
ಶಾಶ್ವತ ಕುಡಿವ ನೀರಿನ ಯೋಜನೆ ಸ್ಥಳ ಪರಿಶೀಲನೆ
•ಪಂಪ್ಹೌಸ್-ವಾಟರ್ ಟ್ರಿಟರ್ ಯುನಿಟ್ ನಿರ್ಮಾಣ •ಜಿಲ್ಲಾಧಿಕಾರಿ ರಾಮಚಂದ್ರನ್ ಭೇಟಿ
Team Udayavani, Jul 9, 2019, 8:07 AM IST

ಗುಳೇದಗುಡ್ಡ: ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಪಂಪ್ಹೌಸ್ ನಿರ್ಮಾಣ ಹಾಗೂ ವಾಟರ್ ಟ್ರಿಟರ್ ಯುನಿಟ್ ನಿರ್ಮಾಣಕ್ಕಾಗಿ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಅವರು ಸೋಮವಾರ ಸ್ಥಳ ಪರಿಶೀಲನೆ ನಡೆಸಿದರು.
ಗುಳೇದಗುಡ್ಡ: ಬಾದಾಮಿ-ಕೆರೂರ ಪಟ್ಟಣಗಳಿಗೆ ಆಲಮಟ್ಟಿಯಿಂದ ಶಾಶ್ವತ ಕುಡಿಯುವ ನೀರು ಪೂರೈಸುವ 228 ಕೋಟಿ ರೂ. ವೆಚ್ಚದ ಯೋಜನೆಗೆ ಪಂಪ್ಹೌಸ್ ನಿರ್ಮಾಣ ಹಾಗೂ ವಾಟರ್ ಟ್ರಿಟರ್ ಯುನಿಟ್ ನಿರ್ಮಾಣಕ್ಕಾಗಿ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಸೋಮವಾರ ಸ್ಥಳ ಪರಿಶೀಲನೆ ನಡೆಸಿದರು.
ಕೆರೂರ ಹಾಗೂ ಬದಾಮಿ ಪಟ್ಟಣ ಹಾಗೂ ಮಾರ್ಗ ಮಧ್ಯೆ ಬರುವ 18 ಹಳ್ಳಿಗಳಿಗೆ 24×7 ಯೋಜನೆಯ ಶಾಶ್ವತ ಕುಡಿಯುವ ನೀರು ಪೂರೈಸಲು ಪಂಪ್ಹೌಸ್ಗಾಗಿ ಕಮತಗಿ ರಸ್ತೆಗೆ, ವಾಟರ್ ಟ್ರೀಟರ್ ಯುನಿಟ್ ನಿರ್ಮಾಣಕ್ಕೆ ತೋಗುಣಶಿ ಹತ್ತಿರದ ಖಾಸಗಿ ಮಾಲೀಕತ್ವದ ಹಾಗೂ ಸರಕಾರಿ ಜಾಗೆಗಳನ್ನು ಪರಿಶೀಲನೆ ನಡೆಸಿ, ಇಲ್ಲಿ ವಿದ್ಯುತ್ ಮೇನ್ ಲೈನ್ ಹಾಯ್ದು ಹೋಗಿದೆ. ಈ ಜಾಗೆಯನ್ನು ಜಲಮಂಡಳಿ ಅಭಿಯಂತರರು ಪರಿಶೀಲನೆ ಮಾಡಿದ್ದಾರೋ ಇಲ್ಲವೋ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ಜಮೀನಿನ ಮಾಲೀಕರೊಂದಿಗೆ ಚರ್ಚಿಸಿ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಮಾತನಾಡಿ, ನಾನು ಸರಕಾರದ ಪರವಾದ ಪ್ರತಿನಿಧಿಯಾಗಿದ್ದು, ಜನರಿಗೆ ಕುಡಿಯುವ ನೀರು ಒದಗಿಸುವ ಯೋಜನೆ ಇಲ್ಲಿ ಮಾಡಲಾಗುತ್ತಿದೆ. ತಾವು ಭೂಮಿ ನೀಡಿದರೆ ಕುಡಿಯುವ ನೀರಿನ ಯೋಜನೆಗೆ ಜಾಗ ಕೊಟ್ಟಂತಾಗುತ್ತದೆ. ಅಲ್ಲದೇ ನೀರಿನ ಯೋಜನೆಗೆ ಜಾಗೆ ಕೊಡುವುದರಿಂದ ಜನರಿಗೆ ಒಳ್ಳೆಯದಾಗುತ್ತದೆ ಎಂದು ಹೇಳಿದರು.
ತೋಗುಣಶಿಯಲ್ಲಿ ಪರಿಶೀಲನೆ: ತೋಗುಣಶಿ ಬಸ್ ನಿಲ್ದಾಣದ ಹತ್ತಿರದ ಸರಕಾರಿ ಜಾಗೆಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಕೆರೂರು-ಬಾದಾಮಿಗೆ ಶಾಶ್ವತ ಕುಡಿಯುವ ನೀರು ಒದಗಿಸುವ ಯೋಜನೆ ಕಾಮಗಾರಿ ಆರಂಭಕ್ಕೆ ಭೂಮಿ ಅವಶ್ಯವಿದೆ. ಅದಕ್ಕೆ ಜಾಗ ನೋಡುತ್ತಿದ್ದೇವೆ. ಭೂಮಿ ಸಿಕ್ಕರೆ ಟೆಂಡರ್ ಪ್ರಕ್ರಿಯೆಯು ಆರಂಭವಾಗಿ, ಕಾಮಗಾರಿ ಆರಂಭವಾಗಲಿದೆ ಎಂದರು.
ರಾಜ್ಯದಲ್ಲಿ ಬರಗಾಲ ಆವರಿಸಿದ್ದು, ಈ ಕಾಮಗಾರಿ ಶೀಘ್ರದಲ್ಲಿ ಪೂರ್ಣಗೊಂಡರೆ ಜನರಿಗೆ ಕುಡಿಯುವ ನೀರು ಒದಗಿಸಲು ಸಾಧ್ಯವಾಗುತ್ತದೆ. ಅದಕ್ಕಾಗಿ ಭೂಮಿ ಪರಿಶೀಲನೆ ಮಾಡುತ್ತಿದ್ದೇವೆ. ನೇರ ಖರೀದಿ ಯೋಜನೆ ಮೂಲಕ ಸರಕಾರವು ಮಾಲೀಕರಿಂದ ಭೂಮಿ ಖರೀದಿ ಪ್ರಕ್ರಿಯೆ ಮಾಡುತ್ತದೆ. ತೋಗುಣಶಿ ಕ್ರಾಸ್ ಹತ್ತಿರ ಭೂಮಿ ಕೊಡಲು ಕೆಲವರು ಮುಂದೆ ಬಂದಿದ್ದು, ಅವರು ಸರಕಾರಿ ದರಕ್ಕೆ ಭೂಮಿ ನೀಡಿದರೆ ಸರಕಾರ ಭೂಮಿ ಖರೀದಿಸುತ್ತದೆ. ಭೂಮಿ ಖರೀದಿ ಪ್ರಕ್ರಿಯೆ ಬಗ್ಗೆ ತಹಶೀಲ್ದಾರ ಎಸ್.ಎಸ್. ಇಂಗಳೆ ಅವರಿಗೆ ವಹಿಸಲಾಗಿದೆ ಎಂದು ಹೇಳಿದರು.
ಉಪವಿಭಾಗಾಧಿಕಾರಿ ಎಚ್.ಜಯಾ, ತಹಶೀಲ್ದಾರ್ ಎಸ್.ಎಸ್.ಇಂಗಳೆ, ಉಪತಹಶೀಲ್ದಾರ್ ಎಂ.ಎಸ್.ಅಂಗಡಿ, ಮಂಡಳಿಯ ಅಭಿಯಂತರ ನಿಖೀಲ್ ಕಡ್ಲಿಮಟ್ಟಿ, ಮುಖಂಡರಾದ ಸಂಜಯ ಕಾರಕೂನ, ಎಸ್.ಎಂ.ಪಾಟೀಲ, ಶ್ರೀನಿವಾಸ ಇನಾನಿ ಸೇರಿದಂತೆ ಇತರರು ಇದ್ದರು.
ಅಕ್ರಮ ಮರಳು ಸಾಗಾಟ ತಡೆಗೆ ಸೂಚನೆ:
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ

India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ

Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು

ವಿಳಾಸ ಕೇಳುವ ನೆಪದಲ್ಲಿ ವ್ಯಕ್ತಿಯ ಕೊರಳಲ್ಲಿದ್ದ ಚಿನ್ನದ ಚೈನ್ ಕದ್ದ ಅಪರಿಚಿತ ವ್ಯಕ್ತಿ
MUST WATCH

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.