ಮರಾಠಿ ದಂಪತಿ ಶಿವಶಂಕರ-ಕಾವ್ಯಾ ಕನ್ನಡ ರಂಗಭೂಮಿ ಪ್ರೇಮ

•ಕಷ್ಟ-ನಷ್ಟ ನಡುವೆಯೂ ರಂಗಭೂಮಿ ಸೇವೆ •ಮುಚ್ಚುತ್ತಿದ್ದ ಕನ್ನಡ ನಾಟ್ಯ ಸಂಘದ ಜವಾಬ್ದಾರಿ ಹೊತ್ತ ಶಿವಶಂಕರ ರೆಡ್ಡಿ ದಂಪತಿ

Team Udayavani, Jul 8, 2019, 9:49 AM IST

bk-tdy-1..

ಬಾಗಲಕೋಟೆ: ಉಮದಿಯ ಶಿವಶಂಕರ ರಡ್ಡಿ ಮತ್ತು ಕಾವ್ಯಾ ದಂಪತಿ.

ಬಾಗಲಕೋಟೆ: ಇವರು ಪಕ್ಕಾ ಮರಾಠಿ ನೆಲದವರಾದರೂ ಇವರನ್ನು ಸೆಳೆದದ್ದು ಕನ್ನಡ ವೃತ್ತಿ ರಂಗಭೂಮಿ. ವೃತ್ತಿ ರಂಗಭೂಮಿಯಲ್ಲಿ ಹಲವಾರು ಕಷ್ಟ-ನಷ್ಟ-ನೋವು ಅನುಭವಿಸಿದ್ದರೂ ಕನ್ನಡ ಸೆಳೆತ ಇವರನ್ನು ಹಿಡಿದಿಟ್ಟುಕೊಂಡಿದೆ.

ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟ ತಾಲೂಕಿನ ಉಮದಿ ಗ್ರಾಮದ ಶಿವಶಂಕರ ರಡ್ಡಿ ಮತ್ತು ಕಾವ್ಯಾ ದಂಪತಿ. ಕಳೆದ 22 ವರ್ಷಗಳಿಂದ ಕನ್ನಡ ವೃತ್ತಿ ರಂಗಭೂಮಿಯಲ್ಲಿದ್ದು, ಅದರಲ್ಲೇ ಅನ್ನ-ನೆಮ್ಮದಿ ಕಾಣುತ್ತಿದ್ದಾರೆ.

ಕಲಿತದ್ದು ಮರಾಠಿ-ಕೈ ಹಿಡಿದದ್ದು ಕನ್ನಡ: ಉಮದಿಯಲ್ಲಿ ಮರಾಠಿ ಶಿಕ್ಷಣ ಪಡೆದಿರುವ ಶಿವಶಂಕರ ರಡ್ಡಿಯವರ ತಂದೆ ಗಂಗಪ್ಪ ಮರಾಠಿ ಶಿಕ್ಷಕರು. ಇವರ ಕುಟುಂಬದಲ್ಲಿ ಯಾರೂ ಕಲಾವಿದರಿಲ್ಲ. 1ರಿಂದ 4ನೇ ತರಗತಿವರೆಗೆ ಮರಾಠಿ ಮಾಧ್ಯಮ, 5ರಿಂದ 10ನೇ ತರಗತಿವರೆಗೆ ಮರಾಠಿ ವಿಷಯದೊಂದಿಗೆ ಕನ್ನಡವನ್ನೂ ಕಲಿತ ಶಿವಶಂಕರ, 10ನೇ ತರಗತಿ ಮುಗಿಯುತ್ತಲೇ ಕನ್ನಡ ವೃತ್ತಿ ರಂಗಭೂಮಿಗೆ ಸೆಳೆತಕ್ಕೊಳಗಾದರು.

ತಮಗೆ 15 ವರ್ಷ ಮುಗಿಯುತ್ತಲೇ, ಗುಡಗೇರಿ ಎನ್‌. ಬಸವರಾಜ ಅವರ ಸಂಗಮೇಶ್ವರ ನಾಟ್ಯ ಸಂಘ (ಗಡಿನಾಡ ಭಾಗದಲ್ಲಿ ನಾಟಕ ಪ್ರದರ್ಶನ ಮಾಡುವಾಗ ಸೆಳೆತಕ್ಕೆ ಒಳಗಾದವರು)ದಲ್ಲಿ ಹಾಸ್ಯ ಪಾತ್ರ ಮಾಡಲು ಆರಂಭಿಸಿದರು. ಅವರೊಂದಿಗೆ ಬರೋಬ್ಬರಿ 14 ವರ್ಷಗಳ ಕಾಲ ಕೆಲಸ ಮಾಡಿದ ಶಿವಶಂಕರ, ಹಲವು ಪಾತ್ರಗಳ ಮೂಲಕ ಕಲಾಸಕ್ತರ ಗಮನ ಸೆಳೆದರು. ನೀ ಹುಟ್ಟಿದ್ದು ಯಾರಿಗೆ ಎಂಬ ನಾಟಕದ ವೈದ್ಯನ ಪಾತ್ರ ಇವರಿಗೆ ಇಡೀ ವೃತ್ತಿ ರಂಗಭೂಮಿಯಲ್ಲಿ ತಿರುವು ನೀಡಿತು. ಮರಾಠಿಗರಾದರೂ, ನಿರರ್ಗಳವಾಗಿ ಕನ್ನಡ ಮಾತನಾಡುತ್ತಿದ್ದುದಕ್ಕೆ ಸ್ವತಃ ಗುಡಗೇರಿ ಎನ್‌. ಬಸವರಾಜ್‌ ಭೇಷ್‌ ಎಂದಿದ್ದರಂತೆ.

ಕನ್ನಡ ಕಂಪನಿ ಜವಾಬ್ದಾರಿ ಹೆಗಲಿಗೆ: ವೃತ್ತಿ ರಂಗಭೂಮಿಯ ಸಂಕಷ್ಟದ ದಿನಗಳಲ್ಲೂ ಶಿವಶಂಕರ ಮತ್ತು ಕಾವ್ಯ ದಂಪತಿ ತಾವು ಮರಾಠಿಗರಾದರೂ, ಅನ್ನ ಕೊಟ್ಟ ಕನ್ನಡ ನಾಟಕ ಕಂಪನಿಯೊಂದನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತಿದ್ದಾರೆ. ಇನ್ನೇನು ಬಾಗಿಲು ಮುಚ್ಚುವ ಹಂತದಲ್ಲಿದ್ದ ಅವರದೇ ತಾಲೂಕಿನ (ಅಕ್ಕಲಕೋಟ ತಾಲೂಕಿನ ಮೈಂದರ್ಗಿ) ಶ್ರೀ 1008 ಜಗದ್ಗುರು ರೇಣುಕಾಚಾರ್ಯ ನಾಟ್ಯ ಸಂಘವನ್ನು ಕಳೆದ ಮೂರು ವರ್ಷದಿಂದ ಮುನ್ನಡೆಸುತ್ತಿದ್ದಾರೆ. ಈ ಅವಧಿಯಲ್ಲಿ ಹಲವು ಸಮಸ್ಯೆ ಎದುರಾದರೂ, ಕನ್ನಡ ಮತ್ತು ಕನ್ನಡ ವೃತ್ತಿ ರಂಗಭೂಮಿಯಿಂದ ಹಿಂದೆ ಸರಿದಿಲ್ಲ.ಮರಾಠಿ ನೆಲದವರು ಕಲಾವಿದರಾಗಿ ಪಾತ್ರ ಮಾಡುತ್ತಾರೆ ಹೊರತು ಕನ್ನಡ ನಾಟಕ ಕಂಪನಿ ಹೊಣೆ ಹೊತ್ತು ಮುನ್ನಡೆಸುವ ಸಾಹಸಕ್ಕೆ ಮುಂದಾಗಲ್ಲ. ಆದರೆ ಈ ಹಿಂದೆ ಮರಾಠಿ ನೆಲದ ರೇಣುಕಾ ಅಕ್ಕಲಕೋಟ ಎಂಬ ಮಹಿಳೆ, ಕನ್ನಡ ನಾಟಕ ಕಂಪನಿ ನಡೆಸುತ್ತಿದ್ದರು. ಅವರು ಕಾಲವಾದ ಬಳಿಕ, ಮರಾಠಿ ನೆಲದವರು ಕನ್ನಡ ನಾಟಕ ಕಂಪನಿಗಳ ಜವಾಬ್ದಾರಿ ಯಾರೂ ಹೊತ್ತಿರಲಿಲ್ಲ. ಆದರೀಗ ಮರಾಠಿ ನೆಲದ ಶಿವಶಂಕರ-ಕಾವ್ಯ ದಂಪತಿ ಮುನ್ನಡೆದಿದ್ದಾರೆ.

ಸಿನಿಮಾ ನಂಟು: ಶಿವಶಂಕರ ರಡ್ಡಿ, ಹಾಸ್ಯ, ನಾಯಕ, ವಿಲನ್‌ ಹೀಗೆ ಎಲ್ಲ ಪಾತ್ರಗಳಿಗೂ ಜೀವ ತುಂಬುವ ಉತ್ತಮ ನಟ. ಹೀಗಾಗಿಯೇ ಅವರಿಗೆ ಹಲವು ಸಿನೆಮಾಗಳಲ್ಲಿ ಪೋಷಕ ನಟನ ಪಾತ್ರಕ್ಕೆ ಅವಕಾಶ ಸಿಕ್ಕಿತ್ತು. ಆದರೆ, ನಾಟಕಗಳು ಚೆನ್ನಾಗಿ ನಡೆದಾಗಲೇ ಅವರಿಗೆ ಸಿನೆಮಾಕ್ಕಾಗಿ ಕರೆ ಬರುತ್ತಿತ್ತು. ಹೀಗಾಗಿ ಕನ್ನಡ ನಾಟಕ ಪ್ರೇಮ ಮುಂದುವರಿಸಲು, ಅವರು ಸಿನಿಮಾಗೆ ಹೋಗಲಿಲ್ಲ. ಆದರೆ, ಅವರ ಪತ್ನಿ ಕಾವ್ಯಾ, 3 ಸಿನಿಮಾ ಹಾಗೂ 13-14 ಕನ್ನಡ ಧಾರಾವಾಹಿಗಳಲ್ಲಿ ಪಾತ್ರ ಮಾಡಿದ್ದಾರೆ.

 

•ಶ್ರೀಶೈಲ ಕೆ. ಬಿರಾದಾರ

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-mudhol

Mudhol: ನಾರಿಯರ ಗಸ್ತುಕಾರ್ಯಕ್ಕೆ ಪೊಲೀಸ್ ಇಲಾಖೆ ಶ್ಲಾಘನೆ

Bagalakote: ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಮಹತ್ವದ ಒಪ್ಪಂದಕ್ಕೆ ಎಂ.ಆರ್.ಎನ್ ಸಮೂಹ ಸಹಿ

Bagalakote: ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಮಹತ್ವದ ಒಪ್ಪಂದಕ್ಕೆ ಎಂ.ಆರ್.ಎನ್ ಸಮೂಹ ಸಹಿ

11

Mudhol: ಅಂತಾರಾಜ್ಯ ಕಳ್ಳನ ಬಂಧನ; ಟ್ರ್ಯಾಕ್ಟರ್ ವಶ

4

Mudhol: ಮನೆ ಕಳ್ಳತನ; ದೂರು ದಾಖಲು

Mudhol: ನಗರದಲ್ಲಿ ಹೆಚ್ಚಿದ ಕಳ್ಳರ ಹಾವಳಿ… ಮಹಿಳಾ‌ಮಣಿಗಳಿಂದ ರಾತ್ರಿ‌ ಗಸ್ತು

Mudhol: ನಗರದಲ್ಲಿ ಹೆಚ್ಚಿದ ಕಳ್ಳರ ಹಾವಳಿ… ಮಹಿಳಾ‌ಮಣಿಗಳಿಂದ ರಾತ್ರಿ‌ ಗಸ್ತು

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.