ಗೃಹ ಬಳಕೆಗೊಂದು ಪುಟ್ಟ ಹಿಟ್ಟಿನ ಗಿರಣಿ
Team Udayavani, Nov 18, 2018, 12:26 PM IST
ಬೆಂಗಳೂರು: ದವಸ-ಧಾನ್ಯಗಳನ್ನು ಮನೆಯಲ್ಲಿಯೇ ಹಿಟ್ಟು ಮಾಡುವ ಗಿರಣಿ ಯಂತ್ರವನ್ನು ಖಾಸಗಿ ಸಂಸ್ಥೆಯೊಂದು ಅಭಿವೃದ್ಧಿಪಡಿಸಿದ್ದು, ಕೃಷಿಮೇಳದಲ್ಲಿ ಎಲ್ಲರ ಆಕರ್ಷಣಿಯವಾಗಿದೆ.
ಇತ್ತೀಚಿನ ದಿನಗಳಲ್ಲಿ ನಗರ ಭಾಗಗಳಲ್ಲಿ ಫ್ಲೋರ್ ಮಿಲ್ಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದ್ದು, ಜನರು ರೆಡಿಮೇಡ್ ಉತ್ಪನ್ನಗಳಿಗೆ ಮಾರು ಹೋಗುತ್ತಿದ್ದಾರೆ. ಇದರಿಂದಾಗಿ ಗುಣಮಟ್ಟದ ಉತ್ಪನ್ನಗಳು ದೊರೆಯದಂತಾಗಿದೆ. ಕಲಬೆರಕೆ ಉತ್ಪನ್ನಗಳ ಸೇವನೆಯಿಂದ ಜನರು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.
ಆ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಎಲ್ಲ ರೀತಿಯ ದವಸ ಧಾನ್ಯಗಳನ್ನು ಬೀಸುವ ಯಂತ್ರವನ್ನು ಅಭಿವೃದ್ಧಿ ಮಾಡಿದ್ದು, ಹುಬ್ಬಳಿ ಮೂಲದ ವ್ಯಾಪಾರಿಗಳು ಕೃಷಿ ಮೇಳದಲ್ಲಿ ಯಂತ್ರವನ್ನು ಪ್ರದರ್ಶನಕ್ಕಿಟ್ಟಿದ್ದಾರೆ. ಅದರಂತೆ ಅಕ್ಕಿ, ಜೋಳ, ರಾಗಿ, ಮೆಣಸು, ಕಾಫಿ, ಕಾಲುಮೆಣಸು ಹೀಗೆ ಎಲ್ಲ ರೀತಿಯ ದವಸ ಧಾನ್ಯಗಳನ್ನು ಮನೆಯಲ್ಲೇ ಹಿಟ್ಟು ಮಾಡಿಕೊಳ್ಳಬಹುದಾಗಿದೆ.
ನೋಡಲು ಸಣ್ಣ ಗಾತ್ರದ ಫ್ರಿಡ್ಜ್ನಂತಿರುವ ಈ ಗಿರಣಿ ಯಂತ್ರವು ಸ್ವಯಂಚಾಲಿತವಾಗಿದ್ದು, ಮೇಲ್ಭಾಗದಲ್ಲಿ ಧಾನ್ಯಗಳನ್ನು ಹಾಕಿದರೆ, ಎಲ್ಲವನ್ನೂ ಪುಡಿ ಮಾಡಿದ ಬಳಿಕ ಸದ್ದು ಮಾಡುತ್ತದೆ. ಜತೆಗೆ, ಯಂತ್ರದ ಕೆಳ ಭಾಗದ ಡಬ್ಬಿಯಲ್ಲಿ ಹಿಟ್ಟು ಸಂಗ್ರಹವಾಗುತ್ತದೆ. ಸುಲಭ ತಂತ್ರಜ್ಞಾನದ ಯಂತ್ರವಾಗಿರುವುದರಿಂದ ಯಾವುದೇ ರೀತಿಯ ನಿರ್ವಹಣೆ ಇರುವುದಿಲ್ಲ.
ಇತ್ತೀಚಿನ ದಿನಗಳಲ್ಲಿ ಫ್ಲೋರ್ಮಿಲ್ಗಳ ಸಂಖ್ಯೆ ಕಡಿಮೆಯಾಗಿದ್ದು, ಜನರು ರೆಡಿಮೇಡ್ ಉತ್ಪನ್ನಗಳ ಮೊರೆ ಹೋಗುತ್ತಿದ್ದಾರೆ. ಮನೆಯಲ್ಲಿಯೇ ಹಿಟ್ಟು ಮಾಡುವ ಯಂತ್ರದಿಂದ ಜನರಿಗೆ ಗುಣಮಟ್ಟದ ಉತ್ಪನ್ನಗಳು ದೊರೆಯಲಿದ್ದು, ಈ ಯಂತ್ರವು ಸಿಂಗಲ್ ಫೇಸ್ನಲ್ಲಿಯೇ ಕೆಲಸ ಮಾಡಲಿದೆ.
ಸಾಮಾನ್ಯವಾಗಿ ಒಂದು ಯುನಿಟ್ಗೆ 8-9 ಕೆ.ಜಿ ಧಾನ್ಯಗಳನ್ನು ಈ ಗಿರಿಣಿ ಹಿಟ್ಟು ಮಾಡುತ್ತದೆ. ಒಂದು ಕೆ.ಜಿ ಧಾನ್ಯ ಹಿಟ್ಟು ಮಾಡಲು 3ರಿಂದ 4 ನಿಮಿಷ ತಗುಲುತ್ತದೆ. ಫ್ಲೋರ್ ಮಿಲ್ಗಳಲ್ಲಿ ಒಂದು ಕೆ.ಜಿ.ಗೆ ಕನಿಷ್ಠ 5 ರೂ. ನೀಡಬೇಕು. ಆದರೆ, ಅದೇ 5 ರೂ.ಗೆ ಮನೆಯಲ್ಲಿ 8 ಕೆ.ಜಿ ಧಾನ್ಯವನ್ನು ಹಿಟ್ಟು ಮಾಡಿಕೊಳ್ಳಬಹುದು ಎನ್ನುತ್ತಾರೆ ವ್ಯಾಪಾರಿ ವೀರೇಶ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal Hospitals; ಹಿರಿಯ ನಾಗರಿಕರಿಗೆ ಆಲ್ಝೈಮರ್ಸ್ ಕಾಯಿಲೆಯ ಕುರಿತು ತಜ್ಞರೊಂದಿಗೆ ಚರ್ಚೆ
Bengaluru: ಮಕ್ಕಳಲ್ಲಿ ವಿಜ್ಞಾನ ಆಸಕ್ತಿ ಮೂಡಿಸಲು “ಸೈನ್ಸ್ ಬಸ್’
Bengaluru: ಸಾಲ ತೀರಿಸಲು ಸರ ಕದಿಯುತ್ತಿದ್ದ ಇಬ್ಬರ ಬಂಧನ
Bengaluru: ಇಬ್ಬರು ಡ್ರಗ್ಸ್ ಪೆಡ್ಲರ್ ಸೆರೆ: 51 ಕೆ.ಜಿ. ಗಾಂಜಾ ಜಪ್ತಿ
Bengaluru: ಮೋಜಿನ ಜೀವನಕ್ಕೆ ಸರ ಕದೀತಿದ್ದ ಯುವಕನ ಸೆರೆ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Development: ಸಂಪರ್ಕ ಸಾರಿಗೆಗಳಿಂದ ದೇಶದ ಆರ್ಥಿಕತೆ ಹೆಚ್ಚಳ: ಸಚಿವ ರಾಮಲಿಂಗಾರೆಡ್ಡಿ
SAFF U-17 Championship: ಭಾರತ-ಬಾಂಗ್ಲಾ ಫೈನಲ್
Gulveer Singh: ನೂತನ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ ಗುಲ್ವೀರ್
ICC Women’s T20 World Cup: ವನಿತಾ ಟಿ20 ವಿಶ್ವಕಪ್; ಅಂಪಾಯರ್ಸ್ ಆಯ್ಕೆ
T20I series: ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿ: ಸೂರ್ಯಕುಮಾರ್ ಯಾದವ್ ನಾಯಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.