![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Apr 10, 2022, 12:08 PM IST
ಬೆಂಗಳೂರು: ಎರಡು ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಪ್ರಕರಣ ಸಂಬಂಧ ಕೇಂದ್ರ ಕಾರಾಗೃಹ ಸೇರಿದ್ದ ಆರೋಪಿಯು ಶನಿವಾರ ಮುಂಜಾನೆ ಬೆಡ್ ಶೀಟ್ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಅತ್ತಿಬೆಲೆ ನೆರಳೂರಿನ ನಿವಾಸಿ ದೀಪು (31) ಆತ್ಮಹತ್ಯೆಗೆ ಶರಣಾದ ಆರೋಪಿ.
ಮಾ.28ರಂದು ಪೋಕ್ಸೋ ಕಾಯ್ದೆಯಡಿ ದೀಪುನನ್ನು ಅತ್ತಿಬೆಲೆ ಪೊಲೀಸರು ಬಂಧಿಸಿ, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದ್ದರು. ಶನಿವಾರ ಮುಂಜಾನೆ 5.25ಕ್ಕೆ ಜೈಲಿನ ಸ್ನಾನದ ಕೋಣೆಗೆ ಹೋದ ದೀಪು, ಬೆಡ್ಶೀಟ್ನಿಂದ ಸ್ನಾನದ ಕೋಣೆಯ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೈಶಾಚಿಕ ಕೃತ್ಯ ಬಳಿಕ ಸ್ಥಳದಲ್ಲೇ ಮಗು ಸಾವು : ಕಳೆದ ತಿಂಗಳು ಆರೋಪಿ ದೀಪು ದೊಡ್ಡಬಳ್ಳಾಪುರದಲ್ಲಿರುವ ತನ್ನ ಅಣ್ಣನ 2 ವರ್ಷದ ಮಗಳನ್ನು ತಾನು ವಾಸಿಸುತ್ತಿದ್ದ ಅತ್ತಿಬೆಲೆ ಬಳಿಯ ನೆರಳೂರು ಗೇಟ್ಗೆ ಕರೆತಂದಿದ್ದ. ನಂತರ ಚಿಕನ್ ತರಲು ಸ್ನೇಹಿತರ ಜತೆಗೆ ಹೋಗುವ ವೇಳೆ ಮಗುವನ್ನೂ ಕಾರಿನಲ್ಲಿ ಕರೆದೊಯ್ದಿದ್ದ. ದಾರಿ ಮಧ್ಯದಲ್ಲಿ ಸ್ನೇಹಿತರನ್ನು ಮದ್ಯ ತರಲು ಕಳುಹಿಸಿ ಕಾರಿನಲ್ಲೇ ಮಗುವಿನ ಮೇಲೆ ಅತ್ಯಾಚಾರ ಎಸಗಿದ್ದ. ಪೈಶಾಚಿಕ ಕೃತ್ಯದಿಂದ ನಲುಗಿದ್ದ ಎರಡು ವರ್ಷದ ಮಗು ತೀವ್ರ ರಸ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿತ್ತು. ಅತ್ತಿಬೆಲೆ ಠಾಣೆ ಪೊಲೀಸರು ದೀಪುವನ್ನು ಬಂಧಿಸಿದ್ದರು.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.