Cyber crime: 15,500 ಸಿಮ್‌ ಶಾಶ್ವತ ಬ್ಲಾಕ್‌


Team Udayavani, Sep 9, 2023, 10:43 AM IST

Cyber crime: 15,500 ಸಿಮ್‌ ಶಾಶ್ವತ ಬ್ಲಾಕ್‌

ಬೆಂಗಳೂರು: ಸೈಬರ್‌ ಅಪರಾಧಗಳ ಕಡಿವಾಣಕ್ಕೆ ಒಂದಿಲ್ಲೊಂದು ಕಠಿಣ ಕ್ರಮಕೈಗೊಳ್ಳುತ್ತಿರುವ ನಗರ ಪೊಲೀಸರು ಇದೀಗ ಮತ್ತೂಂದು ದಿಟ್ಟ ಹೆಜ್ಜೆ ಇಟ್ಟಿದ್ದಾರೆ.

ಸೈಬರ್‌ ಕ್ರೈಂಗೆ ಬಳಸಿಕೊಂಡಿರುವ ಸಿಮ್‌ ಕಾರ್ಡ್‌ಗಳನ್ನು ಶಾಶ್ವತವಾಗಿ ಬ್ಲಾಕ್‌ ಮಾಡಲು ಆರಂಭಿಸಿದ್ದಾರೆ. ಕಳೆದ 25 ದಿನಗಳಲ್ಲಿ ಬರೋಬರಿ 15,500 ಸಿಮ್‌ಕಾರ್ಡ್‌ ಬ್ಲಾಕ್‌ ಮಾಡಲಾಗಿದೆ. ಇತ್ತೀಚೆಗೆ ರಕ್ತಸಿಕ್ತ ಅಪರಾಧಗಳಿಗಿಂತ ಸೈಬರ್‌ ಕ್ರೈಂ ಅಪರಾಧಗಳೇ ಹೆಚ್ಚಾಗಿವೆ. ಸರ್ಕಾರಗಳು ಎಷ್ಟೇ ಕಠಿಣ ಕ್ರಮಕೈಗೊಂಡರೂ ತೆರೆಮರೆಯಲ್ಲಿ ಕೂತು ಎಸಗುವ ಈ ಅಪರಾಧ ನಿಯಂತ್ರಣ ಕಷ್ಟಸಾಧ್ಯವಾಗುತ್ತಿದೆ. ಮತ್ತೂಂದೆಡೆ ಸೈಬರ್‌ ಕ್ರೈಂ ಕುರಿತು ಸಾಕಷ್ಟು ಜಾಗೃತಿ ಮೂಡಿಸಿದರೂ, ವಿದ್ಯಾವಂತರೇ ವಂಚನೆಗೊಳಗಾಗುತ್ತಿರುವುದು ಪೊಲೀಸರಲ್ಲೂ ಗೊಂದಲ ಸೃಷ್ಟಿಸಿದೆ.

ದೂರುದಾರರ ಹಣ ಜಪ್ತಿ: ಈ ಮಧ್ಯೆ ಕೇಂದ್ರ ಸರ್ಕಾರ ಸೈಬರ್‌ ಕ್ರೈಂ ತಡೆಗೆ ಯೂನಿವರ್ಸಲ್‌ ಸೈಬರ್‌ ಕ್ರೈಂ ಸಹಾಯವಾಣಿ ಸಂಖ್ಯೆ 1930 ಜಾರಿಗೆ ತಂದಿದ್ದು. ಈ ಮೂಲಕ ಸೈಬರ್‌ ವಂಚನೆಗೊಳಗಾದ ಕೂಡಲೇ ದೂರು ನೀಡಬಹುದು. ಹಾಗೆಯೇ 112ಗೆ ಕರೆ ಮಾಡಿಯೂ ದೂರುಗಳು ಬರುತ್ತವೆ. ಜತೆಗೆ ಸ್ಥಳೀಯ ಠಾಣೆಗಳಲ್ಲೂ ದೂರುಗಳು ದಾಖಲಾಗುತ್ತವೆ. ಜತೆಗೆ ನಗರ ಪೊಲೀಸ್‌ ವಿಭಾಗವೂ ಸಿಐಆರ್‌ (ಸೈಬರ್‌ ಇನ್ಫಾರ್ಮೇಷನ್‌ ರಿಪೋರ್ಟ್‌) ಮೂಲಕ ದೂರುದಾರರ ಹಣವನ್ನು ಜಪ್ತಿ ಮಾಡುತ್ತಿದೆ.

ಐಸಿಸಿಸಿಸಿ ಮೂಲಕ 15 ಸಾವಿರ ಸಿಮ್‌ ಬ್ಲಾಕ್‌: ಕಳೆದ 8 ತಿಂಗಳಲ್ಲಿ ನಗರದ 9 ಸೆನ್‌ ಠಾಣೆಗಳಲ್ಲಿ ಬರೋಬರಿ 17 ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದ್ದು, ಈ ಎಲ್ಲಾ ಪ್ರಕರಣಗಳಲ್ಲಿ ಆರೋಪಿಗಳು ಬಳಸಿದ ಸಿಮ್‌ಕಾರ್ಡ್‌ಗಳ ಮಾಹಿತಿಯನ್ನು ನಗರ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿರುವ ಕಮಾಂಡ್‌ ಸೆಂಟರ್‌ ಸಿಬ್ಬಂದಿ ಸಂಗ್ರಹಿಸುತ್ತಾರೆ. ಆ ನಂತರ ಕೇಂದ್ರ ಸರ್ಕಾರದ ಇಂಡಿಯನ್‌ ಸೈಬರ್‌ ಕ್ರೈಂ ಕೋ-ಆರ್ಡಿನೇಷನ್‌ ಕಮಿಟಿ(ಐಸಿಸಿಸಿಸಿ)ಗೆ ಮಾಹಿತಿ, ಅದರ ವೆಬ್‌ ಪೋರ್ಟಲ್‌ಗೆ ವಂಚಕರು ಬಳಸಿದ ಮೊಬೈಲ್‌ ನಂಬರ್‌ ನೋಂದಾಯಿಸಲಾಗಿದೆ. ಆ ನಂತರ ಕೇವಲ 24 ಗಂಟೆಯಲ್ಲೇ ಆ ಸಿಮ್‌ ಕಾರ್ಡ್‌ ಅನ್ನು ಶಾಶ್ವತವಾಗಿ ಬ್ಲಾಕ್‌ ಮಾಡಲಾಗುತ್ತದೆ. ಈ ಪ್ರಕ್ರಿಯೆ ಆ.16ರಿಂದ ಆರಂಭವಾಗಿದ್ದು, ನಿರಂತರವಾಗಿ ನಡೆಯುತ್ತಿದೆ. ಕಳೆದ 26 ದಿನಗಳಲ್ಲಿ 15,500 ಸಿಮ್‌ ಕಾರ್ಡ್‌ ಬ್ಲಾಕ್‌ ಮಾಡಲಾಗಿದೆ ಎಂದು ಕಮಾಂಡ್‌ ಸೆಂಟರ್‌ ಅಧಿಕಾರಿಗಳು ಮಾಹಿತಿ ನೀಡಿದರು.

ಸೈಬರ್‌ ಕ್ರೈಂ ಕೃತ್ಯಕ್ಕೆ ಬಳಸಿದ ಸಿಮ್‌ಕಾರ್ಡ್‌ ಗಳನ್ನು ಪತ್ತೆ ಹಚ್ಚಿ ಬ್ಲಾಕ್‌ ಮಾಡಲಾಗುತ್ತಿದೆ. ಏಕೆಂದರೆ, ಒಬ್ಬರಿಗೆ ವಂಚನೆ ಮಾಡಿದ ಬಳಿಕ ಆರೋಪಿಗಳು ಅದೇ ನಂಬರ್‌ ಬಳಸಿ ಮತ್ತೂಬ್ಬ ವ್ಯಕ್ತಿಗೆ ವಂಚನೆ ಮಾಡುವ ಸಾಧ್ಯತೆಯಿದೆ. ಹೀಗಾಗಿ ಕೇಂದ್ರ ಸರ್ಕಾರದ ವೆಬ್‌ಪೋರ್ಟಲ್‌ ಮೂಲಕ ವಂಚಕರ ಸಿಮ್‌ಕಾರ್ಡ್‌ಗಳನ್ನು ಮತ್ತೂಮ್ಮೆ ಬಳಕೆಗೆ ಬಾರದಂತೆ ಬ್ಲಾಕ್‌ ಮಾಡಲಾಗುತ್ತಿದೆ. ಈ ವರ್ಷದ ಪ್ರಕರಣಗಳಿಗೆ ಸಂಬಂಧಿಸಿದಂತೆ 15,500 ಸಿಮ್‌ಕಾರ್ಡ್‌ ಬ್ಲಾಕ್‌ ಮಾಡಲಾಗಿದೆ. ● ರವೀಂದ್ರ ಕೆ.ಗಡಾದಿ, ಕಮಾಂಡ್‌ ಸೆಂಟರ್‌ ಡಿಸಿಪಿ.

ಯಾವುದೇ ಸೈಬರ್‌ ಕ್ರೈಂನಲ್ಲಿ ಬಳಸಿದ ಸಿಮ್‌ಕಾರ್ಡ್‌ ಗಳನ್ನು ಬ್ಲಾಕ್‌ ಮಾಡಲು ಅವಕಾಶವಿದೆ. ಕೇಂದ್ರ ಸರ್ಕಾರದ ಪೋರ್ಟಲ್‌ ಮೂಲಕ ಅದನ್ನು ಶಾಶ್ವತವಾಗಿ ಬ್ಲಾಕ್‌ ಮಾಡಲಾಗುತ್ತಿದೆ. ಭವಿಷ್ಯದಲ್ಲಿ ಆ ನಂಬರ್‌ ಬಳಸಲು ಯಾರಿಗೂ ಸಾಧ್ಯವಿಲ್ಲ. ● ಬಿ.ದಯಾನಂದ, ನಗರ ಪೊಲೀಸ್‌ ಆಯುಕ್ತರು.

ಟಾಪ್ ನ್ಯೂಸ್

da

Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

H.D.Kumaraswamy

H. D. Kumaraswamy: ರಾಜಕೀಯ ಮಾಡಲು, ಬೆಂಕಿ ಹಚ್ಚಲು ಬಂದಿಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಪ್ರೇಯಸಿಯ ಪೀಡಿಸುತ್ತಿದ್ದವನಿಗೆ ಪ್ರಿಯಕರನಿಂದ ಚಾಕು ಇರಿತ!

Bengaluru: ಪ್ರೇಯಸಿಯ ಪೀಡಿಸುತ್ತಿದ್ದವನಿಗೆ ಪ್ರಿಯಕರನಿಂದ ಚಾಕು ಇರಿತ!

Bengaluru: ಮೆಜೆಸ್ಟಿಕ್‌ ಬಳಿ ಬಿಎಂಟಿಸಿ ಬಸ್‌ ಡಿಕ್ಕಿ; ಅಂಗವಿಕಲ ಸ್ಥಳದಲ್ಲೇ ಸಾವು

Bengaluru: ಮೆಜೆಸ್ಟಿಕ್‌ ಬಳಿ ಬಿಎಂಟಿಸಿ ಬಸ್‌ ಡಿಕ್ಕಿ; ಅಂಗವಿಕಲ ಸ್ಥಳದಲ್ಲೇ ಸಾವು

Bengaluru: ಪರಪ್ಪನ ಅಗ್ರಹಾರ ಕಾರಾಗೃಹದ‌ಲ್ಲಿ ಮತ್ತೆ 9 ಮೊಬೈಲ್‌ ಫೋನ್‌ಗಳು ಪತ್ತೆ!

Bengaluru: ಪರಪ್ಪನ ಅಗ್ರಹಾರ ಕಾರಾಗೃಹದ‌ಲ್ಲಿ ಮತ್ತೆ 9 ಮೊಬೈಲ್‌ ಫೋನ್‌ಗಳು ಪತ್ತೆ!

Leopard: ಎಲೆಕ್ಟ್ರಾನಿಕ್‌ ಸಿಟಿ ಎನ್‌ಟಿಟಿಎಫ್ ಆವರಣ ಬಳಿ ತಡರಾತ್ರಿ ಚಿರತೆ ಪ್ರತ್ಯಕ್ಷ

Leopard: ಎಲೆಕ್ಟ್ರಾನಿಕ್‌ ಸಿಟಿ ಎನ್‌ಟಿಟಿಎಫ್ ಆವರಣ ಬಳಿ ತಡರಾತ್ರಿ ಚಿರತೆ ಪ್ರತ್ಯಕ್ಷ

6

Anekal: ಶಾಲಾ ಬಸ್‌ ಅಡ್ಡಗಟ್ಟಿ ಚಾಲಕನಿಗೆ ತೀವ್ರ ಹಲ್ಲೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

da

Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.