಲ್ಲಿ ಯಶಸ್ಸೂ ಕಂಡರು. ತಮ್ಮಲ್ಲಿನ ಪ್ರತಿಭೆ, ಕ್ರಿಯಾಶೀಲತೆ ಹಾಳಾಗಬಾರದೆಂದು ನಿಶ್ಚಯಿಸಿ ನೌಕರಿ ತೊರೆದು “ಹ್ಯಾಪಿ ಹೋಮ್‌’ ಹೆಸರಿನಲ್ಲಿ ಸಣ್ಣ ಉದ್ಯಮ ಆರಂಭಿಸಿದರು. ಕೃಷಿ ಆಸಕ್ತರಿಗೆ ಅಗತ್ಯ ಮಾಹಿತಿ ನೀಡಿ ಆಕರ್ಷಿತರಾಗಿದ್ದಾರೆ. ಇಂದಿನ ನಿರುದ್ಯೋಗಿ ಯುವಕರಿಗೆ ಮಾದರಿಯಾಗಿದ್ದಾರೆ.

ಮನೆಯ ಒಳಾಂಗಣ, ಹೊರಾಂಗಣ ವಿನ್ಯಾಸಕ್ಕೆ ತರಿಸುವ ವಸ್ತುಗಳನ್ನು ಇರಿಸಲು ಜಾಗದ ಕೊರತೆಯಿಂದ ಮಹಾಲಿಂಗಪುರ-ಬೆಳಗಲಿ ರಸ್ತೆ ಯಲ್ಲಿ ಬಾಡಿಗೆ ರೂಪದಲ್ಲಿ 20 ಗುಂಟೆ ಜಮೀನಿನಲ್ಲಿ ನರ್ಸರಿ ಆರಂಭಿಸಲು ನಿರ್ಧರಿಸಿ ತಾರಸಿಯಲ್ಲಿದ್ದ ಸಸಿಗಳನ್ನು ನರ್ಸರಿಗೆ ವರ್ಗಾಯಿಸಿದರು. “ಹ್ಯಾಪಿ ಹೋಮ್‌’ ಹೆಸರಿನ ಈ ನರ್ಸರಿಯಲ್ಲಿ 130ಕ್ಕೂ ಹೆಚ್ಚು ಸಸ್ಯಗಳನ್ನು ಇಟ್ಟು ಮಾರುತ್ತಿದ್ದಾರೆ.

ಇವರ “ಹ್ಯಾಪಿ ಹೋಮ್‌’ನಲ್ಲಿ ಬೋನ್ಸಾಯ್‌ ಗಿಡಗಳು, ಹೂವಿನ ಗಿಡಗಳು, ಕ್ಯಾಕ್ಟಸ್‌, ಸಕ್ಯೂಲೆಂಟ್‌ ಗಿಡಗಳು, ಅಲಂಕಾರಿಕ ಸಸ್ಯಗಳು, ಹ್ಯಾಂಗಿಂಗ್‌ ಗಿಡಗಳು, ಹಣ್ಣಿನ ಗಿಡಗಳು, ಮಣ್ಣಿನ ಕಲಾಕೃತಿಗಳು, ಮನಿ ಪ್ಲಾಂಟ್‌, ಅಲೋವೆರಾ, ಆರ್ಕಿಡ್‌, ಜತ್ರೋಪಾ, ಔಷಧ ಸಸ್ಯಗಳು ಇವೆ. ಪತ್ನಿ ಕೃಷಿ ಅಧಿಕಾರಿ, ತಂದೆ ನಿವೃತ್ತ ಶಿಕ್ಷಕ, ತಾಯಿ ಅಧ್ಯಾಪಕಿಯಾಗಿದ್ದು, ಇವರಿಗೆ ಅಗತ್ಯ ಪ್ರೋತ್ಸಾಹ ನೀಡುತ್ತಿದ್ದಾರೆ.

ನರ್ಸರಿಯಲ್ಲಿ ಸಸ್ಯ ಅಭಿವೃದ್ಧಿ ಮಾಡುವ ಯೋಚನೆ ಇದೆ. ಇದರಿಂದ ಸ್ಥಳೀಯವಾಗಿ ಹಾಗೂ ಕಡಿಮೆ ದರದಲ್ಲಿ ಸಸ್ಯಗಳು ಲಭ್ಯವಾಗಲಿವೆ. ಜನರಿಗೆ ಸಸ್ಯಗಳ ಬಗ್ಗೆ ಆಸಕ್ತಿ ಇದೆ. ಆದರೆ ನಿರ್ವಹಣೆ ಮಾಡುವ ಮಾಹಿತಿ ಕೊರತೆ ಇದೆ. ಅದನ್ನು ನರ್ಸರಿಯಲ್ಲಿ ನೀಡಲಾಗುತ್ತಿದೆ.
*ರಾಜಾರಮೀಜ್‌ ಡಾಂಗೆ, ನವೋದ್ಯಮಿ.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-mudhol

Mudhol: ನಾರಿಯರ ಗಸ್ತುಕಾರ್ಯಕ್ಕೆ ಪೊಲೀಸ್ ಇಲಾಖೆ ಶ್ಲಾಘನೆ

Bagalakote: ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಮಹತ್ವದ ಒಪ್ಪಂದಕ್ಕೆ ಎಂ.ಆರ್.ಎನ್ ಸಮೂಹ ಸಹಿ

Bagalakote: ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಮಹತ್ವದ ಒಪ್ಪಂದಕ್ಕೆ ಎಂ.ಆರ್.ಎನ್ ಸಮೂಹ ಸಹಿ

11

Mudhol: ಅಂತಾರಾಜ್ಯ ಕಳ್ಳನ ಬಂಧನ; ಟ್ರ್ಯಾಕ್ಟರ್ ವಶ

4

Mudhol: ಮನೆ ಕಳ್ಳತನ; ದೂರು ದಾಖಲು

Mudhol: ನಗರದಲ್ಲಿ ಹೆಚ್ಚಿದ ಕಳ್ಳರ ಹಾವಳಿ… ಮಹಿಳಾ‌ಮಣಿಗಳಿಂದ ರಾತ್ರಿ‌ ಗಸ್ತು

Mudhol: ನಗರದಲ್ಲಿ ಹೆಚ್ಚಿದ ಕಳ್ಳರ ಹಾವಳಿ… ಮಹಿಳಾ‌ಮಣಿಗಳಿಂದ ರಾತ್ರಿ‌ ಗಸ್ತು

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.