ನೃತ್ಯದ ಮೂಲಕ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಿದ ವಾರಿಯರ್ಸ್
Team Udayavani, May 10, 2021, 2:52 PM IST
ಬೆಂಗಳೂರು: ಕೊರೊನಾ ಸೋಂಕಿನಿಂದ ಮಾನಸಿಕ ಖಿನ್ನತೆಗೊಳಗಾಗಿ ಬೆಡ್ನಲ್ಲೇ ಮಲಗಿದ್ದ ರೋಗಿಗಳು. ಮತ್ತೂಂಡೆದೆ, ಪಿಪಿಇ ಕಿಟ್ ಧರಿಸಿಸೋಂಕಿತರ ಬಳಿ ಬಂದ ನರ್ಸ್ಗಳು. ಸೋಂಕಿತರನ್ನು ನಿಮ್ಮ ಕೈ ಮೇಲೆ ಎತ್ತಿ, ಎರಡು ಕೈಗಳನ್ನು ಮೇಲೆ ಮಾಡಿ ಕೈ ಹೀಗೆ ಮಾಡಿ, ಹಾಗೆ ಮಾಡಿ ಎನ್ನುತ್ತಲೇ ತಾವೂ ನೃತ್ಯ ಮಾಡುತ್ತಿದ್ದ ಕೊರೊನಾ ವಾರಿಯರ್ಸ್ ಗಳು.
ನಗು..ನಗು.. ಎಂಬ ಹಾಡಿಗೆ ತಕ್ಕಂತೆ ನೃತ್ಯಮಾಡುತ್ತಲೇ, ಸೋಂಕಿನ ಭೀತಿಯಲ್ಲಿದ್ದ ರೋಗಿಗಳ ಮುಖದಲ್ಲಿ ನಗು ತರಿಸುತ್ತಿದ್ದರು. ಹೀಗೆ, ನಗರದ ಮಹಾಲಕ್ಷ್ಮೀ ಲೇಔಟ್ನ ಖಾಸಗಿ(ಶ್ರೇಯಸ್ ಆಸ್ಪತ್ರೆ) ಆಸ್ಪತ್ರೆಯಲ್ಲಿ ಕೊರೊನಾ ವಾರಿಯರ್ಸ್ಗಳಾದ ವೈದ್ಯರು ಮತ್ತು ಶುಶ್ರೂಷಕರು(ನರ್ಸ್) ಪಿಪಿಇ ಕಿಟ್ ಧರಿಸಿ ನೃತ್ಯ ಮಾಡಿದ್ದಾರೆ.
ಆಮೂಲಕ ಕೊರೊನಾ ಸೋಂಕಿತರಿಗೆ ಮನರಂಜನೆ ಜೊತೆ, ಆತ್ಮಸ್ಥೆçರ್ಯ ತುಂಬುವ ಕೆಲಸ ಮಾಡಿದ್ದಾರೆ.ನಗರದಲ್ಲಿ ಯಾವ ರೀತಿ ಕೋವಿಡ್ ಸೋಂಕಿತರಸಂಖ್ಯೆ ಹೆಚ್ಚಾಗುತ್ತಿದೆಯೋ, ಅದೇ ರೀತಿಸೋಂಕಿತರು ಮಾನಸಿಕ ಖೀನ °ತೆಗೂಒಳಗಾಗುತ್ತಿದ್ದಾರೆ.
ಕೇವಲ ನಾಲ್ಕು ಗೋಡೆ ಮಧ್ಯೆವಾರಗಟ್ಟಲೇ ಉಳಿಯುವ ಸೋಂಕಿತರಲ್ಲಿಆತ್ಮಸೆ §çರ್ಯ ತುಂಬುವ ಕೆಲಸವನ್ನು ಕೊರೊನಾ ವಾರಿಯರ್ಸ್ ಮಾಡಿರುವುದು ಸಾರ್ವಜನಿಕರಮೆಚ್ಚುಗೆಗೆ ಪಾತ್ರವಾಗಿದೆ.ಸಂಗೀತ ಎನ್ನುವುದು ಮಾನಸಿಕ ಖನ್ನತೆಯನ್ನುದೂರ ಮಾಡುವ ಒಂದು ಔಷಧಿ. ಹೀಗಾಗಿ,ಕೊರೊನಾ ಸೋಂಕಿತರಿಗೆ ಧೈರ್ಯ ತುಂಬುವಕೆಲಸ ಮಾಡುತ್ತಿದ್ದಾರೆ. ವೈದ್ಯರು, ನರ್ಸ್ಗಳುನಗು.. ನಗು.. ಎಂಬ ಸಿನಿಮಾ ಹಾಡಿಗೆ ನೃತ್ಯಮಾಡುವ ಮೂಲಕ ಚಿಕಿತ್ಸೆ ನೀಡುವ ಜೊತೆಜೊತೆಗೆ ಸೋಂಕಿತರಲ್ಲಿ ಹುದುಗಿರುವಖೀನ್ನತೆಯನ್ನು ದೂರ ಮಾಡಿದ್ದಾರೆ.
ಕೊರೊನಾ ಸೋಂಕಿತರಲ್ಲಿ ಕೆಲವರು ಹಾಸಿಗೆಯಲ್ಲೇ ಕುಳಿತು ಹಾಡಿಗೆ ತಕ್ಕಂತೆ ನೃತ್ಯ ಮಾಡಿದರೆ, ಇನ್ನೂ ಕೆಲವು ಸೋಂಕಿತರು ಬೆಡ್ನಿಂದ ಕೆಳಗಿಳಿದು ನೃತ್ಯ ಮಾಡಿ ಸಂತೋಷ ಪಟ್ಟಿದ್ದಾರೆ.
ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಲ್ಲಿ ಖನ್ನತೆಹೋಗಲಾಡಿಲು ಈ ಪ್ರಯತ್ನ ಮಾಡಲಾಗಿದೆ. ಇದುಕೇವಲ ಒಂದು ದಿನಕ್ಕೆ ಸೀಮಿತವಾಗದೆ, ನಿತ್ಯ ಕೆಲಸಮಯ ಚಲನಚಿತ್ರ ಗೀತೆಗಳಿಗೆ ನೃತ್ಯ ಮಾಡುತ್ತಾ ಸೋಂಕಿತರನ್ನು ಪ್ರೀತಿಯಿಂದ ಆರೈಕೆ ಮಾಡುತ್ತಾತಮ್ಮ ಸೇವೆಯಲ್ಲಿ ತೊಡಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Leopard: ಎಲೆಕ್ಟ್ರಾನಿಕ್ ಸಿಟಿ ಎನ್ಟಿಟಿಎಫ್ ಆವರಣ ಬಳಿ ತಡರಾತ್ರಿ ಚಿರತೆ ಪ್ರತ್ಯಕ್ಷ
Anekal: ಶಾಲಾ ಬಸ್ ಅಡ್ಡಗಟ್ಟಿ ಚಾಲಕನಿಗೆ ತೀವ್ರ ಹಲ್ಲೆ
Road rage case: ರೋಡ್ ರೇಜ್ ಕೇಸ್ ಬಗ್ಗೆ ದೂರು ನೀಡಿ; ಕಮಿಷನರ್
Namma Metro: ಮೆಟ್ರೋ ಹಳಿ ಮೇಲೆ ಜಿಗಿದು ಆತ್ಮಹತ್ಯೆಗೆ ಯತ್ನ
Laptop theft: ಕೆಲಸಕ್ಕಿದ್ದ ಕಂಪನಿಯಲ್ಲೇ 55 ಲ್ಯಾಪ್ಟಾಪ್ ಕದ್ದ ಟೆಕ್ಕಿ!
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.