ಶತ ಶತಮಾನದ ಇತಿಹಾಸ ಸಾರುವ `ಮಲ್ಲಯ್ಯನ ಮಂಗಳಾರತಿ’
Team Udayavani, Apr 9, 2022, 6:21 PM IST
ರಬಕವಿ-ಬನಹಟ್ಟಿ : ಭಾರತೀಯರ ಆಚರಣೆ ಮತ್ತು ಸಂಪ್ರದಾಯಗಳಿಗೆ ತನ್ನದೇ ಆದ ಮಹತ್ವಗಳಿವೆ. ಈ ಆಚರಣೆಗಳಿಗೆ ಊತಿಹಾಸಿಕ ಹಿನ್ನಲೆಯೂ ಇದೆ. ಈ ಆಚರಣೆಗಳು ಶತಶತಮಾನದಿಂದಲೂ ನಡೆದುಕೊಂಡು ಬಂದಿರುವಂತಹವು. ನಮ್ಮ ಗ್ರಾಮೀಣ ಪ್ರದೇಶಗಳು ಆಧುನಿಕತೆಯ ಜೊತೆಗೆ ಸಂಪ್ರದಾಯಗಳನ್ನು ಬಿಟ್ಟು ಬಿಡದೆ ಆಚರಿಸುತ್ತಾ ಬಂದಿರುವುದಕ್ಕೆ ಐದೇಶಿ ಸಂದರ್ಭದಲ್ಲಿ ಮಲ್ಲಯ್ಯನ ದೇವಸ್ಥಾನದಲ್ಲಿ ನಡೆಯುವ ಐದು ದಿನಗಳ ಮಂಗಳಾರತಿ ಕಾರ್ಯಕ್ರಮ ವಿಶೇಷವಾಗಿದೆ.
ದೇವರನ್ನು ಕರೆದುಕೊಂಡ ದಿನದಿಂದ ಐದು ದಿನಗಳ ಕಾಲ ಪ್ರತಿ ರಾತ್ರಿ 9 ಗಂಟೆಗೆ ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ಮಲ್ಲಯ್ಯನ ಮಂಗಳಾರತಿ ಕಾರ್ಯಕ್ರಮ ನಡೆಯುತ್ತದೆ. ಈ ಮಂಗಳಾರತಿಗೆ ನಗರದ ನೂರಾರು ಜನರು ಬಂದು ಸಾಮೂಹಿಕವಾಗಿ ಮಂಗಳಾರುತಿ ಮಾಡುತ್ತಾರೆ. ಗಂಡು ಮಕ್ಕಳು ದಿವಟಿಗೆಗಳನ್ನು ಹಿಡಿದುಕೊಂಡು ಬಂದರೆ ಮಹಿಳೆಯರು ಆರತಿಯನ್ನು ತರುತ್ತಾರೆ.
ಹಿಂದಿನ ಕಾಲದಲ್ಲಿ ಶ್ರೀಶೈಲಕ್ಕೆ ಹೋಗಲು ಯಾವುದೇ ಸಾಧನಗಳು ಇರಲಿಲ್ಲ. ಭಕ್ತರು ನಡೆದುಕೊಂಡು ಇಲ್ಲವೆ ಬಂಡಿಗಳನ್ನು ಕಟ್ಟಿಕೊಂಡು ಹೋಗುವುದು ವಾಡಿಕೆ. ಆದರಲ್ಲಿ ನಡೆದುಕೊಂಡು ಹೋಗುವವರೆ ಜಾಸ್ತಿ. ತಮ್ಮ ಸ್ಥಳದಿಂದ ಆಂಧ್ರಪ್ರದೇಶದ ಮಲ್ಲಿಕಾರ್ಜುನ ದೇವಸ್ಥಾನವನ್ನು ತಲುಪುವವರೆಗೆ ಆದ ನೋವು ಸಂಕಟ, ಸುಖ ದುಃಖಗಳನ್ನು ಮತ್ತು ಇಲ್ಲಿಂದ ನಡೆಯುತ್ತ ಶ್ರೀಶೈಲದವರೆಗೆ ಹೋದರೆ ಮಲ್ಲಿಕಾರ್ಜುನ ಆಶೀರ್ವಾದ ರೂಪದಲ್ಲಿ ಭಕ್ತರಿಗೆ ಏನು ಕೊಡುತ್ತಾನೆ ಇವೆಲ್ಲ ವಿಷಯಗಳು ಮಂಗಳಾರತಿಯಲ್ಲಿವೆ. ನಡೆಯುತ್ತಾ ಹೋಗುವವರ ಅನುಭವದ ಪದಗಳು, ಸಾಲುಗಳು ಮಂಗಳಾರತಿಯಲ್ಲಿವೆ.
ಶ್ರೀಶೈಲಕ್ಕೆ ಹೋಗುವ ಮಾರ್ಗದಲ್ಲಿ ಕಡಿದಾದ ಬೆಟ್ಟಗಳನ್ನು ಹತ್ತಿಕೊಂಡು ಹೋಗಬೇಕು. ಮಂಗಳಾರತಿಯಲ್ಲಿ ಬರುವ ಸಾಲುಗಳು` ಒಬ್ಬರ ಕೈಗಳ ಒಬ್ಬರ ಹಿಡಿಯುತ ಹಬ್ಬಿದ ಗಿರಿಗಳ ಏರುತಲಿ, ಹುಬ್ಬಿ ಹಾಳಿಗಳ ಬೀಸುತಲಿ, ಯಾಲಕಿ ಪುಡಿಗಳ ನೀಡುತಲಿ’ ಅದೇ ರೀತಿಯಾಗಿ ಗಿರಿಗಳನ್ನು ಏರುವಾಗ ಆಯ ತಪ್ಪಿದರೆ ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ ಅದಕ್ಕಾಗಿ`ಕಾಲ ಜಾರಿತೋ ಕೋಲ ಮುರಿಯಿತೋ ಕೊಪ್ಪರಿಗೆ ಒಡಿಯಿತೋ ಮಲ್ಲಯ್ಯ’
ಇದು ಒಂದು ನುಡಿಯಾದರೆ ಇನ್ನೋಂದು ನುಡಿ ‘ಇಲ್ಲಿಂದ ಅಲ್ಲಿಗೆ ಹೋದರತ್ತ ಏನ್ ಕೋಡುವಣೋ ಮಲ್ಲಯ್ಯ, ಏರಿನೆಂದರ ಕುದರಿ ಛತ್ತರಗಿ ಸಂಪತ್ತು ಕೊಡುವಣೋ ಮಲ್ಲಯ್ಯ, ಧನವ ಕೊಟ್ಟವ ಕೊಟ್ಟ ಧಾನ್ಯವ ಕೊಟ್ಟ ಸಿರಿಯ ಕೊಟ್ಟ ಸಂಪತ್ತು ಕೊಟ್ಟ’
ಈ ರೀತಿಯ ಒಟ್ಟು ಐವತ್ತಕ್ಕೂ ಹೆಚ್ಚು ನುಡಿಗಳ ಮಂಗಳಾರತಿ ಇದಾಗಿದೆ. ನಡೆಯುತ್ತಾ ಹೋಗುತ್ತಿರುವ ಸಂದರ್ಭದಲ್ಲಿ ಕೆಲವು ಊರು ಮತ್ತು ದೇವಸ್ಥಾನಗಳು ಬರುತ್ತವೆ. ಅವುಗಳ ಮಹತ್ವವನ್ನು ಮಂಗಳಾರತಿಯಲ್ಲಿ ವರ್ಣಿಸಲಾಗಿದೆ.
ಇಂತಹ ವಿಶಿಷ್ಟವಾದ ಮಂಗಳಾರತಿಯನ್ನು ಐದೇಶಿ ಸಂದರ್ಭದಲ್ಲಿ ಇಂದಿನ ದಿನಮಾನಗಳಲ್ಲೂ ಹಾಡುತ್ತಾ ಬಂದಿರುವುದು ಅಪರೂಪ. ಜಾತಿ, ಮತ ಪಂಥ ಹಿರಿಯರು, ಕಿರಿಯರು, ಸ್ತ್ರಿ ಪುರುಷ, ಬಡವ ಶ್ರೀಮಂತ ಎನ್ನದೆ ಎಲ್ಲರೂ ಒಂದಾಗಿ ಹಾಡುವ ಈ ಮಂಗಳಾರುತಿಗೆ ಶತ ಶತಮಾನದ ಇತಿಹಾಸವಿದೆ.
–ಕಿರಣ ಶ್ರೀಶೈಲ ಆಳಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mahalingapura: ಗಮನ ಸೆಳೆದ ಮಹಾಲಿಂಗೇಶ್ವರ ಜಾತ್ರೆಯ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ…
BJP ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ದ ದೂರು ದಾಖಲು
Mudhol: ಸಮಸ್ಯೆ ಆಲಿಸಲು ಬಂದ ಅಧಿಕಾರಿಗಳ ದರ್ಪದ ನಡೆಗೆ ಗ್ರಾಮಸ್ಥರ ಆಕ್ರೋಶ
ಗ್ರಾಹಕರ ಸಂತೃಪ್ತಿಯೇ ಸಹಕಾರಿ ಯಶಸ್ಸಿನ ಜೀವಾಳ: ಚಿದಾನಂದ ಗಾಳಿ
ತಿಮ್ಮಾಪುರ ಮಾತಿಗೆ ಯತ್ನಾಳ ಪರೋಕ್ಷ ಟಾಂಗ್;ನಾನು ಕಾನೂನಿಗೆ ಗೌರವ ನೀಡುವ ನಿಯತ್ತಿನ ನಾಯಿ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
World Rivers Day: ಸೆ.22 ವಿಶ್ವ ನದಿಗಳ ದಿನ- ನಿತ್ಯ ಬದುಕಿನ ಜೀವನಾಡಿಯ ಮೂಲ “ನದಿ’
PMABHIM ಯೋಜನೆಯಡಿ ದಕ್ಷಿಣ ಕನ್ನಡಕ್ಕೆ 25.11 ಕೋಟಿ ಅನುದಾನ: ಸಂಸದ ಕ್ಯಾ. ಬ್ರಿಜೇಶ್ ಚೌಟ
Bellary; ಕಳ್ಳರೊಂದಿಗೆ ಸೇರಿದ ಪೊಲೀಸನ ಕತೆ; ದರೋಡೆ ಪ್ರಕರಣದಲ್ಲಿ ಪೇದೆ ಸೇರಿ 6 ಮಂದಿ ಬಂಧನ
Firing; ಕಲಬುರಗಿಯಲ್ಲಿ ಗುಂಡಿನ ಸದ್ದು; ಕೊಲೆ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್
INDvsBAN; ಬಸವಳಿದ ಬಾಂಗ್ಲಾ ಎದುರು ಪಂತ್-ಗಿಲ್ ಸೂಪರ್ ಶತಕ; ಡಿಕ್ಲೇರ್ ಘೋಷಿಸಿದ ಭಾರತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.