ಕಲಾವಿದರಲ್ಲಿ ಸಮುದಾಯ ಪ್ರಜ್ಞೆಗೆ ಆದ್ಯತೆ
Team Udayavani, May 13, 2017, 11:20 AM IST
ಬೆಂಗಳೂರು: ಯುವ ಕಲಾವಿದರಲ್ಲಿ ಸಮುದಾಯ ಪ್ರಜ್ಞೆ ಬೆಳೆಸಲು ಆದ್ಯತೆ ನೀಡಲಾಗಿದೆ ಎಂದು ಲಲಿತಕಲಾ ಅಕಾಡೆಮಿ ಅಧ್ಯಕ್ಷ ಡಾ.ಎಂ.ಎಸ್.ಮೂರ್ತಿ ಹೇಳಿದರು. ನಗರದ ಜೆ.ಸಿ.ರಸ್ತೆಯ ಕನ್ನಡಭವನದ ವರ್ಣ ಆರ್ಟ್ ಗ್ಯಾಲರಿಯಲ್ಲಿ ಶುಕ್ರವಾರ ಲಲಿತಕಲಾ ಅಕಾಡೆಮಿ ಹಮ್ಮಿಕೊಂಡಿದ್ದ ಗ್ರಾಫಿಕ್ ಕಲಾಕಮ್ಮಟದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, “ಕಲಾವಿದರು ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಅಕಾಡೆಮಿ ಕಮ್ಮಟಗಳನ್ನು ಆಯೋಜಿಸಿದೆ,’ ಎಂದು ತಿಳಿಸಿದರು.
“ಮರದಚ್ಚು ಕಲೆಯು ಹಳೆ ಸಾಂಪ್ರದಾಯಿಕ ಕಲೆಯಾಗಿದ್ದು, ಇದೇ ಮೊದಲ ಬಾರಿಗೆ ಅಕಾಡೆಮಿ ಈ ಕಮ್ಮಟ ಆಯೋಜಿಸಿತ್ತು. ರಾಜ್ಯದ ಸುಮಾರು 43 ಹಿರಿ-ಕಿರಿಯ ಕಲಾವಿದರು ಇದರಲ್ಲಿ ಪಾಲ್ಗೊಂಡಿದ್ದರು. ಅಲ್ಲದೇ ಸುಮಾರು 43 ಕಲಾಕೃತಿಗಳನ್ನು ಮರದಚ್ಚು ಕಲೆಯಿಂದಲೇ ರಚಿಸಿರುವುದು ವಿಶೇಷ,’ ಎಂದು ಹೇಳಿದರು.
“ಅಕಾಡೆಮಿ ವತಿಯಿಂದ ಮೊದಲ ಹಂತದಲ್ಲಿ ಗ್ರಾಫಿಕ್ ಮರದಚ್ಚು ಕಲಾ ಕಮ್ಮಟ ಪ್ರಾರಂಭಿಸಲಾಗಿದ್ದು, ನಂತದ ದಿನಗಳಲ್ಲಿ ಪ್ರಿಂಟಿಂಗ್ ಗ್ರಾಫಿಕ್ ಕಲಾ ಕಮ್ಮಟ ಆಯೋಜಿಸಲಾಗುವುದು. ಶೀಘ್ರವೇ ಕಲಾಗ್ರಾಮದಲ್ಲಿ ಗ್ರಾಫಿಕ್ ಸ್ಟುಡಿಯೋ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಇಲಾಖೆ ಕ್ರಮಕೈಗೊಳ್ಳಲಿದೆ,’ ಎಂದು ತಿಳಿಸಿದರು.
ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ವೆಂಕಟಾಚಲಪತಿ ಮಾತನಾಡಿ, “ಮುದ್ರಣ ಕಲೆಯಾಗಿ ಆರಂಭಗೊಂಡು ನಂತರದಲ್ಲಿ ವಿವಿಧ ತಂತ್ರವಿಧಾನಗಳಿಂದ ಮತ್ತು ಕಲಾವಿದನ ಸೃಜನಶೀಲ ಅಭಿವ್ಯಕ್ತಿಯಿಂದ ಪ್ರಸ್ತುತ ಗ್ರಾಫಿಕ್ ಕಲೆಯಾಗಿ ಅಭಿವೃದ್ಧಿಗೊಂಡಿದೆ. ರಾಜ್ಯದಲ್ಲೂ ಅನೇಕ ಸೃಜನಶೀಲ ಕಲಾವಿದರು ಗ್ರಾಫಿಕ್ ಮಾಧ್ಯಮದಲ್ಲಿ ಕಲಾಕೃತಿ ರಚಿಸುತ್ತಿದ್ದಾರೆ.
ಲಲಿತ ಕಲಾ ಅಕಾಡೆಮಿಯು ಅಗಿಂದ್ದಾಗ್ಗೆ ಗ್ರಾಫಿಕ್ ಕಲೆಯ ಬಗ್ಗೆ ಕಲಾವಿದರಿಗೆ ಅರಿವು ಮೂಡಿಸುವ ಕಾರ್ಯ ನಡೆಸುತ್ತಿರುವುದು ಶ್ಲಾಘನೀಯ,’ ಎಂದು ಹೇಳಿದರು. ಕಮ್ಮಟದ ಸಂಪನ್ಮೂಲ ಕಲಾವಿದ ಡಾ.ಶ್ರೀಧರಮೂರ್ತಿ ಮಾತನಾಡಿ, “ರಾಜ್ಯದ ಗ್ರಾಮೀಣ ವಿಭಾಗದ ವಿದ್ಯಾರ್ಥಿಗಳು ಗ್ರಾಫಿಕ್ ಕಲಾ ತಂತ್ರಜ್ಞಾನದಿಂದ ಅವಕಾಶ ವಂಚಿತರಾಗುತ್ತಿದ್ದಾರೆ. ಗ್ರಾಫಿಕ್ ವಿಭಾಗದ ಶಾಲೆಗಳು ಅಲ್ಲಿ ಇರುವುದಿಲ್ಲ. ಲಲಿತ ಕಲಾ ಅಕಾಡೆಮಿಯ ಈ ಕಮ್ಮಟ ಹೊಸ ಅನುಭವ ನೀಡಿದೆ.
ಯಂತ್ರಗಳ ಅವಶ್ಯಕತೆ ಇಲ್ಲದ ಇದೊಂದು ಸರಳ ಮಾಧ್ಯಮ. ಶಿಬಿರದ ನಂತರ ಮನೆಯಲ್ಲಿಯೇ ಮರದಚ್ಚು ಕಲೆಯ ಈ ಬುಡಕಟ್ಟು ಮಾಧ್ಯಮವನ್ನು ಅಭ್ಯಾಸ ಮಾಡಲು ಅನುಕೂಲ,’ ಎಂದರು. ಸಮಾರಂಭದಲ್ಲಿ ಕಮ್ಮಟದ ಸಂಪನ್ಮೂಲ ಕಲಾವಿದ ಚಂದ್ರಹಾಸ ವೈ.ಜಾಲಿಹಾಳ, ಅಕಾಡೆಮಿ ರಿಜಿಸ್ಟ್ರಾರ್ ಎಚ್.ವಿ.ಇಂದ್ರಮ್ಮ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal Hospitals; ಹಿರಿಯ ನಾಗರಿಕರಿಗೆ ಆಲ್ಝೈಮರ್ಸ್ ಕಾಯಿಲೆಯ ಕುರಿತು ತಜ್ಞರೊಂದಿಗೆ ಚರ್ಚೆ
Bengaluru: ಮಕ್ಕಳಲ್ಲಿ ವಿಜ್ಞಾನ ಆಸಕ್ತಿ ಮೂಡಿಸಲು “ಸೈನ್ಸ್ ಬಸ್’
Bengaluru: ಸಾಲ ತೀರಿಸಲು ಸರ ಕದಿಯುತ್ತಿದ್ದ ಇಬ್ಬರ ಬಂಧನ
Bengaluru: ಇಬ್ಬರು ಡ್ರಗ್ಸ್ ಪೆಡ್ಲರ್ ಸೆರೆ: 51 ಕೆ.ಜಿ. ಗಾಂಜಾ ಜಪ್ತಿ
Bengaluru: ಮೋಜಿನ ಜೀವನಕ್ಕೆ ಸರ ಕದೀತಿದ್ದ ಯುವಕನ ಸೆರೆ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Rescue: ಉತ್ತರ ಭಾರತದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಉಡುಪಿಯ ತಂಡಕ್ಕೆ ಸಂಸದ ಕೋಟ ಸಹಾಯ
leak: ಎಸೆಸೆಲ್ಸಿಪರೀಕ್ಷೆ ದಿನ ಬೆಳಗ್ಗೆ 6ಕ್ಕೆ ಶಿಕ್ಷಕರಿಗೆ ಸಿಗಲಿದೆ ಪ್ರಶ್ನೆಪತ್ರಿಕೆ
Daily Horoscope: ಅನವಶ್ಯ ಮಾತುಗಳಿಂದ ದೂರವಿರಿ, ಉದ್ಯೋಗಸ್ಥರ ಸಮಸ್ಯೆ ನಿವಾರಣೆ
KSOU: ಪರೀಕ್ಷೆ ಸಮೀಪಿಸುತ್ತಿದ್ದರೂ ಮುದ್ರಿತ ಪಠ್ಯ ಸಿಗಲಿಲ್ಲ
Israel ಸರ್ಜಿಕಲ್ ಸ್ಟ್ರೈಕ್: ಹೆಜ್ಬುಲ್ಲಾ ಮುಖ್ಯಸ್ಥನ ಅಂತ್ಯಕ್ಕೆ 80 ಟನ್ ಬಾಂಬ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.