ಲಸಿಕೆ ವಿತರಣೆಯಲ್ಲಿ ಬಿಬಿಎಂಪಿ ಹಿಂದೆ!


Team Udayavani, Jan 23, 2022, 1:19 PM IST

ಲಸಿಕೆ ವಿತರಣೆಯಲ್ಲಿ ಬಿಬಿಎಂಪಿ ಹಿಂದೆ!

ಬೆಂಗಳೂರು: ರಾಜ್ಯದಲ್ಲಿ ಮೊದಲೆರಡೂ ಕೋವಿಡ್‌ ಲಸಿಕೆಗಳನ್ನು ಶೇ. 100ರಷ್ಟು ಪೂರ್ಣಗೊಳಿಸಿದ ಪ್ರಥಮ ಜಿಲ್ಲೆ ಬೆಂಗಳೂರು ನಗರ. ಈ ಸಾಧನೆಗೆ ಶನಿವಾರಕ್ಕೆ ಒಂದು ತಿಂಗಳಾಗಿದೆ. ಆದರೆ,ಇದಕ್ಕೆ ಹೊಂದಿಕೊಂಡೇ ಇರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪ್ರದರ್ಶನ ಮಾತ್ರ ಅತ್ಯಂತ ನೀರಸವಾಗಿದ್ದು, ಲಸಿಕೆ ವಿತರಣೆಯಲ್ಲಿ 19ನೇ ಸ್ಥಾನದಲ್ಲಿದೆ!

ರಾಜ್ಯದಲ್ಲಿ ಕೋವಿಡ್‌ ನಿಯಂತ್ರಣಕ್ಕೆ ನೀಡಲಾಗು ತ್ತಿರುವ ಎರಡೂ ಲಸಿಕೆಗಳನ್ನು ಪೂರೈಸಿದ ಜಿಲ್ಲೆಗಳ ಪಟ್ಟಿಯಲ್ಲಿ ಬೆಂಗಳೂರು ರಾಜ್ಯದ ಸರಾಸರಿ ಗಿಂತ ತುಂಬಾ ಕಡಿಮೆ ಇದ್ದು, 19ನೇ ಸ್ಥಾನಕ್ಕೆ ಕುಸಿದಿದೆ. ಹಿಂದುಳಿದ ಜಿಲ್ಲೆಗಳಿಗಿಂತ ಪ್ರದರ್ಶನಕಳಪೆಯಾಗಿದೆ. ಇದು ಸರ್ಕಾರ ಮತ್ತು ಅಧಿಕಾರಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಕೋಲಾರ, ಚಾಮರಾಜನಗರ, ತುಮಕೂರು, ವಿಜಯಪುರ, ಬೀದರ್‌, ಬಾಗಲಕೋಟೆ ಮತ್ತಿತರ ಜಿಲ್ಲೆಗಳು ಕೂಡ ಲಸಿಕೆ ಪಡೆಯುವಲ್ಲಿ ರಾಜಧಾನಿ ಬೆಂಗಳೂರನ್ನು ಹಿಂದಿಕ್ಕಿವೆ. ಕೊಡಗು ಎರಡನೇ ಡೋಸ್‌ ಅನ್ನು ಶೇ. 96-97ರಷ್ಟು ಪ್ರಗತಿ ಸಾಧಿಸುವಮೂಲಕ ಮೊದಲ ಸ್ಥಾನದಲ್ಲಿದೆ. ವಿಚಿತ್ರವೆಂದರೆ ಕೊರೊನಾ ಮೂರನೇ ಅಲೆಯಲ್ಲಿ ಪತ್ತೆಯಾಗುತ್ತಿರುವ ಸೋಂಕು ಪ್ರಕರಣಗಳ ಪೈಕಿ ಶೇ.50-60ರಷ್ಟು ನಗರದಲ್ಲೇ ಕಂಡುಬರುತ್ತಿವೆ. ಆದರೂ ಅತಿ ಹೆಚ್ಚು ಸುಶಿಕ್ಷಿತರು ಮತ್ತು ಐಟಿಹಬ್‌ ಎನಿಸಿಕೊಂಡಿರುವ ಸಿಲಿಕಾನ್‌ ಸಿಟಿ ಲಸಿಕೆ ವಿಚಾರ ದಲ್ಲಿ ಉದಾಸೀನ ತೋರುತ್ತಿರುವುದು ಕಂಡು ಬಂದಿದೆ.

ಈ ಹಿನ್ನೆಲೆಯಲ್ಲಿ ಮತ್ತಷ್ಟು ತಂಡಗಳನ್ನು ಹೆಚ್ಚಿಸಿ, ಪರಿಣಾಮಕಾರಿಯಾಗಿಲಸಿಕಾಕರಣಕ್ಕೆ ಬಿಬಿಎಂಪಿ ಮುಂದಾಗಿದೆ. ಮೊದಲ ಡೋಸ್‌ನಲ್ಲಿ ಬೆಂಗಳೂರು ಶೇ.98ರಷ್ಟು ಪ್ರಗತಿ ಸಾಧಿಸಿದ್ದರೆ, ಎರಡನೇ ಡೋಸ್‌ನಲ್ಲಿಶೇ. 83-84ರಷ್ಟು ಜನ ಮಾತ್ರ ಲಸಿಕೆ ಪಡೆದಿದ್ದಾರೆ.ಇನ್ನೂ ಶೇ. 15-16ರಷ್ಟು ಜನ ಹಲವು ಕಾರಣಗಳಿಂದ ದೂರ ಉಳಿದಿದ್ದಾರೆ. ಒಟ್ಟಾರೆಎಂಟು ವಲಯಗಳಲ್ಲಿ ಎರಡೂ ಡೋಸ್‌ಗಳನ್ನುಪೂರ್ಣಗೊಳಿಸಿದ ಏಕೈಕ ವಲಯ ಮಹದೇವಪುರ.ಇಲ್ಲಿ ಶೇ. 108ರಷ್ಟು ಪ್ರಗತಿಸಾಧಿಸಲಾಗಿದೆ. ಇನ್ನು ಅತ್ಯಂತ ಕಳಪೆ ಪ್ರದರ್ಶನ ದಾಸರಹಳ್ಳಿ ಮತ್ತು ಆರ್‌.ಆರ್‌. ನಗರದಲ್ಲಿದ್ದು, ಇಲ್ಲಿ ಎರಡನೇ ಡೋಸ್‌ ಕೇವಲ ಶೇ. 65ರಷ್ಟು ಪೂರ್ಣಗೊಂಡಿದೆ.

ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆನೀಡಲಾಗುತ್ತಿದೆ. ವಾಣಿಜ್ಯ ಸಂಕೀರ್ಣಗಳು ಮತ್ತುಮಾಲ್‌ಗ‌ಳಲ್ಲಿ ಎರಡೂ ಡೋಸ್‌ ಕಡ್ಡಾಯಗೊಳಿಸಲಾಗಿದೆ. ಸರ್ಕಾರಿ ಮತ್ತು ಖಾಸಗಿ ವಲಯಗಳಲ್ಲಿ ವಿವಿಧ ಹಂತಗಳಲ್ಲಿ ಲಸಿಕೆ ಅಭಿಯಾನಹಮ್ಮಿಕೊಳ್ಳಲಾಗುತ್ತಿದೆ. ಇದೆಲ್ಲದರ ನಡುವೆಯೂನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ಇಲ್ಲವಾಗಿದೆ. ಇದಕ್ಕೆಹಲವು ಕಾರಣಗಳಿದ್ದು, ಮುಖ್ಯವಾಗಿ ಲಸಿಕೆಪಡೆದವರು ಬೆಂಗಳೂರು ನಗರದಲ್ಲಿ ಸೇರಿಹೋಗಿದ್ದಾರೆ. ಆದ್ದರಿಂದ ಪಾಲಿಕೆ ಮತ್ತುಬೆಂಗಳೂರು ನಗರ ಜಿಲ್ಲೆಯನ್ನು ವಿಲೀನಗೊಳಿಸಿ,ಒಂದೇ ಎಂದು ಪರಿಗಣಿಸುವಂತೆ ಮುಖ್ಯಮಂತ್ರಿಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲಸಿಕೆ ಇಲ್ಲಿ; ಲೆಕ್ಕ ಅಲ್ಲಿ!: ಪ್ರಮುಖವಾಗಿ ಬೆಂಗಳೂರಿನಲ್ಲಿ ಬಂದು-ಹೋಗುವವರ ಸಂಖ್ಯೆದೊಡ್ಡದು. ಇದರ ನಡುವೆಯೂ 18 ವರ್ಷಮೀರಿದ 97 ಲಕ್ಷ (ಅಂದರೆ 1.82 ಕೋಟಿ ಡೋಸ್‌)ಜನರಿಗೆ ಲಸಿಕೆ ನೀಡುವ ಗುರಿ ಇದೆ. ಈ ಜನಸಂಖ್ಯೆಯು 8-10 ಜಿಲ್ಲೆಗಳ ಒಟ್ಟು ಜನಸಂಖ್ಯೆಆಗಿದೆ. ಈ ಮಧ್ಯೆ ಕೆಲವರು ಪಾಲಿಕೆ ವ್ಯಾಪ್ತಿಯಲ್ಲೇಲಸಿಕೆ ಪಡೆದಿದ್ದರೂ, ಬೆಂಗಳೂರು ನಗರ ಜಿಲ್ಲೆಗೆ ಸೇರ್ಪಡೆಗೊಂಡಿದ್ದಾರೆ. ಉದಾಹರಣೆಗೆ ಮಲ್ಲೇಶ್ವರದ ಸರ್ಕಾರೇತರ ಸಂಸ್ಥೆಯಲ್ಲಿ ಈಚೆಗೆ ಎರಡನೇ ಡೋಸ್‌ ಲಸಿಕೆ ನೀಡಲಾಯಿತು. ಆ ಅಭಿಯಾನ ನಡೆಸಿದವರು ನಾರಾಯಣ ಹೃದಯಾಲಯ.

ಹೀಗಾಗಿ, ಆ ಲಸಿಕೆ ಪಡೆದವರ ಪಟ್ಟಿ ನಗರ ಜಿಲ್ಲೆಗೆ ಸೇರುತ್ತದೆ. ನಿರೀಕ್ಷಿತ ಗುರಿ ತಲುಪಲು ಸಾಧ್ಯವಾಗದಿರುವುದಕ್ಕೆ ಇದು ಕೂಡ ಕಾರಣ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ.ಬಾಲಸುಂದರ್‌ ಸಮಜಾಯಿಷಿ ನೀಡುತ್ತಾರೆ. ಈ ಮಧ್ಯೆ ಬೆಂಗಳೂರು ನಗರ ಮತ್ತು ಬಿಬಿಎಂಪಿ ಯನ್ನು ವಿಲೀನಗೊಳಿಸಿ, ಲಸಿಕೆ ಲೆಕ್ಕ ಹಾಕಲು ಸೂಚಿಸಲಾಗಿದೆ. ಇದರಿಂದ ಬೆಂಗಳೂರು ಟಾಪ್‌ 10ರ ಪಟ್ಟಿಯಲ್ಲಿ ಬರಲಿದೆ. ಶೇಕಡಾವಾರು ಪ್ರಗತಿ ಕೂಡ ಉತ್ತಮವಾಗಲಿದ್ದು, ಉಳಿದದ್ದನ್ನು ನಾಲ್ಕಾರು ದಿನಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಡಾ.ಬಾಲಸುಂದರ್‌ ತಿಳಿಸುತ್ತಾರೆ

-ವಿಜಯಕುಮಾರ ಚಂದರಗಿ

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Instagram provides clues to finding suspect who had been on the run for 9 years

Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್

21-cancer

Bengaluru: ಪ್ರತಿವರ್ಷ 500 ಮಕಳಲ್ಲಿ ಕ್ಯಾನ್ಸರ್‌ ಪತ್ತೆ !

20-metro

Metro: ಮರುಪರಿಷ್ಕರಣೆ: ತಪ್ಪದ ಮೆಟ್ರೋ ದರ ಗೊಂದಲ

19-bng

Bengaluru: 1.84 ಲಕ್ಷ ಬೀದಿ ನಾಯಿಗಳಿಗೆ ಸಂಯುಕ್ತ ಲಸಿಕೆ

18-bng

Bengaluru: ಇಂಧನ, ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.