Shivaratri Special: ಇಲ್ಲಿ 53 ವರ್ಷಗಳಿಂದ 24 ಗಂಟೆ ನಿರಂತರ ಶಿವನಾಮ ಜಪ


Team Udayavani, Mar 8, 2024, 11:35 AM IST

5-kulageri-cross

ಕುಳಗೇರಿ ಕ್ರಾಸ್ (ಜಿ.ಬಾಗಲಕೋಟೆ): ಸೋಮನಕೊಪ್ಪ ಗ್ರಾಮದ ಪೂರ್ಣಾನಂದರ ಮಠದಲ್ಲಿ ಸುಮಾರು 53 ವರ್ಷಗಳಿಂದ ದಿನದ 24 ಗಂಟೆ ನಿರಂತರವಾಗಿ ಹಗಲು-ರಾತ್ರಿ ಶಿವನಾಮ ಜಪ ನಡೆಯುತ್ತಿದೆ. ಜೊತೆಗೆ ಅಂಧಕಾರ ಹೋಗಲಾಡಿಸಲು ಅಂದು ಹಚ್ಚಿದ ದೀಪವೂ ನಿರಂತರ ಪ್ರಜ್ವಲಿಸುತ್ತಿದೆ. ಅಂದು ಹೆಗಲೇರಿದ ತಂಬೂರಿ ಸಹ ನೆಲಮುಟ್ಟದೇ ಶಿವನಾಮ ಹೇಳುತ್ತಿದೆ.

ಹೌದು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಸುಕ್ಷೇತ್ರ ಸೋಮನಕೊಪ್ಪ ಕುಳಗೇರಿ ಕ್ರಾಸ್ ಗ್ರಾಮದಿಂದ ಈಶಾನ್ಯ ದಿಕ್ಕಿನಲ್ಲಿ 3 ಕಿ.ಮೀ. ಕ್ರಮಿಸಿದರೆ ಕಾಣ ಸಿಗುತ್ತದೆ. ಪುರ ಪ್ರವೇಶ ಮಾಡುತ್ತಿದ್ದಂತೆ ಕೇಳಿಸುವುದು “ಓಂ ನಮಃ ಶಿವಾಯ” ಎಂಬ ತಂಬುರಿಯ ನಾದ.

ನಿರಂತರ ಶಿವನಾಮಕ್ಕೆ ಕಾರಣ: ಈ ಗ್ರಾಮದಲ್ಲಿ 1970 ಅಗಸ್ಟ್ 23 ರಂದು ಪೂರ್ಣಾನಂದ ಸ್ವಾಮಿಜಿಗಳ ಮಾತಿನಂತೆ ಹಗಲು/ರಾತ್ರಿ ಎನ್ನದೆ ನಿರಂತರ ಭಜನೆಯನ್ನು ಆರಂಭಿಸಲಾಗಿದೆ. ಯಾವ ಗ್ರಾಮದವರು ಶಿವನಾಮ ಸಪ್ತಾಹವನ್ನು ಹೆಚ್ಚು ವರ್ಷ ಮಾಡುತ್ತಾರೋ ಆ ಗ್ರಾಮಕ್ಕೆ ಬರುತ್ತೆನೆಂದು ಆಜ್ಞೆಯನ್ನು ಹೊರಡಿಸಿದ ಪೂರ್ಣಾನಂದ ಸ್ವಾಮೀಜಿ ಆ ಗ್ರಾಮದಲ್ಲೇ ನೆಲೆಸುತ್ತೇನೆ ಎಂದು ಅಲ್ಲಿ ಸೇರಿದ ಮೂರು ಗ್ರಾಮಗಳ ಭಕ್ತರಿಗೆ ತಿಳಿಸಿದರಂತೆ.

ಶ್ರೀಗಳ ಆದೇಶದಂತೆ 39 ವರ್ಷಗಳ ಕಾಲ ಶಿವನಾಮ ಸಪ್ತಾಹ ಮಾಡಲು ಒಪ್ಪಿಕೊಂಡಿದ್ದೇ ಸೋಮನಕೊಪ್ಪ ಭಕ್ತರು. ಅಂದು ಪ್ರಾರಂಭವಾದ ಶಿವನಾಮ ಜಪ 39 ವರ್ಷಗಳ ನಂತರವೂ ಮುಂದುವರೆದಿದ್ದು, ಈ ಗ್ರಾಮದ ಭಕ್ತರ ಮೆಚ್ಚುಗೆ ಮೆಚ್ಚುವಂತದ್ದು.

ನಂತರ ಪೂರ್ಣಾನಂದ ಶ್ರೀಗಳು ಲಿಂಗೈಕ್ಯರಾದರು. ಅಲ್ಲಿಯೇ ಶ್ರೀಗಳ ಗದ್ದುಗೆ ನಿರ್ಮಿಸಲಾಯಿತು. ಇಂದು ಸಹ ಭಕ್ತರು ಶ್ರೀಗಳ ಕರ್ತೃ ಗದ್ದುಗೆಯ ಎದುರಲ್ಲೇ ಶಿವನಾಮ ಮುಂದುವರೆಸಿದ್ದಾರೆ. ಈ ಶಿವನಾಮ ಜಪ 53 ವರ್ಷ ಪೂರೈಸಿದ್ದು ಇಂದು ಸಹ ನಿರಂತರವಾಗಿ ನಡೆದಿದೆ.

ಜಾತಿ-ಬೇಧವಿಲ್ಲದ ಶಿವಭಜನೆ: ಪ್ರತಿದಿನವೂ ಒಂದು ಮನೆಗೆ ಒಬ್ಬರಂತೆ ಮೂರು ಗಂಟೆಗಳ ಕಾಲ ಶಿವನಾಮ ಜಪ ಮಾಡುವ ಸಮಯ ಹೊಂದಿಸಿಕೊಂಡಿದ್ದಾರೆ. ಜಾತಿ-ಬೇಧವಿಲ್ಲದೇ ಶಿವಭಜನೆ ಮಾಡುವವರ ಎಲ್ಲ ಸಮುದಾಯದ ಮನೆತನದ ಪಟ್ಟಿ ಮಾಡಿ ಮಠದ ಆವರಣದಲ್ಲಿ ಹಾಕಲಾಗಿದೆ. ಶಿವಭಜನೆ ಮಾಡುವ ಭಕ್ತರು ಪಾಳೆಯದಂತೆ ಬಂದು ಹೆಗಲಿಗೆ ಹಾಕಿದ ತಂಬೂರಿಯನ್ನ ನೆಲಕ್ಕೆ ಮುಟ್ಟದಂತೆ ವರ್ಗಾಯಿಸುತ್ತ ಕಾಯ್ದುಕೊಂಡು ಬಂದಿದ್ದಾರೆ.

ಕೋಟಿ ಜಪಯಜ್ಞ ಹರಿಕಾರ ಶ್ರದ್ಧಾನಂದರು: ನಂತರ ಶ್ರದ್ಧಾನಂದ ಶ್ರೀಗಳು ಪಟ್ಟಾಧಿಕಾರ ವಹಿಸಿಕೊಂಡು ಪೂರ್ಣಾನಂದ ಶ್ರೀಗಳ ಮಾರ್ಗದರ್ಶನದಲ್ಲಿ ಮುಂದುವರೆಯುತ್ತಾರೆ. ನಿರಂತರ ಭಕ್ತರನ್ನ ಉದ್ಧರಿಸುತ್ತ ಸಂಚಾರದಲ್ಲಿದ್ದ ಶ್ರದ್ಧಾನಂದ ಶ್ರೀಗಳು ಮುಪ್ಪಾವಸ್ಥೆ ತಲುಪುವ ವೆಳೆಗೆ ಸೋಮನಕೊಪ್ಪ ಗ್ರಾಮಕ್ಕೆ ಬಂದು ತಮ್ಮ ಶಿಷ್ಯರಾಗಿದ್ದ ನೀಲಲೋಹಿತ ಸ್ವಾಮಿಜಿಗಳಿಗೆ ಪಟ್ಟಾಧಿಕಾರ ವಹಿಸಿಕೊಡುತ್ತಾರೆ.

ಕಳೆದ 53 ವರ್ಷಗಳಿಂದಲೂ ಹಗಲು ರಾತ್ರಿ ಎನ್ನದೇ ಶಿವನಾಮ ಜಪ ನಿಲ್ಲದೇ ನಡೆಯುತ್ತಿದೆ. ಗ್ರಾಮಸ್ಥರು ಸಹ ಹೀಗೆ ಮುಂದುವರೆಸಿಕೊಂಡು ಹೋಗುವ ಸಂಕಲ್ಪ ತೊಟ್ಟಿದ್ದಾರೆ. ಶ್ರೀಗಳ ವಾಣಿಯಂತೆ ಶಿವನಾಮ ಜಪದಿಂದ ಗ್ರಾಮಸ್ಥರು ನೆಮ್ಮದಿಯ ಬದುಕು ಸಾಗಿಸುತ್ತಿದ್ದಾರೆ ಎನ್ನುತ್ತಾರೆ ಶ್ರೀಮಠದ ನೀಲಲೋಹಿತ ಸ್ವಾಮಿಜಿ.

ಶ್ರೀಗಳು ಗ್ರಾಮಕ್ಕೆ ಬರುವ ಮುಂಚೆ ಅಶಾಂತಿ, ಅನಕ್ಷರತೆ, ಬಡತನ ಹೀಗೆ ಒಂದಿಲ್ಲೊಂದು ಸಮಸ್ಯೆಗಳನ್ನ ಎದುರಿಸುತ್ತಿದ್ದ ನಮ್ಮ ಗ್ರಾಮಸ್ಥರು ಬೇರೆ ಗ್ರಾಮ ಪಟ್ಟಣಗಳಿಗೆ ಹೋಗಿ ದುಡಿದು ತಂದು ತಮ್ಮ ಜೀವನ ಸಾಗಿಸುತ್ತಿದ್ದರು. ನಮಗೆ ದೇವರಾಗಿ ಬಂದು ಕಾಪಾಡಿದ ಪೂರ್ಣಾನಂದ ಶ್ರೀಗಳು ಈ ಭಾಗದ ಭಕ್ತರನ್ನ ಉದ್ದರಿಸಿದರು. ಹಗಲು-ರಾತ್ರಿ ಶಿವನಾಮ ಮಾಡುತ್ತಿರುವ ನಮ್ಮೂರಿನ ಭಕ್ತರಿಗೆ ನನ್ನದೊಂದು ದನ್ಯವಾದ ಹೇಳುತ್ತೆನೆ. ಶಿವಾನಂದ ಚೋಳನ್ನವರ ಮಾಜಿ ಗ್ರಾಪಂ ಸದಸ್ಯರು.

ವಿಶೇಷ ವರದಿ: ಮಹಾಂತಯ್ಯ ಹಿರೇಮಠ

ಟಾಪ್ ನ್ಯೂಸ್

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Krantiveer Brigade launched by worshipping the feet of 1008 saints: KS Eshwarappa

Politicss; 1008 ಸಾಧುಸಂತರ ಪಾದಪೂಜೆ‌ ಮೂಲಕ‌ ಕ್ರಾಂತಿವೀರ ಬ್ರಿಗೇಡ್‌ ಗೆ ಚಾಲನೆ: ಈಶ್ವರಪ್ಪ

India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ

India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ

Rabkavi Banhatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು

Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು

4-

ವಿಳಾಸ ಕೇಳುವ ನೆಪದಲ್ಲಿ ವ್ಯಕ್ತಿಯ ಕೊರಳಲ್ಲಿದ್ದ ಚಿನ್ನದ ಚೈನ್‌ ಕದ್ದ ಅಪರಿಚಿತ ವ್ಯಕ್ತಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.