![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Aug 29, 2021, 7:23 PM IST
ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಹೊಸದಾಗಿ 1262 ಜನರಿಗೆ ಕೋವಿಡ್ ಪಾಸಿಟಿವ್ ಸೋಂಕು ತಗುಲಿದ್ದು, 17 ಜನ ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು ಸಂಜೆ ಬಿಡುಗಡೆ ಮಾಡಿರುವ ವರದಿಗಳು ತಿಳಿಸಿವೆ.
ವರದಿಗಳ ಪ್ರಕಾರ ಇಂದು 1384 ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ 28,91,193 ಜನ ಗುಣಮುಖರಾಗಿದ್ದಾರೆ.
ಇನ್ನು ರಾಜ್ಯದಲ್ಲಿಂದು 18,758 ಸಕ್ರಿಯ ಪ್ರಕರಣಗಳಿವೆ. ಪಾಸಿಟಿವಿಟಿ ದರ ಶೇಕಡ 0.70 ರಷ್ಟಿದ್ದು, ಡೆತ್ ರೇಟ್ 1.34 % ಇದೆ.
ಬೆಂಗಳೂರಿನಲ್ಲಿ ಇಂದು ಹೊಸದಾಗಿ 361 ಜನರಿಗೆ ಸೋಂಕು ತಗುಲಿದ್ದು, 6 ಜನ ಸಾವನ್ನಪ್ಪಿದ್ದಾರೆ. 334 ಜನ ಬಿಡುಗಡೆಯಾಗಿದ್ದು, 7343 ಸಕ್ರಿಯ ಪ್ರಕರಣಗಳಿವೆ.
ಜಿಲ್ಲಾವಾರು ಪ್ರಕರಣಗಳ ಸಂಖ್ಯೆ:
ಬಾಗಲಕೋಟೆ -1, ಬಳ್ಳಾರಿ- 3, ಬೆಳಗಾವಿ-34, ಬೆಂಗಳೂರು ಗ್ರಾಮಾಂತರ -9, ಬೆಂಗಳೂರು ನಗರ-361, ಬೀದರ್ 0, ಚಾಮರಾಜನಗರ-13, ಚಿಕ್ಕಬಳ್ಳಾಪುರ- 0, ಚಿಕ್ಕಮಗಳೂರು-26, ಚಿತ್ರದುರ್ಗ-22, ದಕ್ಷಿಣ ಕನ್ನಡ-202,ದಾವಣಗೆರೆ-28, ಧಾರವಾಡ- 6, ಗದಗ-0,ಹಾಸನ-72, ಹಾವೇರಿ 5, ಕಲಬುರ್ಗಿ 5, ಕೊಡಗು-86 ಕೊಪ್ಪಳ 1, ಕೋಲಾರ 54, ಮಂಡ್ಯ-14, ಮೈಸೂರು 86, ರಾಯಚೂರು 1, ರಾಮನಗರ 1, ಶಿವಮೊಗ್ಗ 59, ತುಮಕೂರು 34, ಉಡುಪಿ 96, ಉತ್ತರಕನ್ನಡ 42, ವಿಜಯಪುರ- 1, ಯಾದಗಿರಿ- 0 .
You seem to have an Ad Blocker on.
To continue reading, please turn it off or whitelist Udayavani.