ಮುಧೋಳ ತಾಲೂಕಿನ ಹಲಗಲಿ ಆಸ್ಪತ್ರೆಗೆ ರಾಷ್ಟ್ರೀಯ ಪ್ರಮಾಣಪತ್ರ

ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಿತ್ಯ ನೂರಾರು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.

Team Udayavani, Sep 23, 2024, 1:36 PM IST

ಮುಧೋಳ ತಾಲೂಕಿನ ಹಲಗಲಿ ಆಸ್ಪತ್ರೆಗೆ ರಾಷ್ಟ್ರೀಯ ಪ್ರಮಾಣಪತ್ರ

ಉದಯವಾಣಿ ಸಮಾಚಾರ
ಮುಧೋಳ: ತಾಲೂಕಿನ ಹಲಗಲಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರಾಷ್ಟ್ರಮಟ್ಟದ ಅತ್ಯುತ್ತಮ ಗುಣಮಟ್ಟ ಪ್ರಮಾಣಪತ್ರ ದೊರೆತಿದ್ದು, ತಾಲೂಕು ಹಾಗೂ ಹಲಗಲಿ ಗ್ರಾಮದ ಹಿರಿಮೆ ಹೆಚ್ಚಿಸಿದೆ. ರಾಷ್ಟ್ರಮಟ್ಟದ ಆರೋಗ್ಯ ಅಧಿಕಾರಿಗಳು ಆಸ್ಪತ್ರೆಯಲ್ಲಿನ ಸಮಗ್ರ ಕಾರ್ಯವೈಖರಿ ಮೆಚ್ಚಿ ಪ್ರಮಾಣೀಕರಿಸಿದ್ದಾರೆ.

ತಾಲೂಕಿನಲ್ಲಿ ಎರಡನೇ ಆಸ್ಪತ್ರೆ: ಈ ಹಿಂದೆ ಮುಧೋಳ ತಾಲೂಕಿನ ಮಳಲಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಈ ಪ್ರಶಂಸೆಗೆ ಪಾತ್ರವಾಗಿತ್ತು. ಅದನ್ನು ಹೊರತುಪಡಿಸಿದರೆ ಹಲಗಲಿ ಗ್ರಾಮದ ಆರೋಗ್ಯ ಕೇಂದ್ರ ಇದೀಗ ಉನ್ನತ ಮಟ್ಟದ ಸಾಧನೆಗೈದಿದೆ.

ಹೇಗೆ ನಡೆಯುತ್ತೆ ಪ್ರಕ್ರಿಯೆ?: ಒಟ್ಟು 1368 ಅಂಶಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಪ್ರತಿ ಅಂಶಕ್ಕೂ ಅದರದೇ ಮಾನದಂಡ ಮೇಲೆ ಅಂಕಗಳನ್ನು ನೀಡುತ್ತಾರೆ. ಹೀಗೆ ನೀಡುವ ಒಟ್ಟು ಅಂಕಗಳ ಒಟ್ಟು ಸರಾಸರಿ 70 ದಾಟಿದರೆ ಅಂತಹ ಆಸ್ಪತ್ರೆಗೆ ಉತ್ತಮ ಗುಣಮಟ್ಟದ ಪ್ರಮಾಣಪತ್ರ ನೀಡಿ ಪ್ರಶಂಸಿಸುತ್ತಾರೆ. ಹೊರರೋಗಿಗಳ ವಿಭಾಗ, ಲ್ಯಾಬೋರೊಟರಿ, ರಾಷ್ಟ್ರೀಯ ಆರೋಗ್ಯ ಸುಧಾರಣೆ ಕಾರ್ಯಾಗಾರಗಳ ಅನುಷ್ಠಾನ, ಆಸ್ಪತ್ರೆ ಆಡಳಿತ ಸೇರಿದಂತೆ ಒಟ್ಟು 6 ವಿಭಾಗದಲ್ಲಿ ಆಸ್ಪತ್ರೆ ಉತ್ತಮ ಹಂತದ ಸುಧಾರಣೆ ಕ್ರಮ ಕೈಗೊಂಡಿದೆ ಎಂಬುದನ್ನು ಪರಿಶೀಲಿಸಿದ ಮೇಲೆ ಆಸ್ಪತ್ರೆ ಪ್ರಮಾಣಪತ್ರ ವಿತರಣೆಯಾಗುತ್ತದೆ.

ರಾಜ್ಯಕ್ಕೆ ಮೂರನೇ ಸ್ಥಾನ: ದೇಶಾದ್ಯಂತ ನೂರಾರು ಆಸ್ಪತ್ರೆಗಳಿಗೆ ಉತ್ತಮ ಗುಣಮಟ್ಟದ ಪ್ರಮಾಣ ಪತ್ರ ವಿತರಿಸಿದ್ದು, ಅವುಗಳಲ್ಲಿ ಹಲಗಲಿ ಪ್ರಾಥಮಿಕ ಆರೋಗ್ಯ ಕೇಂದ್ರ ರಾಜ್ಯದಲ್ಲೇ ಮೂರನೇ ಸ್ಥಾನ ಅಲಂಕರಿಸಿದೆ. ಮೊದಲ ಸ್ಥಾನದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಿದ್ದು ಶೇ.93.6 ಅಂಕ ಪಡೆದಿದೆ. ಅದರ ನಂತರದಲ್ಲಿ ಕೋಲಾರದ ಅನ್ನೇಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಶೇ.91.35 ಅಂಕ ಪಡೆದಿದೆ.ಇವುಗಳ ತರುವಾಯ ಮುಧೋಳ ತಾಲೂಕಿನ ಹಲಗಲಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಶೇ. 91.15 ಪ್ರತಿಶತ ಅಂಕ ಪಡೆದು ಮಹತ್ತರ ಸಾಧನೆ ಮಾಡಿದೆ. ಇನ್ನು ಹಲಗಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಿತ್ಯ ನೂರಾರು ರೋಗಿಗಳು ಚಿಕಿತ್ಸೆ ಪಡೆಯುತ್ತಾರೆ.

ತಾಲೂಕು ಕೇಂದ್ರದಿಂದ 30 ಕಿ.ಮೀ ಅಂತರವಿರುವ ಕಾರಣ ಗ್ರಾಮೀಣ ಪ್ರದೇಶದ ಜನರು ಹೆಚ್ಚಾಗಿ ಇದೇ ಆಸ್ಪತ್ರೆ ಅವಲಂಬಿಸಿದ್ದು, ಆಸ್ಪತ್ರೆ ಸಿಬ್ಬಂದಿ ಸಹ ಕೆಲಸದ ಬದ್ಧತೆ ತೋರಿದ್ದಾರೆ. ಆಂಧ್ರಪ್ರದೇಶದ ವಿಜಯವಾಡ, ಮಹಾರಾಷ್ಟ್ರ ನಾಶಿಕ್‌ನಿಂದ ಆಗಮಿಸಿದ್ದ ಉನ್ನತಮಟ್ಟದ ಆರೋಗ್ಯಾಧಿಕಾರಿಗಳು ಆಸ್ಪತ್ರೆ ಅವಲೋಕನೆಗೆ ಬಂದಿದ್ದರು. ಆಗಸ್ಟ್‌ 29-30ರಂದು ನಡೆದ ಮಾನದಂಡ ಪರೀಕ್ಷೆಯಲ್ಲಿ

3 ವರ್ಷಗಳ ಕಾಲ ಅನುದಾನ: ರಾಷ್ಟ್ರೀಯ ಉತ್ತಮ ಗುಣಮಟ್ಟ ಹೊಂದಿದ ಆಸ್ಪತ್ರೆಗೆ ಅಭಿವೃದ್ಧಿ ಹಾಗೂ ಇನ್ನಿತರೆ ಕಾರ್ಯ ಕೆಲಸಗಳಿಗೆ ಪ್ರಮಾಣೀಕೃತಗೊಂಡ ವರ್ಷದಿಂದ 3 ವರ್ಷಗಳ ಕಾಲ ವಾರ್ಷಿಕ 300000 ರೂ. ಅನುದಾನ ದೊರೆಯಲಿದೆ. ಆದರೆ ಪ್ರತಿವರ್ಷ ರಾಜ್ಯದ ಹಿರಿಯ ಆರೋಗ್ಯ ಇಲಾಖೆ ಅಧಿಕಾರಿಗಳು ಆಸ್ಪತ್ರೆ ಕಾರ್ಯವೈಖರಿ ಪರಿಶೀಲಿಸಿ ಅನುದಾನ
ಬಿಡುಗಡೆಗೊಳಿಸುವರು.

ಗ್ರಾಮೀಣ ಪ್ರದೇಶದ ಜನರಿಗೆ ಗುಣಮಟ್ಟದ ಚಿಕಿತ್ಸೆ ಒದಗಿಸುತ್ತಿರುವ ಹಲಗಲಿ ಪ್ರಾಥಮಿಕ ಆರೋಗ್ಯ ಕೇಂದ್ರ ರಾಷ್ಟ್ರೀಯ ಗುಣಮಟ್ಟದ ಆಸ್ಪತ್ರೆಯೆಂದು ಪ್ರಮಾಣೀಕೃತಗೊಂಡಿರುವುದಕ್ಕೆ ಹೆಚ್ಚಿನ ಸಂತಸ ಉಂಟಾಗಿದೆ. ಅಲ್ಲಿನ ವೈದ್ಯರು ಇದೇ ರೀತಿ ಉತ್ತಮ ಕಾರ್ಯ ನಿರ್ವಹಿಸಿ ಸಾರ್ವಜನಿಕರಿಗೆ ಹೆಚ್ಚಿನ ಸೇವೆ ಒದಗಿಸಲಿ.
*ಆರ್‌.ಬಿ. ತಿಮ್ಮಾಪುರ,
ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ

ರಾಷ್ಟ್ರೀಯ ಗುಣಮಟ್ಟದ ಆಸ್ಪತ್ರೆಯೆಂದು ಪ್ರಮಾಣೀಕೃತಗೊಂಡಿರುವುದು ಹೆಚ್ಚಿನ ಸಂತಸ ತಂದಿದೆ. ನಮ್ಮ ಇಲಾಖೆ ಮೇಲಧಿಕಾರಿಗಳ ಮಾರ್ಗದರ್ಶನ ಹಾಗೂ ಗ್ರಾಮಸ್ಥರ ಸಹಕಾರದಿಂದ ಆಸ್ಪತ್ರೆ ಹೆಚ್ಚು ಗುಣಮಟ್ಟದಿಂದ ಕೂಡಿರುವಂತೆ ನೋಡಿಕೊಳ್ಳಲು ಸಾಧ್ಯವಾಯಿತು. ಇದರಿಂದಾಗಿ ನಮಗೆ ಈ ಪ್ರಶಂಸೆ ದೊರೆತಿದೆ.
*ಸಚಿನ ಮಾನೆ, ಪ್ರಾಥಮಿಕ ಆರೋಗ್ಯ
ಕೇಂದ್ರದ ವೈದ್ಯಾಧಿಕಾರಿ

■ ಗೋವಿಂದಪ್ಪ ತಳವಾರ

ಟಾಪ್ ನ್ಯೂಸ್

1-ree

Mahalakshmi 50 ಪೀಸ್‌ ಕೇಸ್; ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ: ನಗರ ಪೊಲೀಸ್ ಆಯುಕ್ತ

16

BBK11: ಸ್ಪರ್ಧಿಗಳ ಆಯ್ಕೆಗೆ ವೋಟಿಂಗ್‌ To ಫೇಸ್‌ ರಿವೀಲ್; ಹೇಗಿರಲಿದೆ ಈ ಬಾರಿ ಬಿಗ್‌ಬಾಸ್?

Kalaburagi: ಕೊಲೆಯಲ್ಲಿ ಅಂತ್ಯವಾಯ್ತು ಮದುವೆ ಮಾತುಕತೆ: ಆರು ಆರೋಪಿಗಳ ಬಂಧನ

Kalaburagi: ಕೊಲೆಯಲ್ಲಿ ಅಂತ್ಯವಾಯ್ತು ಮದುವೆ ಮಾತುಕತೆ: ಆರು ಆರೋಪಿಗಳ ಬಂಧನ

1-SSC

Union Minister ಶಿವರಾಜ್ ಸಿಂಗ್ ಚೌಹಾಣ್ ಕಾರು ರಸ್ತೆ ಗುಂಡಿಯಲ್ಲಿ ಸಿಲುಕಿ ಪರದಾಟ!

Modi’s mindset has changed after the Lok Sabha elections: Rahul Gandhi

Politics; ಲೋಕಸಭೆ ಚುನಾವಣೆ ಬಳಿಕ ಮೋದಿ ಮನಸ್ಥಿತಿ ಬದಲಾಗಿದೆ: ರಾಹುಲ್‌ ಗಾಂಧಿ

Hubli; ತಪ್ಪಿಸಲೆತ್ನಿಸಿದ ಆರೋಪಿ; ಕಾಲಿಗೆ ಗುಂಡು ಹೊಡೆದು ಬಂಧಿಸಿದ ಪೊಲೀಸರು

Hubli; ತಪ್ಪಿಸಲೆತ್ನಿಸಿದ ಆರೋಪಿ; ಕಾಲಿಗೆ ಗುಂಡು ಹೊಡೆದು ಬಂಧಿಸಿದ ಪೊಲೀಸರು

Thirthahalli: ನಿಜವಾದ ಕಾರ್ಮಿಕ ಫಲಾನುಭವಿಗಳಿಗೆ ಇಲ್ವಾ ಕಿಟ್ !?

Thirthahalli: ನಿಜವಾದ ಕಾರ್ಮಿಕ ಫಲಾನುಭವಿಗಳಿಗೆ ಇಲ್ವಾ ಕಿಟ್ !?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ಯಾಸೆಂಜರ್‌ ರೈಲು ಓಡಾಟ ಎಂದು? ರೈಲ್ವೆ ಹೋರಾಟಗಾರರಿಗೆ ಬೇಸರ…

Mudhol: ಅತ್ಯಾಚಾರದಂತಹ ಕೃತ್ಯಕ್ಕೆ ಕೋಮುಬಣ್ಣ ಬಳಿಯುವ ಕೆಲಸವಾಗಬಾರದು

Mudhol: ಅತ್ಯಾಚಾರದಂತಹ ಕೃತ್ಯಕ್ಕೆ ಕೋಮುಬಣ್ಣ ಬಳಿಯುವ ಕೆಲಸವಾಗಬಾರದು

Mudhol: ಬಾಲಕಿಗೆ ಲೈಂಗಿಕ‌‌ ಕಿರುಕುಳ… ಫೋಕ್ಸೊ ಪ್ರಕರಣ ದಾಖಲು

Mudhol: ಬಾಲಕಿಗೆ ಲೈಂಗಿಕ‌‌ ಕಿರುಕುಳ… ಫೋಕ್ಸೊ ಪ್ರಕರಣ ದಾಖಲು

Mahalingapura: ಗಮನ ಸೆಳೆದ ಮಹಾಲಿಂಗೇಶ್ವರ ಜಾತ್ರೆಯ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ…

Mahalingapura: ಗಮನ ಸೆಳೆದ ಮಹಾಲಿಂಗೇಶ್ವರ ಜಾತ್ರೆಯ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ…

BJP ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ದ‌ ದೂರು ದಾಖಲು

BJP ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ದ‌ ದೂರು ದಾಖಲು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1-ree

Mahalakshmi 50 ಪೀಸ್‌ ಕೇಸ್; ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ: ನಗರ ಪೊಲೀಸ್ ಆಯುಕ್ತ

16

BBK11: ಸ್ಪರ್ಧಿಗಳ ಆಯ್ಕೆಗೆ ವೋಟಿಂಗ್‌ To ಫೇಸ್‌ ರಿವೀಲ್; ಹೇಗಿರಲಿದೆ ಈ ಬಾರಿ ಬಿಗ್‌ಬಾಸ್?

Kalaburagi: ಕೊಲೆಯಲ್ಲಿ ಅಂತ್ಯವಾಯ್ತು ಮದುವೆ ಮಾತುಕತೆ: ಆರು ಆರೋಪಿಗಳ ಬಂಧನ

Kalaburagi: ಕೊಲೆಯಲ್ಲಿ ಅಂತ್ಯವಾಯ್ತು ಮದುವೆ ಮಾತುಕತೆ: ಆರು ಆರೋಪಿಗಳ ಬಂಧನ

1-SSC

Union Minister ಶಿವರಾಜ್ ಸಿಂಗ್ ಚೌಹಾಣ್ ಕಾರು ರಸ್ತೆ ಗುಂಡಿಯಲ್ಲಿ ಸಿಲುಕಿ ಪರದಾಟ!

Modi’s mindset has changed after the Lok Sabha elections: Rahul Gandhi

Politics; ಲೋಕಸಭೆ ಚುನಾವಣೆ ಬಳಿಕ ಮೋದಿ ಮನಸ್ಥಿತಿ ಬದಲಾಗಿದೆ: ರಾಹುಲ್‌ ಗಾಂಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.