ರಾಜ್ಯದಲ್ಲಿ ತಾಲಿಬಾನ್ ಆಡಳಿತ: ಹಿಂದೂ ವಿರೋಧಿ ಸರ್ಕಾರಕ್ಕೆ ಹಿಂದೂ ಮುಖಂಡನಿಂದ ಧಿಕ್ಕಾರ
Team Udayavani, Sep 14, 2024, 9:44 AM IST
ಮಹಾಲಿಂಗಪುರ : ಪ್ರಗತಿ ಪರರು, ಜಾತ್ಯಾತೀತರು, ವಿಚಾರವಾದಿಗಳು ಎಲ್ಲಿದ್ದೀರಿ ? ರಾಜ್ಯದಲ್ಲಿ ನಡೆಯುತ್ತಿರುವ ತಾಲಿಬಾನ್ ಆಡಳಿತ ನಿಮಗೆ ಕಾಣಿಸುತ್ತಿಲ್ಲವಾ.? ಎಂದು ಪಟ್ಟಣದ ಹಿಂದೂ ಮುಖಂಡ ರವಿ ಕಾಶಿನಾಥ ಜವಳಗಿ ಅವರು ಮಂಡ್ಯ ಜಿಲ್ಲೆ ನಾಗಮಂಗಲ ಘಟನೆ ಕುರಿತು ಆಕ್ರೋಶ ವ್ಯಕ್ತಪಡಿಸಿದರು.
ಶುಕ್ರವಾರ ಉದಯವಾಣಿಯೊಂದಿಗೆ ಮಾತನಾಡಿದ ಅವರು ಕೊಲೆ ಮಾಡಿದವರನ್ನು, ಕಳ್ಳರನ್ನು, ಅತ್ಯಾಚಾರಿಗಳನ್ನು ಕೂರಿಸಿಕೊಂಡು ಹೋಗುವ ಪೊಲೀಸ್ ಗಾಡಿಯಲ್ಲಿ ನಾವು ಪೂಜಿಸುವ ಗಣಪತಿ ಮೂರ್ತಿಯನ್ನು ಕೂರಿಸಿಕೊಂಡು ಹೋಗಿದ್ದು ಖೇದಕರ ಸಂಗತಿ. ರಾಜ್ಯಕ್ಕೆ ಅಪಶಕುನದ ಸಂಗತಿಯಾಗಿದೆ.
ಹಿಂದು ವಿರೋಧಿ ಸರಕಾರಕ್ಕೆ ದಿಕ್ಕಾರವಿರಲಿ. ಸರ್ಕಾರಕ್ಕೆ ಗಣೇಶನ ಶಾಪ ತಟ್ಟಲಿದೆ. ಬಹುಸಂಖ್ಯಾತ ಹಿಂದು ರಾಷ್ಟ್ರ ದಲ್ಲಿ ಗಣೇಶನಿಗೆ ಈ ಪರಿಸ್ಥಿತಿ ಎದುರಾಗಿದೆ. ಆದರೂ ಕೂಡ ಹಿಂದುಗಳು ಕೇವಲ ಬಿಟ್ಟಿ ಭಾಗ್ಯಗಳಿಗೆ ಜೋತು ಬಿದ್ದು ತಮ್ಮತನ ಮರೆತಿದ್ದಾರೆ ಎಂದು ವಿಷಾದ ವ್ಯಕ್ತಿ ಪಡಿಸಿದ ಅವರು ಘಟನೆಗೆ ಕಾರಣ ಆದವರನ್ನು ಬಂಧಿಸುವುದನ್ನು ಬಿಟ್ಟು, ಗಣಪತಿ ಪ್ರತಿಷ್ಟಾಪಿಸಿದವರನ್ನೆ ಬಂಧಿಸಿದ್ದು ರಾಜ್ಯ ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನೀತಿಗೆ ಸಾಕ್ಷಿಯಾಗಿದೆ ಘಟನೆಯನ್ನು ತೀವ್ರವಾಗಿ ಖಂಡಿಸಿದ ಅವರು, ನಾಗಮಂಗಲ ಘಟನೆಯ ನಿಜವಾದ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಬೇಕೆಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.
ಇದನ್ನೂ ಓದಿ: Dandeli: ಬೀದಿನಾಯಿ ದಾಳಿ.. ಬಾಲಕನಿಗೆ ಗಾಯ: ಬೀದಿನಾಯಿಗಳ ನಿಯಂತ್ರಣಕ್ಕೆ ಸಾರ್ವಜನಿಕರ ಆಗ್ರಹ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.