Mudhol: ನದಿ ಪಾತ್ರದಲ್ಲಿ ಮತ್ತೆ ಶುರುವಾದ ಬೋಟ್ ಸದ್ದು; ಅಕ್ರಮ ಮರಳುದಂಧೆಗೆ ಕೊನೆ ಎಂದು?

ಪ್ರವಾಹ ಇಳಿಯುತ್ತಿದ್ದಂತೆ ಶುರುವಾಯಿತು ಮರಳುಗಳ್ಳರ‌ ಪ್ರತಾಪ

Team Udayavani, Aug 15, 2024, 5:12 PM IST

12

ಮುಧೋಳ: ಒಂದುಕಡೆ ಘಟಪ್ರಭಾ ನದಿ‌ ಪ್ರವಾಹದಿಂದ ಕಂಗಾಲಾಗಿರುವ ಜನರು ಪರಿಹಾರಕ್ಕಾಗಿ ಬೀದಿಗಿಳಿದು ಹೋರಾಟ ನಡೆಸುತ್ತಿದ್ದರೆ ಮತ್ತೊಂದು ಕಡೆ‌ ನದಿ‌ ನೀರು‌‌‌ ಇಳಿಮುಖವಾಗಿರುವುದನ್ನೆ ಬಂಡವಾಳ‌ ಮಾಡಿಕೊಂಡಿರುವ ಕೆಲವು ಖದೀಮರು ಅಕ್ರಮ‌ ಮರಳುಗಾರಿಕೆಯಲ್ಲಿ‌ ತೊಡಗಿದ್ದು ನದಿಪಾತ್ರದ‌ ಮರಳು ಸಂಪತ್ತು‌ ದೋಚಲು ಮುಂದಾಗುತ್ತಿದ್ದಾರೆ.

ಘಟಪ್ರಭಾ ಪ್ರವಾಹದಿಂದ‌ ಅಕ್ರಮ‌ ಮರಳುಗಾರಿಕೆ ಸಂಪೂರ್ಣ ತಗ್ಗಿತ್ತು. ಇದೀಗ ನದಿಯ ಹರಿವಿನ‌ ಅಬ್ಬರ ಕಡಿಮೆಯಾಗುತ್ತಲೆ‌ ನದಿಗೆ ಬೋಟ್ ಬಿಟ್ಟು ಮರಳು ಎತ್ತುವ ಅಕ್ರಮ‌ ಚಟುವಟಿಕೆ‌ ನಿಧಾನವಾಗಿ ತಲೆಯೆತ್ತುತ್ತಿದೆ. ಮುಧೋಳ ನಗರದಿಂದ ಕೆಲವೇ ಕೆಲವು ಕಿ.ಮೀ ಅಂತರದಲ್ಲಿ ಹಾಡಹಗಲೇ ನಡೆಯುತ್ತಿರುವ ಅಕ್ರಮ‌ ಮರಳುಗಾರಿಕೆ ಆಡಳಿತ ವ್ಯವಸ್ಥೆಯ ವೈಫಲ್ಯವನ್ನು ಎತ್ತಿ‌ ತೋರಿಸುತ್ತಿದೆ.

ನದಿತೀರದ ಜಮಿನಿನಲ್ಲಿನ ಬೆಳೆಹಾನಿ ಸಮೀಕ್ಷೆಗಾಗಿ ಪ್ರತಿನಿತ್ಯ ಹಲವಾರು ಅಧಿಕಾರಿಗಳು ನದಿತೀರಕ್ಕೆ‌ ಓಡಾಟ‌ ನಡೆಸಿದ್ದರೂ ಅಕ್ರಮ ಮರಳು ಸಾಗಣೆದಾರರು ನಮ್ಮನ್ನು ಯಾರೂ ಪ್ರಶ್ನೆ‌ ಮಾಡುವರು ಎಂಬ ಧರ್ಪದಿಂದ‌ ತಮ್ಮ ಕಾರ್ಯದಲ್ಲಿ‌‌ ನಿರತರಾಗಿದ್ದಾರೆ. ಅಕ್ರಮ ಮರಳುಗಾರಿಕೆ ತಡೆಯವ ಅಧಿಕಾರಿಗಳು‌ ಮಾತ್ರ ಜಾಣಮೌನವಹಿಸಿ ಪರಿಸರ ಹಾನಿಗೆ ಪರೋಕ್ಷವಾಗಿ ಕಾರಣೀಕರ್ತರಾಗುತ್ತಿದ್ದಾರೆ.

ಒಂಟಗೋಡಿ-ಮಿರ್ಜಿ ಮಧ್ಯೆ : ನದಿತೀರದ ಗ್ರಾಮಗಳಾಗಿರುವ ಒಂಟಗೋಡಿ‌ ಹಾಗೂ ಮಿರ್ಜಿ ಗ್ರಾಮದ ಮಧ್ಯೆದಲ್ಲಿ ನದಿಗೆ ಬೋಟ್ ಬಿಟ್ಟು ಅಕ್ರಮವಾಗಿ‌ ಮರಳು ಎತ್ತುವ ಕಾರ್ಯ ನಿಧಾನವಾಗಿ ತಲೆಯೆತ್ತುತ್ತಿದೆ. ನದಿಯಲ್ಲಿ‌ ಬೋಟ್ ಬಿಟ್ಟು‌ ದೊಡ್ಡ ದೊಡ್ಡ ಪೈಪ್‌ ಮೂಲಕ ಮರಳನ್ನು ನದಿ‌ದಡಕ್ಕೆ ತರುವ ಖದೀಮರು ಬಳಿಕ‌ ದಡದಲ್ಲಿ‌ ನಿಲ್ಲಿಸಿರುವ ಟ್ರ್ಯಾಕ್ಟರ್ ಗಳ‌ ಮೂಲಕ ಮರಳನ್ನು ಬೇರೆಡೆ ಸಾಗಿಸಿ‌ ಕಬ್ಬಿನ‌ ಗದ್ದೆ‌ ಹಾಗೂ ಗುಪ್ತ ಜಾಗದಲ್ಲಿ ಸಂಗ್ರಹಿಸುತ್ತಿದ್ದಾರೆ. ಹೀಗೆ ಸಂಗ್ರಹಿಸಿರುವ ಮರಳನ್ನು ಹೆಚ್ಚಿನ ಬೆಲೆಗೆ ರಾತ್ರೋರಾತ್ರಿ ಸಾಗಾಟ ಮಾಡಿ ಹೆಚ್ಚಿನ‌ ಲಾಭ ಗಳಿಸುತ್ತಿದ್ದಾರೆ.

ದೂರದ ರಸ್ತೆಗೆ ಕೇಳುವ ಸದ್ದು ಆಡಳಿತ ಯಂತ್ರಕ್ಕೆ ಕೇಳಲ್ಲ: ಹಾಡಹಗಲೆ ನದಿಯಲ್ಲಿ ಬೋಟ್ ಮೂಲಕ ಅಕ್ರಮ‌‌ ಮರಳುಗಾರಿಕೆ‌ ಮಾಡುವ ಸದ್ದು ಅರ್ಧ ಕಿ.ಮೀ. ದೂರದಲ್ಲಿರುವ ಡಾಂಬರು ರಸ್ತೆಗೆ ಕೇಳಿಸುತ್ತದೆ. ಆದರೆ ಇದೇ‌‌ ರಸ್ತೆಯಲ್ಲಿ‌ ಪ್ರವಾಹ ಹಾನಿ ಪರಿಶೀಲಿಸುವ ಅಧಿಕಾರಿಗಳ ಕಿವಿಗೆ ಬೀಳದಿರುವುದು‌ ಮಾತ್ರ ಸೋಜಿಗದ‌ ಸಂಗತಿಯಾಗಿದೆ. ಮರಳುಗಾರಿಕೆ ನದಿ‌ ಪ್ರದೇಶದಿಂದ ಕನಿಷ್ಠ ಅರ್ಧ ಕಿ.ಮೀ‌ ದೂರದ ಡಾಂಬರ್ ರಸ್ತೆಗೆ ಬೋಟ್ ನ‌ ಮೋಟಾರ್ ಸದ್ದು ಕೇಳಿಸುತ್ತದೆ. ಆ ಸದ್ದಿನ ದಿಕ್ಕಿಗೆ ಕಾಲ್ನಡಿಗೆಯಲ್ಲಿ‌‌ ಚಲಿಸಿದರೆ ಸಾಕು‌ ಯಾರ ಅಳಕಿಲ್ಲದೆ‌ ಅಕ್ರಮ ಮರಳುಗಾರಿಕೆ ದಿಗ್ದರ್ಶನವಾಗುತ್ತದೆ. ಆದರೆ‌ ಇಚ್ಛಾಶಕ್ತಿಯ ಕೊರತೆಯಿರುವ ಆಡಳಿತಾಧಿಕಾರಿಗಳಿಗೆ‌‌‌ ಮಾತ್ರ ಇದು ಬೇಡದ ವಿಷಯವಾಗಿರುವುದು ವಿಪರ್ಯಾಸದ ಸಂಗತಿ.

ಅಪಾರ‌‌ ಪ್ರಮಾಣದಲ್ಲಿ ಸಂಗ್ರಹ: ನೀರು ಇಳಿಮುಖವಾಗಿರುವುದರಿಂದ ನದಿಪಾತ್ರದಲ್ಲಿ ಉತ್ತಮ ಗುಣಮಟ್ಟದ ಮರಳು ಹೆಚ್ಚಿನ ಪ್ರಮಾಣದಲ್ಲಿ ಶೇಖರಣೆಗೊಂಡಿದೆ. ಗುಣಮಟ್ಟದ ಮರಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ‌ ಇರುವುದರಿಂದ ಅಕ್ರಮ ಮರಳು ಸಾಗಣೆದಾರರು ಪ್ರವಾಹ ತಗ್ಗುತ್ತಿದಂತೆ ತಮ್ಮ ದಂಧೆಗೆ ಮುಂದಾಗಿದ್ದಾರೆ. ನದಿ ನೀರು ಸಂಪೂರ್ಣ ಇಳಿಮುಖವಾದರೆ ನದಿಪಾತ್ರದ ಜನರು ಹೆಚ್ಚಿನ‌ ಪ್ರಮಾಣದಲ್ಲಿ ಮರಳುಗಾರಿಕೆಯಲ್ಲಿ ತೊಡಗಿಕೊಳ್ಳುತ್ತಾರೆ. ಇದರಿಂದ ದರಸಮರ ಉಂಟಾಗುತ್ತದೆ‌. ಆದ್ದರಿಂದ ಈಗಲೇ ಹೆಚ್ಚಿನ ಮರಳು ತೆಗೆದು ಮಾರಾಟ‌‌ ಮಾಡುವ ಇರಾದೆಯಲ್ಲಿದ್ದಾರೆ ಅಕ್ರಮ ಮರಳು ದಂಧೆಕೋರರು.

ಬೋಟ್ ಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ: ಸದ್ಯ ನದಿ ನೀರು ಇಳಿಮುಖವಾಗಿದ್ದರೂ ಮರಳುಗಾರಿಕೆ ನಡೆಯುವ ಸ್ಥಳಕ್ಕೆ ಟ್ರ್ಯಾಕ್ಟರ್ ಗಳ ಓಡಾಟಕ್ಕೆ ರಸ್ತೆ ನೀರಿನಿಂದ ಕೂಡಿದ್ದು ಅನುಕೂಲಕರವಾಗಿಲ್ಲ. ಅಧಿಕಾರಿಗಳು ಎಚ್ಚೆತ್ತು ಕಠಿಣ ಕ್ರಮ ಕೈಗೊಳ್ಳದಿದ್ದರೆ ಇನ್ನೊಂದು ವಾರದಲ್ಲಿ ಹೆಚ್ಚಿನ‌ ಪ್ರಮಾಣದ ಬೋಟ್ ಗಳು ತಲೆಯೆತ್ತಿ ನದಿ ಸಂಪತ್ತು ಲೂಟಿಗೆ ಮುಂದಾಗುವುದಂತು ಖಚಿತ.

ಕಣ್ಮುಚ್ಚಿ ಕುಳಿತ ಅಧಿಕಾರಿಗಳು ಜನಪ್ರತಿನಿಧಿಗಳು: ತಾಲೂಕಿನ‌ ನದಿಪಾತ್ರದಲ್ಲಿ ಅಕ್ರಮ‌‌ ಮರಳುಗಾರಿಕೆ ಎಗ್ಗಿಲ್ಲದೆ‌ ಸಾಗಿದ್ದರೂ ಕಡಿವಾಣಕ್ಕೆ ಮುಂದಾಗಬೇಕಿದ್ದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮಾತ್ರ ಯಾವುದೇ ಕ್ರಮಕ್ಕೆ‌ ಮುಂದಾಗದಿರುವುದು ಹಲವಾರು ಸಂಶಯಗಳಿಗೆ ಎಡೆಮಾಡಿಕೊಡುತ್ತಿದೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತು ಅಕ್ರಮ‌ ಮರಳುಗಾರಿಕೆಗೆ ಕಡಿವಾಣ ಹಾಕಿ‌ ನದಿ ಸಂಪತ್ತು ರಕ್ಷಣೆಗೆ ಮುಂದಾಗಬೇಕು‌ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಘಟಪ್ರಭಾ ನದಿ ಪಾತ್ರದಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ಕುರಿತು ನನ್ನ ಗಮನಕ್ಕೆ ಬಂದಿಲ್ಲ. ಒಂದುವೇಳೆ ಆ ರೀತಿಯೇನಾದರೂ ಇದ್ದರೆ ಖಂಡಿತವಾಗಿಯೂ ಕಠಿಣ ಕ್ರಮ ಕೈಗೊಳ್ಳುತ್ತೇನೆ.
-ವಿನೋದ ಹತ್ತಳ್ಳಿ ತಹಸೀಲ್ದಾರ್ ಮುಧೋಳ

– ಗೋವಿಂದಪ್ಪ ತಳವಾರ ಮುಧೋಳ

ಟಾಪ್ ನ್ಯೂಸ್

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

H.D.Kumaraswamy

H. D. Kumaraswamy: ರಾಜಕೀಯ ಮಾಡಲು, ಬೆಂಕಿ ಹಚ್ಚಲು ಬಂದಿಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-rabakavi

Rabkavi Banhatti: ತೇರಿನ ಮೇಲಿನಿಂದ ಬಿದ್ದ ವ್ಯಕ್ತಿ ಸ್ಥಳದಲ್ಲೇ ಸಾವು

ಮಹಾಲಿಂಗಪುರದ ಮಹಾಜಾತ್ರೆ…: ಲಕ್ಷಾಂತರ ಭಕ್ತರು ಭಾಗಿ..ರಾತ್ರಿಯಿಡಿ ಸಾಗುವ ರಥೋತ್ಸವ

ಮಹಾಲಿಂಗಪುರದ ಮಹಾಜಾತ್ರೆ…: ಲಕ್ಷಾಂತರ ಭಕ್ತರು ಭಾಗಿ… ರಾತ್ರಿಯಿಡಿ ಸಾಗುವ ರಥೋತ್ಸವ

Pak flag ಹಾರಾಡುವ ರೀಲ್ಸ್ ವಾಟ್ಸಪ್ ಸ್ಟೇಟಸ್: ಯುವಕ ಪೊಲೀಸರ ವಶಕ್ಕೆ; ಪ್ರಕರಣ ದಾಖಲು

Pak flag ಹಾರಾಡುವ ವಾಟ್ಸಪ್ ಸ್ಟೇಟಸ್: ಯುವಕ ಪೊಲೀಸರ ವಶಕ್ಕೆ

Mudhol: ಆರ್‌ಎಸ್‌ಎಸ್‌ನಿಂದ ದೇಶಕ್ಕೆ ಕಂಟಕ: ಆರ್‌.ಬಿ.ತಿಮ್ಮಾಪುರ

Mudhol: ಆರ್‌ಎಸ್‌ಎಸ್‌ನಿಂದ ದೇಶಕ್ಕೆ ಕಂಟಕ: ಆರ್‌.ಬಿ.ತಿಮ್ಮಾಪುರ

Farmers

Farmers; ರೈತನ ಬೆಳೆ ಕಾಯುಲು ಸಿನಿ ತಾರೆಯರು; ಉತ್ತಮ ಬೆಳೆಗೆ ರೈತನ ಹೊಸ ಪ್ರಯೋಗ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

12

High Court: ಬಿಎಸ್‌ವೈ ಪೋಕ್ಸೋ ಕೇಸ್‌: ಸೆ.27ಕ್ಕೆ ವಿಚಾರಣೆ ಮುಂದಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.