ನೆರೆ ತಡೆಗೆ 1,500 ಕಿ.ಮೀ. ಕಾಲುವೆ ಅಗತ್ಯ


Team Udayavani, Jun 1, 2023, 12:59 PM IST

tdy-6

ಬೆಂಗಳೂರು: ಬೆಂಗಳೂರಿನ ಮಳೆ ನೀರು ನಿಂತು ಜನಜೀವನ ಅಸ್ತವ್ಯಸ್ತಗೊಳ್ಳುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾದರೆ ಈಗಿರುವ ಮಳೆ ನೀರು ಚರಂಡಿ ವ್ಯವಸ್ಥೆ ಏನೇನು ಸಾಲದು. ರಾಜ್ಯ ರಾಜಧಾನಿಯ ಪ್ರವಾಹ ನಿರ್ವಹಣೆ ಯಶ ಕಾಣಬೇಕಾದರೆ ಈಗಿರುವುದಕ್ಕಿಂತ ಶೇ.75ಕ್ಕಿಂತ ಹೆಚ್ಚು ಹೊಸ ಮಳೆ ನೀರು ಚರಂಡಿಗಳನ್ನು ನಿರ್ಮಿಸುವುದು ಅನಿವಾರ್ಯ ಎಂದು ನೈಟ್‌ ಫ್ರಾಂಕ್‌ ಇಂಡಿಯಾ ಅಧ್ಯಯನ ವರದಿ ನೀಡಿದೆ.

ಬುಧವಾರ ಈ ವರದಿಯನ್ನು ನೈಟ್‌ ಫ್ರಾಂಕ್‌ ಇಂಡಿಯಾ ಬಿಡುಗಡೆ ಮಾಡಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ 842 ಕಿ.ಮೀ. ಉದ್ದದ ಮಳೆ ನೀರು ಹೊತ್ತೂಯ್ಯುವ ಪ್ರಮುಖ ಮತ್ತು ಕಿರುಗಾಲುವೆಗಳಿವೆ. ಆದರೆ ಇನ್ನು 658 ಹೊಸ ಪ್ರಮುಖ ಮತ್ತು ಕಿರುಗಾಲುವೆಗಳನ್ನು ನಿರ್ಮಿಸಬೇಕು. ತನ್ಮೂಲಕ ನಗರ ಒಟ್ಟು 1,500 ಕಿ.ಮೀ. ಉದ್ದದ ಕಾಲುವೆಯನ್ನು ಪಡೆದರೆ ಪ್ರವಾಹದ ಆತಂಕದಿಂದ ಪಾರಾಗಬಹುದು ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ.

ನಗರದಲ್ಲಿ 2002ರಲ್ಲಿ ಶೇ. 37.4ರಷ್ಟು ಬಿಲ್ಟ್ ಅಪ್‌ ಪ್ರದೇಶವಿದ್ದರೆ 2020ರಲ್ಲಿ ಇದು ಶೇ. 93.3ಕ್ಕೆ ಏರಿದೆ. ಆದರೆ ಮಳೆ ಪ್ರವಾಹ ಕಾಲುವೆಗಳ ಗಾತ್ರ ಕಿರಿದಾಗುತ್ತ ಸಾಗಿದೆ. ಕೋರಮಂಗಲ ಕಣಿವೆಯಲ್ಲಿ 1900ರಲ್ಲಿ ಇದ್ದ 113.2 ಕಿ.ಮೀ. ಮಳೆಗಾಲುವೆ 2016-17ರಲ್ಲಿ 62.8 ಕಿ.ಮೀ.ಗೆ ವೃಷಭಾವತಿ ಕಣಿವೆಯಲ್ಲಿ 226.3 ಇದ್ದ ಮಳೆಗಾಲುವೆಯ ಉದ್ದ 111. 7 ಕಿ.ಮೀ.ಗೆ ಕುಸಿದಿದೆ. ಯೋಜನಾ ರಹಿತ ನಗರೀಕರಣದಿಂದಾಗಿ ಶೇ. 50ಕ್ಕಿಂತ ಹೆಚ್ಚು ಮಳೆಗಾಲುವೆಗಳು ಕ್ಷೀಣಿಸಿದ್ದು ಕೇವಲ 633 ಮಳೆಗಾಲುವೆ ಉಳಿದುಕೊಂಡಿದೆ ಎಂದು ವರದಿ ಗುರುತಿಸಿದೆ.

2800 ಕೋಟಿ ರೂ. ಬೇಕು: ಪ್ರಸ್ತುತ ಇರುವ ಮಳೆಗಾಲುವೆಗಳ ಅಭಿವೃದ್ಧಿ ಮತ್ತು ಹೊಸ ಮಳೆಗಾಲುವೆಗಳ ನಿರ್ಮಾಣಕ್ಕೆ 2,800 ಕೋಟಿ ರೂ. ಬೇಕು ಎಂದು ವರದಿಯಲ್ಲಿ ಹೇಳಲಾಗಿದೆ. ರಾಜ್ಯ ಸರ್ಕಾರ ತನ್ನ 2023-24ರ ಬಜೆಟ್‌ನಲ್ಲಿ 3000 ಕೋಟಿ ರೂ.ಗಳನ್ನು ವಿಶ್ವಬ್ಯಾಂಕ್‌ನ ನೆರವಿನಿಂದ ನೀಡುವುದಾಗಿ ಪ್ರಕಟಿಸಿದೆ. ಆದ್ದರಿಂದ ಯೋಜನೆಗೆ ನಿಧಿ ಸಂಚಯ ಸಮಸ್ಯೆ ಆಗಲಾರದು ಎಂದು ಅಭಿಪ್ರಾಯ ಪಡಲಾಗಿದೆ.

ವ್ಯಾಲ್ಯೂ ಕ್ಯಾಪ್ಚರ್‌ ಫಿನಾನ್ಸಿಂಗ್‌ ಮಾದರಿ: ಮಳೆಗಾಲುವೆಗಳನ್ನು ಅಭಿವೃದ್ಧಿ ಪಡಿಸಿದ ಸುತ್ತಲಿನ ಜಾಗಗಳ ಮೌಲ್ಯವೂ ಹೆಚ್ಚುತ್ತದೆ. ಸರ್ಕಾರದ ಅಭಿವೃದ್ಧಿ ಕ್ರಮಗಳ ಪರಿಣಾಮ ಖಾಸಗಿ ಭೂಮಿಗಳ ಮೌಲ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಅದ್ದರಿಂದ ಭೂ ಮೌಲ್ಯ ತೆರಿಗೆ, ಭೂ ಬಳಕೆ ಬದಲಾವಣೆ ಶುಲ್ಕ, ಅಭಿವೃದ್ಧಿ ಶುಲ್ಕ, ಬೆಟರ್‌ ಮೆಂಟ್‌ ಲೆವಿ, ಟಿಡಿಆರ್‌ಗಳನ್ನು ಹೆಚ್ಚಿಸುವ ಮೂಲಕ ಸರ್ಕಾರ ತನ್ನ ಹೊರೆ ಕಡಿಮೆ ಮಾಡಿಕೊಳ್ಳಬಹುದು ಎಂದು ವರದಿ ಸಲಹೆ ನೀಡಿದೆ.

ಗುಜರಾತ್‌ನ ಸಬರಮತಿ ನದಿ ಯೋಜನೆಯನ್ನು ಉದಾಹರಿಸಲಾಗಿದೆ. ಹಾಗೆಯೇ ಮುಂಬೈ ಮತ್ತು ಚೆನ್ನೈಯ ಹಣಕಾಸು ಮಾದರಿಗಳನ್ನು ಉಲ್ಲೇಖೀಸಲಾಗಿದೆ. ಪತ್ರಿಕಾಗೋಷ್ಠಿಯಲ್ಲಿ ನೈಟ್‌ ಫ್ರಾಂಕ್‌ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ಶಾಂತನು ಮಜುಂದಾರ್‌, ಕನ್ಸಲ್ಟೆಂಟ್‌ ರಿಸರ್ಚ್‌ ಲೀಡ್‌ ಶಿಲ್ಪಾ ಶ್ರೀ ಮುಂತಾದವರು ಉಪಸ್ಥಿತರಿದ್ದರು.

ಸ್ಪಾಂಜ್‌ ಸಿಟಿ ಮಾದರಿಯಲ್ಲಿ ಬೆಂಗಳೂರು ಅಭಿವೃದ್ಧಿ ಪಡಿಸಿ : ಚೀನಾದಲ್ಲಿ ನಗರಗಳ ಪ್ರವಾಹ ಪರಿಸ್ಥಿತಿ ನಿಭಾಯಿಸಲು ಸ್ಪಾಂಜ್‌ ಸಿಟಿ ಪರಿಕಲ್ಪನೆ ಅನುಸರಿಸಲಾಗುತ್ತಿದೆ. ಇದರಿಂದ ಮಳೆ ನೀರಿನ ವೈಜ್ಞಾನಿಕ ಸಂಗ್ರಹ, ಮಳೆ ನೀರಿನ ಓಟಕ್ಕೆ ಕಡಿವಾಣ, ಕಾಂಕ್ರಿಟಿಕರಣ ಕಡಿಮೆ ಮಾಡಿ ಹಸಿರು ಪ್ರದೇಶಗಳ ಹೆಚ್ಚಳ, ಜೌಗು ಪ್ರದೇಶಗಳ ಅಭಿವೃದ್ಧಿ ಮಾಡುವ ಮೂಲಕ ಪ್ರವಾಹದ ಅಬ್ಬರವನ್ನು ಕಡಿಮೆ ಮಾಡಬಹುದು ಎಂದು ವರದಿ ಹೇಳಿದೆ.

ಮಳೆಗಾಲುವೆ ಮಾಸ್ಟರ್‌ ಪ್ಲ್ರಾನ್‌ ಮಾಡಿ: ಮಳೆಗಾಲುವೆಯ ದಕ್ಷ ನಿರ್ವಹಣೆ ಮತ್ತು ನಿಧಿಗೆ ಪೂರಕವಾದ ಮಳೆಗಾಲುವೆ ಮಾಸ್ಟರ್‌ ಪ್ಲ್ರಾನ್‌ ರೂಪಿಸಬೇಕು. ಮಳೆಗಾಲುವೆ ಸರಾಗವಾಗಿ ಹರಿದು ಹೋಗುವಂತೆ, ಪ್ರವಾಹ ಕಡಿಮೆ ಮಾಡುವ ರೀತಿ ಮತ್ತು ಮಳೆಗಾಲುವೆಗಳ ನಿರ್ವಹಣೆಗೆ ಅಗತ್ಯ ಹಣದ ಸಂಗ್ರಹದ ಬಗ್ಗೆ ಈ ಮಾಸ್ಟರ್‌ ಪ್ಲ್ರಾನ್‌ ಮಾಹಿತಿ ಹೊಂದಿರಬೇಕು.

ಬ್ರ್ಯಾಂಡ್‌ ಬೆಂಗಳೂರಿಗೆ ಧಕ್ಕೆ : ಜನಸಂಖ್ಯೆಯ ಹೆಚ್ಚಳದಿಂದ ನಗರದ ಭೂಬಳಕೆಯ ವಿಧಾನಗಳು ಬದಲಾಗಿದೆ. ತ್ವರಿತ ಮತ್ತು ಯೋಜನಾ ರಹಿತ ಅಭಿವೃದ್ಧಿ ನಗರದ ಪರಿಸರ ವ್ಯವಸ್ಥೆ ಅದರಲ್ಲೂ ಮಳೆ ನೀರು ಚರಂಡಿಗಳ ಮೇಲೆ ಭಾರಿ ಒತ್ತಡ ಸೃಷ್ಟಿಸಿದ್ದು ಭಾರಿ ಮಳೆಗೆ ನಗರದಲ್ಲಿ ಪ್ರವಾಹ ಸೃಷ್ಟಿಸುತ್ತದೆ. ಇದರಿಂದ ಬ್ರ್ಯಾಂಡ್‌ ಬೆಂಗಳೂರಿಗೆ ಧಕ್ಕೆ ಆಗುತ್ತಿದೆ. ಇದನ್ನು ಸರಿಪಡಿಸಬೇಕಾದರೆ ಮಳೆಗಾಲುವೆಗಳ ನಿರ್ಮಾಣ, ಅಭಿವೃದ್ಧಿ, ರಿ ಮಾಡೆಲಿಂಗ್‌, ನಿರ್ವಹಣೆ ಅತ್ಯಗತ್ಯ ಎಂದು ನೈಟ್‌ ಫ್ರಾಂಕ್‌ ವರದಿ ತಿಳಿಸಿದೆ.

ಬೆಂಗಳೂರಿನ ಮೂಲಸೌಕರ್ಯ ಗಳನ್ನು ಬಲಪಡಿಸುವ ಪ್ರಾಮುಖ್ಯತೆ ಯನ್ನು ವರದಿಯು ಒತ್ತಿ ಹೇಳಿದೆ. ಮಳೆನೀರು ನಿರ್ವಹಣಾ ವ್ಯವಸ್ಥೆಯನ್ನು ವಿನ್ಯಾಸಗೊಳಿಸುವಾಗ ಜನಸಂಖ್ಯೆಯ ಬೆಳವಣಿಗೆ, ನಗರೀಕರಣ ಮತ್ತು ಹವಾಮಾನ ಬದಲಾವಣೆಯನ್ನು ಗಮನಿಸಬೇಕು. – ಶಿಶಿರ್‌ ಬೈಜಾಲ್‌, ನೈಟ್‌ ಫ್ರಾಂಕ್‌ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Instagram provides clues to finding suspect who had been on the run for 9 years

Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್

21-cancer

Bengaluru: ಪ್ರತಿವರ್ಷ 500 ಮಕಳಲ್ಲಿ ಕ್ಯಾನ್ಸರ್‌ ಪತ್ತೆ !

20-metro

Metro: ಮರುಪರಿಷ್ಕರಣೆ: ತಪ್ಪದ ಮೆಟ್ರೋ ದರ ಗೊಂದಲ

19-bng

Bengaluru: 1.84 ಲಕ್ಷ ಬೀದಿ ನಾಯಿಗಳಿಗೆ ಸಂಯುಕ್ತ ಲಸಿಕೆ

18-bng

Bengaluru: ಇಂಧನ, ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.