ಬಿಎಂಟಿಸಿ ಚಾಲಕರಿಗೂ ಬಂಪರ್‌ ಆಫ‌ರ್‌


Team Udayavani, Mar 11, 2023, 1:37 PM IST

tdy-15

ಬೆಂಗಳೂರು: ಸಾರಿಗೆ ನಿಯಮಗಳ ಉಲ್ಲಂಘನೆ ಯ ದಂಡ ಪ್ರಮಾಣವನ್ನು ಶೇ. 50ರಷ್ಟು ತಗ್ಗಿಸಿರುವ ಲಾಭವು ಅತಿ ಹೆಚ್ಚು ಸಾರಿಗೆ ನಿಯಮಗಳ ಉಲ್ಲಂಘನೆಯಿಂದ ಗರಿಷ್ಠ ದಂಡ ಪಾವತಿಗೆ ಗುರಿಯಾಗಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಗೆ ಮಾತ್ರವಲ್ಲ; ಅಲ್ಲಿನ ಕಾರ್ಯನಿರ್ವಹಿಸುವ ಚಾಲಕರಿಗೂ “ಬಿಗ್‌ ರಿಲೀಫ್’ ನೀಡಲಿದೆ!

ಸಾಮಾನ್ಯವಾಗಿ ಬಿಎಂಟಿಸಿ ಬಸ್‌ಗಳ ಯಾವುದೇ ರೀತಿಯ ಸಾರಿಗೆ ನಿಯಮಗಳ ಉಲ್ಲಂಘನೆಗೆ ವಿಧಿಸಲಾಗುವ ದಂಡವನ್ನು ಆ ಸಂದರ್ಭದಲ್ಲಿದ್ದ ಚಾಲಕರಿಂದಲೇ ಸಂಸ್ಥೆಯು ವಸೂಲು ಮಾಡಿ, ಸಂಚಾರ ಪೊಲೀಸರಿಗೆ ಪಾವತಿಸುತ್ತದೆ. ರಿಯಾಯ್ತಿ ಸೌಲಭ್ಯ ಕಲ್ಪಿಸಿರುವುದರಿಂದ ಮೂರ್‍ನಾಲ್ಕು ವರ್ಷಗಳಿಂದ ಬಾಕಿ ಇರುವ ದಂಡ ಪಾವತಿಸುತ್ತಿದ್ದು, ಇದರ ಜತೆಗೆ ಈಗಾಗಲೇ ಚಾಲಕರಿಂದ ವಸೂಲು ಮಾಡಿ ರುವ ಪೂರ್ಣಪ್ರಮಾಣದ ದಂಡದಲ್ಲಿ ಶೇ. 50 ಮೊತ್ತವನ್ನು ಆಯಾ ಚಾಲಕರಿಗೆ ಹಿಂಪಾವತಿಸಲು ನಿರ್ಧರಿಸಿದೆ.

ಸಂಸ್ಥೆಯ ಈ ತೀರ್ಮಾನದಿಂದ ಸಾವಿರಾರು ಚಾಲಕರಿಗೆ ಅನುಕೂಲ ಆಗಲಿದೆ. ಸಾರಿಗೆ ನಿಯಮ ಉಲ್ಲಂ  ಸಿದ್ದಕ್ಕಾಗಿ ಈ ಮೊದಲೇ ವೇತನದಿಂದ ಕಡಿತ ಗೊಂಡ ದಂಡದ ಮೊತ್ತದಲ್ಲಿ ಅರ್ಧದಷ್ಟು ಮೊತ್ತವು ಮುಂಬರುವ ದಿನಗಳಲ್ಲಿ ಆಯಾ ಚಾಲಕರ ಖಾತೆಗಳಿಗೆ ಬಿಎಂಟಿಸಿಯಿಂದ ಮತ್ತೆ ಜಮೆ ಆಗಲಿದೆ. ಸಾವಿರಾರು ಚಾಲಕರು ಇದರ ಫ‌ಲಾನು ಭವಿಗಳಾಗಿರಲಿದ್ದು, ಹಿಂಪಾವತಿ ಆಗಲಿರುವ ಮೊತ್ತ ಲಕ್ಷಾಂತರ ರೂಪಾಯಿ ಆಗಿದೆ ಎಂದು ಸಂಸ್ಥೆಯ ಮೂಲಗಳು “ಉದಯವಾಣಿ’ಗೆ ತಿಳಿಸಿವೆ.

ನಗರದಲ್ಲಿ 6 ಸಾವಿರಕ್ಕೂ ಅಧಿಕ ಬಿಎಂಟಿಸಿ ಬಸ್‌ ಗಳಿದ್ದು, 2018ರಿಂದ ಈಚೆಗೆ 24 ಸಾವಿರ ಸಾರಿಗೆ ನಿಯಮ ಉಲ್ಲಂಘನೆ ಪ್ರಕರಣಗಳು ಅವುಗಳ ಮೇಲಿದ್ದು, ಇದರಲ್ಲಿ ಶೇ. 50 ಅಂದರೆ 12 ಸಾವಿರ ಪ್ರಕರಣಗಳು ಸಿಗ್ನಲ್‌ ಜಂಪ್‌ಗೆ ಸಂಬಂಧಿಸಿದವುಗಳೇ ಆಗಿವೆ. ಉಳಿದವು ನಿಲ್ದಾಣದಿಂದ ಹೊರಗೆ ನಿಲುಗಡೆ, ತಪ್ಪು ಜಾಗದಲ್ಲಿ ನಿಲುಗಡೆ, ಅತಿ ವೇಗದ ಚಾಲನೆ ಸೇರಿದಂತೆ ಹಲವು ಪ್ರಕಾರದ ಉಲ್ಲಂಘನೆಗಳು ವರದಿಯಾಗಿವೆ. ಅದೆಲ್ಲದರ ಮೊತ್ತ ಅಂದಾಜು 1.30 ಕೋಟಿ ರೂ. ಆಗಿದೆ. ಈ ಪೈಕಿ ಮೊದಲ ಹಂತದ ರಿಯಾಯ್ತಿ ವೇಳೆ 35 ಲಕ್ಷ ರೂ. ಪಾವತಿ ಸಲಾಗಿದ್ದು, ಉಳಿದ ಮೊತ್ತವನ್ನು ವಿಸ್ತರಣೆ ವೇಳೆ ಪಾವತಿಸಲು ಸಿದ್ಧತೆ ನಡೆದಿದೆ ಎಂದು ಸಂಸ್ಥೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಕರಣಗಳ ಪರಿಶೀಲನೆ; ನಂತರ ಪಾವತಿ : “20 ಸಾವಿರಕ್ಕೂ ಅಧಿಕ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿರುವುದು ನಿಜ. ಆದರೆ, ಹಲವೆಡೆ ಡಿಜಿಟಲ್‌ ಕ್ಯಾಮೆರಾಗಳಿಂದ ಸೆರೆಹಿಡಿದ ಇಮೇಜ್‌ ಸರಿಯಾಗಿ ಇರುವುದಿಲ್ಲ. ಇನ್ನು ನಮ್ಮ ಚಾಲಕರು ಮಾಡಿಲ್ಲದ ತಪ್ಪುಗಳಿಗೂ ಹೊಣೆ ಮಾಡಲಾಗಿದೆ. ಅಂತಹ ಪ್ರಕರಣಗಳ ಮರುಪರಿಶೀಲನೆ ಅಗತ್ಯವಿದೆ. ಈ ಬಗ್ಗೆ ಸಂಸ್ಥೆ ಅಧಿಕಾರಿಗಳು ಸಕ್ರಿಯವಾಗಿದ್ದಾರೆ. ರಿಯಾಯ್ತಿ ಅವಧಿಯಲ್ಲಿ ದಂಡ ಪಾವತಿಸುವ ಪ್ರಕ್ರಿಯೆ ಮುಗಿದ ನಂತರ ಚಾಲಕರಿಗೂ ಇದರ ಲಾಭ ದೊರೆಯಲಿದೆ’ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಜಿ. ಸತ್ಯವತಿ ಸ್ಪಷ್ಟಪಡಿಸಿದರು.

“ಸಾಮಾನ್ಯವಾಗಿ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ಕೆಲವು ಪ್ರಕರಣಗಳಲ್ಲಿ ಸಂಸ್ಥೆಯೇ ದಂಡ ಪಾವತಿಸಿದೆ. ಇನ್ನು ಹಲವು ಪ್ರಕರಣಗಳಲ್ಲಿ ಚಾಲಕರ ವೇತನದಲ್ಲಿ ಕಡಿತ ಮಾಡಿಕೊಳ್ಳಲಾಗಿರುತ್ತದೆ. ಅವುಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಅಂತಹ ಪ್ರಕರಣಗಳಲ್ಲಿ ಹಂತ- ಹಂತವಾಗಿ ಹಿಂಪಾವತಿಸಲಾಗುವುದು’ ಎಂದು ಅವರು ತಿಳಿಸಿದರು.

ಎರಡ್ಮೂರು ದಿನಗಳಲ್ಲಿ ಬಾಕಿ ಹಣ ಪಾವತಿ: ಎರಡು-ಮೂರು ದಿನಗಳಲ್ಲಿ ಬಾಕಿ ಇರುವ ನಿಯಮಗಳ ಉಲ್ಲಂಘನೆ ಪ್ರಕರಣಗಳ ದಂಡದ ಮೊತ್ತ ಪಾವತಿಸಲು ಬಿಎಂಟಿಸಿ ಸಿದ್ಧತೆ ನಡೆಸಿದೆ ಎನ್ನಲಾಗಿದೆ. ನಿಯಮ ಉಲ್ಲಂಘನೆ ಪ್ರಕರಣಗಳ ಪರಿಶೀಲನೆ ನಂತರ ಪಾವತಿಸಲಾಗುವ ಮೊತ್ತ ಅಂದಾಜು 50 ಲಕ್ಷ ದಾಟಲಿದ್ದು, ಅದನ್ನು ಎರಡು-ಮೂರು ದಿನಗಳಲ್ಲಿ ಪಾವತಿಸಲು ಉದ್ದೇಶಿಸಿದೆ ಎಂದು ನಿಗಮದ ಮೂಲಗಳು ತಿಳಿಸಿವೆ.

-ವಿಜಯ ಕುಮಾರ್‌ ಚಂದರಗಿ 

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Namma Metro: ಹಳದಿ ಮಾರ್ಗ ಪೂರ್ಣಗೊಂಡಿದ್ದರೂ ಬೋಗಿಗಳ ಕೊರತೆ

Namma Metro: ಹಳದಿ ಮಾರ್ಗ ಪೂರ್ಣಗೊಂಡಿದ್ದರೂ ಬೋಗಿಗಳ ಕೊರತೆ

Kidnapping Case: ವ್ಯಕ್ತಿಯ ಅಪಹರಿಸಿ ಸುಲಿಗೆಗೈದ 8 ಮಂದಿ ಬಂಧನ

Kidnapping Case: ವ್ಯಕ್ತಿಯ ಅಪಹರಿಸಿ ಸುಲಿಗೆಗೈದ 8 ಮಂದಿ ಬಂಧನ

Younis Zaroora: ಎಂಜಿ ರಸ್ತೇಲಿ ಇನ್‌ಸ್ಟಾಗ್ರಾಮ್‌ ಸ್ಟಾರ್‌ ಯೂನಿಸ್‌ ನೋಡಲು ಕಿಕ್ಕಿರಿದ ಜನ

Younis Zaroora: ಎಂಜಿ ರಸ್ತೇಲಿ ಇನ್‌ಸ್ಟಾಗ್ರಾಮ್‌ ಸ್ಟಾರ್‌ ಯೂನಿಸ್‌ ನೋಡಲು ಕಿಕ್ಕಿರಿದ ಜನ

Private bus: ಖಾಸಗಿ ಬಸ್‌ಗಳಿಂದ ಬೇಕಾಬಿಟ್ಟಿ ದರ ವಸೂಲಿ

Private bus: ಖಾಸಗಿ ಬಸ್‌ಗಳಿಂದ ಬೇಕಾಬಿಟ್ಟಿ ದರ ವಸೂಲಿ

2-bng

Bengaluru: ನಗರದೆಲ್ಲೆಡೆ ಟ್ರಾಫಿಕ್ ಜಾಮ್‌, ಮೆಜೆಸ್ಟಿಕ್‌ ರಷ್‌! ‌

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.