![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Oct 16, 2023, 10:56 AM IST
ಬೆಂಗಳೂರು: ಕಾರ್ಪೆಂಟರ್ವೊಬ್ಬನನ್ನು ಕೊಲೆ ಮಾಡಿದ ದುಷ್ಕರ್ಮಿಗಳು ಶವವನ್ನು ಬೆಡ್ಶೀಟ್ನಲ್ಲಿ ಮೂಟೆ ಕಟ್ಟಿ ಪಿಟ್ ಗುಂಡಿಗೆ ಎಸೆದು ಪರಾರಿಯಾಗಿದ್ದಾರೆ. ಬಿಹಾರ ಮೂಲದ ಕೋಗಿಲು ಲೇಔಟ್ ನಿವಾಸಿ ಶಕೀಲ್ ಅಕ್ತರ್ ಸೈಫಿ (28) ಕೊಲೆಯಾದ ಕಾರ್ಪೆಂಟರ್.
ಯಾರೋ ಅಪರಿಚಿತ ವ್ಯಕ್ತಿಗಳು ಶಕೀಲ್ನನ್ನು ಬೇರೆ ಎಲ್ಲಿಯೋ ಕೊಲೆ ಮಾಡಿ, ಕೃತ್ಯವನ್ನು ಮರೆಮಾಚುವ ಉದ್ದೇಶದಿಂದ ಬೆಡ್ಶೀಟ್ನಲ್ಲಿ ಮೂಟೆ ಕಟ್ಟಿಕೊಂಡು ಬಂದು ಮಾರ್ಟಿನ್ ಎಂಬುವರಿಗೆ ಸೇರಿದ ಕೋಗಿಲು ಲೇಔಟ್ನ ಪಿಟ್ ಗುಂಡಿಯ ನೀರಿನಲ್ಲಿ ಹಾಕಿ ಹೋಗಿದ್ದರು. ಬೆಳಗ್ಗೆ ಶವವನ್ನು ಗುರುತಿಸಿದ ಸ್ಥಳೀಯರು ಸಂಪಿಗೆಹಳ್ಳಿ ಠಾಣಾ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು. ಶಕೀಲ್ ವಾಸವಿದ್ದ ನಿವೇಶನದ ಮಾಲೀಕ ಮಾರ್ಟಿನ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ಆರೋಪಿಗಳ ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಬಿಹಾರದಿಂದ 10 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಶಕೀಲ್, ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಯೊಂದರಲ್ಲಿ ಕಾಪೆìಂಟರ್ ಆಗಿದ್ದ. ಬಿಹಾರದಲ್ಲಿ ಮೊದಲ ವಿವಾಹವಾಗಿದ್ದರೂ ಸಹ ಬೆಂಗಳೂರಿನಲ್ಲಿ ಮತ್ತೂಂದು ಮದುವೆಯಾಗಿದ್ದ. ಎರಡನೇ ಪತ್ನಿ ಹಾಗೂ ಮಗು ಜೊತೆ ವಾಸಿಸುತ್ತಿದ್ದ.
ಬೀದಿ ನಾಯಿಯಿಂದ ವ್ಯಕ್ತಿಯ ಶವ ಪತ್ತೆ:
ಲಗ್ಗೆರೆಯ 16ನೇ ಕ್ರಾಸ್ನಲ್ಲಿ ಅಪರಿಚಿತ ವ್ಯಕ್ತಿ ಶವವೊಂದು ಬೀದಿ ನಾಯಿಯಿಂದ ಪತ್ತೆಯಾಗಿದ್ದು, ವಾರಸುದಾರರಿಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಎಂ ಸ್ಯಾಂಡ್ ರಾಶಿಯೊಳಗೆ ಶವ ಪತ್ತೆಯಾತ್ತು. ಇಲ್ಲಿದ್ದ ಕಲ್ಲು ಪುಡಿ ರಾಶಿಯನ್ನು ಬೀದಿ ನಾಯಿ ಕೆದರುತ್ತಿದ್ದಾಗ ರಾಶಿಯೊಳಗಿದ್ದ ಶವ ಹೊರಕ್ಕೆ ಬಿದ್ದಿತ್ತು. ಸಾರ್ವಜನಿಕರು ಇದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಪೊಲೀಸರು ಭೇಟಿ ಕೊಟ್ಟು ಪರಿಶೀಲಿಸಿದ್ದಾರೆ. ವಾರಸುದಾರರು ಸಿಕ್ಕಿದ ಬಳಿಕ ಪ್ರಕರಣದ ಬಗ್ಗೆ ಮಾಹಿತಿ ಸಿಗಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.