ಆನಂದ ಕುಮಾರಸ್ವಾಮಿ ದೈತ್ಯ ಪ್ರತಿಭೆ


Team Udayavani, Jul 9, 2018, 12:12 PM IST

anandakumarswamy.jpg

ಬೆಂಗಳೂರು: ಕಲೆ ಮತ್ತು ವಿಜ್ಞಾನ ಒಂದಾಗಬೇಕು ಎಂದು ಬಲವಾಗಿ ಪ್ರತಿಪಾದಿಸಿ ಕಲೆಗಾಗಿ ಲೇಖನಿ ಮುಡುಪಾಗಿಡುವುದೇ ಜೀವನ ಅಂದುಕೊಂಡಿದ್ದ ಆನಂದ ಕುಮಾರಸ್ವಾಮಿ ದೈತ್ಯ ಪ್ರತಿಭೆಯಷ್ಟೇ ಅಲ್ಲ, ದೈವ ಪ್ರತಿಭೆಯೂ ಹೌದು ಎಂದು ವಿಮರ್ಶಕ ಜಿ.ಬಿ.ಹರೀಶ್‌ ಅಭಿಪ್ರಾಯಪಟ್ಟಿದ್ದಾರೆ. 

ರಾಷ್ಟ್ರೋತ್ಥಾನ ಪರಿಷತ್ತಿನಲ್ಲಿ ಫೌಂಡೇಷನ್‌ ಫಾರ್‌ ಇಂಡಿಕ್‌ ರೀಸರ್ಚ್‌ ಸ್ಟಡೀಸ್‌ ವತಿಯಿಂದ ಹಮ್ಮಿಕೊಂಡಿದ್ದ ಕಲಾ ಚಿಂತಕ ಆನಂದ ಕುಮಾರಸ್ವಾಮಿ ಅವರ “ಜೀವನ ಮತ್ತು ಕಾರ್ಯ’ ವಿಚಾರಗೋಷ್ಠಿಯಲ್ಲಿ ವಿಷಯ ಮಂಡಿಸಿ  ಮಾತನಾಡಿದ ಅವರು, ಆನಂದ ಕುಮಾರಸ್ವಾಮಿ ಅವರನ್ನು ಓದುವದು ನಮ್ಮ ಕಲೆಗೆ ನಾವು ಮರು ಪ್ರವೇಶ ಪಡೆದುಕೊಂಡಂತೆ.

ಅವರನ್ನು ಒಬ್ಬ ತತ್ವಜ್ಞಾನಿಯಾಗಿ, ಕಲಾ ಚಿಂತಕನಾಗಿ, ಬೇರೆ ಬೇರೆ ಪಂಥಗಳ ಬಾಹ್ಯ ಅಧ್ಯಯನಕಾರನಾಗಿ ಓದಬಹುದು. ಮೊಗಲ್‌ ಚಿತ್ರಕಲೆಯಲ್ಲಿ ರಜಪೂತ ಚಿತ್ರಕಲೆಯನ್ನು ಸೇರಿಸಲಾಗಿತ್ತು. ಆದರೆ, ಮೊಗಲ್‌ ಚಿತ್ರಕಲೆಯಿಂದ ರಜಪೂತ ಚಿತ್ರಕಲೆಯನ್ನು ಬೇರ್ಪಡಿಸಿ ತೋರಿಸಿದವರು ಕುಮಾರಸ್ವಾಮಿ. ಭಾರತದಲ್ಲಿ ಧರ್ಮ ಮತ್ತು ಕಲೆಗೆ ಯಾವತ್ತೂ ಪ್ರತ್ಯೇಕತೆ ಇಲ್ಲ ಎಂದು ಹೇಳಿದರು.

ಪತ್ರಕರ್ತ ಸೂರ್ಯಪ್ರಕಾಶ್‌ ಪಂಡಿತ್‌, ಆನಂದ ಕುಮಾರಸ್ವಾಮಿಯವರ “ಕಲಾ ಚಿಂತನೆ’ ಕುರಿತು ಮಾತನಾಡಿ, ಡಾ. ಎಸ್‌.ಎಲ್‌.ಭೈರಪ್ಪ ಅವರ ಧರ್ಮಶ್ರೀ ಕಾದಂಬರಿಗೆ ಆನಂದ ಕುಮಾರಸ್ವಾಮಿ ಅವರ “ಡ್ಯಾನ್ಸ್‌ ಆಫ್ ಶಿವಾ’ ಕೃತಿ ಪ್ರೇರಣೆ. ಒಂದು ಜೀವಮಾನದಲ್ಲಿ ಆನಂದ ಕುಮಾರಸ್ವಾಮಿಯವರನ್ನು ಓದಲು ಸಾಧ್ಯವಿಲ್ಲ. ಅವರನ್ನು ಓದುವದು ನಮ್ಮನ್ನು ನಾವೇ ಓದಿಕೊಂಡಂತೆ.

ನಾನು ಎಂಬ ಹುಡುಕಾಟದ ಎಲ್ಲ ಪ್ರಶ್ನೆಗಳಿಗೆ ಆನಂದ ಕುಮಾರಸ್ವಾಮಿ ಉತ್ತರವಾಗಿದ್ದಾರೆ. ಅವರು ಕೇವಲ ಅಕಾಡೆಮಿಕ್‌ ವಿಷಯ ಅಲ್ಲ. ಅವರ ಒಂದೊಂದು ಬರಹದಲ್ಲೂ ಬೌದ್ಧಿಕ ಪ್ರಾಮಾಣಿಕತೆ ಕಾಣುತ್ತದೆ ಎಂದು ಅಭಿಪ್ರಾಯಪಟ್ಟರು. ಆನಂದಕುಮಾರಸ್ವಾಮಿಯವರ “ಡ್ಯಾನ್ಸ್‌ ಆಫ್ ಶಿವ’ ಪುಸ್ತಕದ ಪ್ರಕಟಣೆಯ 100ನೇ ವರ್ಷದ ಪ್ರಯುಕ್ತ ಈ ವಿಚಾರಗೋಷ್ಠಿ ಹಮ್ಮಿಕೊಳ್ಳಲಾಗಿತ್ತು.

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Namma Metro: ಹಳದಿ ಮಾರ್ಗ ಪೂರ್ಣಗೊಂಡಿದ್ದರೂ ಬೋಗಿಗಳ ಕೊರತೆ

Namma Metro: ಹಳದಿ ಮಾರ್ಗ ಪೂರ್ಣಗೊಂಡಿದ್ದರೂ ಬೋಗಿಗಳ ಕೊರತೆ

Kidnapping Case: ವ್ಯಕ್ತಿಯ ಅಪಹರಿಸಿ ಸುಲಿಗೆಗೈದ 8 ಮಂದಿ ಬಂಧನ

Kidnapping Case: ವ್ಯಕ್ತಿಯ ಅಪಹರಿಸಿ ಸುಲಿಗೆಗೈದ 8 ಮಂದಿ ಬಂಧನ

Younis Zaroora: ಎಂಜಿ ರಸ್ತೇಲಿ ಇನ್‌ಸ್ಟಾಗ್ರಾಮ್‌ ಸ್ಟಾರ್‌ ಯೂನಿಸ್‌ ನೋಡಲು ಕಿಕ್ಕಿರಿದ ಜನ

Younis Zaroora: ಎಂಜಿ ರಸ್ತೇಲಿ ಇನ್‌ಸ್ಟಾಗ್ರಾಮ್‌ ಸ್ಟಾರ್‌ ಯೂನಿಸ್‌ ನೋಡಲು ಕಿಕ್ಕಿರಿದ ಜನ

Private bus: ಖಾಸಗಿ ಬಸ್‌ಗಳಿಂದ ಬೇಕಾಬಿಟ್ಟಿ ದರ ವಸೂಲಿ

Private bus: ಖಾಸಗಿ ಬಸ್‌ಗಳಿಂದ ಬೇಕಾಬಿಟ್ಟಿ ದರ ವಸೂಲಿ

2-bng

Bengaluru: ನಗರದೆಲ್ಲೆಡೆ ಟ್ರಾಫಿಕ್ ಜಾಮ್‌, ಮೆಜೆಸ್ಟಿಕ್‌ ರಷ್‌! ‌

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.