Arrested: ಕಾರಿನಲ್ಲಿ ಆಂಧ್ರದಿಂದ ಬೆಂಗಳೂರಿಗೆ ಬಂದು ಮೊಬೈಲ್‌ ಕದಿಯುತ್ತಿದ್ದ ಖದೀಮರ ಬಂಧನ


Team Udayavani, May 22, 2024, 11:08 AM IST

Arrested: ಕಾರಿನಲ್ಲಿ ಆಂಧ್ರದಿಂದ ಬೆಂಗಳೂರಿಗೆ ಬಂದು ಮೊಬೈಲ್‌ ಕದಿಯುತ್ತಿದ್ದ ಖದೀಮರ ಬಂಧನ

ಬೆಂಗಳೂರು: ಬಿಎಂಟಿಸಿ ಬಸ್‌ಗಳ ಪ್ರಯಾಣಿಕರನ್ನೇ ಟಾರ್ಗೆಟ್‌ ಮಾಡಿ ಕೊಂಡು ಮೊಬೈಲ್‌ ಸುಲಿಗೆ ಮಾಡು ತ್ತಿದ್ದ ಆಂಧ್ರಪ್ರದೇಶ ಮೂಲದ ಮೂವರು ಆರೋಪಿಗಳನ್ನು ಉಪ್ಪಾರಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶದ ಕರ್ನೂಲ್‌ ಜಿಲ್ಲೆಯ ನಾಗನೂರಿ ಕುಮಾರ್‌ (23), ಅನಂತಪುರ ಜಿಲ್ಲೆಯ ಪರಶುರಾಮ್‌ ಅಲಿಯಾಸ್‌ ಅಭಿ(21) ಮತ್ತು ಬಾಲಕ ನೊಬ್ಬನನ್ನು ಬಂಧಿಸಲಾಗಿದೆ. ಆರೋಪಿಗಳಿಂದ 22.40 ಲಕ್ಷ ರೂ. ಮೌಲ್ಯದ 176 ಮೊಬೈಲ್‌ಗ‌ಳು ಮತ್ತು 1 ಕಾರು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.

ಆರೋಪಿಗಳು ಆಂಧ್ರಪ್ರದೇಶದಿಂದ ಕಾರಿನಲ್ಲಿ ನಗರದ ಹೊರವಲಯಕ್ಕೆ ಬರುತ್ತಿದ್ದರು. ಬಳಿಕ ಬಿಎಂಟಿಸಿ ಬಸ್‌ ಗಳಲ್ಲಿ ಪ್ರಯಾಣಿಕರ ಸೋಗಿನಲ್ಲಿ ಸಂಚರಿಸುತ್ತಿದ್ದರು. ಈ ವೇಳೆ ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಅವರ ಜೇಬಿನಲ್ಲಿದ್ದ ಮೊಬೈಲ್‌ ಕದ್ದು ಪರಾರಿಯಾಗುತ್ತಿದ್ದರು. ಅದಕ್ಕಾಗಿ ಮೆಜೆಸ್ಟಿಕ್‌ ಹಾಗೂ ಹೆಚ್ಚು ಪ್ರಯಾಣಿಕರು ಇರುವ ಬಿಎಂಟಿಸಿ ಬಸ್‌ ಗಳು ಹಾಗೂ ನಿಲ್ದಾಣಗಳನ್ನು ಆಯ್ಕೆ ಮಾಡಿಕೊಂಡು ಕೃತ್ಯ ಎಸಗುತ್ತಿದ್ದರು ಎಂಬುದು ಗೊತ್ತಾಗಿದೆ.

ಇತ್ತೀಚೆಗೆ ಶಿವಮೊಗ್ಗದಿಂದ ರೈಲಿನಲ್ಲಿ ಮೆಜೆಸ್ಟಿಕ್‌ಗೆ ಬಂದು, ಬಳಿಕ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರ ಮೊಬೈಲ್‌ ಸುಲಿಗೆ ಮಾಡಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.

ಬಂಧಿತರು ಕಳವು ಮಾಡಿದ ಮೊಬೈಲ್‌ ಗಳನ್ನು ಆಂಧ್ರಪ್ರದೇಶಕ್ಕೆ ಕೊಂಡೊಯ್ದು, ಫ್ಲ್ಯಾಶ್‌ ಮಾಡಿಸಿ ಕಡಿಮೆ ಮೊತ್ತಕ್ಕೆ ಮಾರಾಟ ಮಾಡುತ್ತಿದ್ದರು.

 

ಟಾಪ್ ನ್ಯೂಸ್

ಜೀವಕ್ಕೆ ಮುಳುವಾದ Selfie… ಸಂಬಂಧಿಕರು, ಸ್ನೇಹಿತರ ಎದುರೇ ಜೀವ ಕಳೆದುಕೊಂಡ ಯುವಕ

ಜೀವಕ್ಕೆ ಮುಳುವಾದ Selfie… ಸಂಬಂಧಿಕರು, ಸ್ನೇಹಿತರ ಎದುರೇ ಜೀವ ಕಳೆದುಕೊಂಡ ಯುವಕ

Bharjari Bachelors Show:ʼಬ್ಯಾಚುಲರ್ಸ್’ ಬದುಕಿಗೆ ಬಣ್ಣ ತುಂಬಲು ಬಂದ ಕ್ರೇಜಿ ಸ್ಟಾರ್

Bharjari Bachelors Show: ʼಬ್ಯಾಚುಲರ್ಸ್’ ಬದುಕಿಗೆ ಬಣ್ಣ ತುಂಬಲು ಬಂದ ಕ್ರೇಜಿ ಸ್ಟಾರ್

Raichur: ಎರಡನೇ ತರಗತಿ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪಿಯ ಬಂಧನ

Raichur: ಎರಡನೇ ತರಗತಿ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪಿಯ ಬಂಧನ

Kambala: ಪ್ರಥಮ ಶಿವಮೊಗ್ಗ ಕಂಬಳಕ್ಕೆ ಸರ್ವ ಸಿದ್ದತೆ: ಮಾಹಿತಿ ನೀಡಿದ ಈಶ್ವರಪ್ಪ

Kambala: ಪ್ರಥಮ ಶಿವಮೊಗ್ಗ ಕಂಬಳಕ್ಕೆ ಸರ್ವ ಸಿದ್ದತೆ: ಮಾಹಿತಿ ನೀಡಿದ ಈಶ್ವರಪ್ಪ

12-thirthahalli

Thirthahalli: ಮಂಗಳದ ಪಾರಂಪರಿಕ ವೈದ್ಯ ಶಿವಣ್ಣ ಗೌಡ ಇನ್ನಿಲ್ಲ!

Sringeri: Gun found in Hulagarubailu forest; suspected to have been thrown by Naxalites

Sringeri: ಹುಲಗಾರುಬೈಲು ಅರಣ್ಯದೊಳಗೆ ಬಂದೂಕು ಪತ್ತೆ; ನಕ್ಸಲರು ಎಸೆದಿರುವ ಶಂಕೆ

ind-eb

INDvENG: ಏಕದಿನ ಸರಣಿ ಅರಂಭ; ಟೀಂ ಇಂಡಿಯಾ ಪರ ಇಬ್ಬರು ಪಾದಾರ್ಪಣೆ; ಗಾಯಗೊಂಡ ವಿರಾಟ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijay Mallya: ಬ್ಯಾಂಕ್‌ ಸಾಲ ವಸೂಲಿಗೆ ತಡೆ ಕೋರಿ ಮಲ್ಯ ಅರ್ಜಿ

Vijay Mallya: ಬ್ಯಾಂಕ್‌ ಸಾಲ ವಸೂಲಿಗೆ ತಡೆ ಕೋರಿ ಮಲ್ಯ ಅರ್ಜಿ

Bitcoin: ನಲಪಾಡ್‌ಗೆ ಮತ್ತೆ ಎಸ್‌ಐಟಿ ನೋಟಿಸ್‌

Bitcoin: ನಲಪಾಡ್‌ಗೆ ಮತ್ತೆ ಎಸ್‌ಐಟಿ ನೋಟಿಸ್‌

6

Fraud: ಕುಂಭಮೇಳಕ್ಕೆ ಪ್ಯಾಕೇಜ್‌ ನೆಪದಲ್ಲಿ ವಂಚನೆ

Bengaluru: ಮಗು ನೋಡಲು ಅವಕಾಶ ನೀಡದ್ದಕ್ಕೆ ಪತ್ನಿಯ ಹತ್ಯೆ!

Bengaluru: ಮಗು ನೋಡಲು ಅವಕಾಶ ನೀಡದ್ದಕ್ಕೆ ಪತ್ನಿಯ ಹತ್ಯೆ!

Fake brand: 1.75 ಕೋಟಿ ಮೌಲ್ಯದ ವಸ್ತುಗಳು ಸಿಸಿಬಿ ವಶಕ್ಕೆ

Fake brand: 1.75 ಕೋಟಿ ಮೌಲ್ಯದ ವಸ್ತುಗಳು ಸಿಸಿಬಿ ವಶಕ್ಕೆ

MUST WATCH

udayavani youtube

ಮಹಿಳೆಯರ ಸಣ್ಣ ಉದ್ದಿಮೆಗಳ ಬೆಂಬಲಕ್ಕೆ ‘ ಪವರ್ ಪರ್ಬ’

udayavani youtube

ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದ e ಹಾಗೂ ಡಾ| ವೀರೇಂದ್ರ ಹೆಗ್ಗಡೆ

udayavani youtube

ಧರ್ಮಸ್ಥಳ ಕ್ಷೇತ್ರದಂತೆ ಎಸ್.ಡಿ.ಎಂ ಉಜಿರೆ ವೈದ್ಯಕೀಯ ತಂಡದಿಂದ ನಡೆಯಿತೇ ಪವಾಡ

udayavani youtube

ಬದನೆ ಕೃಷಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

udayavani youtube

ಅಲ್ಲಲ್ಲಿ ನಡೆಯುತ್ತಿರುವ ಗೋ ಹಿಂಸೆ ಖಂಡಿಸುತ್ತೇವೆ :ಪೇಜಾವರ ಶ್ರೀ

ಹೊಸ ಸೇರ್ಪಡೆ

ಜೀವಕ್ಕೆ ಮುಳುವಾದ Selfie… ಸಂಬಂಧಿಕರು, ಸ್ನೇಹಿತರ ಎದುರೇ ಜೀವ ಕಳೆದುಕೊಂಡ ಯುವಕ

ಜೀವಕ್ಕೆ ಮುಳುವಾದ Selfie… ಸಂಬಂಧಿಕರು, ಸ್ನೇಹಿತರ ಎದುರೇ ಜೀವ ಕಳೆದುಕೊಂಡ ಯುವಕ

9

Kota: ಪಾರಂಪಳ್ಳಿ ಸೇತುವೆ ಕಾಮಗಾರಿ ಆರಂಭ

Bharjari Bachelors Show:ʼಬ್ಯಾಚುಲರ್ಸ್’ ಬದುಕಿಗೆ ಬಣ್ಣ ತುಂಬಲು ಬಂದ ಕ್ರೇಜಿ ಸ್ಟಾರ್

Bharjari Bachelors Show: ʼಬ್ಯಾಚುಲರ್ಸ್’ ಬದುಕಿಗೆ ಬಣ್ಣ ತುಂಬಲು ಬಂದ ಕ್ರೇಜಿ ಸ್ಟಾರ್

Raichur: ಎರಡನೇ ತರಗತಿ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪಿಯ ಬಂಧನ

Raichur: ಎರಡನೇ ತರಗತಿ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪಿಯ ಬಂಧನ

8

Mangaluru: ಅಪಾಯಕ್ಕೆ ಆಹ್ವಾನ ನೀಡುತ್ತಿದೆ ಕೇಬಲ್‌ ಛೇಂಬರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.