ಪ್ರವಾಹಕ್ಕೆ ಮುಳುಗಿದ ನೇಕಾರಿಕೆ!

ಸರ್ಕಾರದ ಪರಿಹಾರ ಕಚ್ಚಾ ವಸ್ತುವಿಗೂ ಸಾಲಲ್ಲ

Team Udayavani, Oct 15, 2019, 11:45 AM IST

bk-tdy-1

ಬಾಗಲಕೋಟೆ: ಕಳೆದ ಆಗಸ್ಟ್‌ ತಿಂಗಳಲ್ಲಿ ಬಂದ ಭೀಕರ ಪ್ರವಾಹಕ್ಕೆ ಜಿಲ್ಲೆಯ ನೇಕಾರಿಕೆಯೇ ಮುಳುಗಿ ಹೋಗಿದೆ. ಪ್ರವಾಹ ಭೀಕರತೆಯ ಕರಿ ನೆರಳಿನಿಂದ ನೇಕಾರರು ಇಂದಿಗೂ ಹೊರ ಬಂದಿಲ್ಲ. ಸರ್ಕಾರ ಘೋಷಿಸಿದ, ಪರಿಹಾರ ಕಚ್ಚಾ ವಸ್ತು ಖರೀದಿಸಲೂ ಸಾಕಾಗಲ್ಲ ಎಂಬ ಕೊರಗು ನೇಕಾರರ ವಲಯದಿಂದ ಕೇಳಿ ಬರುತ್ತಿದೆ.

ಜಿಲ್ಲೆಯ ಘಟಪ್ರಭಾ, ಮಲಪ್ರಭಾ ಹಾಗೂ ಕೃಷ್ಣಾ ನದಿ ಪ್ರವಾಹದಿಂದ ಜಿಲ್ಲೆಯ ನೇಕಾರರು ದೊಡ್ಡ ಹಾನಿ ಅನುಭವಿಸಿದ್ದಾರೆ. ಪ್ರತಿ ಮನುಷ್ಯನಿಗೆ ಉತ್ತಮ ಬಟ್ಟೆ ನೇಯ್ದು, ಅವರ ಮಾನ ಕಾಪಾಡುವ ನೇಕಾರರ ಮಗ್ಗಗಳು ಇಂದಿಗೂ ನೀರಿನಲ್ಲಿ ನಿಂತು ಬೆತ್ತಲಾಗಿವೆ. ಆದರೆ, ಅವರ ಸಂಕಷ್ಟಕ್ಕೆ ಸ್ಪಂದಿಸುವ ಹೃದಯ ವೈಶಾಲ್ಯತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಸೂಕ್ತ ಮಟ್ಟದಲ್ಲಿ ನಡೆಯುತ್ತಿಲ್ಲ ಎಂಬ ಬೇಸರ ವ್ಯಕ್ತವಾಗಿದೆ.

ಬಟ್ಟೆ ಬೇಕು; ನಿಯಮದಡಿ ಬರಲ್ಲ: ನೇಕಾರರು ಅತಿವೃಷ್ಟಿ ಇಲ್ಲವೇ ಅನಾವೃಷ್ಟಿಯಿಂದ ಹಾನಿ ಅನುಭವಿಸಿದರೆ ಅವರಿಗೆ ಸೂಕ್ತ ಪರಿಹಾರ ಕೊಡಲು ಕೇಂದ್ರದ ಎನ್‌ಡಿಆರ್‌ಎಫ್‌ ಇಲ್ಲವೇ ರಾಜ್ಯದ ಎಸ್‌ಡಿಆರ್‌ಎಫ್‌ ನಿಯಮಗಳಲ್ಲಿ ಅವಕಾಶವೇ ಇಲ್ಲ. ನೇಕಾರರಿಗೆ ಸಹಾಯಧನ ರೂಪದಲ್ಲಿ ಕಚ್ಚಾ ವಸ್ತುಗಳ ಪೂರೈಕೆ ಸಹಿತ ಅವರಿಗೆ ಸೂಕ್ತ ಸೌಲಭ್ಯ ಕಲ್ಪಿಸಲೆಂದೇ ಇರುವ ಕೈಮಗ್ಗ ಮತ್ತು ಜವಳಿ ಇಲಾಖೆ, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮಗಳು ಸರಿಯಾಗಿ ಸ್ಪಂದಿಸುತ್ತಿಲ್ಲವೆಂಬ ಅಸಮಾಧಾನವೂ ಇದೆ. ನೇಕಾರರು ನಿತ್ಯ ಕಷ್ಟಪಟ್ಟು ನೇಯ್ಗೆ ಮಾಡುವ ಬಟ್ಟೆ ಮಾತ್ರ ಎಲ್ಲರಿಗೂ ಬೇಕು. ಆದರೆ, ಅವರಿಗೆ ಪ್ರತಿ ಹಂತದಲ್ಲೂ ನೆರವಾಗಲು, ಸರ್ಕಾರಿ ನಿಯಮಗಳಡಿ ತಿದ್ದುಪಡಿ ತರಲು ಈವರೆಗೂ ಯಾರೂ ಮುಂದಾಗಿಲ್ಲ.

ನೀರಿನಲ್ಲಿದ್ದ ಮಗ್ಗಗಳು: ಕೃಷ್ಣಾ ನದಿ ಪ್ರವಾಹದಿಂದ ರಬಕವಿ, ರಾಮಪುರ ಭಾಗದಲ್ಲಿ ನೇಕಾರರು ಅತಿ ಹೆಚ್ಚು ಹಾನಿ ಅನುಭವಿಸಿದ್ದಾರೆ. ರಬಕವಿ ಒಂದೇ ಪಟ್ಟಣದಲ್ಲಿ 126 ವಿದ್ಯುತ್‌ ಮಗ್ಗಗಳು, ಸುಮಾರು 300ಕ್ಕೂ ಹೆಚ್ಚು ಕೈಮಗ್ಗಗಳು ಆ. 3ರಿಂದ 8ರವರೆಗೆ ಸಂಪೂರ್ಣ ನೀರಿನಲ್ಲೇ ನಿಂತಿದ್ದವು. ಹೀಗಾಗಿ ರಬಕವಿಯ ಮುತ್ತೂರಗಲ್ಲಿ, ಹೊಸಪೇಟ ಗಲ್ಲಿ, ಬಸವೇಶ್ವರ ದೇವಸ್ಥಾನ ಸುತ್ತಲೂ ಅತಿ ಹೆಚ್ಚಾಗಿ ಇರುವ ನೇಕಾರರು, ಸಂಕಷ್ಟಕ್ಕೆ ಸಿಲುಕಿದ್ದಾರೆ.

ಅಂದು ನೀರಿನಲ್ಲಿ ಮುಳುಗಿದ ಮಗ್ಗಗಳು ಹಾಗೂ ಲಕ್ಷಾಂತರ ಮೊತ್ತದ ಕಚ್ಚಾ ವಸ್ತುಗಳು ಪ್ರವಾಹ ನೀರಿನಲ್ಲಿ ತೇಲಿವೆ. ಅದನ್ನು ಮರಳಿ ಬಳಸಲು ಆಗಿಲ್ಲ. ಇನ್ನು ವಿದ್ಯುತ್‌ ಮಗ್ಗ, ವೈಡಿಂಗ್‌, ವಾಸಿಂಗ್‌ ಹಾಗೂ ಸೈಜಿಂಗ್‌ ಯಂತ್ರಗಳೂ ಕೆಟ್ಟು ಹೋಗಿವೆ. ರಬಕವಿಯ ನೀಲಕಂಠ ಮುತ್ತೂರ ಅವರೊಬ್ಬರಿಗೇ ಸೇರಿದ 10 ವಿದ್ಯುತ್‌ ಮಗ್ಗಗಳು, ಅದರ ಉಪಯಂತ್ರಗಳು ಹಾನಿಯಾಗಿವೆ. ಇವರೊಬ್ಬರೇ ಲಕ್ಷಾಂತರ ಹಾನಿ ಅನುಭವಿಸಿದ್ದು, ಕೇವಲ 25 ಸಾವಿರ ಪರಿಹಾರ ಕೊಟ್ಟರೆ ಏನು ಉಪಯೋಗ. ಪ್ರವಾಹದಿಂದ ರಬಕವಿ, ರಾಮಪುರ

ಅಷ್ಟೇ ಅಲ್ಲ ಹುನಗುಂದ ತಾಲೂಕಿನ ಕಮತಗಿ ಸೇರಿದಂತೆ ಜಿಲ್ಲೆಯ ಹಲವೆಡೆ ನೇಕಾರರು ಹಾನಿ ಅನುಭವಿಸಿದ್ದಾರೆ. ಅದರ ವರದಿಯನ್ನು ಇಲಾಖೆ ನೀಡಿದೆ. ಆದರೆ, ನೇಕಾರರಿಗೆ ತಕ್ಷಣ ಸ್ಪಂದಿಸುವ ಕಾರ್ಯ ಈವರೆಗೂ ನಡೆದಿಲ್ಲ ಎನ್ನಲಾಗಿದೆ.

ಸಿಎಂ ಸೂಚನೆಗೆ ಬೆಲೆ ಇಲ್ಲ: ಈಚೆಗೆ ಜಿಲ್ಲೆಗೆ ಬಂದಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಜಿಲ್ಲಾಡಳಿತ ಭವನದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು-ಅಧಿಕಾರಿಗಳ ಮಹತ್ವದ ಸಭೆ ನಡೆಸಿ, ಪ್ರವಾಹ ಪರಿಹಾರ ಕಾರ್ಯಗಳ ಕುರಿತು ಪರಿಶೀಲನೆ ನಡೆಸಿದ್ದರು. ಈ ವೇಳೆ ತೇರದಾಳದ ಶಾಸಕ ಸಿದ್ದು ಸವದಿ, ಪ್ರವಾಹದಿಂದ ನೇಕಾರರು ಹಾನಿ ಅನುಭವಿಸಿದ್ದು, ಅವರಿಗೆ ಎನ್‌ಡಿಆರ್‌ ಎಫ್‌, ಎಸ್‌ಡಿಆರ್‌ಎಫ್‌ ನಿಯಮಗಳಡಿ ಪರಿಹಾರ ಬರುತ್ತಿಲ್ಲ. ಇದೊಂದು ವಿಶೇಷ ಪ್ರಕರಣವೆಂದು ನೇಕಾರರಿಗೆ ಪರಿಹಾರ ಕೊಡಬೇಕೆಂದು ಒತ್ತಾಯಿಸಿದ್ದರು. ಆ ಸಭೆಯಲ್ಲೇ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಪ್ರವಾಹದಿಂದ ಹಾನಿಯಾದ ನೇಕಾರ ಕುಟುಂಬಕ್ಕೆ ತಲಾ 25 ಸಾವಿರ ಪರಿಹಾರ ಘೋಷಿಸಿದ್ದರು. ನಾಳೆಯಿಂದಲೇ ಪರಿಹಾರಧನ ನೀಡುವಂತೆಯೂ ನಿರ್ದೇಶನ ನೀಡಿದ್ದರು. ಆದರೆ, ಸಿಎಂ ಬಂದು ಹೋಗಿ, 10 ದಿನ ಕಳೆದರೂ ನೇಕಾರರಿಗೆ 10 ಪೈಸೆ ಪರಿಹಾರ ಕೊಟ್ಟಿಲ್ಲ ಎಂಬುದು ನೇಕಾರರ ಆಕ್ರೋಶ.

 

-ಶ್ರೀಶೈಲ ಕೆ. ಬಿರಾದಾರ

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-mudhol

Mudhol: ನಾರಿಯರ ಗಸ್ತುಕಾರ್ಯಕ್ಕೆ ಪೊಲೀಸ್ ಇಲಾಖೆ ಶ್ಲಾಘನೆ

Bagalakote: ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಮಹತ್ವದ ಒಪ್ಪಂದಕ್ಕೆ ಎಂ.ಆರ್.ಎನ್ ಸಮೂಹ ಸಹಿ

Bagalakote: ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಮಹತ್ವದ ಒಪ್ಪಂದಕ್ಕೆ ಎಂ.ಆರ್.ಎನ್ ಸಮೂಹ ಸಹಿ

11

Mudhol: ಅಂತಾರಾಜ್ಯ ಕಳ್ಳನ ಬಂಧನ; ಟ್ರ್ಯಾಕ್ಟರ್ ವಶ

4

Mudhol: ಮನೆ ಕಳ್ಳತನ; ದೂರು ದಾಖಲು

Mudhol: ನಗರದಲ್ಲಿ ಹೆಚ್ಚಿದ ಕಳ್ಳರ ಹಾವಳಿ… ಮಹಿಳಾ‌ಮಣಿಗಳಿಂದ ರಾತ್ರಿ‌ ಗಸ್ತು

Mudhol: ನಗರದಲ್ಲಿ ಹೆಚ್ಚಿದ ಕಳ್ಳರ ಹಾವಳಿ… ಮಹಿಳಾ‌ಮಣಿಗಳಿಂದ ರಾತ್ರಿ‌ ಗಸ್ತು

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.