Bengaluru: ಮಲ್ಲೇಶ್ವರ ಮೈದಾನದಲ್ಲಿ ಮಗು ಸಾವಿಗೆ ಗೇಟ್ ವೆಲ್ಡಿಂಗ್ ದೋಷ ಕಾರಣ; ಸಮಿತಿ
Team Udayavani, Oct 6, 2024, 11:43 AM IST
ಬೆಂಗಳೂರು: ಪಾಲಿಕೆ ಮುಖ್ಯ ಎಂಜಿನಿಯರ್ ಒಳಗೊಂಡ ಸಮಿತಿಯು ಇತ್ತೀಚೆಗೆ ಮಲ್ಲೇಶ್ವರದ ಆಟದ ಮೈದಾನದಲ್ಲಿ ಗೇಟ್ ಬಿದ್ದು ಬಾಲಕ ಸಾವಿಗೀಡಾದ ಪ್ರಕರಣದ ವೈಫಲ್ಯದ ಬಗ್ಗೆ ಪಾಲಿಕೆ ಮುಖ್ಯ ಆಯುಕ್ತರಿಗೆ ವರದಿ ಸಲ್ಲಿಸಿದೆ.
ಸಮರ್ಪಕವಾಗಿ ಗೇಟ್ ವೆಲ್ಡಿಂಗ್ ಮಾಡದಿರುವುದು ಈ ಘಟನೆಗೆ ಪ್ರಮುಖ ಕಾರಣ ಎಂದು ಪ್ರಾಥಮಿಕ ವರದಿಯಲ್ಲಿ ತನಿಖಾ ಸಮಿತಿ ಬೆಳಕು ಚೆಲ್ಲಿದೆ. ಈ ಮಧ್ಯೆ ಪೂರ್ಣ ವರದಿ ನೀಡುವಂತೆ ಪಾಲಿಕೆ ಮುಖ್ಯ ಆಯುಕ್ತರು ತನಿಖಾ ಸಮಿತಿಗೆ ಮತ್ತೆ ಸೂಚಿಸಿದ್ದಾರೆ.
ಸೆ.22ರಂದು ಆಟದ ಮೈದಾನದಲ್ಲಿ ಆಟವಾಡಲು ಬಂದಿದ್ದ 11 ವರ್ಷದ ಶಾಲಾ ಬಾಲಕನ ಮೇಲೆ ಗೇಟ್ ಬಿದ್ದು ಆತ ಮೃತಪಟ್ಟಿದ್ದ. ಈ ಹಿನ್ನೆಲೆಯಲ್ಲಿ ಕಾಮಗಾರಿಯ ಕುರಿತು ವರದಿ ನೀಡುವ ಸಂಬಂಧ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಮುಖ್ಯ ಎಂಜಿನಿಯರ್ ಒಳಗೊಂಡ ತನಿಖಾ ಸಮಿತಿ ರಚಿಸಿ, 1 ವಾರದೊಳಗೆ ವರದಿ ನೀಡುವಂತೆ ಸೂಚಿಸಿದ್ದರು.
ಪೂರ್ಣ ವರದಿ ನೀಡುವಂತೆ ಸೂಚನೆ: ಈ ಬಗ್ಗೆ ಮಾಹಿತಿ ನೀಡಿರುವ ಪಾಲಿಕೆ ಮುಖ್ಯ ಆಯುಕ್ತರು, ಘಟನೆ ಸಂಬಂಧಿಸಿದಂತೆ ವರದಿಯನ್ನು ನೀಡಲಾಗಿದ್ದು, ಈ ವರದಿ ಪೂರ್ಣವಾ ಗಿಲ್ಲ. ಅಪೂರ್ಣವಾಗಿದೆ. ಆದರೆ, ಗೇಟು ಬಿದ್ದ ಕಾರಣವನ್ನು ಮಾತ್ರ ತಿಳಿಸಲಾಗಿದೆ. ಪೂರ್ಣ ವರದಿಯನ್ನು ನೀಡಬೇಕು ಎಂದು ಮುಖ್ಯ ಆಯುಕ್ತರು ಸಮಿತಿಗೆ ಸೂಚಿಸಿದ್ದಾರೆ. ಈಗ ನೀಡುವ ವರದಿ ಪ್ರಕಾರ, ವೆಲ್ಡಿಂಗ್ ಸರಿಯಾಗಿರಲಿಲ್ಲ. ಭಾರವಾಗಿದ್ದ ರಿಂದ ಬಿದ್ದಿದೆ ಎಂದಿದೆ. ಆದರೆ, 51 ಲಕ್ಷ ರೂ. ವೆಚ್ಚದಲ್ಲಿ ಗೇಟ್ ನಿರ್ಮಾಣವಾಗಿರು ವುದರಿಂದ ಹೇಗೆ ಬೀಳಲು ಸಾಧ್ಯ. 226 ಕೆ.ಜಿ. ಭಾರವಿರುವ ಈ ಗೇಟ್ ಅನ್ನು ಹೇಗೆ ನಿರ್ಮಿಸಬೇಕಾಗಿತ್ತು. ಲೋಪವಾಗಿದ್ದು ಹೇಗೆ ಎಂಬೆಲ್ಲಾ ವರದಿ ನೀಡುವಂತೆ ಸೂಚಿಸಲಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಅಪಾರ್ಟ್ಮೆಂಟ್ನಿಂದ ಜಾರಿ ಬಿದ್ದು ಎಂಜಿನಿಯರಿಂಗ್ ವಿದ್ಯಾರ್ಥಿನಿ ಸಾವು!
Road Mishap: ಲಾರಿ ಚಕ್ರ ಹರಿದು ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ದುರ್ಮರಣ
Fraud: ಚೀಟಿ ವ್ಯವಹಾರದಲ್ಲಿ ವಂಚನೆ; ಪತಿ, ಪತ್ನಿ, ಪುತ್ರ ಬಂಧನ
Arrested: ದೇವರಾಜ ಅರಸು ಟ್ರಕ್ ಟರ್ಮಿನಲ್ ಪ್ರಕರಣ; ಮತ್ತೂಬ್ಬ ಅಧಿಕಾರಿ ಬಂಧನ
Arrested: 22 ಮನೆ ಕಳ್ಳತನ ಕೇಸ್ ಆರೋಪಿ ಸೆರೆ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Mangaluru: ಕಲೆಗೆ ಜೀವ ತಳೆವ ನವದುರ್ಗೆಯರು!
ಕನ್ನಡ ಜ್ಯೋತಿ ರಥ; ಕಾಪು ತಾಲೂಕಿಗೆ ಸ್ವಾಗತ; ಕನ್ನಡ ಅಮೃತ ಭಾಷೆಯಾಗಿ ಬೆಳಗಲಿ: ತಹಶೀಲ್ದಾರ್
Mumtaz Ali; ಮೊಯ್ದೀನ್ ಬಾವ ಸೋದರ ನಾಪತ್ತೆ; ಸೇತುವೆಯಲ್ಲಿ ಕಾರು ಬಿಟ್ಟು ಆತ್ಮಹತ್ಯೆ ಶಂಕೆ !
Bigg Boss Kannada11: ಬಿಗ್ ಬಾಸ್ ಮನೆಯಿಂದ ಈ ವಾರ ಹೊರಗೆ ಬರುವುದು ಇವರೇ..?
Udupi ಉಚ್ಚಿಲ ದಸರಾ 2024: ಉಡುಪಿ ಮತ್ತು ದ.ಕ. ಜಿಲ್ಲಾಮಟ್ಟದ ಕುಸ್ತಿ ಸ್ಪರ್ಧೆ ಉದ್ಘಾಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.