![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Sep 21, 2023, 12:35 PM IST
ಬೆಂಗಳೂರು: ಮಗಳ ಬಗ್ಗೆ ಅವಾಚ್ಯ ಶಬ್ದಗಳಿಂದ ಮಾತನಾಡಿದ್ದಕ್ಕೆ ಆಕ್ರೋಶಗೊಂಡು ಸ್ನೇಹಿತನಿಗೆ ಥರ್ಮೋಪ್ಲಾಸ್ಕ್ನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ ಆರೋಪಿಯನ್ನು ಕಾಡುಗೋಡಿ ಪೊಲೀಸರು ಬಂಧಿಸಿದ್ದಾರೆ.
ನೇಪಾಳ ಮೂಲದ ಸೀಗೆಹಳ್ಳಿ ನಿವಾಸಿ ಪ್ರೇಮ್ ರಾಜ್ ಉಪಾಧ್ಯಾಯ (40) ಕೊಲೆಯಾದವ. ಧರ್ಮೇಂದ್ರ ಸಿಂಗ್ (40) ಬಂಧಿತ.
ಪ್ರೇಮ್ ರಾಜ್ ಉಪಾಧ್ಯಾಯ ಹೋಟೆಲ್ವೊಂದರಲ್ಲಿ ಕೆಲಸಕ್ಕಿದ್ದ. ಆತನ ಮನೆ ಸಮೀಪದಲ್ಲಿ ಧರ್ಮೇಂದ್ರ ಸಿಂಗ್ ಸಹ ವಾಸಿಸುತ್ತಿದ್ದ. ಬುಧವಾರ ಬೆಳಗ್ಗೆ ಬಾರ್ವೊಂದಕ್ಕೆ ತೆರಳಿದ್ದ ಇಬ್ಬರು ಕುಡಿದಿದ್ದರು. ಮನೆಗೆ ಬಂದ ಬಳಿಕ ಧಮೇಂದ್ರ ಸಿಂಗ್ನ ಮಗಳ ಬಗ್ಗೆ ಪ್ರೇಮ್ ರಾಜ್ ಕುಡಿದ ಅಮಲಿನಲ್ಲಿ ಅವಾಚ್ಯ ಶಬ್ದಗಳಿಂದ ಮಾತನಾಡಿದ್ದ. ಇದರಿಂದ ಆಕ್ರೋಶಗೊಂಡ ಧರ್ಮೇಂದ್ರ ಸಿಂಗ್ ಥರ್ಮೋಪ್ಲಾಸ್ಕ್ನಿಂದ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದ್ದ. ಸಂಜೆ ವೇಳೆ ತನ್ನ ಆಪ್ತನೊಬ್ಬನಿಗೆ ನಡೆದ ಸಂಗತಿ ವಿವರಿಸಿದ್ದ. ಪ್ರೇಮ್ ರಾಜ್ ಶವ ಸಾಗಿಸಲು ಸಹಾಯ ಮಾಡುವಂತೆ ಕೋರಿ ಇದಕ್ಕೆ 10 ಸಾವಿರ ರೂ. ಕೊಡುವುದಾಗಿ ಹೇಳಿದ್ದ. ಆದರೆ, ಧರ್ಮೇಂದ್ರ ಸಿಂಗ್ ಆಪ್ತ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಕಾಡುಗೋಡಿ ಪೊಲೀಸರು ಸ್ಥಳಕ್ಕೆ ಧಾವಿಸಿ ಧರ್ಮೇಂದ್ರ ಸಿಂಗ್ನನ್ನು ಬಂಧಿಸಿದ್ದಾರೆ.
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.