ಮುಧೋಳ: ಮರಳುಚೋರರಿಂದ ಹಗಲು ದರೋಡೆ

ಮರಳು ಎತ್ತಲು ಸ್ಥಳ ನಿಗದಿ ಮಾಡಿರುವ ಅಕ್ರಮ ವಾಸನೆ ಬಂದಿದೆ.

Team Udayavani, Oct 22, 2024, 5:03 PM IST

ಮುಧೋಳ: ಮರಳುಚೋರರಿಂದ ಹಗಲು ದರೋಡೆ

ಉದಯವಾಣಿ ಸಮಾಚಾರ
ಮುಧೋಳ: ಘಟಪ್ರಭಾ ನದಿ ಉಕ್ಕೇರಿ ಹರಿಯುವ ಸಂದರ್ಭದಲ್ಲಿ ಹಳ್ಳದಲ್ಲಿ ಅಕ್ರಮವಾಗಿ ಬೋಟ್‌ನಿಂದ ಮರಳು ದಂಧೆ ನಡೆಸಿರುವ ಖದೀಮರು, ಇದೀಗ ನದಿ ಪಾತ್ರದಲ್ಲಿ ನೀರು ಕಡಿಮೆಯಾಗಿರುವ ಹಿನ್ನೆಲೆ ತಮ್ಮ ಬೋಟ್‌ನ್ನು ನದಿ ಒಡಲಿಗೆ ನುಗ್ಗಿಸಿ ತಮ್ಮ ದಂಧೆ ಮುಂದುವರಿಸಿದ್ದಾರೆ. ಒಂಟಗೋಡಿ ಗ್ರಾಮದಿಂದ 2-3 ಕಿ.ಮೀ ವ್ಯಾಪ್ತಿಯಲ್ಲಿರುವ ಹಳ್ಳದಲ್ಲಿ ಈ ಮೊದಲು ಅಕ್ರಮವಾಗಿ ಬೋಟ್‌ನಿಂದ ಮರಳು ದಂಧೆ ನಡೆಸುತ್ತಿದ್ದರು. ಆದರೆ ಹಳ್ಳದಲ್ಲಿನ ಮರಳು ಗುಣಮಟ್ಟದಿಂದ ಕೂಡಿರದ ಕಾರಣ ಮರಳಿಗೆ ಬೇಡಿಕೆ ಕಡಿಮೆಯಾಗಿರುವುದನ್ನು ಅರಿತ ಖದೀಮರು ತಮ್ಮ ಬೋಟ್‌ನ್ನು ನದಿಗೆ ಸ್ಥಳಾಂತರಿಸಿದ್ದಾರೆ.

ಅಕ್ರಮ ಮರಳು ದಂಧೆಕೋರರು ಟ್ರಾಕ್ಟರ್‌ಗಳ ಮೂಲಕ ಮುಧೋಳ ನಗರ ಸೇರಿದಂತೆ ತಾಲೂಕಿನ ಹಲವಾರು ಹಳ್ಳಿಗಳಿಗೆ ಮರಳು ಸರಬರಾಜು ಮಾಡುತ್ತಾರೆ. ಹಳ್ಳದಲ್ಲಿನ ಬೋಟ್‌ ತೆರವುಗೊಳಿಸಿದ್ದರೂ ಹಲವಾರು ಜನರು ಹಳ್ಳದ ಮರಳನ್ನೇ ಸಿಮೆಂಟ್‌ ಚೀಲದಲ್ಲಿ ತುಂಬಿಕೊಂಡು ಹೊತ್ತೂಯ್ಯುತ್ತಿದ್ದಾರೆ.

ಉಳಿದ ಕುರುಹುಗಳು: ಹಳ್ಳದಿಂದ ಬೋಟ್‌ ಸ್ಥಳಾಂತರಿಸಿದ್ದರೂ ಅಲ್ಲಿನ ಕಡ್ಡಾ (ಬೋಟ್‌ ಮೂಲಕ ನೀರಿನಲ್ಲಿನ ಮರಳನ್ನು ದಂಡೆಯಲ್ಲಿ ಸಂಗ್ರಹಿಸುವ ಸ್ಥಳ) ವನ್ನು ಹಾಗೇ ಬಿಟ್ಟಿದ್ದಾರೆ. ಈ ಬಗ್ಗೆ ಸ್ಥಳೀಯರನ್ನು ವಿಚಾರಿಸಿದರೆ ನದಿಯಲ್ಲಿ ಮರಳು ದೊರೆಯದಿದ್ದಾಗ, ನದಿ ನೀರು ಹೆಚ್ಚಾದಾಗ ಈ ಕಡ್ಡಾವನ್ನು ಬಳಕೆ ಮಾಡಿಕೊಳ್ಳುತ್ತಾರೆ ಎನ್ನುತ್ತಾರೆ. ಯಾರ ಹೆದರಿಕೆಯಿಲ್ಲದೆ ಹಳ್ಳದ ದಂಡೆಯಲ್ಲಿ ಮರಳು ಜಾಗ ಗುರುತಿಸಿರುವುದನ್ನು ಗಮನಿಸಿದರೆ ಆಡಳಿತ ಯಂತ್ರದ ಕಾರ್ಯವೈಖರಿ ಬಗ್ಗೆ
ಹಲವಾರು ಅನುಮಾನ ಮೂಡುತ್ತದೆ.

ಮುಖ್ಯ ರಸ್ತೆಗೆ ಹೊಂದಿಕೊಂಡ ಕಡ್ಡಾ: ಅಕ್ರಮ ಮರಳುಗಾರಿಕೆ ಎಂದರೆ ಹೆದರಿಕೆಯಿಂದ ಮಾಡುತ್ತಾರೆ. ಪೊಲೀಸರು ವಿವಿಧ ಇಲಾಖೆ ಅಧಿಕಾರಿಗಳ ಭಯದಲ್ಲಿ ನಿತ್ಯ ವ್ಯವಹಾರ ನಡೆಸುತ್ತಾರೆ ಎಂಬುದು ಸಾರ್ವಜನಿಕರ ಊಹೆ. ಆದರೆ ಈ ಹಳ್ಳದಲ್ಲಿನ ಅಳವಡಿಸಿರುವ ಕಡ್ಡಾ ಜಾಗ ಗಮನಿಸಿದರೆ ಅಕ್ರಮ ಮರಳುಕೋರರಿಗೆ ಆಡಳಿತ ಯಂತ್ರದ ಬಗ್ಗೆ ಕಿಂಚಿತ್ತೂ ಭಯವಿಲ್ಲ ಎಂಬುದು ಸಾಬೀತಾಗುತ್ತದೆ.

ಡಾಂಬರ್‌ ರಸ್ತೆಗೆ ಹೊಂದಿಕೊಂಡ ಸೇತುವೆ ಪಕ್ಕದಲ್ಲೇ ಮರಳು ಎತ್ತುವ ಜಾಗ ಗುರುತಿಸಲಾಗಿದೆ. ಪ್ರತಿನಿತ್ಯ ಈ ಮಾರ್ಗದಲ್ಲಿ ನೂರಾರು ಜನ ಓಡಾಡುತ್ತಾರೆ. ಅವಶ್ಯ ಕಾರ್ಯಗಳಿದ್ದಾಗ ಅಧಿಕಾರಿಗಳು ಸಂಚರಿಸುವುದುಂಟು. ಆದರೆ ಅವರ ಭಯವಿಲ್ಲದೆ ಮರಳು ಎತ್ತಲು ಸ್ಥಳ ನಿಗದಿ ಮಾಡಿರುವ ಅಕ್ರಮ ವಾಸನೆ ಬಂದಿದೆ.

ಸಿಮೆಂಟ್‌ ಚೀಲದಲ್ಲಿ ಸಾಗಣೆ: ಒಂದೆಡೆ ಅಕ್ರಮ ಮರಳು ಚೋರರು ಬೋಟ್‌ ಮೂಲಕ ಹಳ್ಳದಲ್ಲಿನ ಮರಳನ್ನು ಖಾಲಿ ಮಾಡಿದ್ದರೆ, ಮತ್ತೂಂದೆಡೆ ಸ್ಥಳೀಯರು ನೂರಾರು ಸಿಮೆಂಟ್‌ ಚೀಲದಲ್ಲಿ ಮರಳನ್ನು ತುಂಬಿಕೊಂಡು ತಮಗೆ ಅನುಕೂಲವಾಗುವ ಸಮಯದಲ್ಲಿ ಟ್ರಾಕ್ಟರ್‌ ಮೂಲಕ  ಸಾಗಿಸುತ್ತಾರೆ. ಆ ಮೂಲಕ ನೈಸರ್ಗಿಕ ಸಂಪತ್ತಿಗೆ ಕನ್ನ ಹಾಕುತ್ತಿದ್ದಾರೆ.

ಒಟ್ಟಿನಲ್ಲಿ ವ್ಯವಸ್ಥೆಯಲ್ಲಿನ ಲೋಪ ದುರುಪಯೋಗ ಪಡಿಸಿಕೊಳ್ಳುತ್ತಿರುವ ಮರಳು ಚೋರರು ತಾಲೂಕಿನಾ ದ್ಯಂತ ಹಗಲು ದರೋಡೆಗಿಳಿದಿದ್ದಾರೆ. ಎಲ್ಲಿಯವರೆಗೆ ಆಡಳಿತ ಯಂತ್ರ ಇಂತಹ ಖದೀಮರಿಗೆ ಬಿಸಿಮುಟ್ಟಿಸಿ ಹೆಡೆಮುರಿ ಕಟ್ಟುವುದಿಲ್ಲವೋ ಅಲ್ಲಿಯವರೆಗೆ ಇಂತಹ ದಂಧೆಗಳಿಗೆ ಕಡಿವಾಣ ಬೀಳುವುದು ಕನಸಿನ ಮಾತು.

ಒಂಟಗೋಡಿ ಗ್ರಾಮದ ಸರಹದ್ದಿನ ಹಳ್ಳದಲ್ಲಿನ ಮರಳು ಎತ್ತುವುದರ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಈಗ ಅಲ್ಲಿ ಮರಳುಗಾರಿಕೆ ಸ್ಥಗಿತಗೊಂಡಿದ್ದೇಯಾದರೆ ಅಲ್ಲಿ ಮುಂದೆ ಮರಳುಗಾರಿಕೆ ನಡೆಯದಂತೆ ತಡೆ ಹಾಕಲಾಗುವುದು.
●ಶ್ವೇತಾ ಬೀಡಿಕರ ಉಪವಿಭಾಗಾಧಿಕಾರಿ, ಜಮಖಂಡಿ.

*ಗೋವಿಂದಪ್ಪ ತಳವಾರ

ಟಾಪ್ ನ್ಯೂಸ್

Belagavi: ಸಂತೋಷ ಪದ್ಮಣ್ಣವರ ಕೊಲೆ ಪ್ರಕರಣ: ನಾಲ್ಕಕ್ಕೇರಿದ ಬಂಧಿತರ ಸಂಖ್ಯೆ

Belagavi: ಸಂತೋಷ ಪದ್ಮಣ್ಣವರ ಕೊಲೆ ಪ್ರಕರಣ: ನಾಲ್ಕಕ್ಕೇರಿದ ಬಂಧಿತರ ಸಂಖ್ಯೆ

Rain-Kendriya

Cloud Burst: ಬೆಂಗಳೂರಿನ ಯಲಹಂಕದಲ್ಲಿ ದಾಖಲೆಯ ಮಳೆ; 10 ಬಡಾವಣೆ ಜಲಾವೃತ

Under construction building collapses in Bengaluru

Bengaluru: ಕುಸಿದ ನಿರ್ಮಾಣ ಹಂತದ ಕಟ್ಟಡ; ಮೂವರು ಸಾವು, ಹಲವರು ಸಿಲುಕಿರುವ ಶಂಕೆ

Stock Market: ಷೇರುಪೇಟೆ ಸೂಚ್ಯಂಕ 900ಕ್ಕೂ ಅಧಿಕ ಅಂಕ ಕುಸಿತ; 9 ಲಕ್ಷ ಕೋಟಿ ರೂ. ನಷ್ಟ

Stock Market: ಷೇರುಪೇಟೆ ಸೂಚ್ಯಂಕ 900ಕ್ಕೂ ಅಧಿಕ ಅಂಕ ಕುಸಿತ; 9 ಲಕ್ಷ ಕೋಟಿ ರೂ. ನಷ್ಟ

Prithvi Shaw out of the Ranji team too; Is Mumbai player’s cricket life over

Prithvi Shaw: ರಣಜಿ ತಂಡದಿಂದಲೂ ಪೃಥ್ವಿ ಔಟ್;‌ ಮುಗಿಯಿತಾ ಮುಂಬೈ ಆಟಗಾರನ ಕ್ರಿಕೆಟ್‌ ಜೀವನ?

JPC ವಕ್ಫ್ ಸಭೆಯಲ್ಲಿ ಅಶಿಸ್ತಿನ ವರ್ತನೆ: ಟಿಎಂಸಿಯ ಕಲ್ಯಾಣ್ ಬ್ಯಾನರ್ಜಿ ಅಮಾನತು

JPC ವಕ್ಫ್ ಸಭೆಯಲ್ಲಿ ಅಶಿಸ್ತಿನ ವರ್ತನೆ… ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಅಮಾನತು

ಕೃಷ್ಣಾ ನದಿಯಲ್ಲಿ ಈಜಲು ಹೋಗಿ ಯುವಕರಿಬ್ಬರು ಸಾವು

Yadagiri: ಕೃಷ್ಣಾ ನದಿಯಲ್ಲಿ ಈಜಲು ಹೋಗಿ ಯುವಕರಿಬ್ಬರು ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಬಕವಿ-ಬನಹಟ್ಟಿ: ದ್ರಾಕ್ಷಿ ಬೆಳೆಗೆ ದಾವನಿ ರೋಗ ಲಗ್ಗೆ- ಆತಂಕದಲ್ಲಿ ರೈತ

ರಬಕವಿ-ಬನಹಟ್ಟಿ: ದ್ರಾಕ್ಷಿ ಬೆಳೆಗೆ ದಾವನಿ ರೋಗ ಲಗ್ಗೆ- ಆತಂಕದಲ್ಲಿ ರೈತ

K. S. Eshwarappa: ಸಂಕ್ರಾಂತಿಗೆ ಸಂತರಿಂದಲೇ ಹೊಸ ಸಂಘಟನೆ

K. S. Eshwarappa: ಸಂಕ್ರಾಂತಿಗೆ ಸಂತರಿಂದಲೇ ಹೊಸ ಸಂಘಟನೆ

Mudhol: ನದಿಯಲ್ಲಿದ್ದ ಮೋಟಾರ್‌ ತೆಗೆಯುವಾಗ ವಿದ್ಯುತ್‌ ತಗುಲಿ ರೈತ ಮೃತ್ಯು

Mudhol: ನದಿಯಲ್ಲಿದ್ದ ಮೋಟಾರ್‌ ತೆಗೆಯುವಾಗ ವಿದ್ಯುತ್‌ ತಗುಲಿ ರೈತ ಮೃತ್ಯು

Mudhol: ಘಟಪ್ರಭಾ ನದಿಗೆ ಹರಿದು ಬಂದ ಹೆಚ್ಚಿನ‌ ನೀರು… ಮುಳುಗಿದ ಬ್ಯಾರೇಜ್

Mudhol: ಘಟಪ್ರಭಾ ನದಿಗೆ ಹರಿದು ಬಂದ ಹೆಚ್ಚಿನ‌ ನೀರು… ಮುಳುಗಿದ ಬ್ಯಾರೇಜ್

K. S. Eshwarappa: ಪಕ್ಷದ ಶುದ್ಧೀಕರಣ ಆಗದೆ ಬಿಜೆಪಿಗೆ ಹೋಗಲಾರೆ

K. S. Eshwarappa: ಪಕ್ಷದ ಶುದ್ಧೀಕರಣ ಆಗದೆ ಬಿಜೆಪಿಗೆ ಹೋಗಲಾರೆ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

12

Mangaluru: ಪಟಾಕಿ ಮಾರಾಟಕ್ಕೆ 13 ಸ್ಥಳ ನಿಗದಿ; ಬೆಳಕಿನ ಹಬ್ಬಕ್ಕೆ ಭರದ ಸಿದ್ಧತೆ

13(3)

Udupi: ಎರಡು ವರ್ಷಗಳಲ್ಲಿ ಚಿರತೆ ದಾಳಿಗೆ 122 ಜಾನುವಾರುಗಳು ಬಲಿ!

Belagavi: ಸಂತೋಷ ಪದ್ಮಣ್ಣವರ ಕೊಲೆ ಪ್ರಕರಣ: ನಾಲ್ಕಕ್ಕೇರಿದ ಬಂಧಿತರ ಸಂಖ್ಯೆ

Belagavi: ಸಂತೋಷ ಪದ್ಮಣ್ಣವರ ಕೊಲೆ ಪ್ರಕರಣ: ನಾಲ್ಕಕ್ಕೇರಿದ ಬಂಧಿತರ ಸಂಖ್ಯೆ

Rain-Kendriya

Cloud Burst: ಬೆಂಗಳೂರಿನ ಯಲಹಂಕದಲ್ಲಿ ದಾಖಲೆಯ ಮಳೆ; 10 ಬಡಾವಣೆ ಜಲಾವೃತ

12

Chikkamagaluru: ಭಾರೀ ಮಳೆ; ರಸ್ತೆ ಕಾಣದೆ ಕಾರುಗಳು ಮುಖಾಮುಖಿ ಡಿಕ್ಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.