ಆರೋಗ್ಯ ವರದಿಗೆ ಆಧಾರ್‌ ಅಡ!


Team Udayavani, Oct 14, 2018, 12:36 PM IST

arogya.jpg

ಬೆಂಗಳೂರು: ಇಲ್ಲಿ ಆರೋಗ್ಯ ತಪಾಸಣೆ ವರದಿ ಬೇಕಿದ್ದರೆ, ಆಧಾರ್‌ ಕಾರ್ಡ್‌ ಅಥವಾ ಪಡಿತರಚೀಟಿ ಅಡಮಾನ ಇಡುವುದು ಕಡ್ಡಾಯ! ಅಷ್ಟೇ ಅಲ್ಲ, ಮೂಲ ದಾಖಲೆ ಸಲ್ಲಿಸಿದರೂ ತಪಾಸಣಾ ವರದಿ ನೋಡಲು ಮಾತ್ರ ಲಭ್ಯ. ತಮ್ಮೊಂದಿಗೆ ಕೊಂಡೊಯ್ಯುವುದು ನಿಷಿದ್ಧ. ಇಂತಹದೊಂದು ವಿಚಿತ್ರ ಷರತ್ತನ್ನು ಕೆ.ಸಿ.ಜನರಲ್‌ ಆಸ್ಪತ್ರೆ ವಿಧಿಸಿದೆ.

ಇದರಿಂದಾಗಿ ದೂರದ ಊರಿನಿಂದ ಬಂದವರು ಮೂಲ ದಾಖಲೆಗಳಿಲ್ಲದೇ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ತಪಾಸಣಾ ವರದಿ ಸಿಗದೇ ಅನೇಕ ರೋಗಿಗಳು ಅತ್ತ ವೈದ್ಯರ ಬಳಿಯೂ ಹೋಗುವುದಕ್ಕೆ ಆಗದೆ ಇತ್ತ ಮೂಲ ದಾಖಲೆಗಳನ್ನು ನೀಡಲಾಗದೇ ಪೇಚಾಡುತ್ತಿದ್ದ ಘಟನೆ ಆಸ್ಪತ್ರೆಯ ಕ್ಷ-ಕಿರಣ ವಿಭಾಗದ ಬಳಿ ಕಂಡುಬಂದವು.

ಪ್ರತಿನಿತ್ಯ 50ರಿಂದ 60 ರೋಗಿಗಳು ಕೆ.ಸಿ.ಜನರಲ್‌ ಆಸ್ಪತ್ರೆಯಲ್ಲಿ ಕ್ಷ-ಕಿರಣ ಪರೀಕ್ಷೆ ಮಾಡಿಸುತ್ತಾರೆ. ಕಳೆದ ನಾಲ್ಕು ದಿನದ ಈ ಹೊಸ ನಿಯಮದಿಂದ ಸಾಕಷ್ಟು ರೋಗಿಗಳಿಗೆ ಸಮಸ್ಯೆಯಾಗುತ್ತಿದೆ. ಕೀಲು ಮೂಳೆ ಸಮಸ್ಯೆ ಎಂದು ಆಸ್ಪತ್ರೆಗೆ ಬಂದು ವೈದ್ಯರ ಬಳಿ ಹೋದಾ ಕೂಡಲೇ ಕ್ಷ-ಕಿರಣ ಪರೀಕ್ಷೆಗೆ ಬರೆಯುತ್ತಾರೆ. ಆನಂತರ ನೇರವಾಗಿ ಹೋಗಿ ಕ್ಷ ಕಿರಣ ಪರೀಕ್ಷೆ ಮಾಡಿಸಿದರೆ ಆ ವಿಭಾಗದ ಸಿಬ್ಬಂದಿ ಪರೀಕ್ಷೆಯ ವರದಿ ನೀಡಲು ಮೂಲ ಆಧಾರಕಾರ್ಡ್‌ ಅಥವಾ ಪಡಿತರ ಚೀಟಿ ಕೇಳುತ್ತಾರೆ.

ಆದನ್ನು ನೀಡಿದ ನಂತರ ಕ್ಷ-ಕಿರಣ ವರದಿ ಕೈಗೆ ಕೊಟ್ಟು, ವೈದ್ಯರ ಬಳಿ ಹೋಗಿ ತೋರಿಸಿಕೊಂಡು ಬಂದು ಮರಳಿಸಿ ನಿಮ್ಮ ಮೂಲ ದಾಖಲಾತಿಗಳನ್ನು ಹಿಂಪಡೆಯುವಂತೆ ತಿಳಿಸುತ್ತಾರೆ. ಒಂದು ವೇಳೆ ನಮ್ಮ ಬಳಿ ಮೂಲ ದಾಖಲೆಗಳು ಇಲ್ಲ ಎಂದರೆ ಕಡ್ಡಾಯವಾಗಿ ತೆಗೆದುಕೊಂಡು ಬರಬೇಕು ಎನ್ನುತ್ತಾರೆ ಎಂದು ಅಳಲು ತೋಡಿಕೊಂಡರು ರೋಗಿ ಮಂಜಪ್ಪ.

ವರದಿ ಅಲಭ್ಯ: ಕೆಸಿ ಜನರಲ್‌ ಆಸ್ಪತ್ರೆಯಲ್ಲಿ ಕ್ಷ-ಕಿರಣ ವಿಭಾಗದಲ್ಲಿ ಅಡ ಇಟ್ಟುಕೊಳ್ಳುವ ಪದ್ಧತಿ ಇರುವುದರಿಂದ ತಪಾಸಣಾ ವರದಿಯನ್ನು ರೋಗಿಗಳು ಮನೆಗೆ ಕೊಂಡೋಯ್ಯಲು ನೀಡುವುದಿಲ್ಲ. ಹೀಗಾಗಿ, ಇಲ್ಲಿ ಮಾಡಿಸಿದ ತಪಾಸಣೆ ಮುಂದಿನ ಹಂತದ ಚಿಕಿತ್ಸೆಗೂ ಅಥವಾ ವೈದ್ಯರ ಬಳಿ ಎರಡನೇ ಅಭಿಪ್ರಾಯ ಪಡೆಯಲು ಸಾಧ್ಯವಾಗುವುದಿಲ್ಲ.

ಈ ಕುರಿತು ಪ್ರಶ್ನಿಸಿದರೆ ನಿಮ್ಮ ಸ್ವಂತಕ್ಕೆ ತಪಾಸಣಾ ವರದಿ ಬೇಕಾದರೆ ಖಾಸಗಿ ಆಸ್ಪತ್ರೆ ಅಥವಾ ಪ್ರಯೋಗಾಲಯಗಳಿಗೆ ಹೋಗಿ ಎಂದು ಸಿಬ್ಬಂದಿ ರೇಗಾಡುತ್ತಾರೆ ಎಂದು ಪರೀಕ್ಷೆಗೆ ಬಂದಿದ್ದ ಶೇಷಾದ್ರಿಪುರಂ ನಿವಾಸಿ ಮನೋಜ್‌ ದೂರಿದರು.

ಅಂಕಿ ಸಂಖ್ಯೆ ದಾಖಲೆಗಾಗಿ ಸಂಗ್ರಹ: ಎನ್‌ಎಚ್‌ಎಂ ಯೋಜನೆಯ ರಾಷ್ಟೀಯ ಉಚಿತ ರೋಗಪತ್ತೆ ಸೇವೆಗಳು ಕಾರ್ಯಕ್ರಮದಡಿಯಲ್ಲಿ ಆಸ್ಪತೆಯಲ್ಲಿ 58 ರೋಗಪತ್ತೆ ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಗುತ್ತಿದೆ. ಈ ಯೋಜನೆ ಅನ್ವಯ ಈ ಹಿಂದೆ 50 ರೂ. ಶುಲ್ಕ ಕಟ್ಟಬೇಕಿದ್ದ  ಕ್ಷ-ಕಿರಣ ಪರೀಕ್ಷೆಯನ್ನು ಉಚಿತವಾಗಿ ಮಾಡಲಾಗುತ್ತಿದೆ. ಈ ಹಿಂದೆ 50 ರೂ. ಕಟ್ಟಿದರೆ ನ್ಯಾಯಾಲಯಕ್ಕೆ ಸಲ್ಲಿಸಬೇಕಾದ ರೋಗಿಗಳ ತಪಾಸಣಾ ವರದಿ ಬಿಟ್ಟು ಇನ್ನೆಲ್ಲಾ ವರದಿಗಳನ್ನು ರೋಗಿಗಳಿಗೆ ನೀಡುತ್ತಿದ್ದೆವು.

ಆದರೆ, ಈಗ ಉಚಿತ ಸೇವೆಯಾಗಿರುವುದರಿಂದ ನಮ್ಮ ವಿಭಾಗದಲ್ಲಿ ನಾವು ಮಾಡಿರುವ ಪರೀಕ್ಷೆಗಳ ಅಂಕಿ ಸಂಖ್ಯೆ ದಾಖಲೆ ಮಾಡಿಟ್ಟುಕೊಳ್ಳಲು ರೋಗಿಗಳ ಕ್ಷ-ಕಿರಣ ಫಿಲ್ಮ್ಗಳನ್ನು ಹಿಂದಿರುಗಿಸದೇ ನಮ್ಮ ಬಳಿಯೇ ಇಟ್ಟುಕೊಳ್ಳುತ್ತಿದ್ದೇವೆ. ಮೇಲಿನವರು ಆದೇಶ ನೀಡಿದರೆ ರೋಗಿಗಳಿಗೆ ವಿತರಣೆ ಮಾಡುತ್ತೇವೆ ಎಂದು ಹೆಸರು ಹೇಳಲಿಚ್ಛಿಸದ ವಿಭಾಗದ ಸಿಬ್ಬಂದಿ ತಿಳಿಸಿದ್ದಾರೆ.

ದುರುಪಯೋಗ ತಡೆಯಲು ಈ ಕ್ರಮ: ಪರೀಕ್ಷೆಗಳು ಉಚಿತವಾಗಿರುವುದರಿಂದ ಖಾಸಗಿ ಆಸ್ಪತ್ರೆ ರೋಗಿಗಳು ಹಾಗೂ ಕ್ಷ-ಕಿರಣ ಪರೀಕ್ಷಾ ವಿಭಾಗದ ಸಿಬ್ಬಂದಿಗಳು ದುರುಪಯೋಗ ಮಾಡಿಕೊಳ್ಳಬಾರದು ಎಂದು ಈ ವಿಭಾಗದಲ್ಲಿ ಮಾತ್ರ ವರದಿಯನ್ನು ರೋಗಿಗಳಿಗೆ ನೀಡದೇ ದಾಖಲೆಯಾಗಿ ಸಂಗ್ರಹಿಸಿಟ್ಟುಕೊಳ್ಳುವಂತೆ ಸೂಚಿಸಿದ್ದೆವು. ಆದರೆ, ಸಮಸ್ಯೆಯಾಗುತ್ತಿರುವ ಕುರಿತು ಗಮನಕ್ಕೆ ಬಂದಿದ್ದು, ಕೂಡಲೇ ಅಗತ್ಯಕ್ರಮ ಕೈಗೊಳ್ಳುವೆ ಎಂದು ಕೆ.ಸಿ.ಜನರಲ್‌ ಆಸ್ಪತ್ರೆ ಮೇಲ್ವಿಚಾರಕ ಡಾ.ಭಾನುಮೂರ್ತಿ ತಿಳಿಸಿದ್ದಾರೆ. 

ಮಗಳು ಎದೆನೋವಿನಿಂದ ಬಳಲುತ್ತಿದ್ದು, ಪರೀಕ್ಷೆಗೆ ಬಂದಿದ್ದೇವೆ. ನಮಗೆ ಎಕ್ಸ್‌ರೇ ವರದಿ ನೀಡಲು ಮೂಲ ಆಧಾರ ಕಾರ್ಡ್‌ ಅಥವಾ ಪಡಿತರ ಚೀಟಿ ಕೇಳುತ್ತಿದ್ದಾರೆ. ನಮಗೆ ಈ ಬಗ್ಗೆ ಮಾಹಿತಿ ಇಲ್ಲ. ಪರೀಕ್ಷೆ ಮಾಡಿದ್ದಕ್ಕೆ ಹಣ ಪಾವತಿಸುತ್ತೇನೆ ಎಂದರೂ ವರದಿ ನೀಡುತ್ತಿಲ್ಲ.
-ದಿವ್ಯಾ. ಕುಣಿಗಲ್‌ ನಿವಾಸಿ

ಹೆಚ್ಚುವರಿ ಚಿಕಿತ್ಸೆಗೆ ಅಥವಾ ಎರಡನೇ ಅಭಿಪ್ರಾಯಕ್ಕೆ ಎಕ್ಸ್‌ರೇ ವರದಿ ಕೇಳಿದರೆ ಕೊಡುತ್ತಿಲ್ಲ. ಸೇವೆ ಉಚಿತವಾಗಿ ಇನ್ನಷ್ಟು ಸಮಸ್ಯೆಯಾಗಿದೆ. ನಮ್ಮ ವರದಿ ಇಟ್ಟುಕೊಂಡು ಏನು ಮಾಡುತ್ತಾರೆ ಎಂಬುದು ತಿಳಿಯುತ್ತಿಲ್ಲ. ಪ್ರಶ್ನೆ ಮಾಡಿದರೆ ಸಬೂಬು ನೀಡುತ್ತಾರೆ.
-ಓಬಳೇಶ್‌, ಮಲ್ಲೇಶ್ವರ ನಿವಾಸಿ

* ಜಯಪ್ರಕಾಶ್‌ ಬಿರಾದಾರ್‌

ಟಾಪ್ ನ್ಯೂಸ್

ICC T20I Rankings: ವಿಶ್ವಕಪ್‌ನಲ್ಲಿ ಶ್ರೇಷ್ಠ ಸಾಧನೆ; ನಂ.1 ಆಲ್ ರೌಂಡರ್ ಆದ ಪಾಂಡ್ಯ

ICC T20I Rankings: ವಿಶ್ವಕಪ್‌ನಲ್ಲಿ ಶ್ರೇಷ್ಠ ಸಾಧನೆ; ನಂ.1 ಆಲ್ ರೌಂಡರ್ ಆದ ಪಾಂಡ್ಯ

Chamarajanagar ನೂತನ ಎಸ್ಪಿ ಯಾಗಿ ಡಾ.ಬಿ.ಟಿ.ಕವಿತಾ ಅಧಿಕಾರ ಸ್ವೀಕಾರ

Chamarajanagar ನೂತನ ಎಸ್ಪಿ ಯಾಗಿ ಡಾ.ಬಿ.ಟಿ.ಕವಿತಾ ಅಧಿಕಾರ ಸ್ವೀಕಾರ

1-sadsdadsads

Bihar DCM ಶಪಥ ಪೂರ್ಣ; ಅಯೋಧ್ಯೆ ರಾಮನಿಗೆ ಪೇಟ ಅರ್ಪಣೆ

ಜಪಾನ್‌ನಲ್ಲಿ ರಿಲೀಸ್‌ ಆಗಲಿದೆ ʼಜವಾನ್‌ʼ: 4 ತಿಂಗಳ ಮೊದಲೇ ಅಡ್ವಾನ್ಸ್‌ ಬುಕಿಂಗ್‌ ಶುರು

ಜಪಾನ್‌ನಲ್ಲಿ ರಿಲೀಸ್‌ ಆಗಲಿದೆ ʼಜವಾನ್‌ʼ: 4 ತಿಂಗಳ ಮೊದಲೇ ಅಡ್ವಾನ್ಸ್‌ ಬುಕಿಂಗ್‌ ಶುರು

Shivamogga: ಕಾರಿನ ಮೇಲೆ ಮಗುಚಿ ಬಿದ್ದ ಬಸ್… ಕಾರು ಚಾಲಕ ಸ್ಥಳದಲ್ಲೇ ಮೃತ್ಯು

Shivamogga: ಕಾರಿನ ಮೇಲೆ ಮಗುಚಿ ಬಿದ್ದ ಬಸ್… ಕಾರು ಚಾಲಕ ಸ್ಥಳದಲ್ಲೇ ಮೃತ್ಯು

1-sadsad

Italy; ಕೈ ತುಂಡಾದ ಭಾರತೀಯ ಕಾರ್ಮಿಕನನ್ನು ರಸ್ತೆಗೆ ಎಸೆದ ಮಾಲಕ ಅರೆಸ್ಟ್

koo

Koo: ದಿನಂಪ್ರತಿ ‘ಕೂ’ ಹೇಳುತ್ತಿದ್ದ ಹಕ್ಕಿ ಮೌನವಾಯಿತು, ಸಾಮಾಜಿಕ ಮಾಧ್ಯಮ ಕೂ ಆ್ಯಪ್ ಸ್ಥಗಿತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tragic: ಸೊಸೆ ಮನೆ ಬಿಟ್ಟು ಹೋಗಿದ್ದಕ್ಕೆ ಅತ್ತೆ, ಮಾವ ನೇಣಿಗೆ ಶರಣು

Tragic: ಸೊಸೆ ಮನೆ ಬಿಟ್ಟು ಹೋಗಿದ್ದಕ್ಕೆ ಅತ್ತೆ, ಮಾವ ನೇಣಿಗೆ ಶರಣು

Assault Case: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ

Assault Case: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ

Arrested: ಕಂಪನಿಗಳ ಹೆಸರಿನಲ್ಲಿ ಬಟ್ಟೆ ಮಾರಾಟ; ಆರೋಪಿ ಬಂಧನ

Arrested: ಕಂಪನಿಗಳ ಹೆಸರಿನಲ್ಲಿ ಬಟ್ಟೆ ಮಾರಾಟ; ಆರೋಪಿ ಬಂಧನ

3

Supplier: ಬೇಗ ಊಟ ತನ್ನಿ ಎಂದಿದ್ದಕ್ಕೆ ಆಶ್ಲೀಲ ಸನ್ನೆ ತೋರಿದ ಸಪ್ಲ್ಯೈಯರ್; ವೈರಲ್‌

ನಾಪತ್ತೆಯಾಗಿದ್ದ ಕಾನ್‌ಸ್ಟೇಬಲ್‌ ಪತ್ತೆಗಾಗಿ 250 ಸಿಸಿ ಕ್ಯಾಮೆರಾ ಶೋಧಿಸಿದ್ದ ಪೊಲೀಸರು

ನಾಪತ್ತೆಯಾಗಿದ್ದ ಕಾನ್‌ಸ್ಟೇಬಲ್‌ ಪತ್ತೆಗಾಗಿ 250 ಸಿಸಿ ಕ್ಯಾಮೆರಾ ಶೋಧಿಸಿದ್ದ ಪೊಲೀಸರು

MUST WATCH

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

udayavani youtube

ಉಡುಪಿ ಪತ್ರಿಕಾ ಭವನ ಸಮಿತಿ ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆ

ಹೊಸ ಸೇರ್ಪಡೆ

ಕಾರ್ಕಳ: ಪಿಎಂ ಆವಾಸ್‌ ಮನೆಗಳಿಗೆ ಬೇಡಿಕೆಯೇ ಇಲ್ಲ-250ರಲ್ಲಿ 90 ಮನೆಗಳಿಗಷ್ಟೇ ಅರ್ಜಿ!

ಕಾರ್ಕಳ: ಪಿಎಂ ಆವಾಸ್‌ ಮನೆಗಳಿಗೆ ಬೇಡಿಕೆಯೇ ಇಲ್ಲ-250ರಲ್ಲಿ 90 ಮನೆಗಳಿಗಷ್ಟೇ ಅರ್ಜಿ!

ICC T20I Rankings: ವಿಶ್ವಕಪ್‌ನಲ್ಲಿ ಶ್ರೇಷ್ಠ ಸಾಧನೆ; ನಂ.1 ಆಲ್ ರೌಂಡರ್ ಆದ ಪಾಂಡ್ಯ

ICC T20I Rankings: ವಿಶ್ವಕಪ್‌ನಲ್ಲಿ ಶ್ರೇಷ್ಠ ಸಾಧನೆ; ನಂ.1 ಆಲ್ ರೌಂಡರ್ ಆದ ಪಾಂಡ್ಯ

ಸರಕಾರಿ ಶಾಲೆಯಲ್ಲಿ ಕಲಿತವರು ಉನ್ನತ ಸಾನಕ್ಕೆ ಏರಿದ್ದಾರೆ: ವಿಶ್ವನಾಥ ಶೆಟ್ಟಿ

ಸರಕಾರಿ ಶಾಲೆಯಲ್ಲಿ ಕಲಿತವರು ಉನ್ನತ ಸಾನಕ್ಕೆ ಏರಿದ್ದಾರೆ: ವಿಶ್ವನಾಥ ಶೆಟ್ಟಿ

Chamarajanagar ನೂತನ ಎಸ್ಪಿ ಯಾಗಿ ಡಾ.ಬಿ.ಟಿ.ಕವಿತಾ ಅಧಿಕಾರ ಸ್ವೀಕಾರ

Chamarajanagar ನೂತನ ಎಸ್ಪಿ ಯಾಗಿ ಡಾ.ಬಿ.ಟಿ.ಕವಿತಾ ಅಧಿಕಾರ ಸ್ವೀಕಾರ

ರಾಜ್ಯದ 2ನೇ ಅತೀದೊಡ್ಡ ಸರಕಾರಿ ಪಾಲಿಟೆಕ್ನಿಕ್‌…ಕೆಪಿಟಿಗೆ ಈಗ ಅಮೃತ ಘಳಿಗೆ

ರಾಜ್ಯದ 2ನೇ ಅತೀದೊಡ್ಡ ಸರಕಾರಿ ಪಾಲಿಟೆಕ್ನಿಕ್‌…ಕೆಪಿಟಿಗೆ ಈಗ ಅಮೃತ ಘಳಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.