ಬೆಂಕಿಯಲ್ಲಿ ಬೆಂದ ಬದುಕು: ಮದುವೆ ಮನೆಯ ಸಂತೋಷ ಕಿತ್ತುಕೊಂಡ ಬೆಂಕಿಯ ಕೆನ್ನಾಲಿಗೆ


Team Udayavani, Nov 12, 2020, 2:26 PM IST

ಬೆಂಕಿಯಲ್ಲಿ ಬೆಂದ ಬದುಕು: ಮದುವೆ ಮನೆಯ ಸಂತೋಷ ಕಿತ್ತುಕೊಂಡ ಬೆಂಕಿಯ ಕಿನ್ನಾಲಿಗೆ

ಬೆಂಗಳೂರು: ಹೊಸ ಗುಡ್ಡದಹಳ್ಳಿಯಲ್ಲಿ ನಡೆದ ಬೆಂಕಿ ಅವಘಡದಿಂದ ಕಟ್ಟಡ, ಪೀಠೊಪಕರಣಗಳು, ವಾಹನಗಳು ಮಾತ್ರ ಸುಟ್ಟು ಕರಕಲಾಗಿಲ್ಲ. ಹತ್ತಾರು ಕುಟುಂಬಗಳ ಬದುಕನ್ನೇ ಮೂರಾಬಟ್ಟೆಯಾಗಿಸಿದೆ. ಒಬ್ಬರು ಮನೆ, ಪೀಠೊಪಕರಣಗಳು, ಚಿನ್ನಾಭರಣಗಳನ್ನು ಕಳೆದು ಕೊಂಡರೆ, ಮತ್ತೂಬ್ಬರು ಮಗಳಮದುವೆಗಾಗಿ ತಂದಿಟ್ಟಿದ್ದ ವಸ್ತುಗಳು ಬೆಂಕಿಗಾಹುತಿಯಾಗಿವೆ.

ಇನ್ನೊಬ್ಬರ ಮನೆಯ ಕುಡಿಯುವ ನೀರಿನ ಟ್ಯಾಂಕ್‌ಗಳೇ ಬೆಂಕಿ ತುತ್ತಾಗಿವೆ. ಇನ್ನು ಕೆಲವರು ಮನೆಗಳು ಸಂಪೂರ್ಣ ಸುಟ್ಟುಹೋಗಿವೆ. ಗೋಡನ್‌ನ ಬೆಂಕಿಯ ಕಿನ್ನಾಲಿಗೆ ಮದುವೆ ಮನೆಹಾಗೂ ಕುಟುಂಬ ಸದಸ್ಯರ ಮನಸ್ಸುಗಳನ್ನೇ ಸುಟ್ಟಹಾಕಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಮನೆ ಮಾಲೀಕ ಹಾಗೂ ಫ‌ರ್ನಿಚರ್‌ ತಯಾರಿಕಾ ಕಾರ್ಖಾನೆ ಮಾಲೀಕಮಣಿ, 2003ರಿಂದಲೂಇಲ್ಲಿ ವಾಸ ಮಾಡಿಕೊಂಡಿದ್ದೇನೆ. ಮೂರ ಮನೆಗಳನ್ನು ಭೋಗ್ಯಕ್ಕೆ ನೀಡಲಾಗಿದೆ.

ಮೊದಲಅಂತಸ್ತಿನಲ್ಲಿಫ‌ರ್ನಿ ಚರ್‌ಕುರ್ಚಿಗಳಕಾರ್ಖಾನೆ ಯಿದೆ. ಬೆಂಕಿ ಹೊತ್ತಿಕೊಂಡ ಬಗ್ಗೆ ಮಾಹಿತಿ ಸಿಕ್ಕ ಕೂಡಲೇ ಮನೆಗೆ ಬಂದು ನೋಡಿದಾಗ 3ನೇ ಮಹಡಿಯಲ್ಲಿ ಶೇಖರಿಸಿದ್ದ 400 ಕುರ್ಚಿಗಳು ಸೇರಿ ಪೀಠೊಪಕರಣ ಹಾನಿ ಗೀಡಾಗಿವೆ. ಕಟ್ಟಡದ ಗೋಡೆಗಳು ಬಿರುಕು ಬಿಟ್ಟಿವೆ. ಮನೆಯಲ್ಲಿ ಇದ್ದವರನ್ನು ಅಗ್ನಿಶಾಮಕದಳ ಸಿಬ್ಬಂದಿ ಸ್ಥಳಾಂತರ ಮಾಡಿದರು. ಎರಡನೇ ಮಹಡಿಯ ಮನೆ ಸಂಪೂರ್ಣವಾಗಿ ಸುಟ್ಟು ಹೋಗಿದೆ. ಬುಧವಾರ ನನ್ನ ಮಗಳ ಮದುವೆ ಇತ್ತು. ಅದಕ್ಕಾಗಿ ತಂದಿದ್ದ ಎಲ್ಲ ವಸ್ತುಗಳು ಬೆಂಕಿನುಂಗಿಕೊಂಡಿದೆ. ಆದರೂ ಗಂಡಿನಮನೆಯವರಿಗೆ ಒಪ್ಪಿಸಿ ಸರಳವಾಗಿ ಮದುವೆ ಮಾಡಿಕೊಟ್ಟಿದ್ದೇವೆ. ಮನೆ ಮೇಲ್ಭಾಗದಲ್ಲಿದ್ದ ಕುಡಿಯುವ ನೀರಿನ ಟ್ಯಾಂಕ್‌ಗಳು ಸುಟ್ಟುಹೋಗಿವೆ. ಯಾರೋ ಮಾಡಿದ ತಪ್ಪಿಗೆ ನಾವು ಶಿಕ್ಷೆ ಅನುಭವಿಸಿದ್ದೇವೆ. ಕಣ್ಣೀರಲ್ಲೇ ಮಗಳ ಮದುವೆ ಮಾಡಲಾಗಿದೆ. 18 ಲಕ್ಷ ಲೋನ್‌ ಕಟ್ಟಬೇಕಿದೆ ಈಹಂತದಲ್ಲಿ ದುರಂತ ಸಂಭವಿಸಿರುವುದು ನೋವು ತಂದಿದೆ ಎಂದು ಭಾವಕರಾದರು.

ಹರ್ಷಾ ಎಂಬವರ ಮನೆ ಕೂಡ ಸಂಪೂರ್ಣವಾಗಿ ಸುಟ್ಟು ಹೋಗಿದ್ದು, ಅವರ ವೃತ್ತಿ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ದಾಖಲೆಗಳು ಬೆಂಕಿಯಲ್ಲಿ ಕರಕಲಾಗಿವೆ. “ಮಧ್ಯಾಹ್ನ ಎರಡು ಗಂಟೆಗೆ ಮಾಹಿತಿ ಸಿಕ್ಕಿತ್ತು. ಆಫೀಸ್‌ನಿಂದಕೂಡಲೇಬಂದೆ, ಆದರೆ, ಒಳಗಡೆ ಯಾರನ್ನು ಬಿಡಲಿಲ್ಲ. ರಾತ್ರಿ ಪೂರ್ತಿ ಫ‌ುಟ್‌ಪಾತ್‌ನಲ್ಲಿ ಮಲಗಿದ್ದೆ. ಟಿವಿ, ಫ್ರೀಜ್‌, ಬೀರು ಎಲ್ಲವೂ ಕಳೆದುಕೊಂಡಿದ್ದೇನೆ . ಎಂಟು ವರ್ಷ ಕಷ್ಟಪಟ್ಟು ಸಂಪಾದಿಸಿದ ಹಣದಲ್ಲಿ ಖರೀದಿಸಿದ ವಸ್ತುಗಳು ಕಣ್ಣ ಮುಂದೆಯೇ ಸುಟ್ಟಿವೆ. ಈಗ ಎಂಟು ವರ್ಷಗಳ ಹಿಂದಕ್ಕೆ ಹೋಗಿದ್ದೇವೆ. ಹಣ ಕೂಡ ಇಲ್ಲ. ಆಫೀಸ್‌ನಲ್ಲಿ ಯಾರಾದರೂ ಕೊಟ್ಟರೆ ಬದುಕಬೇಕು ಎಂದು ಹರ್ಷಾ ಕಣ್ಣೀರು ಸುರಿಸಿದರು.

ಬೆಂಕಿಯಲ್ಲಿ ಬೆಂದ 80 ಸಾವಿರ ರೂ.: ಪ್ರಸನ್ನ ಮತ್ತು ಅವರ ಸಹೋದರಿ ಸುನೀತಾ ಅವರ ಮನೆ ಕೂಡ ಬೆಂಕಿಯ ಕಿನ್ನಾಲಿಗೆ ಬಲಿಯಾಗಿದೆ. “ಮನೆಯಲ್ಲಿದ್ದ ದಾಖಲೆಗಳು, ಬಟ್ಟೆಗಳು, ಎಲೆಕ್ಟ್ರಾನಿಕ್‌ ವಸ್ತುಗಳು ಸುಟ್ಟು ಹೋಗಿವೆ. 80 ಸಾವಿರ ರೂ. ನಗದು, ಚಿನ್ನಾಭರಣ, ಟಿವಿ, ಫ್ರೀಜ್‌ ಕಳೆದುಕೊಂಡಿದ್ದೇವೆ. ರಾತ್ರಿ ಮತ್ತೂಬ್ಬ ಸಹೋದರಿ ಮನೆಯಲ್ಲಿ ಮಲಗಿದ್ದೇವು. ಹಾಕಿಕೊಳ್ಳಲು ಬಟ್ಟೆಗಳು ಇಲ್ಲ ಎಂದು ಅಣ್ಣ-ತಂಗಿ ಬೇಸರ ವ್ಯಕ್ತಪಡಿಸಿದರು.

ಇನ್ನು ರಾಜು ಅವರ ಮನೆ ಕೂಡ ಬೆಂಕಿಗೆ ತುತ್ತಾಗಿದೆ.ಬೆಂಕಿಕಾವಿಗೆ ಮನೆಯ ಹಿಂಬದಿಯ ಗೋಡೆ ಬಿರುಕು ಬಿಟ್ಟಿದ್ದು,ಕಿಟಕಿಯ ಗಾಜುಗಳು ಒಡೆದು ವಸ್ತುಗಳು ಸುಟ್ಟು ಹೋಗಿವೆ.

ಪಾರಿವಾಳ ರಕ್ಷಿಸಿದ ಸಿಬ್ಬಂದಿ : ಗೋಡೌನ್‌ ಸಮೀಪದ ಕಟ್ಟಡದಲ್ಲಿ ನಿವಾಸಿಯೊಬ್ಬರು 150ಕ್ಕೂ ಅಧಿಕ ಪಾರಿವಾಳಗಳನ್ನು ಸಾಕಿದ್ದರು. ಆದರೆ,ಕೆಲ ಪಾರಿವಾಳಗಳು ಬೆಂಕಿಗೆ ಬೆಂದು ಹೋಗಿದ್ದವು. ಇನ್ನುಳಿದವು ಪ್ರಾಣ ರಕ್ಷಣೆಗಾಗಿ ಜೋರಾಗಿ ಕೂಗಿಕೊಳ್ಳುತ್ತಿದ್ದವು. ಅದನ್ನುಕಂಡ ಅಗ್ನಿಶಾಮಕ ದಳದ ಅಧಿಕಾರಿ-ಸಿಬ್ಬಂದಿ, ಸುಮಾರು 100ಕ್ಕೂ ಅಧಿಕ ಪಾರಿವಾಳಗಳನ್ನು ರಕ್ಷಿಸಿ ಹಾರಿಸಿದರು.

ರಾಸಾಯನಿಕವಸ್ತುಗಳು :  ಅಸಿಟೋನ್‌, ಮಿಥೈನ್‌ಕ್ಲೋರೈಡ್‌, ಕ್ಲೋರಫಾರಂ, ಆಲ್ಕೋಹಾಲ್‌ಕೆಮಿಕಲ್‌, ಟಿಎಚ್‌ಎಫ್, ಟ್ಯೂನಿ, ಐಎಸ್‌ಒ ಪ್ರೊಪೈಲ್‌ ಆಲ್ಕೋಹಾಲ್‌, ಎಕ್ಸಿನಾ,ಬೆನ್ಜಿ, ಥಿನ್ನರ್‌, ಹೆಟಾಪಿನ್‌, ಬೂಟನಾಲ್‌ ಸೇರಿ 16 ಬಗೆಯ ರಾಸಾಯನಿಕ ವಸ್ತುಗಳನ್ನು ಗೋಡೌನ್‌ನಲ್ಲಿ ಸಂಗ್ರಹಿಸಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದರು.

 

ಮೋಹನ್‌ ಭದ್ರಾವತಿ

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Instagram provides clues to finding suspect who had been on the run for 9 years

Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್

21-cancer

Bengaluru: ಪ್ರತಿವರ್ಷ 500 ಮಕಳಲ್ಲಿ ಕ್ಯಾನ್ಸರ್‌ ಪತ್ತೆ !

20-metro

Metro: ಮರುಪರಿಷ್ಕರಣೆ: ತಪ್ಪದ ಮೆಟ್ರೋ ದರ ಗೊಂದಲ

19-bng

Bengaluru: 1.84 ಲಕ್ಷ ಬೀದಿ ನಾಯಿಗಳಿಗೆ ಸಂಯುಕ್ತ ಲಸಿಕೆ

18-bng

Bengaluru: ಇಂಧನ, ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.