ಗುಂಡಿಗೊಂದು ಲಕ್ಷ ತೆರಬೇಕಂತೆ!
Team Udayavani, Nov 3, 2017, 12:47 PM IST
ಬೆಂಗಳೂರು: ನಗರದಲ್ಲಿ ಒಎಫ್ಸಿ (ಆಪ್ಟಿಕಲ್ ಫೈಬರ್ ಕೇಬಲ್) ಹಾವಳಿಗೆ ಕಡಿವಾಣ ಹಾಕಲು ಮುಂದಾಗಿರುವ ಬಿಬಿಎಂಪಿಯ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ, ಅನುಮತಿ ಇಲ್ಲದೆ ವಿವಿಧ ಉದ್ದೇಶಗಳಿಗೆ ರಸ್ತೆ ಅಗೆಯುವ ಸಂಸ್ಥೆಗಳು ಮತ್ತು ಸಾರ್ವಜನಿಕರಿಗೆ ಭಾರೀ ಮೊತ್ತದ ದಂಡ ವಿಧಿಸಲು ನಿರ್ಧರಿಸಿದೆ.
ಅನುಮತಿ ಇಲ್ಲದೆ ರಸ್ತೆ ಕತ್ತರಿಸಿರುವ ಸಂಸ್ಥೆಗಳಿಗೆ 25 ಲಕ್ಷ ರೂ. ಹಾಗೂ ಸಾರ್ವಜನಿಕರಿಗೆ 10 ಲಕ್ಷ ರೂ. ದಂಡ ವಿಧಿಸಲಾಗುವುದು. ಜತೆಗೆ ರಸ್ತೆ ಪುನರ್ ನಿರ್ಮಾಣ ಮಾಡಿಸುವುದಾಗಿ ಸಮಿತಿ ಅಧ್ಯಕ್ಷ ಎಂ.ಕೆ. ಗುಣಶೇಖರ್ ಆದೇಶ ಹೊರಡಿಸಿದ್ದಾರೆ.
ಅಷ್ಟೇ ಅಲ್ಲ, ರಸ್ತೆಗಳಲ್ಲಿ ಡಾಂಬರೀಕರಣದ ಪೂರ್ವದಲ್ಲೇ ರಸ್ತೆ ಕತ್ತರಿಸುವ ಅನುಮತಿ ಪಡೆದಿರುವ ಕಡೆಗಳಲ್ಲಿ ರಸ್ತೆ ಕತ್ತರಿಸಲಿರುವ ಮೊದಲೇ ಡಾಂಬರೀಕರಣ ಕೈಗೊಂಡರೆ, ಗುತ್ತಿಗೆ ಪಡೆದಿರುವ ಅನುಮತಿಯೇ ಅಸಿಂಧುಗೊಳ್ಳಲಿದೆ. ಅದೇ ರೀತಿ, ಹೊಸದಾಗಿ ಡಾಂಬರೀಕರಣ ಮಾಡಿರುವ ರಸ್ತೆಗಳನ್ನು ಕತ್ತರಿಸಿದರೆ, ರಸ್ತೆ ಕತ್ತರಿಸಿರುವ ಸಂಸ್ಥೆಗಳಿಗೆ 25 ಲಕ್ಷ ರೂ. ದಂಡ ವಿಧಿಸಲಾಗುವುದು.
ಗುಂಡಿಗೊಂದು ಲಕ್ಷ!: ಓಎಫ್ಸಿ ಅನುಮತಿ ಪತ್ರಗಳಲ್ಲಿ ನಿಗದಿಪಡಿಸಿರುವ ಸಂಖ್ಯೆಯ ಎಚ್ಡಿಡಿ ಅಳವಡಿಕೆ ಗುಂಡಿಗಳಿಗಿಂತ ಹೆಚ್ಚು ಗುಂಡಿಗಳನ್ನು ತೋಡಿದ್ದಲ್ಲಿ, ಆ ರಸ್ತೆ ಭಾಗದ ಪುನರ್ನಿರ್ಮಾಣ ಆಯಾ ಸಂಸ್ಥೆಗಳಿಂದಲೇ ಮಾಡಿಸಲಾಗುವುದು. ಜತೆಗೆ ಪ್ರತಿ ಹೆಚ್ಚುವರಿ ಗುಂಡಿಗೆ ಒಂದು ಲಕ್ಷ ದಂಡ ವಿಧಿಸಲಾಗುವುದು ಎಂದೂ ಆದೇಶದಲ್ಲಿ ಎಚ್ಚರಿಸಲಾಗಿದೆ.
ಅದೇ ರೀತಿ, ನಿಗದಿಯಾದ ಉದ್ದಕ್ಕಿಂತ ಹೆಚ್ಚು ಓಎಫ್ಸಿ ಅಳವಡಿಕೆಯಾದಲ್ಲಿ ಹೆಚ್ಚುವರಿ ಉದ್ದಕ್ಕೆ ಅಥವಾ ಹೆಚ್ಚುವರಿ ಕೇಬಲ್ ಮತ್ತು ಡಕ್ಟ್ ಅಳವಡಿಸಿದಲ್ಲಿ ಪ್ರತಿ ಮೀಟರ್ಗೆ ನಿಗದಿತ ಶುಲ್ಕದ ಮೂರುಪಟ್ಟು ದಂಡ ವಸೂಲು ಮಾಡಲಾಗುವುದು. ಓಎಫ್ಸಿ ಅಳವಡಿಕೆ ಪೂರ್ಣಗೊಂಡ 96 ಗಂಟೆಗಳಲ್ಲಿ ಎಚ್ಡಿಡಿ ಅಳವಡಿಕೆ ಗುಂಡಿಗಳ ರಸ್ತೆ ಪುನಶ್ಚೇತನ ಪೂರ್ಣಗೊಳ್ಳುವ ಪಕ್ಷದಲ್ಲಿ ಪ್ರತಿ ಗುಂಡಿಗೆ ನಿತ್ಯ 10 ಸಾವಿರ ದಂಡ ವಿಧಿಸಲಾಗುವುದು.
ಓಎಫ್ಸಿ ಅಳವಡಿಕೆ ಅನುಮತಿ ಪಡೆದ ಸಂದರ್ಭಗಳಲ್ಲಿ ಆಯಾ ವಲಯ ವ್ಯಾಪ್ತಿಯ ಎಂಜಿನಿಯರ್ಗಳಿಗೆ ಲಿಖೀತಪೂರ್ವ ಮಾಹಿತಿ ನೀಡುವುದು ಕಡ್ಡಾಯವಾಗಿದ್ದು, ಪೂರ್ವಮಾಹಿತಿ ನೀಡದ ಸಂಸ್ಥೆಗಳಿಗೆ ಸದರಿ ಅನುಮತಿ ಪಾವತಿಸಿರುವ ಮೇಲ್ವಿಚಾರಣಾ ಶುಲ್ಕದ ಶೇ. 25ರಷ್ಟು ದಂಡ ವಿಧಿಸಲಾಗುವುದು.
ಮೂರು ಬಾರಿಗಿಂತ ಹೆಚ್ಚು ಸಲ ನಿಯಮ ಉಲ್ಲಂ ಸಿ, ದಂಡ ವಿಧಿಸಲಾಗಿರುವ ಸಂಸ್ಥೆಯ ಜತೆಗಿನ ಒಡಂಬಡಿಕೆಯನ್ನು ಬಿಬಿಎಂಪಿ ರದ್ದುಗೊಳಿಸಿ, ಆ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದೂ ಆದೇಶದಲ್ಲಿ ಎಚ್ಚರಿಕೆ ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Vinesh Phogat; ನನ್ನ ತಂದೆಯ ಸಹಾಯವನ್ನು ವಿನೇಶ್ ಮರೆತಿದ್ದಾರೆ: ಬಬಿತಾ ಫೋಗಾಟ್
Bigg Boss: ಬಿಗ್ ಬಾಸ್ ಮನೆಯಲ್ಲಿ ರಾದ್ಧಾಂತ ಸೃಷ್ಟಿಸಿದ ವಿವಾದಿತ ಸ್ಪರ್ಧಿಗಳಿವರು..
Irani Cup: ತನುಷ್ ಕೋಟ್ಯಾನ್ ದಿಟ್ಟ ಹೋರಾಟ; 27 ವರ್ಷದ ಬಳಿಕ ಇರಾನಿ ಕಪ್ ಗೆದ್ದ ಮುಂಬೈ
Goa ದಲ್ಲಿ ನಡೆದ ಘಟನೆ ಅಲ್ಲ; ವಿದೇಶಿ ಕಡಲಿನಲ್ಲಿ ಬೋಟ್ ದುರಂತ: ವೈರಲ್ ವಿಡಿಯೋ ನೋಡಿ
Bellary: ನೀರಿನ ರಭಸಕ್ಕೆ ಕೊಚ್ಚಿಹೋಗಿ ವ್ಯಕ್ತಿ ಮೃತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.