![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Aug 3, 2022, 4:03 PM IST
ಬೆಂಗಳೂರು: ತಿಗಣೆ, ಜಿರಳೆ ನಾಶಪಡಿಸಲು ಮನೆಯಲ್ಲಿ ಸಿಂಪಡಿಸಿದ್ದ ಔಷಧಿಯಿಂದ 6 ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ಹೈಗ್ರೌಂಡ್ಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವಂಸತನಗರದ ಮಾರಮ್ಮ ದೇವಾಲಯದ ಬಳಿ ನಿವಾಸಿ ಅಹನಾ(6) ಮೃತ ಬಾಲಕಿ. ಶಿವಶಂಕರ್ ಎಂಬುವರಿಗೆ ಸೇರಿದ ಕಟ್ಟಡದಲ್ಲಿ ನಾಲ್ಕು ಮನೆಗಳಿದ್ದು, ಅಲ್ಲಿ ವಿಪರೀತ ಜಿರಳೆಗಳಿದ್ದವು. ಅವುಗಳನ್ನು ನಾಶಪಡಿಸುವ ಸಲುವಾಗಿ ಒಂದು ವಾರ ಮನೆಗಳನ್ನು ಖಾಲಿ ಬಿಡುವಂತೆ ಬಾಡಿಗೆದಾರರಿಗೆ ಸೂಚಿಸಿದ್ದರು. ಬಾಲಕಿ ಅಹನಾ ಪೋಷಕರು ತಾತ್ಕಾಲಿಕವಾಗಿ ಮನೆ ಖಾಲಿ ಮಾಡಿದ್ದರು. ಆದರೆ, ಮನೆ ಮಾಲೀಕರಿಗೆ ತಿಳಿಸದೆ ನಾಲ್ಕೇ ದಿನದಲ್ಲಿ ವಾಪಸ್ ಬಂದಿದ್ದಾರೆ.
ಪರಿಣಾಮ ಮನೆಯಲ್ಲಿದ್ದ ಮೂವರಿಗೆ ಉಸಿರಾಟದ ಸಮಸ್ಯೆ ಉಂಟಾಗಿದ್ದು, ಬಾಲಕಿಯ ಸ್ಥಿತಿ ಚಿಂತಾಜನಕವಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಮೃತಪಟ್ಟಿದ್ದಾಳೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮನೆ ಮಾಲೀಕ ಶಿವಶಂಕರ್ನನ್ನು ವಶಕ್ಕೆಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.
You seem to have an Ad Blocker on.
To continue reading, please turn it off or whitelist Udayavani.