ಉಚಿತ ರಿಯಾಯಿತಿಯಲ್ಲಿ ತರಕಾರಿ ಹಂಚಿದ!


Team Udayavani, Mar 31, 2020, 4:44 PM IST

ಉಚಿತ ರಿಯಾಯಿತಿಯಲ್ಲಿ ತರಕಾರಿ ಹಂಚಿದ!

ಬಾಗಲಕೋಟೆ: ಕೋವಿಡ್ 19 ಭೀತಿ ಹಿನ್ನೆಲೆಯಲ್ಲಿ ಲಾಕ್‌ ಡೌನ್‌ ಮುಂದುವರೆದಿದ್ದು, ಹಳ್ಳಿ ಹಾಗೂ ನಗರದ ಜನರಿಗೆ ತರಕಾರಿ ಪೂರೈಸುವ ಮೂಲಕ ವಿಶಿಷ್ಟ ಸೇವೆಗೆ ನಗರದ ಯುವ ರೈತ ಸಮೂಹ ಮುಂದಾಗಿದೆ.

ತಾಲೂಕಿನ ಮನ್ನಿಕಟ್ಟಿ ಯುವ ರೈತ ಮಂಜುನಾಥ ವಾಸನದ ಹಾಗೂ ಸ್ನೇಹಿತರು, ಪ್ರತಿ ವರ್ಷ ವಿವಿಧ ತರಕಾರಿ ಬೆಳೆಯುತ್ತಿದ್ದು, ಅವುಗಳನ್ನು ಹೈದ್ರಾಬಾದ್‌, ಬೆಂಗಳೂರು ಸಹಿತ ವಿವಿಧೆಡೆ ಪೂರೈಸುತ್ತಿದ್ದರು. ಆದರೆ, ಈ ಬಾರಿ ಸುತ್ತಲಿನ ಗ್ರಾಮಸ್ಥರಿಗೆ ಉಚಿತವಾಗಿ ನೀಡುತ್ತಿದ್ದು, ಬಾಗಲಕೋಟೆಯ ಜನರಿಗೆ ಕಡಿಮೆ ಬೆಲೆಗೆ ತರಕಾರಿ ನೀಡಲು ತೀರ್ಮಾನಿಸಿದ್ದು, ಇದರಿಂದ ಜನರಿಗೆ ಅನುಕೂಲವಾಗುತ್ತಿದೆ.

ದಲ್ಲಾಳಿಗಳಿಗೆ ಲಾಭ: ಲಾಕ್‌ಡೌನ್‌ ಘೋಷಣೆಯೇ ಬಂಡವಾಳ ಮಾಡಿಕೊಂಡ ಕೆಲವು ದಲ್ಲಾಳಿಗಳು, ವ್ಯಾಪಾರಸ್ಥರು ಕಡಿಮೆ ಬೆಲೆಗೆ ವಿವಿಧ ತರಕಾರಿ ಖರೀದಿಸಿ, ನಗರದಲ್ಲಿ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಆದರೆ, ಈ ಬೆಲೆ ಕಷ್ಟಪಟ್ಟು ಬೆಳೆದ ರೈತರಿಗೆ ಮಾತ್ರ ದೊರೆಯುತ್ತಿಲ್ಲ. ಹೀಗಾಗಿ ಯುವ ರೈತರು, ಜಿಲ್ಲಾಡಳಿತದಿಂದ ತರಕಾರಿ ಪೂರೈಕೆಗೆ ಅನುಮತಿ ಪಡೆದಿದ್ದು, ಎಲ್ಲ ಮುಂಜಾಗ್ರತಾ ಕ್ರಮದೊಂದಿಗೆ ಮನೆ ಮನೆಗೆ ತಲುಪಿಸುವ ವ್ಯವಸ್ಥೆಗೆ ಮುಂದಾಗಿದ್ದಾರೆ.

ಮನ್ನಿಕಟ್ಟಿ ಗ್ರಾಮದಲ್ಲಿ ಟೊಮ್ಯಾಟೊ, ಬದನೆಕಾಯಿ, ಚವಳಿ, ಸವತೆ, ಬೆಂಡೆಕಾಯಿ ಹೀಗೆ ವಿವಿಧ ತರಕಾರಿ ಬೆಳೆದಿದ್ದು, ನಗರದ ಬಾಗವಾನರು (ವ್ಯಾಪಾರಸ್ಥರು) ರೈತರ ಹೊಲಕ್ಕೆ ಬಂದು ಕಡಿಮೆಗೆ ಬೆಲೆಗೆ ಖರೀದಿ ಮಾಡುತ್ತಿದ್ದಾರೆ. ಅದನ್ನೇ ನಗರಕ್ಕೆ ತಂದು ದುಪ್ಪಟ್ಟು ಬೆಲೆಗೆ ಮಾರುತ್ತಿದ್ದು, ಇದನ್ನು ತಪ್ಪಿಸಲು ಯುವ ರೈತರೇ, ನಗರದ ಮನೆ ಮನೆಗೆ ತರಕಾರಿ ತಲುಪಿಸಲು ಪರವಾನಗಿ ನೀಡಿರುವ ಜತೆಗೆ ಪಾಸ್‌ ನೀಡುವಂತೆ ಕೇಳಿದ್ದಾರೆ.

1 ಕ್ವಿಂಟಲ್‌ ಬದನೆ ಉಚಿತ: ಮೂಲತಃ ಖಜ್ಜಿಡೋಣಿ ಗ್ರಾಮದ ಮಂಜುನಾಥ ವಾಸನದ, ಮನ್ನಿಕಟ್ಟಿ ಗ್ರಾಮದಲ್ಲೂ ಭೂಮಿ ಹೊಂದಿದ್ದು, ತಲಾ 2 ಎಕರೆ ಬದನೆ, ಟೊಮ್ಯಾಟೋ ಬೆಳೆದಿದ್ದು, ಸೋಮವಾರ ಒಂದೇ ದಿನ 25 ಟ್ರೇಗಳಲ್ಲಿ ಒಟ್ಟು 100 ಕೆ.ಜಿ. ಬದನೆಕಾಯಿ ಉಚಿತವಾಗಿ ಜನರಿಗೆ ತಲುಪಿಸಿದ್ದಾರೆ. ಮನ್ನಿಕಟ್ಟಿ, ಗುಂಡನಪಲೆÂ ಹಾಗೂ ಸಂಗಮ ಕ್ರಾಸ್‌ ಬಳಿ ಸೇವೆ ಸಲ್ಲಿಸುವ ಪೊಲೀಸರು ಸಹಿತ ವಿವಿಧ ಜನರಿಗೆ ಉಚಿತವಾಗಿ ಪೂರೈಸಿದ್ದಾರೆ. ಮಂಗಳವಾರದಿಂದ ಬಾಗಲಕೋಟೆ ನಗರದಲ್ಲೂ ಜನರಿಗೆ ಅತ್ಯಂತ ಕಡಿಮೆ ಬೆಲೆಗೆ ತರಕಾರಿ ನೀಡಲು ಮುಂದಾಗಿದ್ದಾರೆ.

ವ್ಯಾಪಾರಸ್ಥರು ತರಕಾರಿಯ ಕೃತಕ ಅಭಾವ ಸೃಷ್ಟಿಸಿದ್ದಾರೆ. ರೈತರ ಹೊಲಕ್ಕೆ ಹೋಗಿ ಖರೀದಿಸಿ, ನಗರ ಪ್ರದೇಶದ ಜನರಿಗೆ ಹೆಚ್ಚಿನ ಬೆಲೆಗೆ ಕೊಡುತ್ತಿದ್ದಾರೆ. ಹೀಗಾಗಿ ನಾನು ಈಗಾಗಲೇ 1 ಕ್ವಿಂಟಲ್‌ನಷ್ಟು ಉಚಿತವಾಗಿ ಹಳ್ಳಿ ಜನರಿಗೆ ನೀಡಿದ್ದೇನೆ. ನಗರದ ಜನರಿಗೆ ಕಡಿಮೆ ಬೆಲೆಗೆ ಕೊಡಲು ಜಿಲ್ಲಾಧಿಕಾರಿಗಳು ಮೌಖೀಕವಾಗಿ ಪರವಾನಗಿ ನೀಡಿದ್ದು, ಪಾಸ್‌ಗಾಗಿ ಕಾಯುತ್ತಿದ್ದೇನೆ. ನಾಳೆ ಪಾಸ್‌ ನೀಡಿದ್ದಲ್ಲಿ ಜನರಿಗೆ ವ್ಯಾಪಾರಸ್ಥರು ಕೊಡುವ ಅರ್ಧ ಬೆಲೆಗೂ ಕಡಿಮೆ ದರಕ್ಕೆ ತರಕಾರಿ ಪೂರೈಕೆ ಮಾಡಲಾಗುವುದು. –ಮಂಜುನಾಥ ವಾಸನದ, ಮನ್ನಿಕಟ್ಟಿಯ ಯುವ ರೈತ

 

-ವಿಶೇಷ ವರದಿ

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mudhol: ಈ ಸಾರ್ವಜನಿಕ ಆಸ್ಪತ್ರೆಗೆ 10 ತಿಂಗಳಿನಿಂದ ಪ್ರಭಾರಿ ವೈದ್ಯಾಧಿಕಾರಿಯೇ ದಿಕ್ಕು

Mudhol: ಈ ಸಾರ್ವಜನಿಕ ಆಸ್ಪತ್ರೆಗೆ 10 ತಿಂಗಳಿನಿಂದ ಪ್ರಭಾರಿ ವೈದ್ಯಾಧಿಕಾರಿಯೇ ದಿಕ್ಕು

ಮಹಾಲಿಂಗಪುರದಲ್ಲಿ ಮತ್ತೊಂದು ಭ್ರೂಣಹತ್ಯೆ ಪ್ರಕರಣ ಬೆಳಕಿಗೆ: ಪಾಟೀಲ ಆಸ್ಪತ್ರೆ ಸೀಜ್

ಮಹಾಲಿಂಗಪುರದಲ್ಲಿ ಮತ್ತೊಂದು ಭ್ರೂಣಹತ್ಯೆ ಪ್ರಕರಣ ಬೆಳಕಿಗೆ: ಪಾಟೀಲ ಆಸ್ಪತ್ರೆ ಸೀಜ್

festcide

Feticide: ಮಹಾಲಿಂಗಪುರದಲ್ಲಿ ಮತ್ತೊಂದು ಭ್ರೂಣಹತ್ಯೆ ಪ್ರಕರಣ ಪತ್ತೆ

Bagalkote: ದ್ವಿಚಕ್ರ ವಾಹನಗಳ ಮುಖಾಮುಖಿ; ಸಾಪ್ಟ್ ವೇರ್ ಇಂಜಿನಿಯರ್ ಸೇರಿ ಮೂವರು ಸಾವು!

Bagalkote: ದ್ವಿಚಕ್ರ ವಾಹನಗಳ ಮುಖಾಮುಖಿ; ಸಾಪ್ಟ್ ವೇರ್ ಇಂಜಿನಿಯರ್ ಸೇರಿ ಮೂವರು ಸಾವು!

1-MLP

BJP:ಮಹಾಲಿಂಗಪುರ ಪುರಸಭೆಯ 4 ಸದಸ್ಯರು, 3 ಮುಖಂಡರು ಪಕ್ಷದಿಂದ ಉಚ್ಛಾಟನೆ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.