![Mangaluru ಮಣ್ಣು ಕುಸಿತ: ಕೆಲಸ ಹೊಸತಲ್ಲ, ದುರದೃಷ್ಟ ಹೊಸತು !](https://www.udayavani.com/wp-content/uploads/2024/07/azaz-415x241.jpg)
30ರಿಂದ ಲಾರಿ, ಬಸ್ಗಳ ಅನಿರ್ದಿಷ್ಟಾವಧಿ ಮುಷ್ಕರ
Team Udayavani, Mar 19, 2017, 11:14 AM IST
![Lorry-strike.jpg](https://www.udayavani.com/wp-content/uploads/2017/03/19/Lorry-strike.jpg)
ಬೆಂಗಳೂರು: ಮೂರನೇ ವ್ಯಕ್ತಿ ವಿಮೆ (ಥರ್ಡ್ ಪಾರ್ಟಿ ಇನ್ಶುರೆನ್ಸ್) ಪ್ರೀಮಿಯಂ ದರ ದುಪ್ಪಟ್ಟು, 15 ವರ್ಷಗಳಹಳೆಯ ವಾಹನ ನಿಷೇಧ, ರಾಜ್ಯ ಹೆದ್ದಾರಿಗಳಲ್ಲೂ ಟೋಲ್ ಸಂಗ್ರಹ ತೀರ್ಮಾನ ಖಂಡಿಸಿ ಮಾ.30ರಿಂದ ದಕ್ಷಿಣ ಭಾರತದ 6 ರಾಜ್ಯಗಳಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ದಕ್ಷಿಣ ವಲಯದ ವಾಣಿಜ್ಯ ಸೇವಾ ವಾಹನಗಳ ಮಾಲಿಕರ ಸಂಘ ನಿರ್ಧರಿಸಿದೆ. ಲಾರಿ ಮುಷ್ಕರಕ್ಕೆ ಖಾಸಗಿ ಬಸ್, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್, ಪ್ರವಾಸಿ ವಾಹನಗಳ ಮಾಲಿಕರ ಸಂಘಗಳು ಕೈ ಜೋಡಿಸಿದ್ದು, 30ರಂದು ಬೆಳಗ್ಗೆಯಿಂದಲೇ ಈ ಎಲ್ಲ ವಾಹನಗಳು ರಸ್ತೆಗಿಳಿಯುವುದಿಲ್ಲ ಎಂದು ದಕ್ಷಿಣ ವಲಯದ ವಾಣಿಜ್ಯ ಸೇವಾ ವಾಹನಗಳ ಮಾಲಿಕರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಆರ್. ಷಣ್ಮುಗಪ್ಪ ತಿಳಿಸಿದ್ದಾರೆ.
ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಪುದುಚೇರಿ ಸೇರಿದಂತೆ 6 ರಾಜ್ಯಗಳಲ್ಲಿ ವಾಣಿಜ್ಯ ಸೇವಾ ವಾಹನಗಳ ಸಂಚಾರ ಸ್ಥಗಿತಗೊಳ್ಳಲಿದೆ. ಈ ಅವೈಜ್ಞಾನಿಕ ನಿರ್ಧಾರಗಳಿಂದ ಹಿಂದೆ ಸರಿಯುವವರೆಗೂ ಮುಷ್ಕರ ಹಿಂಪಡೆಯುವುದಿಲ್ಲ ಎಂದು ತಿಳಿಸಿದ್ದಾರೆ. ಈ ಸಂಬಂಧ
“ಉದಯವಾಣಿ’ ಜತೆ ಮಾತನಾಡಿದ ಅವರು, ಕರ್ನಾಟಕದಲ್ಲೇ ಲಾರಿ ಸೇರಿ 20 ಲಕ್ಷ ವಾಣಿಜ್ಯ ಸೇವೆಯ ವಾಹನಗಳಿವೆ. ವಿಮಾ ಮೊತ್ತ ದುಪ್ಪಟ್ಟುಗೊಳಿಸುವುದರಿಂದ ಹೊರೆಯಾಗಲಿದೆ. 5-10 ವರ್ಷದ ಇಂಡಿಕಾ ಕಾರುಗಳ ಬೆಲೆಯೇ 70 ರಿಂದ 80 ಸಾವಿರ ರೂ. ಇರುತ್ತದೆ. ಆದರೆ, ಅದಕ್ಕೆ ಥರ್ಡ್ ಪಾರ್ಟಿ ಇನ್ಶುರೆನ್ಸ್ ಮೊತ್ತವೇ 50 ಸಾವಿರ ರೂ. ಆಗುತ್ತದೆ. ಬರೀ ಲಾರಿಗಳಿಂದಲೇ ಮಾಲಿನ್ಯ ಆಗುತ್ತಿದೆಯೇ? ಕೈಗಾರಿಕೆಗಳು ಹೊಗೆ ಉಗುಳುತ್ತಿಲ್ಲವೇ? 3ರಿಂದ 4 ಲಕ್ಷ ವಾಹನಗಳು 15 ವರ್ಷ ಮೀರಿವೆ.ಅವುಗಳನ್ನು ಏನು ಮಾಡಬೇಕು ಎಂದು ಪ್ರಶ್ನಿಸಿದರು.
ಟಾಪ್ ನ್ಯೂಸ್
![Mangaluru ಮಣ್ಣು ಕುಸಿತ: ಕೆಲಸ ಹೊಸತಲ್ಲ, ದುರದೃಷ್ಟ ಹೊಸತು !](https://www.udayavani.com/wp-content/uploads/2024/07/azaz-415x241.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![BJP-Member](https://www.udayavani.com/wp-content/uploads/2024/07/BJP-Member-140x115.jpg)
Congress Government: ರಾಜ್ಯ ಸರಕಾರದ ವಿರುದ್ಧ ಮುಗಿಬಿದ್ದ ಬಿಜೆಪಿ
![VIjayendra](https://www.udayavani.com/wp-content/uploads/2024/07/VIjayendra-150x90.jpg)
CM Siddaramaiah ರಾಜೀನಾಮೆ ನೀಡಲಿ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ
![Congress-Symbol](https://www.udayavani.com/wp-content/uploads/2024/07/Congress-Symbol-150x90.jpg)
By Election: ಸಚಿವ ಜಾರಕಿಹೊಳಿ ಮುಂದೆಯೇ ಶಿಗ್ಗಾವಿ ಟಿಕೆಟ್ ಕಿತ್ತಾಟ
![Chintamani: ಒಂದು ವರ್ಷದ ಮಗುವನ್ನು ಆಸ್ಪತ್ರೆಯಲ್ಲಿ ಬಿಟ್ಟು ಹೋದ ಮಹಿಳೆ… ದೃಶ್ಯ ಸೆರೆ](https://www.udayavani.com/wp-content/uploads/2024/07/magu-150x82.jpg)
Chintamani: ಒಂದು ವರ್ಷದ ಮಗುವನ್ನು ಆಸ್ಪತ್ರೆಯಲ್ಲಿ ಬಿಟ್ಟು ಹೋದ ಮಹಿಳೆ… ದೃಶ್ಯ ಸೆರೆ
![BK-hariprasad](https://www.udayavani.com/wp-content/uploads/2024/07/BK-hariprasad-150x90.jpg)
RSSನಿಂದ ತುರ್ತು ಪರಿಸ್ಥಿತಿಗೆ ಬೆಂಬಲ: ಎಂಎಲ್ಸಿ ಬಿ.ಕೆ.ಹರಿಪ್ರಸಾದ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.