
ಮೀಸಲು ಹಾಸಿಗೆ ಸಾವಿರಕ್ಕಿಳಿಸಲು ಪಾಲಿಕೆ ಶಿಫಾರಸು
Team Udayavani, Jul 21, 2021, 4:16 PM IST

ಬೆಂಗಳೂರು: ನಗರದ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರಿಗೆಂದು ಮೀಸಲಿಟ್ಟಹಾಸಿಗೆಗಳ ಸಂಖ್ಯೆಯನ್ನು ಒಂದುಸಾವಿರಕ್ಕಿಳಿಸುವಂತೆ ರಾಜ್ಯ ಸರ್ಕಾರಕ್ಕೆಬಿಬಿಎಂಪಿಶಿಫಾರಸುನೀಡಿದೆ.
ಈ ಕುರಿತುಮಾಹಿತಿ ನೀಡಿದಬಿಬಿಎಂಪಿ ಮುಖ್ಯಆಯುಕ್ತ ಗೌರವ್ಗುಪ್ತ, ಸರ್ಕಾರದಸೂಚನೆಯಂತೆ ಮೇನಲ್ಲಿ 13 ಸಾವಿರಹಾಸಿಗೆಗಳನ್ನು ಕೊರೊನಾ ಸೋಂಕಿತರಿಗೆಂದು ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿಮೀಸಲಿಡಲಾಗಿತ್ತು. ಸೋಂಕು ತಗ್ಗಿದ್ದ ಬೆನ್ನಲ್ಲೆಮೀಸಲು ಹಾಸಿಗೆಗಳ ಸಂಖ್ಯೆಯನ್ನುಸರ್ಕಾರಕ್ಕೆ ಮನವರಿಕೆ ಮಾಡಿ ಜೂನ್ಅಂತ್ಯಕ್ಕೆ ಆರು ಸಾವಿರಕ್ಕೆ ಇಳಿಸಲಾಗಿತ್ತು
.ಪ್ರಸ್ತುತ ನಿತ್ಯ ಸರಾಸರಿ 30 ಸೋಂಕಿತರುಮಾತ್ರ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ.ಮೀಸಲಿಟ್ಟ ಆರು ಸಾವಿರ ಹಾಸಿಗೆಗಳಲ್ಲಿ350ಮಾತ್ರ ಭರ್ತಿಯಾಗಿವೆ. ಇದರಿಂದ ಇತರೆರೋಗಿಗಳಿಗೆ ಹಾಸಿಗೆಸಮಸ್ಯೆಯಾಗಬಾರದುಎಂದು ಮೀಸಲು ಹಾಸಿಗೆ ಪ್ರಮಾಣವನ್ನುಒಂದು ಸಾವಿರಕ್ಕೆ ಇಳಿಸುವಂತೆ ಶಿಫಾರಸುನಿಡಲಾಗಿದೆ ಎಂದು ತಿಳಿಸಿದರು.
ಸದ್ಯಬೆಂಗಳೂರಿನಲ್ಲಿ ಕೊರೊನಾ ಸೋಂಕಿನ ತೀವ್ರತೆ ಕಡಿಮೆಯಾಗಿದೆ. ಮುಂದೆಪ್ರಕರಣಗಳು ಹೆಚ್ಚಾದರೆ ಮತ್ತೆ ಹಾಸಿಗೆಗಳನ್ನುಶೀಘ್ರದಲ್ಲಿಯೇ ಹೆಚ್ಚಿಸಲು ಅಗತ್ಯ ವ್ಯವಸ್ಥೆಮಾಡಿಕೊಳ್ಳಲಾಗಿದೆ. ಮೂರನೇ ಅಲೆಸಂದರ್ಭದಲ್ಲಿ ಹಾಸಿಗೆ ಹೆಚ್ಚಿಸುವ ಕುರಿತುಖಾಸಗಿ ಆಸ್ಪತ್ರೆಗಳ ಒಕ್ಕೂಟದ ಜತೆ ಮಾತುಕತೆನಡೆಸಿದ್ದೇವೆ ಎಂದರು.
ಪರೀಕ್ಷೆ ಕಡಿಮೆ ಮಾಡಿಲ್ಲ: ರಾಜಧಾನಿಯಲ್ಲಿಸೋಂಕು ಪರೀಕ್ಷೆಗಳನ್ನು ಕಡಿಮೆ ಮಾಡಿಲ್ಲ.ದೆಹಲಿ ಮತ್ತು ಮುಂಬೈಗಿಂತ ಎರಡು ಪಟ್ಟುಅಧಿಕ ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ರಾಜ್ಯದಲ್ಲಿ ದಿನ ಒಂದರಲ್ಲಿ ನಡೆಯುವ ಅರ್ಧದಷ್ಟುಪರೀಕ್ಷೆಗಳು ಬೆಂಗಳೂರು ಒಂದರಲ್ಲಿಯೇನಡೆಯುತ್ತಿವೆ. ಅಗತ್ಯಕ್ಕಿಂತ ಹೆಚ್ಚು ಪರೀಕ್ಷೆನಡೆಸಿ ಸೋಂಕು ಹೆಚ್ಚದಂತೆ ಕ್ರಮವಹಿಸಲಾಗಿದೆ.
ಮುಂದಿನ ದಿನಗಳಲ್ಲಿಯೂ ಪರೀಕ್ಷೆಗಳಪ್ರಮಾಣಕಡಿಮೆ ಮಾಡುವುದಿಲ್ಲ ಎಂದರು.ನಗರದಲ್ಲಿ ಹೋಂ ಐಸೋಲೇಷನ್ ಡೆತ್ಆಡಿಟ್ ವರದಿ ನನ್ನ ಕೈ ಸೇರಿದೆ. ತಜ್ಞರ ಜತೆಈ ಬಗ್ಗೆ ಚರ್ಚೆ ಮಾಡಿ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದರು.
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Adalat: ಲೋಕ್ ಅದಾಲತ್ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ

Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

BSY: ಬಿಎಸ್ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್ಪಿಪಿ

IPS officer D. Roopa: ಸಿಂಧೂರಿ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ ರೂಪಾ
MUST WATCH

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.