![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Nov 28, 2019, 1:02 PM IST
ಬಾಗಲಕೋಟೆ: ಕಲಬುರಗಿ ವಿಮಾನ ನಿಲ್ದಾಣಕ್ಕೆ ಸಂತ ಸೇವಾಲಾಲ್ರ ಹೆಸರಿಡುವಂತೆ ಆಗ್ರಹಿಸಿ ಆಲ್ ಇಂಡಿಯಾ ಬಂಜಾರಾ ಸೇವಾ ಸಂಘದ ನೇತೃತ್ವದಲ್ಲಿ ಬಂಜಾರಾ ಸಮಾಜ ಬಾಂಧವರು ಬುಧವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ| ಕೆ. ರಾಜೇಂದ್ರ ಅವರಿಗೆ ಮನವಿ ಸಲ್ಲಿಸಿದರು.
ಆಲ್ ಇಂಡಿಯಾ ಬಂಜಾರಾ ಸೇವಾ ಸಂಘದ ಜಿಲ್ಲಾ ಅಧ್ಯಕ್ಷ ಆರ್.ಎಂ. ರಾಠೊಡ ಮಾತನಾಡಿ, ಕಲಬುರಗಿಯಲ್ಲಿ ವಿಮಾನ ನಿಲ್ದಾಣ ಉದ್ಘಾಟಿಸುವ ಧಾವಂತದಲ್ಲಿ ಒಂದು ಸಮುದಾಯದ ಭಾವನೆಗೆ ಧಕ್ಕೆಉಂಟಾಗುತ್ತದೆ ಎಂಬುದನ್ನು ಲೆಕ್ಕಿಸದೇ,ಮಾದಿಹಾಳ ತಾಂಡಾ ಬಳಿ ಇದ್ದ ಬಂಜಾರಾ ಕುಲಗುರು ಶ್ರೀ ಸಂತ ಸೇವಾಲಾಲ ಮಹಾರಾಜರ ಹಾಗೂ ಮರಿಯಮ್ಮ ದೇವಿ ದೇವಸ್ಥಾನ ನೆಲಸಮಗೊಳಿಸಲಾಗಿದೆ. ಒಂದುಸಮಾಜದ ಕುಲಗುರುವಿನ ದೇವಸ್ಥಾನವನ್ನು ರಾತ್ರೋರಾತ್ರಿ ನೆಲಸಮಗೊಳಿಸಿ, ಆ ಸಮಾಜದ ಧಾರ್ಮಿಕ ಭಾವನೆಗೆ ಧಕ್ಕೆಯಾಗುತ್ತದೆ ಎಂಬ ಕನಿಷ್ಠ ಸೌಜನ್ಯ ತೋರದ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು.
ಕಲಬುರಗಿ ವಿಮಾನ ನಿಲ್ದಾಣ ಕಾಮಗಾರಿಗೆ 569 ಎಕರೆ ಭೂಮಿಯನ್ನು ಸರ್ಕಾರ ಸ್ವಾಧೀನಪಡಿಸಿಕೊಂಡಿದೆ. ಶೇ. 70 ಭೂಮಿ ಬಂಜಾರಾ ಸಮುದಾಯದ ರೈತರಿಗೆ ಸೇರಿದೆ. ನೂರಾರು ವರ್ಷಗಳ ಹಳೆಯ ದೇವಸ್ಥಾನ ನೆಲಸಮಗೊಳಿಸುವ ಮೂಲಕ ಸರ್ಕಾರ, ನಮ್ಮ ಸಮಾಜದ ಕುಲಗುರುವಿಗೆ ಅಪಚಾರ ಮಾಡಿದೆ. ಒಂದು ಸಮಾಜದ ಧಾರ್ಮಿಕ ಭಾವನೆಗೆ ಧಕ್ಕೆ ತಂದು ಬಂಜಾರಾ ಸಮಾಜಕ್ಕೆ ಅವಮಾನಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭಾರತೀಯ ಬಂಜಾರಾ ಸಂಘಟನೆ ಪ್ರಮುಖರಾದ ವೆಂಕಟೇಶ ನಾಯಕ, ಕಲ್ಲು ಜಾಧವ, ಉಮೇಶ ರಾಠೊಡ, ನೀಲಾನಗರದ ಕುಮಾರ ಮಹಾರಾಜರು, ಸಮಾಜದ ಪ್ರಮುಖರಾದ ಡಾ|ಸಂತೋಷ ನಾಯಕ, ಡಾ|ಬಾಬುರಾಜೇಂದ್ರ ನಾಯಕ, ಶಂಕರ ದೊಡಮನಿ, ಬಲರಾಮ ಪವಾರ, ಶಿವಾನಂದ ರಾಠೊಡ, ರಮೇಶ ರಾಠೊಡ, ಗೋಪಾಲ ಚವ್ಹಾಣ, ರಮೇಶ ಚವ್ಹಾಣ, ನಾಗೇಶ ಲಮಾಣಿ, ರವಿ ಚವ್ಹಾಣ, ವಾಸುದೇವ ರಾಠೊಡ, ರವೀಂದ್ರ ಪವಾರ, ಮೋತಿಲಾಲ ರಾಠೊಡ, ಕುಮಾರ ಪಮ್ಮಾರ, ವಿನಾಶ ರಜಪೂತ, ಮಾಧವಿ ರಾಠೊಡ ಮುಂತಾದವರು ಪಾಲ್ಗೊಂಡಿದ್ದರು.
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.