ಮುಧೋಳ: ಸ್ಥಳಾಂತರವಾಗುವ ಮನಸ್ಸಿದೆ, ಮಾರ್ಗವಿಲ್ಲ!
Team Udayavani, Jul 30, 2024, 4:18 PM IST
ಉದಯವಾಣಿ ಸಮಾಚಾರ
ಮುಧೋಳ: ಪ್ರತಿ ಸಾರಿ ಪ್ರವಾಹ ಬಂದಾಗ ಒಕ್ಕಲೇಳುವಂತಾಗಿದೆ. ನಮಗೊಂದು ಶಾಶ್ವತ ನೆಲೆ ನೀಡಿ ಪುಣ್ಯ ಕಟ್ಟಿಕೊಳ್ಳಿ ಎಂದು ಪ್ರತಿನಿ ಧಿಗಳ ಮುಂದೆ ಗೋಗರೆದರೂ ಭರವಸೆ ಹೊರತು ಮತ್ತೇನೂ ಸಿಕ್ಕಿಲ್ಲ. ಸರಿ ಸುಮಾರು 2490 ಜನಸಂಖ್ಯೆ ಹಾಗೂ 1058 ಜಾನುವಾರು ಹೊಂದಿರುವ ಮಿರ್ಜಿ ಗ್ರಾಮ ಸ್ಥಳಾಂತರಿಸಬೇಕೆನ್ನುವ ಬೇಡಿಕೆ ಹಲವಾರು ದಶಕದಿಂದ ಇದ್ದರೂ ಜಾಗದ ನೆಪವೊಡ್ಡುವ ಅಧಿಕಾರಿಗಳು ಕಣ್ಣೊರೆಸುವ ತಂತ್ರ ಅನುಸರಿಸುತ್ತಿದ್ದಾರೆ.
ನಿಮ್ಮ ಶಾಶ್ವತ ನೆಲೆ ಕಟ್ಟಿಕೊಡಲು ಸರ್ಕಾರ ತಯಾರಿದ್ದು, ಆದರೆ ಗ್ರಾಮ ಸ್ಥಳಾಂತರಕ್ಕೆ ಜಮೀನು ಸಮಸ್ಯೆ ಉಂಟಾಗಿದೆ. ಯಾರಾದರೂ ಸರ್ಕಾರಿ ಬೆಲೆಯಲ್ಲಿ ಜಮೀನು ನೀಡಿದರೆ ಗ್ರಾಮ ಸ್ಥಳಾಂತರಕ್ಕೆ ನಾವು ಸಿದ್ಧ ಎನ್ನುತ್ತಾರೆ. ಬಂಗಾರ ಬೆಳೆಯುವ ಭೂಮಿಯನ್ನು ಸರ್ಕಾರಿ ಬೆಲೆಗೆ ಕೊಟ್ಟು ನೆರವಾಗಲು ಯಾವ ಜಮೀನ್ದಾರರು ಮುಂದೆ ಬರುತ್ತಿಲ್ಲ. ಇದೊಂದೇ ಕಾರಣದಿಂದ
ಮಾತ್ರ ಮಿರ್ಜಿ ಗ್ರಾಮದ ಶಾಶ್ವತ ಸ್ಥಳಾಂತರ ಮರೀಚಿಕೆಯಾಗಿಯೇ ಉಳಿದುಕೊಂಡಿದೆ.
ಪ್ರವಾಹ ಬಂದಾಗೊಮ್ಮೆ ಗ್ರಾಮಸ್ಥರಿಗೆ ಕಾಳಜಿ ಕೇಂದ್ರದ ಅನುಕೂಲ ಕಲ್ಪಿಸುವ ಜನಪ್ರತಿನಿ ಧಿಗಳು ಗ್ರಾಮಸ್ಥರ ಗೋಳು ಕಂಡು ಪರಿಹರಿಸಲಾಗದೆ ಕೈಕೈ ಹಿಸುಕಿ ಕೊಳ್ಳುವಂತಾಗಿದೆ.
ಫಲವತ್ತಾದ ಭೂಮಿ ಕೊಡಲು ನಕಾರ: ಮಿರ್ಜಿ ಗ್ರಾಮ ಘಟಪ್ರಭಾ ನದಿ ತಟದಲ್ಲಿ ನೆಲೆ ಯಾಗಿರುವ ಪ್ರದೇಶ ಇಲ್ಲಿನ ಮೆಕ್ಕಲು ಮಣ್ಣಿನ ಜಮೀನಿನಲ್ಲಿ ಬಂಗಾರ ಬೆಳೆಯುವ ಶಕ್ತಿ ಇದೆ. ಐದಾರು ವರ್ಷಕ್ಕೊಮ್ಮೆ ಬಂದು ಹೋಗುವ ಪ್ರವಾಹಕ್ಕಾಗಿ ಫಲವತ್ತಾದ ಭೂ ಪ್ರದೇಶ ಬಿಟ್ಟು ಕೊಡಲು ಯಾರೂ ಮುಂದಾಗುತ್ತಿಲ್ಲ. ಜನಪ್ರತಿನಿಧಿಗಳು ಸ್ಥಳಾಂತರವೆಂಬ ತುಪ್ಪ ಜನರ ಮೂಗಿಗೆ ಸವರಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವುದು ಸುಳ್ಳಲ್ಲ.
*ಗೋವಿಂದಪ್ಪ ತಳವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JDS ನಾಯಕ ಸೆರೆ; ಕೋಟಿ ರೂ. ಪಡೆದು ಸ್ವಾಮೀಜಿಗೆ ವಂಚನೆ!
Development: ಸಂಪರ್ಕ ಸಾರಿಗೆಗಳಿಂದ ದೇಶದ ಆರ್ಥಿಕತೆ ಹೆಚ್ಚಳ: ಸಚಿವ ರಾಮಲಿಂಗಾರೆಡ್ಡಿ
Transport: ವಾಯವ್ಯ ಸಾರಿಗೆ ನಿಗಮಕ್ಕೆ 400 ಬಸ್ ಖರೀದಿಗೆ ಕ್ರಮ: ಸಚಿವ ರಾಮಲಿಂಗಾರೆಡ್ಡಿ
Mudhol: ಉದಯವಾಣಿ ಫಲಶೃತಿ; ಭವನ ಸ್ವಚ್ಛತೆಗೆ ಮುಂದಾದ ಅಧಿಕಾರಿಗಳು
Uttara Karnataka: ಮಹಾಲಿಂಗಪುರ ಪುರಸಭೆ ಅಧ್ಯಕ್ಷರ ಜಾನುವಾರು ಪ್ರೀತಿ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
IPL Retentions: ಐಪಿಎಲ್ ನಿಯಮಗಳಲ್ಲಿ ಭಾರಿ ಬದಲಾವಣೆ; ವಿದೇಶಿ ಆಟಗಾರರಿಗೆ ಮೂಗುದಾರ
MUDA Scam: ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಕರಣ ತನಿಖೆಗೆ ಲೋಕಾಯುಕ್ತದಿಂದ 4 ತಂಡ ರಚನೆ
Rescue: ಉತ್ತರ ಭಾರತದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಉಡುಪಿಯ ತಂಡಕ್ಕೆ ಸಂಸದ ಕೋಟ ಸಹಾಯ
leak: ಎಸೆಸೆಲ್ಸಿಪರೀಕ್ಷೆ ದಿನ ಬೆಳಗ್ಗೆ 6ಕ್ಕೆ ಶಿಕ್ಷಕರಿಗೆ ಸಿಗಲಿದೆ ಪ್ರಶ್ನೆಪತ್ರಿಕೆ
Daily Horoscope: ಅನವಶ್ಯ ಮಾತುಗಳಿಂದ ದೂರವಿರಿ, ಉದ್ಯೋಗಸ್ಥರ ಸಮಸ್ಯೆ ನಿವಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.