ಪುರಸಭೆ ಹಳೆ ಕಟ್ಟಡ ಹಾಳು; ಕೇಳ್ಳೋರಿಲ್ವೇ ಯಾರೂ?

ಪಾರ್ಕಿಂಗ್‌ ಜಾಗ-ಹರಟೆ ಕಟ್ಟೆಯಾಯ್ತೇ ; ಆವರಣದಲ್ಲಿ ಹೆಚ್ಚುತ್ತಲೇ ಇದೆ ಗಲೀಜು

Team Udayavani, Oct 2, 2022, 5:49 PM IST

7

ತೇರದಾಳ: ಪಟ್ಟಣದ ಪುರಸಭೆಯ ನೂತನ ಕಟ್ಟಡ ಉದ್ಘಾಟನೆ ನಂತರ ಬ್ರಿಟಿಷ್‌ ಕಾಲದ ಸುಸಜ್ಜಿತವಾಗಿದ್ದ ಹಳೆಯ ಕಟ್ಟಡವನ್ನು ಹಾಳು ಕೆಡವಿರುವುದು ಮಾತ್ರ ಪ್ರಜ್ಞಾವಂತರ ಆಕ್ರೋಶಕ್ಕೆ ಕಾರಣವಾಗಿದೆ. ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಎಂಟು ತಿಂಗಳ ಹಿಂದೆ 2022ರ ಜ.14ರಂದು ಪುರಸಭೆಯ ನೂತನ ಕಟ್ಟಡ ಉದ್ಘಾಟನೆಗೊಂಡಿದ್ದರಿಂದ ಹಳೆ ಕಟ್ಟಡವನ್ನು ಹಾಳುಗೆಡವಲಾಗಿದೆ. ಈ ಕಟ್ಟಡ ಈಗ ಪಾರ್ಕಿಂಗ್‌ ಜಾಗದ ಜತೆಗೆ ಹರಟೆ ಕಟ್ಟೆಯಾಗಿದೆ.

ಉಪವಿಭಾಗಾಧಿಕಾರಿ ಡಾ| ಸಿದ್ದು ಹುಲ್ಲೊಳಿ ಅವರು ಪುರಸಭೆ ಹೊಸ ಕಟ್ಟಡ ಉದ್ಘಾಟನೆ ವೇಳೆ ಪ್ರಾಸ್ತಾವಿಕ ಮಾತನಾಡಿ, ಹಳೇ ಕಟ್ಟಡವನ್ನು ಕಂದಾಯ ಇಲಾಖೆಗೆ ನೀಡಿ, ಇಲ್ಲವೇ ನಾಡ ಕಚೇರಿಯಲ್ಲಿನ ಉಪನೋಂದಣಿ ಕಚೇರಿಗೆ ಸ್ಥಳಾಂತರಿಸಿ ಎಂದು ಹೇಳಿದ್ದರು. ಪುರಸಭೆ ಸದಸ್ಯರು, ಮುಖಂಡರು ಉಪನೋಂದಣಿ ಕಚೇರಿ ಸ್ಥಳಾಂತರಿಸುವ ಬಗ್ಗೆ ನಿರ್ಧರಿಸಿದ ಮೇಲೂ ಸ್ಥಳಾಂತರಗೊಳ್ಳದ ಕಾರಣ ಎಸಿ ಅವರು ಪುರಸಭೆ ಅಧಿಕಾರಿಗಳಿಗೆ, ಉಪನೋಂದಣಿ ಅಧಿಕಾರಿಗಳಿಗೆ ಚಾಟಿ ಬೀಸಿ ಕೂಡಲೇ ಉಪನೋಂದಣಿ ಕಚೇರಿ ಸ್ಥಳಾಂತರಿಸುವ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಖಡಕ್‌ ಸೂಚನೆ ನೀಡಿದ್ದರು. ಅವರು ಹೇಳಿ ನಾಲ್ಕಾರು ತಿಂಗಳು ಗತಿಸಿದ್ದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಗಪ್‌ ಚುಪ್‌ ಕುಳಿತಿದ್ದಾರೆ. ಆ ಮೂಲಕ ಸುಂದರ, ಐತಿಹಾಸಿಕ ಕಟ್ಟಡ ಬಗ್ಗೆ ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆಂದು ಜನರು ಆರೋಪಿಸಿದ್ದಾರೆ.

ಹಳೇ ಕಟ್ಟಡದ ಹಿಂಬದಿ ಅಭಿಯಂತರರಿದ್ದ ಕೊಠಡಿಯನ್ನು ಮಾತ್ರ ಗೃಹ ರಕ್ಷಕ ಕಚೇರಿಗೆ ನೀಡಲಾಗಿದೆ. ಇನ್ನುಳಿದ ಎಲ್ಲ ಕೊಠಡಿಗಳು ಸಂಪೂìಣ ಖಾಲಿ ಬಿದ್ದಿದ್ದು, ದಿನೇ ದಿನೆ ಕಟ್ಟಡ, ಆವರಣದ ಗಲೀಜು ಪ್ರಮಾಣ ಹೆಚ್ಚುತ್ತಲೇ ಇದೆ.

ಹಲವು ಕಟ್ಟಡಗಳು ಹಾಳು:

ಪಟ್ಟಣದಲ್ಲಿ ಪುರಸಭೆ ಹಳೆಯ ಕಟ್ಟಡವಷ್ಟೇ ಹಾಳು ಬಿದ್ದಿಲ್ಲ, ಸರಕಾರಿ ಆಸ್ಪತ್ರೆ ಹಳೇ ಕಟ್ಟಡ, ಅಲ್ಲಿನ ವಸತಿ ಗೃಹಗಳು, ಸರಕಾರಿ ಮರಾಠಿ ಶಾಲೆ, ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರ ಅಧಿಕಾರಿ ವಸತಿ ಗೃಹ, ಗ್ರಾಮ ಲೆಕ್ಕಾಧಿಕಾರಿಗಳ ವಸತಿ ಗೃಹ, ಹೆಸ್ಕಾಂ ಸಿಬ್ಬಂದಿಯ ವಸತಿ ಗೃಹಗಳು, ಲೋಕೋಪಯೋಗಿ ಇಲಾಖೆ ಕೊಠಡಿ ಹೀಗೆ ಹಲವು ಸರಕಾರಿ ಕಟ್ಟಡಗಳು ಹಾಳು ಬಿದ್ದಿವೆ.

ಹೇಳ್ಳೋರಿಲ್ಲ, ಕೇಳ್ಳೋರಿಲ್ಲ: ಐತಿಹಾಸಿಕ ತೇರದಾಳ ಪಟ್ಟಣ ಮತಕ್ಷೇತ್ರದಲ್ಲಿ ಇಂತಹ ಸರಕಾರಿ ಕಟ್ಟಡಗಳು ಹಾಳು ಬಿದ್ದಿರುವುದು ಸಾಮಾನ್ಯವಾಗಿದೆ. ಪಟ್ಟಣದ ಅಭಿವೃದ್ಧಿಗೆ ರಾಜಕೀಯ ಇಚ್ಛಾಶಕ್ತಿ ಕೊರತೆ ಇದ್ದು,ಇಲ್ಲಿ ಯಾರೂ ಹೇಳ್ಳೋರಿಲ್ಲ ಕೇಳ್ಳೋರಿಲ್ಲ ಎಂಬಂತಾಗಿದೆ ಎಂದು ಖೇದ ವ್ಯಕ್ತಪಡಿಸುತ್ತಾರೆ ಸಾರ್ವಜನಿಕರು.

ತೇರದಾಳದಲ್ಲಿ ಬ್ರಿಟಿಷರ್‌ ಕಾಲದ ಇತಿಹಾಸ ಸಾರುವ ಹಲವು ಕಟ್ಟಡಗಳಿವೆ. ಅದರಲ್ಲಿ ಪುರಸಭೆ ಕಟ್ಟಡ ಕೂಡ ಒಂದಾಗಿದೆ. ಹೊಸ ಕಟ್ಟಡ ನಿರ್ಮಾಣಗೊಂಡ ಬಳಿಕ ಹಳೇ ಕಟ್ಟಡ ಹಾಳು ಕೆಡವಬಾರದು. ಈಗಾಗಲೇ ಪಟ್ಟಣದಲ್ಲಿ ಸಾಕಷ್ಟು ಕಟ್ಟಡಗಳು ಹಾಳು ಬಿದ್ದಿವೆ. ಇದು ಹೀಗೆ ಮುಂದುವರಿದರೆ ಈ ಕಟ್ಟಡ ಬೇನಾಮಿ ಆಸ್ತಿಯಾಗಿ ಕಂಡವರ ಪಾಲಾಗಬಹುದು. ಈ ಕುರಿತು ಸಂಬಂಧಿ ಸಿದ ಅ ಧಿಕಾರಿಗಳಿಗೆ ಸಾಕಷ್ಟು ಬಾರಿ ಹೇಳಿದ್ದೇನೆ. ಕಾರಣ ಹಾಳು ಬಿದ್ದಿರುವ ಕಟ್ಟಡಗಳನ್ನು ದುರಸ್ತಿ ಮಾಡಿಸಲು ಶಾಸಕರು ಕ್ರಮ ಕೈಗೊಳ್ಳಬೇಕಾಗಿದೆ. –ಪ್ರವೀಣಧಣಿ ನಾಡಗೌಡ, ಪುರಸಭೆ ಮಾಜಿ ಅಧ್ಯಕ್ಷ, ತೇರದಾಳ

ಮಾನ್ಯ ಉಪವಿಭಾಗಾಧಿಕಾರಿಗಳ ಸೂಚನೆ ಮೇರೆಗೆ ನಮ್ಮ ಕಾರ್ಯಾಲಯ ಸ್ಥಳಾಂತರಕ್ಕೆ ಅನುಮತಿ ಕೋರಿ ನಾವು ಮಾನ್ಯ ಜಿಲ್ಲಾ ನೋಂದಣಾಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಅವರು ಸಹ ಬೆಂಗಳೂರಿನ ನೋಂದಣಿ ಮಹಾಪರಿವೀಕ್ಷಕರಿಗೆ ವಿನಂತಿ ಪತ್ರ ಕಳುಹಿಸಿದ್ದಾರೆ. ಸದ್ಯದರಲ್ಲೇ ಮೇಲಧಿಕಾರಿಗಳಿಂದ ಸ್ಥಳಾಂತರ ಆದೇಶ ಪತ್ರ ಬರಬಹುದು. ಬಂದ ಕೂಡಲೇ ನಾವು ಪುರಸಭೆಯ ಹಳೆ ಕಟ್ಟಡಕ್ಕೆ ನಮ್ಮ ಕಚೇರಿ ಸ್ಥಳಾಂತರಿತ್ತೇವೆ.  -ಎಸ್‌.ಪಿ. ಮುತ್ತಪ್ಪಗೋಳ, ಉಪನೋಂದಣಾಧಿಕಾರಿಗಳು, ತೇರದಾಳ

ಟಾಪ್ ನ್ಯೂಸ್

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-mudhol

Mudhol: ನಾರಿಯರ ಗಸ್ತುಕಾರ್ಯಕ್ಕೆ ಪೊಲೀಸ್ ಇಲಾಖೆ ಶ್ಲಾಘನೆ

Bagalakote: ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಮಹತ್ವದ ಒಪ್ಪಂದಕ್ಕೆ ಎಂ.ಆರ್.ಎನ್ ಸಮೂಹ ಸಹಿ

Bagalakote: ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಮಹತ್ವದ ಒಪ್ಪಂದಕ್ಕೆ ಎಂ.ಆರ್.ಎನ್ ಸಮೂಹ ಸಹಿ

11

Mudhol: ಅಂತಾರಾಜ್ಯ ಕಳ್ಳನ ಬಂಧನ; ಟ್ರ್ಯಾಕ್ಟರ್ ವಶ

4

Mudhol: ಮನೆ ಕಳ್ಳತನ; ದೂರು ದಾಖಲು

Mudhol: ನಗರದಲ್ಲಿ ಹೆಚ್ಚಿದ ಕಳ್ಳರ ಹಾವಳಿ… ಮಹಿಳಾ‌ಮಣಿಗಳಿಂದ ರಾತ್ರಿ‌ ಗಸ್ತು

Mudhol: ನಗರದಲ್ಲಿ ಹೆಚ್ಚಿದ ಕಳ್ಳರ ಹಾವಳಿ… ಮಹಿಳಾ‌ಮಣಿಗಳಿಂದ ರಾತ್ರಿ‌ ಗಸ್ತು

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

1-neyge-1

Udayavani-MIC ನಮ್ಮ ಸಂತೆ:ಗಮನ ಸೆಳೆದ ನೇಯ್ಗೆ ಯಂತ್ರ

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.