Crime news: ಪುತ್ರಿ ನಿಂದಿಸಿದ ಸ್ನೇಹಿತನ ಹತ್ಯೆ
Team Udayavani, Sep 21, 2023, 12:35 PM IST
ಬೆಂಗಳೂರು: ಮಗಳ ಬಗ್ಗೆ ಅವಾಚ್ಯ ಶಬ್ದಗಳಿಂದ ಮಾತನಾಡಿದ್ದಕ್ಕೆ ಆಕ್ರೋಶಗೊಂಡು ಸ್ನೇಹಿತನಿಗೆ ಥರ್ಮೋಪ್ಲಾಸ್ಕ್ನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ ಆರೋಪಿಯನ್ನು ಕಾಡುಗೋಡಿ ಪೊಲೀಸರು ಬಂಧಿಸಿದ್ದಾರೆ.
ನೇಪಾಳ ಮೂಲದ ಸೀಗೆಹಳ್ಳಿ ನಿವಾಸಿ ಪ್ರೇಮ್ ರಾಜ್ ಉಪಾಧ್ಯಾಯ (40) ಕೊಲೆಯಾದವ. ಧರ್ಮೇಂದ್ರ ಸಿಂಗ್ (40) ಬಂಧಿತ.
ಪ್ರೇಮ್ ರಾಜ್ ಉಪಾಧ್ಯಾಯ ಹೋಟೆಲ್ವೊಂದರಲ್ಲಿ ಕೆಲಸಕ್ಕಿದ್ದ. ಆತನ ಮನೆ ಸಮೀಪದಲ್ಲಿ ಧರ್ಮೇಂದ್ರ ಸಿಂಗ್ ಸಹ ವಾಸಿಸುತ್ತಿದ್ದ. ಬುಧವಾರ ಬೆಳಗ್ಗೆ ಬಾರ್ವೊಂದಕ್ಕೆ ತೆರಳಿದ್ದ ಇಬ್ಬರು ಕುಡಿದಿದ್ದರು. ಮನೆಗೆ ಬಂದ ಬಳಿಕ ಧಮೇಂದ್ರ ಸಿಂಗ್ನ ಮಗಳ ಬಗ್ಗೆ ಪ್ರೇಮ್ ರಾಜ್ ಕುಡಿದ ಅಮಲಿನಲ್ಲಿ ಅವಾಚ್ಯ ಶಬ್ದಗಳಿಂದ ಮಾತನಾಡಿದ್ದ. ಇದರಿಂದ ಆಕ್ರೋಶಗೊಂಡ ಧರ್ಮೇಂದ್ರ ಸಿಂಗ್ ಥರ್ಮೋಪ್ಲಾಸ್ಕ್ನಿಂದ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದ್ದ. ಸಂಜೆ ವೇಳೆ ತನ್ನ ಆಪ್ತನೊಬ್ಬನಿಗೆ ನಡೆದ ಸಂಗತಿ ವಿವರಿಸಿದ್ದ. ಪ್ರೇಮ್ ರಾಜ್ ಶವ ಸಾಗಿಸಲು ಸಹಾಯ ಮಾಡುವಂತೆ ಕೋರಿ ಇದಕ್ಕೆ 10 ಸಾವಿರ ರೂ. ಕೊಡುವುದಾಗಿ ಹೇಳಿದ್ದ. ಆದರೆ, ಧರ್ಮೇಂದ್ರ ಸಿಂಗ್ ಆಪ್ತ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಕಾಡುಗೋಡಿ ಪೊಲೀಸರು ಸ್ಥಳಕ್ಕೆ ಧಾವಿಸಿ ಧರ್ಮೇಂದ್ರ ಸಿಂಗ್ನನ್ನು ಬಂಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Potholes: ಮೆಜೆಸ್ಟಿಕ್ ಬಸ್ ನಿಲ್ದಾಣದ ರಸ್ತೆಗಳಲ್ಲಿ ದೊಡ್ಡ ಗುಂಡಿಗಳು
Arrested: ವಿದ್ಯಾರ್ಥಿನಿಗೆ ಮುತ್ತು ನೀಡಿದ್ದ ಸೆಕ್ಯುರಿಟಿ ಗಾರ್ಡ್ ಬಂಧನ
Bengaluru: ಪತ್ನಿ, ಪ್ರಿಯಕರನ ಖಾಸಗಿ ವಿಡಿಯೋ ಇಟ್ಟುಕೊಂಡು ಬೆದರಿಸಿದ ಗಂಡ!
Bengaluru: ದುಷ್ಕರ್ಮಿಗಳಿಂದ ಬಸ್ ಡ್ರೈವರ್, ಕಂಡಕ್ಟರ್ಗೆ ಥಳಿತ!
Bengaluru: ಹಲ್ಲೆ ನಡೆದರೆ ಪೌರ ಕಾರ್ಮಿಕರು ತಕ್ಷಣವೇ ದೂರು ನೀಡಿ: ಕಮಿಷನರ್
MUST WATCH
ಹೊಸ ಸೇರ್ಪಡೆ
BBK11: 11 ವರ್ಷದ ಬಿಗ್ಬಾಸ್ ಜರ್ನಿಯಲ್ಲಿ ಕಿಚ್ಚ ಗೈರಾಗಿದ್ದು ಎಷ್ಟು ಸಲಿ ಮತ್ತು ಯಾಕೆ?
ಸಲ್ಮಾನ್ ವಿಷಯದಿಂದ ದೂರವಿರಿ… ಬಿಷ್ಣೋಯ್ ಗ್ಯಾಂಗ್ ನಿಂದ ಬಿಹಾರ ಸಂಸದನಿಗೆ ಬೆದರಿಕೆ
Railways’ ವಾರ್ಷಿಕ ಆದಾಯ ಎಷ್ಟು ಗೊತ್ತಾ?2023-24ನೇ ಸಾಲಿನ ಪ್ರಯಾಣಿಕರ ಸಂಖ್ಯೆ 648 ಕೋಟಿ!
Kaup ಕೊಳಚೆ ಮುಕ್ತಿಗೆ ಸರ್ವರ ಸಹಕಾರ
Mallikatte: ಸಿಟಿ ಆಸ್ಪತ್ರೆ ಜಂಕ್ಷನ್; ರಸ್ತೆ ಕಾಂಕ್ರೀಟ್ ಕಾಮಗಾರಿ ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.