![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Mar 13, 2024, 9:39 AM IST
ಬೆಂಗಳೂರು: ನಾಯಿ ಬೊಗಳಿದ್ದಕ್ಕೆ ಮಾಲೀಕನ ಮೇಲೆ ಹಲ್ಲೆ ನಡೆಸಿದ್ದಲ್ಲದೇ ಅವರ ಮಗಳನ್ನು ಎಳೆದಾಡಿದ್ದ ಬಿಹಾರ ಮೂಲದ ಆರೋಪಿಯನ್ನು ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಪಟ್ಟೇಗಾರ ಪಾಳ್ಯದ ನಿವಾಸಿ ಬಿಹಾರ ಮೂಲದ ಶಂಕರ್ ಬಂಧಿತ ಆರೋಪಿ. ಟೈಲ್ಸ್ ಹಾಕುವ ಕೆಲಸಮಾಡಿಕೊಂಡಿದ್ದ ಆರೋಪಿ ಶಂಕರ್ ಮಾ.7 ರಂದು ರಾತ್ರಿ 10.30ರಲ್ಲಿ ತನ್ನ ಸ್ನೇಹಿತರನ್ನು ಕರೆದುಕೊಂಡು ತನ್ನ ಮನೆ ಬಳಿ ಬಂದಿದ್ದ. ಆ ಸಂದರ್ಭದಲ್ಲಿ ಪಕ್ಕದ ಮನೆಯ ನಾಯಿ ಬೊಗಳುತ್ತಿದ್ದಾಗ, ಶಂಕರ್ ಹಾಗೂ ಸ್ನೇಹಿತರು ನಾಯಿ ಮೇಲೆ ಹಲ್ಲೆ ನಡೆಸಿ ಜಗಳ ಮಾಡುತ್ತಿದ್ದರು. ನಾಯಿ ಸಾಕಿದ್ದ ಮನೆ ಮಾಲೀಕರು ಹೊರಗೆ ಬಂದು ಈ ಬಗ್ಗೆ ಪ್ರಶ್ನಿಸಿದಾಗ, ಆರೋಪಿಗಳು ಮಾಲೀಕರ ಮೇಲೆಯೇ ಹಲ್ಲೆ ನಡೆಸಿದ್ದಾರೆ. 2ನೇ ವರ್ಷದ ಬಿ.ಕಾಂ ಓದುತ್ತಿರುವ 20 ವರ್ಷದ ಮನೆ ಮಾಲೀಕರ ಮಗಳು ಅಪ್ಪನ ರಕ್ಷಣೆಗೆ ಬಂದಾಗ, ಆರೋಪಿಗಳ ಗುಂಪು ಆಕೆಯನ್ನೂ ಹಿಡಿದು ಎಳೆದಾಡಿದೆ.
ಇದನ್ನು ಸೆರೆಹಿಡಿದಿದ್ದ ವಿದ್ಯಾರ್ಥಿನಿ ಮಹಿಳಾ ಆಯೋಗದ ಅಧ್ಯಕ್ಷರಿಗೆ ವಿಡಿಯೋ ಕಳುಹಿಸಿ, ನ್ಯಾಯ ಕೊಡಿಸುವಂತೆ ಕೋರಿಕೊಂಡಿದ್ದಳು. ವಿಚಾರ ತಿಳಿದು ಕಾಮಾಕ್ಷಿ ಪಾಳ್ಯ ಠಾಣೆ ಪೊಲೀಸರು ಆರೋಪಿ ಶಂಕರ್ನನ್ನು ಬಂಧಿಸಿ ಕ್ರಮ ಕೈಗೊಂಡಿದ್ದಾರೆ.
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.