ಶತ ಶತಮಾನದ ಇತಿಹಾಸ ಸಾರುವ `ಮಲ್ಲಯ್ಯನ ಮಂಗಳಾರತಿ’


Team Udayavani, Apr 9, 2022, 6:21 PM IST

Untitled-1

ರಬಕವಿ-ಬನಹಟ್ಟಿ : ಭಾರತೀಯರ ಆಚರಣೆ ಮತ್ತು ಸಂಪ್ರದಾಯಗಳಿಗೆ ತನ್ನದೇ ಆದ ಮಹತ್ವಗಳಿವೆ. ಈ ಆಚರಣೆಗಳಿಗೆ ಊತಿಹಾಸಿಕ ಹಿನ್ನಲೆಯೂ ಇದೆ. ಈ ಆಚರಣೆಗಳು ಶತಶತಮಾನದಿಂದಲೂ ನಡೆದುಕೊಂಡು ಬಂದಿರುವಂತಹವು. ನಮ್ಮ ಗ್ರಾಮೀಣ ಪ್ರದೇಶಗಳು ಆಧುನಿಕತೆಯ ಜೊತೆಗೆ ಸಂಪ್ರದಾಯಗಳನ್ನು ಬಿಟ್ಟು ಬಿಡದೆ ಆಚರಿಸುತ್ತಾ ಬಂದಿರುವುದಕ್ಕೆ ಐದೇಶಿ ಸಂದರ್ಭದಲ್ಲಿ ಮಲ್ಲಯ್ಯನ ದೇವಸ್ಥಾನದಲ್ಲಿ ನಡೆಯುವ ಐದು ದಿನಗಳ ಮಂಗಳಾರತಿ ಕಾರ್ಯಕ್ರಮ ವಿಶೇಷವಾಗಿದೆ.

ದೇವರನ್ನು ಕರೆದುಕೊಂಡ ದಿನದಿಂದ ಐದು ದಿನಗಳ ಕಾಲ ಪ್ರತಿ ರಾತ್ರಿ 9 ಗಂಟೆಗೆ ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ಮಲ್ಲಯ್ಯನ ಮಂಗಳಾರತಿ ಕಾರ್ಯಕ್ರಮ ನಡೆಯುತ್ತದೆ. ಈ ಮಂಗಳಾರತಿಗೆ ನಗರದ ನೂರಾರು ಜನರು ಬಂದು ಸಾಮೂಹಿಕವಾಗಿ ಮಂಗಳಾರುತಿ ಮಾಡುತ್ತಾರೆ. ಗಂಡು ಮಕ್ಕಳು ದಿವಟಿಗೆಗಳನ್ನು ಹಿಡಿದುಕೊಂಡು ಬಂದರೆ ಮಹಿಳೆಯರು ಆರತಿಯನ್ನು ತರುತ್ತಾರೆ.

ಹಿಂದಿನ ಕಾಲದಲ್ಲಿ ಶ್ರೀಶೈಲಕ್ಕೆ ಹೋಗಲು ಯಾವುದೇ ಸಾಧನಗಳು ಇರಲಿಲ್ಲ. ಭಕ್ತರು ನಡೆದುಕೊಂಡು ಇಲ್ಲವೆ ಬಂಡಿಗಳನ್ನು ಕಟ್ಟಿಕೊಂಡು ಹೋಗುವುದು ವಾಡಿಕೆ. ಆದರಲ್ಲಿ ನಡೆದುಕೊಂಡು ಹೋಗುವವರೆ ಜಾಸ್ತಿ. ತಮ್ಮ ಸ್ಥಳದಿಂದ ಆಂಧ್ರಪ್ರದೇಶದ ಮಲ್ಲಿಕಾರ್ಜುನ ದೇವಸ್ಥಾನವನ್ನು ತಲುಪುವವರೆಗೆ ಆದ ನೋವು ಸಂಕಟ, ಸುಖ ದುಃಖಗಳನ್ನು ಮತ್ತು ಇಲ್ಲಿಂದ ನಡೆಯುತ್ತ ಶ್ರೀಶೈಲದವರೆಗೆ ಹೋದರೆ ಮಲ್ಲಿಕಾರ್ಜುನ  ಆಶೀರ್ವಾದ ರೂಪದಲ್ಲಿ ಭಕ್ತರಿಗೆ ಏನು ಕೊಡುತ್ತಾನೆ ಇವೆಲ್ಲ ವಿಷಯಗಳು ಮಂಗಳಾರತಿಯಲ್ಲಿವೆ. ನಡೆಯುತ್ತಾ ಹೋಗುವವರ ಅನುಭವದ ಪದಗಳು, ಸಾಲುಗಳು ಮಂಗಳಾರತಿಯಲ್ಲಿವೆ.

ಶ್ರೀಶೈಲಕ್ಕೆ ಹೋಗುವ ಮಾರ್ಗದಲ್ಲಿ ಕಡಿದಾದ ಬೆಟ್ಟಗಳನ್ನು ಹತ್ತಿಕೊಂಡು ಹೋಗಬೇಕು. ಮಂಗಳಾರತಿಯಲ್ಲಿ ಬರುವ ಸಾಲುಗಳು` ಒಬ್ಬರ ಕೈಗಳ ಒಬ್ಬರ ಹಿಡಿಯುತ ಹಬ್ಬಿದ ಗಿರಿಗಳ ಏರುತಲಿ, ಹುಬ್ಬಿ ಹಾಳಿಗಳ ಬೀಸುತಲಿ, ಯಾಲಕಿ ಪುಡಿಗಳ ನೀಡುತಲಿ’ ಅದೇ ರೀತಿಯಾಗಿ ಗಿರಿಗಳನ್ನು ಏರುವಾಗ ಆಯ ತಪ್ಪಿದರೆ ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ ಅದಕ್ಕಾಗಿ`ಕಾಲ ಜಾರಿತೋ ಕೋಲ ಮುರಿಯಿತೋ ಕೊಪ್ಪರಿಗೆ ಒಡಿಯಿತೋ ಮಲ್ಲಯ್ಯ’

ಇದು ಒಂದು ನುಡಿಯಾದರೆ ಇನ್ನೋಂದು ನುಡಿ ‘ಇಲ್ಲಿಂದ ಅಲ್ಲಿಗೆ ಹೋದರತ್ತ ಏನ್ ಕೋಡುವಣೋ ಮಲ್ಲಯ್ಯ, ಏರಿನೆಂದರ ಕುದರಿ ಛತ್ತರಗಿ ಸಂಪತ್ತು ಕೊಡುವಣೋ ಮಲ್ಲಯ್ಯ, ಧನವ ಕೊಟ್ಟವ ಕೊಟ್ಟ ಧಾನ್ಯವ ಕೊಟ್ಟ ಸಿರಿಯ ಕೊಟ್ಟ ಸಂಪತ್ತು ಕೊಟ್ಟ’

ಈ ರೀತಿಯ ಒಟ್ಟು ಐವತ್ತಕ್ಕೂ ಹೆಚ್ಚು ನುಡಿಗಳ ಮಂಗಳಾರತಿ ಇದಾಗಿದೆ. ನಡೆಯುತ್ತಾ ಹೋಗುತ್ತಿರುವ ಸಂದರ್ಭದಲ್ಲಿ ಕೆಲವು ಊರು ಮತ್ತು ದೇವಸ್ಥಾನಗಳು ಬರುತ್ತವೆ. ಅವುಗಳ ಮಹತ್ವವನ್ನು ಮಂಗಳಾರತಿಯಲ್ಲಿ ವರ್ಣಿಸಲಾಗಿದೆ.

ಇಂತಹ ವಿಶಿಷ್ಟವಾದ ಮಂಗಳಾರತಿಯನ್ನು ಐದೇಶಿ ಸಂದರ್ಭದಲ್ಲಿ ಇಂದಿನ ದಿನಮಾನಗಳಲ್ಲೂ ಹಾಡುತ್ತಾ ಬಂದಿರುವುದು ಅಪರೂಪ. ಜಾತಿ, ಮತ ಪಂಥ ಹಿರಿಯರು, ಕಿರಿಯರು, ಸ್ತ್ರಿ ಪುರುಷ, ಬಡವ ಶ್ರೀಮಂತ ಎನ್ನದೆ ಎಲ್ಲರೂ ಒಂದಾಗಿ ಹಾಡುವ ಈ ಮಂಗಳಾರುತಿಗೆ ಶತ ಶತಮಾನದ ಇತಿಹಾಸವಿದೆ.

ಕಿರಣ ಶ್ರೀಶೈಲ ಆಳಗಿ

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-mudhol

Mudhol: ನಾರಿಯರ ಗಸ್ತುಕಾರ್ಯಕ್ಕೆ ಪೊಲೀಸ್ ಇಲಾಖೆ ಶ್ಲಾಘನೆ

Bagalakote: ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಮಹತ್ವದ ಒಪ್ಪಂದಕ್ಕೆ ಎಂ.ಆರ್.ಎನ್ ಸಮೂಹ ಸಹಿ

Bagalakote: ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಮಹತ್ವದ ಒಪ್ಪಂದಕ್ಕೆ ಎಂ.ಆರ್.ಎನ್ ಸಮೂಹ ಸಹಿ

11

Mudhol: ಅಂತಾರಾಜ್ಯ ಕಳ್ಳನ ಬಂಧನ; ಟ್ರ್ಯಾಕ್ಟರ್ ವಶ

4

Mudhol: ಮನೆ ಕಳ್ಳತನ; ದೂರು ದಾಖಲು

Mudhol: ನಗರದಲ್ಲಿ ಹೆಚ್ಚಿದ ಕಳ್ಳರ ಹಾವಳಿ… ಮಹಿಳಾ‌ಮಣಿಗಳಿಂದ ರಾತ್ರಿ‌ ಗಸ್ತು

Mudhol: ನಗರದಲ್ಲಿ ಹೆಚ್ಚಿದ ಕಳ್ಳರ ಹಾವಳಿ… ಮಹಿಳಾ‌ಮಣಿಗಳಿಂದ ರಾತ್ರಿ‌ ಗಸ್ತು

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.