ತೇಜಸ್‌ ಬಳಿಕ “ಅಮ್ಕಾ’ ಯುದ್ಧ ವಿಮಾನ ಸರದಿ


Team Udayavani, Feb 16, 2017, 3:45 AM IST

AMCA.jpg

ಬೆಂಗಳೂರು : ಸ್ವದೇಶಿ ಹಗುರ ಯುದ್ಧ ವಿಮಾನ ತೇಜಸ್‌ ಮಾದರಿಯಲ್ಲಿಯೇ ಭಾರತದ ಸೇನಾ ಬತ್ತಳಿಕೆಗೆ ಸೇರ್ಪಡೆಗೊಳ್ಳಲು “ಅಮ್ಕಾ ಯುದ್ಧ ವಿಮಾನ (ಅಡ್ವಾನ್ಸ್‌ ಮಿಡಿಯಮ್‌ ಕಂಬ್ಯಾಟ್‌ ಏರ್‌ಕ್ರಾಫ್ಟ್)ಸಜ್ಜಾಗುತ್ತಿದೆ.

ಸಮರ ಕುರಿತು ಕಿಂಚಿತ್‌ ಮಾಹಿತಿ ಲಭ್ಯವಾಗದಂತೆ ದಾಳಿ ನಡೆಸುವಂತಹ ಅತ್ಯಾಧುನಿಕ ಯುದ್ಧ ವಿಮಾನ ಇದಾಗಿದ್ದು ಮುಂದಿನ ಹತ್ತು ವರ್ಷಗಳಲ್ಲಿ ಭಾರತೀಯ ಸೇನೆಗೆ ಸೇರ್ಪಡೆಯಾಗಲಿದೆ.

ಎಚ್‌ಎಎಲ್‌ (ಹಿಂದೂಸ್ಥಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌)  ಮತ್ತು ಎಡಿಎ (ಏರೋನಾಟಿಕಲ್‌ ಡೆವಲಪ್‌ಮೆಂಟ್‌ ಅಥಾರಿಟಿ) ಜಂಟಿಯಾಗಿ “ಅಮ್ಕಾ ಯುದ್ಧ ವಿಮಾನ’ ತಯಾರಿಕೆಯಲ್ಲಿ ತೊಡಗಿದ್ದು, ತೇಜಸ್‌ ಮಾದರಿಯಲ್ಲಿಯೇ  ಇನ್ನೂ ಸುಧಾರಿತ ಹಾಗೂ ಅತ್ಯಾಧುನಿಕ ತಂತ್ರಜ್ಞಾನ ಸಹಿತ ಯುದ್ಧವಿಮಾನವನ್ನು ಸಿದ್ದಗೊಳಿಸಲಾಗುತ್ತಿದ್ದು 2023-24ರ ವೇಳೆಗೆ  ಈ ಯುದ್ಧ ವಿಮಾನ ಹಾರಾಟ ನಡೆಸಲಿದೆ.

ತೇಜಸ್‌ ಒಂದು ಇಂಜಿನ್‌ವುಳ್ಳ ಯುದ್ಧ ವಿಮಾನವಾಗಿದ್ದರೆ, ಅಮ್ಕಾ ಯುದ್ಧ ವಿಮಾನವು ಎರಡು ಎಂಜಿನ್‌ಗಳನ್ನು ಒಳಗೊಂಡಿವೆ. ಐದನೇ ತಲೆಮಾರಿನ ಯುದ್ಧ ವಿಮಾನ ಇದಾಗಿದ್ದು,  ಇದಕ್ಕೆ ಎಚ್‌ಎಎಲ್‌ ಘಟಕದಲ್ಲಿ ಅತ್ಯಾಧುನಿಕ ಉಪಕರಣಗಳನ್ನು ಜೋಡಿಸಿದರೆ, ಎಡಿಎ ವಿಮಾನದ ವಿನ್ಯಾಸದಲ್ಲಿ ತೊಡಗಿದೆ.

2008ರಲ್ಲೇ ಈ ಯುದ್ಧ ವಿಮಾನ ಅನಧಿಕೃತವಾಗಿ ವಿನ್ಯಾಸಗೊಳಿಸುವ ಕೆಲಸ ಆರಂಭಗೊಂಡಿತ್ತು.  2011ರಿಂದ ಅಧಿಕೃತವಾಗಿ ವಿನ್ಯಾಸಗೊಳಿಸುವ ಕೆಲಸ ಪ್ರಾರಂಭಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ವಿಮಾನದ ರೂಪುರೇಷೆಗಳ ತಯಾರಿ ಅಂತಿಮ ಹಂತದಲ್ಲಿದ್ದು, ಆ ನಂತರ ವಾಯುಸೇನೆಗೆ ಹಸ್ತಾಂತರವಾಗಲಿದ್ದು ವಾಯುಸೇನೆ ಅಧಿಕಾರಿಗಳು ಪರಿಶೀಲನೆ ನಡೆಸಿದ ಬಳಿಕ ಅವರಿಗೆ ಅಗತ್ಯ ಇರುವಂತೆ ಬದಲಾವಣೆಗಳನ್ನು ಕೇಳಿದರೆ ಅದನ್ನು ಸರಿಪಡಿಸಿ ಮತ್ತೆ ವಾಯು ಸೇನೆಗೆ ಹಸ್ತಾಂತರ ಮಾಡಲಾಗುವುದು ಎಂದು ತಿಳಿದು ಬಂದಿದೆ.

ಕ್ಷಿಪಣಿ ಅಳವಡಿಕೆಯು ಅಮ್ಕಾ ವಿಮಾನದಲ್ಲಿ ಕಾಣದಂತೆ ರೂಪಿಸಲಾಗಿದೆ. ತೇಜಸ್‌ ಯುದ್ಧ ವಿಮಾನದಲ್ಲಿ ಕ್ಷಿಪಣಿಗಳು ಹೊರಗೆ ಕಾಣಲಿದೆ. ದಾಳಿ ವೇಳೆ ಕ್ಷಿಪಣಿಗಳನ್ನು ವೈರಿಗಳ ವಿರುದ್ದ ಬಿಡಲಾಗುತ್ತದೆ. ಅಮ್ಕಾ ವಿಮಾನದಲ್ಲಿ ಒಳಗೆ ಕ್ಷಿಪಣಿಗಳನ್ನು ಅಳವಡಿಸುವಂತೆ ವಿನ್ಯಾಸಗೊಳಿಸಲಾಗಿದೆ. ಪ್ರತಿ ವಿಂಗ್‌ನಲ್ಲಿ ಮೂರು ಕ್ಷಿಪಣಿಗಳಂತೆ ಎರಡು ವಿಂಗ್‌ಗಳಲ್ಲಿ ಆರು ಕ್ಷಿಪಣಿಗಳನ್ನು ಅಳವಡಿಸಬಹುದು. ಅಲ್ಲದೇ, ಮತ್ತೂಂದು ಯುದ್ಧದ ಮಧ್ಯಭಾಗದಲ್ಲಿ ಅಳವಡಿಸುವ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಕ್ಷಿಪಣಿಗಳು ಇರುವುದು ವೈರಿಗಳಿಗೆ ಗೊತ್ತಾಗುವುದಿಲ್ಲ ಎನ್ನಲಾಗಿದೆ.

ಶತ್ರು ರಾಷ್ಟ್ರಕ್ಕೆ ಮಾಹಿತಿ ಇಲ್ಲದಂತೆ ದಾಳಿ ನಡೆಯುವಂತಹ ಯುದ್ಧ ವಿಮಾನವು ಪ್ರಸ್ತುತ ಅಮೆರಿಕಾದಲ್ಲಿ ಇದೆ. ಸೈನಿಕರಿಗೆ ಉಪಯೋಗವಾಗಬೇಕು ಎಂಬ ಉದ್ದೇಶದಿಂದ ಎಚ್‌ಎಎಲ್‌ ಮತ್ತು ಎಡಿಎ ಸಂಸ್ಥೆಗಳು ಅದೇ ಮಾದರಿಯಲ್ಲಿ ಅಮ್ಕಾ ಯುದ್ಧ ವಿಮಾನವನ್ನು ರೂಪಿಸಲಾಗಿದೆ. ಈ ವಿಮಾನದ ಸಿದ್ಧತೆಯಲ್ಲಿ ತಂತ್ರಜ್ಞಾನರು ಸೇರಿದಂತೆ ವಿಜ್ಞಾನಗಳು ಶ್ರಮಿಸಿದ್ದಾರೆ. ಜಾಗತಿಕವಾಗಿ ಹೊಸ ಹೊಸ ತಂತ್ರಜ್ಞಾನಗಳು ಅಭಿವೃದ್ಧಿಯಾಗುತ್ತಿವೆ. ವಿಮಾನ ತಯಾರಿಕೆ ಸಂಬಂಧಿಸಿದಂತೆ ನೂತನ ತಂತ್ರಜ್ಞಾನಗಳು ಕಂಡು ಬಂದರೆ ಅವುಗಳನ್ನು ಸಹ ಅಳವಡಿಸಿಕೊಂಡು ಮತ್ತಷ್ಟು ಅಭಿವೃದ್ಧಿ ಮಾಡಲಾಗುವುದು ಎಂದು ವಾಯು ಸೇನೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಮ್ಕಾ ವಿಶೇಷತೆ
ಅತ್ಯಾಧುನಿಕ ಯುದ್ಧ ವಿಮಾನವಾಗಿರುವ ಅಮ್ಕಾ ಯುದ್ಧ ವಿಮಾನ ತೇಜಸ್‌ಗಿಂತ ಎರಡು ಪಟ್ಟು ವೇಗವಾಗಿ ಚಲಿಸುತ್ತದೆ. ಪ್ರತಿ ಗಂಟೆಗೆ ಎರಡೂವರೆ ಗಂಟೆಗಿಂತ ಹೆಚ್ಚು ವೇಗವಾಗಿ ಹಾರಲಿದೆ. ತೇಜಸ್‌ ಯುದ್ಧ ವಿಮಾನದಲ್ಲಿ ರಾಡಾರ್‌ ಮೂಲಕ ಬೆಳಕು ಚೆಲ್ಲುವುದರಿಂದ ಎದುರಾಳಿಗೆ ಸುಲಭವಾಗಿ ಆಗಮನ ತಿಳಿಯುತ್ತದೆ. ಆದರೆ, ಅಮ್ಕಾ ವಿಮಾನದಲ್ಲಿ ರಾಡಾರ್‌ನ್ನು ಅತ್ಯಾಧುನಿಕವಾಗಿ ಅಳವಡಿಸುವುದರಿಂದ ಎದುರಾಳಿಗೆ ಗೊತ್ತಾಗುವದೇ ಇಲ್ಲ. ಸುಲಭವಾಗಿ ವೈರಿಗಳನ್ನು ಮಣಿಸಲು ಇದರಿಂದ ಸಾಧ್ಯವಿದೆ.

– ಪ್ರಭುಸ್ವಾಮಿ ನಟೇಕರ್‌
 

ಟಾಪ್ ನ್ಯೂಸ್

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Chikkamagaluru: ಸಾವಿನಲ್ಲೂ ಸಾರ್ಥಕತೆ; ಅಪಘಾತದಿಂದ ಮೃತಪಟ್ಟ ಯುವಕರ ನೇತ್ರದಾನ

Chikkamagaluru: ಸಾವಿನಲ್ಲೂ ಸಾರ್ಥಕತೆ… ರಸ್ತೆ ಅಪಘಾತದಿಂದ ಮೃತಪಟ್ಟ ಯುವಕರ ನೇತ್ರದಾನ

Sandalwood: ಮೀ ಟೂ ಪ್ರಕರಣ; ಸೆ.16ಕ್ಕೆ ಚಿತ್ರರಂಗ ಸಭೆ

Sandalwood: ಮೀ ಟೂ ಪ್ರಕರಣ; ಸೆ.16ಕ್ಕೆ ಚಿತ್ರರಂಗ ಸಭೆ

Mudhol: ಈ ಸಾರ್ವಜನಿಕ ಆಸ್ಪತ್ರೆಗೆ 10 ತಿಂಗಳಿನಿಂದ ಪ್ರಭಾರಿ ವೈದ್ಯಾಧಿಕಾರಿಯೇ ದಿಕ್ಕು

Mudhol: ಈ ಸಾರ್ವಜನಿಕ ಆಸ್ಪತ್ರೆಗೆ 10 ತಿಂಗಳಿನಿಂದ ಪ್ರಭಾರಿ ವೈದ್ಯಾಧಿಕಾರಿಯೇ ದಿಕ್ಕು

9

Cabinet Meeting: ದಶಕದ ಬಳಿಕ ಕಲಬುರಗಿಯಲ್ಲಿ ಸಂಪುಟ ಸಭೆ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.