![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Jul 16, 2021, 6:08 PM IST
ಬೆಂಗಳೂರು: ಅಕ್ರಮ ವಾಸ, ಮಾದಕ ವಸ್ತುಮಾರಾಟ ದಂಧೆ, ಆನ್ಲೈನ್ ವಂಚನೆ ಪ್ರಕರಣಗಳಲ್ಲಿಭಾಗಿ ಹೀಗೆ ಹಲವಾರು ಅಕ್ರಮ ಚಟುವಟಿಕೆಗಳಲ್ಲಿವಿದೇಶಿ ಪ್ರಜೆಗಳ ಹೆಸರು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ಗುರುವಾರ ನಗರದ ನಾಲ್ಕು ವಿಭಾಗಗಳಲ್ಲಿವಾಸವಾಗಿರುವ 65 ಮಂದಿ ವಿದೇಶಿ ಪ್ರಜೆಗಳ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ.
ಈ ವೇಳೆ ಎರಡು ಎನ್ಡಿಪಿಎಸ್ ಪ್ರಕರಣ ದಾಖಲಿಸಿ, ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.ನಾಲ್ಕು ವಿದೇಶಿ ಕಾಯ್ದೆ ಉಲ್ಲಂಘನೆ ಪ್ರಕರಣದಾಖಲಿಸಲಾಗಿದ್ದು,20 ಮಂದಿಯನ್ನು ಬಂಧಿಸಲಾಗಿದೆ.ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ಪಾಟೀಲ್, ಡಿಸಿಪಿಗಳಾದ ರವಿಕುಮಾರ್, ಬಿ.ಎಸ್.ಅಂಗಡಿ ನೇತೃತ್ವದಲ್ಲಿ ಪೂರ್ವ ವಿಭಾಗದಲ್ಲಿ ಎಸಿಪಿಗೌತಮ್ ಕುಮಾರ್, ಈಶಾನ್ಯ ವಿಭಾಗದಲ್ಲಿ ಎಸಿಪಿಧರ್ಮೇಂದ್ರ ಕುಮಾರ್, ನಾಗರಾಜ್, ವೈಟ್ಫೀಲ್ಡ…ವಿಭಾಗದ ಎಸಿಪಿ ಪರಮೇಶ್ವರ್ ಹಾಗೂ ಜಗನ್ನಾಥ್ ರೈನೇತೃತ್ವದ ಸುಮಾರು 120 ಮಂದಿಯ ಅಧಿಕಾರಿ-ಸಿಬ್ಬಂದಿತಂಡದಾಳಿ ನಡೆಸಿ ಅಕ್ರಮವಾಗಿವಾಸವಾಗಿದ್ದ 38 ವಿದೇಶಿ ಪ್ರಜೆಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.
ಇದೇವೇಳೆಅಕ್ರಮವಾಗಿ ಸಂಗ್ರಹಿಸಿದ ª 90ಎಕ್ಸೆ r„ಸಿ ಮಾತ್ರೆಗಳು, 25 ಗ್ರಾಂ ಗಾಂಜಾ, ಹತ್ತಾರುಲ್ಯಾಪ್ಟಾಪ್ವಶಕ್ಕೆಪಡೆಯಲಾಗಿದೆ.ಗುರುವಾರ ಬೆಳಗ್ಗೆ ಐದು ಗಂಟೆಗೆ ಏಕಕಾಲದಲ್ಲಿಕಮ್ಮನಹಳ್ಳಿ, ಸಂಪಿಗೆಹಳ್ಳಿ, ರಾಮಮೂರ್ತಿನಗರ,ಬಾಣಸವಾಡಿ, ಯಲಹಂಕ, ವೈಟ್ಫೀಲ್ಡ…, ಹೆಣ್ಣೂರುಸೇರಿ ನಗರದ ನಾನಾಕಡೆ ವಾಸವಾಗಿದ್ದ65 ಮನೆಗಳಮೇಲೆ ದಾಳಿ ನಡೆಸಲಾಗಿದೆ.ಇತ್ತೀಚೆಗೆ ನಗರ ಕಮಿಷನರೇಟ್ವ್ಯಾಪ್ತಿಯಲ್ಲಿ ಇದುವರೆಗೂ ವಶಕ್ಕೆ ಪಡೆದುಕೊಂಡಿದ್ದ 50 ಕೋಟಿ ರೂ.ಮೌಲ್ಯದ ಮಾದಕ ವಸ್ತುವನ್ನು ನಾಶಪಡಿಸಲಾಗಿತ್ತು.
ಈವೇಳೆ ನಗರದಲ್ಲಿ ವಾಸವಾಗಿರುವ ವಿದೇಶಿ ಪ್ರಜೆಗಳಿಂದಲೇ ಹೆಚ್ಚು ಮಾದಕ ವಸ್ತು ಜಾಲ ಹೆಚ್ಚಾಗುತ್ತಿರುವಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆ ದಾಳಿಸಲಾಗಿದೆ.ದಾಳಿ ಸಂದರ್ಭದಲ್ಲಿ ಕೆಲವರು ವಿದ್ಯಾರ್ಥಿ,ವಾಣಿಜ್ಯ, ಪ್ರವಾಸಿ ವೀಸಾ ಸೇರಿ ಇತರೆ ವೀಸಾಗಳಡಿಭಾರತಕ್ಕೆ ಬಂದಿದ್ದಾರೆ. ಆದರೆ, ಕೆಲವರು ಅಪರಾಧಪ್ರಕರಣಗಳಲ್ಲಿ ಭಾಗಿಯಾಗಿ ಇಲ್ಲಿಯೇ ಉಳಿದುಕೊಂಡಿದ್ದು, ಪದೇ ಪದೆ ಅಕ್ರಮ ಚಟುವಟಿಕೆಗಳಲ್ಲಿಭಾಗಿಯಾಗುತ್ತಿದ್ದಾರೆ ಎಂಬುದು ಪತ್ತೆಯಾಗಿದೆ.ಇನ್ನು ಕೆಲವರು ವೀಸಾ ಅವಧಿ ಮುಕ್ತಾಯಗೊಂಡಿದ್ದರು. ಅಕ್ರಮವಾಗಿ ವಾಸವಾಗಿರುವುದು ದಾಖಲೆಗಳಿಂದ ಪತ್ತೆಯಾಗಿದೆ. ವಿಚಾರಣೆ ಮುಂದುವರಿದಿದೆಸಿಸಿಬಿ ಮೂಗಳು ತಿಳಿಸಿವೆ.
You seem to have an Ad Blocker on.
To continue reading, please turn it off or whitelist Udayavani.