Ola: ದೋಷಪೂರಿತ ಎಲೆಕ್ಟ್ರಿಕ್‌ ಬೈಕ್‌; ಓಲಾಗೆ 2 ಲಕ್ಷ ದಂಡ


Team Udayavani, Jul 18, 2024, 11:02 AM IST

Ola: ದೋಷಪೂರಿತ ಎಲೆಕ್ಟ್ರಿಕ್‌ ಬೈಕ್‌; ಓಲಾಗೆ 2 ಲಕ್ಷ ದಂಡ

ಬೆಂಗಳೂರು: ದೋಷಪೂರಿತ ಎಲೆಕ್ಟ್ರಿಕ್‌ ಬೈಕ್‌ ಮಾರಾಟ ಮಾಡಿರುವ ಓಲಾ ಎಲೆಕ್ಟ್ರಿಕ್‌ ಸಂಸ್ಥೆಗೆ, ಬೆಂಗಳೂರು 4ನೇ ಹೆಚ್ಚುವರಿ ಗ್ರಾಹಕ ನ್ಯಾಯಾಲಯ 2 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ಬೆಂಗಳೂರು ಆರ್‌ಟಿ ನಗರದ 22 ವರ್ಷದ ನಿವಾಸಿ ದುಗೇಶ್‌ ಎನ್‌. ಅವರು ಪ್ರತಿಷ್ಠಿತ ಬೈಕ್‌ ಸಂಸ್ಥೆಯ ವಿರುದ್ಧ ಗ್ರಾಹಕ ನ್ಯಾಯಾಲಯದಲ್ಲಿ ದಾವೆ ಹೂಡಿ ಪರಿಹಾರವನ್ನು ಪಡೆದುಕೊಂಡಿದ್ದಾರೆ. ದುಗೇಶ್‌ ಅವರು 2023ರ ಡಿ.14ರಂದು 1.69 ಲಕ್ಷ ರೂ. ಪಾವತಿಸಿ ಓಲಾ ಸಂಸ್ಥೆಯಿಂದ ಎಲೆಕ್ಟ್ರಿಕಲ್‌ ಬೈಕ್‌ ಖರೀದಿಸಿದ್ದರು. 2024ರ ಜ. 22ರಂದು ಬೈಕ್‌ ಆರ್‌ಟಿಒ ಕಚೇರಿಯಲ್ಲಿ ನೋಂದಣಿಯಾಗಿ ಹೋಮ್‌ ಡೆಲಿವರಿ ಮಾಡಲಾಗಿತ್ತು. ಈ ಸಂದರ್ಭದಲ್ಲಿ ವಾಹನದ ಪ್ಯಾನಲ್‌ ಹಾಳಾಗಿತ್ತು. ಜತೆಗೆ ವಾಹನ ಹಾರ್ನ್ ಸೌಂಡ್‌, ಪ್ಯಾನಲ್‌ ಬೋರ್ಡ್‌ ಕೆಲಸ ಮಾಡದಿರುವ ಬಗ್ಗೆ ದೂರು ನೀಡಲಾಗಿತ್ತು.

ದೂರುದಾರು ನಿರಂತರವಾಗಿ ದೂರು ನೀಡಿ ದರೂ, ಸಮಸ್ಯೆ ಪರಿಹಾರ ನೀಡುವಲ್ಲಿ ಸಂಸ್ಥೆ ವಿಫ‌ಲ ವಾಗಿತ್ತು. ಬಳಿಕ ಸಂಸ್ಥೆಯ ಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, ದುರಸ್ತಿ ಮಾಡುವುದಾಗಿ ಹೇಳಿ ಬೈಕ್‌ ತೆಗೆದುಕೊಂಡು ಹೋಗಿದ್ದರು. ಸಂಸ್ಥೆಯು 4 ತಿಂಗಳು ನಿಗದಿತ ಅವಧಿಯೊಳಗೆ ಬೈಕ್‌ ಹಿಂದಿರುಗಿಸಲು ವಿಫ‌ಲವಾಗಿದೆ. ಗ್ರಾಹಕ ಸೇವೆಯಲ್ಲಿ ವ್ಯತ್ಯಯ ಮಾಡಿರುವುದರ ಜತೆಗೆ ದೋಷಪೂರಿತ ವಾಹನ ನೀಡಿರುವುದಕ್ಕೆ ಬೇಸರಗೊಂಡ ದುಗೇಶ್‌ ನ್ಯಾಯಕ್ಕಾಗಿ ಗ್ರಾಹಕ ನ್ಯಾಯಾಲಯದ ಬಾಗಿಲು ತಟ್ಟಿದ್ದಾರೆ.

ವಾದವೇನು?:  ದೂರುದಾರ ದುಗೇಶ್‌ ಅವರು 2024ರ ಮಾರ್ಚ್‌ನಲ್ಲಿ ಕಂಪನಿಗೆ ಲೀಗಲ್‌ ನೋಟಿಸ್‌ ನೀಡಿದ್ದಾರೆ. ಆದರೆ ಈ ಬಗ್ಗೆ ಓಲಾ ಎಲೆಕ್ಟ್ರಿಕ್‌ ಸಂಸ್ಥೆಯು ಪ್ರತಿಕ್ರಿಯೆ ನೀಡಿರಲಿಲ್ಲ. ತದನಂತರ ಗ್ರಾಹಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ, ಆರೋಪ ಸಾಬೀತು ಮಾಡಲು ಅಗತ್ಯವಿರುವ ಸಾಕ್ಷ್ಯಗಳನ್ನು, ದೃಢಿಕರಣಗೊಳಿಸಿ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದಾರೆ. ಈ ವೇಳೆಯೂ ಕಂಪನಿಯು ತನ್ನ ಕಡೆಯಿಂದ ಯಾವುದೇ ವಾದ ಹಾಗೂ ಪೂರಕವಾದ ದಾಖಲೆ ನೀಡಿಲ್ಲ. ಸಾಕ್ಷ್ಯವನ್ನು ಪರಿಶೀಲನೆ ಮಾಡಿದ ನ್ಯಾಯಾಲಯ ಸಂಸ್ಥೆಯ ಗ್ರಾಹಕ ಸೇವೆಯಲ್ಲಿನ ವ್ಯತ್ಯಯ ಹಾಗೂ ದೋಷ ಪೂರಿತ ಬೈಕ್‌ ನೀಡಿರುವ ಆರೋಪ ದೃಢವಾಗಿದೆ.

ಪರಿಹಾರ: ಓಲಾ ಎಲೆಕ್ಟ್ರಿಕಲ್‌ ಮೋಟಾರ್‌ ಸಂಸ್ಥೆಯು ಗ್ರಾಹಕ ಬೈಕ್‌ ಖರೀದಿಗೆ ನೀಡಿದ 1,62,450 ರೂ. ಮೊತ್ತಕ್ಕೆ ದೂರುದಾಖಲಾದ ದಿನದಿಂದ ಶೇ.6ರ ಬಡ್ಡಿ ದರದಲ್ಲಿ ಮೂಲ ಮೊತ್ತ ಪಾವತಿಸಬೇಕು. ಜತೆಗೆ ವಾಹನ ಸರಿಯಾದ ಸಮಯಕ್ಕೆ ಸಿಗದೇ ಮಾನಸಿಕ ಹಿಂಸೆಗೆ ಕಾರಣವಾದ ಹಿನ್ನೆಲೆಯಲ್ಲಿ 20 ಸಾವಿರ ರೂ. ಪರಿಹಾರ, ಕೋರ್ಟ್‌ ಬಾಬ್ತು 10 ಸಾವಿರ ಸೇರಿದಂತೆ ಒಟ್ಟು 2 ಲಕ್ಷ ರೂ. ಮೊತ್ತವನ್ನು 2024ರ ಆ.20ರೊಳಗೆ ಪಾವತಿಸಲು ಬೆಂಗಳೂರು 4ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ತೀರ್ಪು ನೀಡಿದೆ.

 

ಟಾಪ್ ನ್ಯೂಸ್

9

Imran Khan: ದಂಗೆ ಏಳಲು ಪ್ರಚೋದನೆ; ಇಮ್ರಾನ್‌ ವಿರುದ್ಧ ಕೇಸು

Dodda Ganesh: ಕೀನ್ಯಾ ಕೋಚ್‌ ಸ್ಥಾನದಿಂದ ದೊಡ್ಡ ಗಣೇಶ್‌ ವಜಾ

Dodda Ganesh: ಕೀನ್ಯಾ ಕೋಚ್‌ ಸ್ಥಾನದಿಂದ ದೊಡ್ಡ ಗಣೇಶ್‌ ವಜಾ

1-mmm

Jammu and Kashmir ಉಗ್ರವಾದ ಕೊನೆಯುಸಿರೆಳೆಯುತ್ತಿದೆ : ಪ್ರಧಾನಿ ಮೋದಿ

1-ddsadsa

Hindi ಮತ್ತು ಇತರ ಭಾಷೆಗಳ ನಡುವೆ ಎಂದಿಗೂ ಸ್ಪರ್ಧೆ ಇರಬಾರದು: ಅಮಿತ್ ಶಾ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 8ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 8ನೇ ರೀಲ್ಸ್ ಪ್ರಸಾರ

Sudden rise in cooking oil prices

Price Hike; ಅಡುಗೆ ಎಣ್ಣೆ ದರ ದಿಢೀರ್ ಏರಿಕೆ: ಹಬ್ಬದ ಸಂಭ್ರಮದಲ್ಲಿರುವ ಜನತೆಗೆ ಶಾಕ್

Mamath2

Doctors Protest: ಇದು ನನ್ನ ಕಡೇ ಪ್ರಯತ್ನ, ನಿಮ್ಮ ಅಕ್ಕನಾಗಿ ಬಂದಿರುವೆ ಎಂದ ಸಿಎಂ ಮಮತಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12

Arrested: ನಿಷೇಧಿತ ಇ-ಸಿಗರೆಟ್‌ ಮಾರಾಟ: ನಾಲ್ವರ ಸೆರೆ

17-bng

Bengaluru: ಹಳೇ ಕಾರುಗಳ ವೈವಿಧ್ಯಮಯ ಲೋಕ ಅನಾವರಣ

16-edi-milad

Bengaluru: ಈದ್‌ ಮೆರವಣಿಗೆ: ಡಿ.ಜೆ.ಸೌಂಡ್‌, ಪ್ರಚೋದನಾಕಾರಿ ಸ್ತಬ್ಧಚಿತ್ರ ನಿಷೇಧ

15-bng

Eid-e-Milad: ನಾಡಿದ್ದು ಸಂಚಾರ ಬದಲಾವಣೆ

14-bng

Bengaluru: ಕೆಲಸಕ್ಕಿದ್ದ ಮನೆಯಲ್ಲೇ 53 ಲಕ್ಷ ರೂ. ಚಿನ್ನ ಕದ್ದಳು!

MUST WATCH

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

udayavani youtube

ಉಡುಪಿ ಕೃಷ್ಣ ಮಠದಲ್ಲಿರುವ ಸುಬ್ರಹ್ಮಣ್ಯ ಸನ್ನಿಧಿ

udayavani youtube

ಕೃಷ್ಣ ಮಠದ ಗಣಪತಿ ವಿಸರ್ಜನೆ ವೇಳೆ ತಾಸೆಯ ಪೆಟ್ಟಿಗೆ ಕುಣಿದು ಕುಪ್ಪಳಿಸಿದ ಭಕ್ತರು|

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

ಹೊಸ ಸೇರ್ಪಡೆ

England vs Australia: ಲಿವಿಂಗ್‌ಸ್ಟೋನ್‌ ಅಬ್ಬರ; ಆಸೀಸ್‌, ಇಂಗ್ಲೆಂಡ್‌ ಟಿ20 ಸರಣಿ ಸಮಬಲ

England vs Australia: ಲಿವಿಂಗ್‌ಸ್ಟೋನ್‌ ಅಬ್ಬರ; ಆಸೀಸ್‌, ಇಂಗ್ಲೆಂಡ್‌ ಟಿ20 ಸರಣಿ ಸಮಬಲ

crime (2)

Indi; ನಾಲ್ವರು ದುಷ್ಕರ್ಮಿಗಳಿಂದ ಯುವಕನ ಬರ್ಬರ ಹ*ತ್ಯೆ

16

Kumble: ವಿದ್ಯಾರ್ಥಿಗೆ ಹಲ್ಲೆ

15

Belthangady: ನೇಣುಬಿಗಿದು ವ್ಯಕ್ತಿ ಸಾವು

Duleep Trophy: ಪ್ರಥಮ್‌ ಸಿಂಗ್‌, ತಿಲಕ್‌ ವರ್ಮ ಶತಕ

Duleep Trophy: ಪ್ರಥಮ್‌ ಸಿಂಗ್‌, ತಿಲಕ್‌ ವರ್ಮ ಶತಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.