Dementia: ಹಿರಿಯರ ಮರೆವು; ಡೇ ಕೇರ್‌ ನೆರವು


Team Udayavani, Sep 4, 2023, 11:09 AM IST

tdy-5

ಬೆಂಗಳೂರು: ವಯಸ್ಸಾದಂತೆ ಮರೆವು ಉಂಟಾಗುವುದು ಸರ್ವೇಸಾಮಾನ್ಯ. ಜಾಗೃತಿ ಕೊರತೆಯಿಂದಾಗಿ ಇತ್ತೀಚಿನ ದಿನಗಳಲ್ಲಿ ಈ ಮರೆವು ಕಾಯಿಲೆ ಹೆಚ್ಚಾಗುತ್ತಿದೆ. ಇದೀಗ ಈ ಕಾಯಿಲೆಯಿಂದ ಬಳಲುತ್ತಿರುವವರಿಗೆ “ಡೇ ಕೇರ್‌ ಸೆಂಟರ್‌’ಗಳು ಆಸರೆಯಾಗುತ್ತಿವೆ.

ರಾಜಧಾನಿ ಬೆಂಗಳೂರಿನಲ್ಲಿ ಮೂರು ಲಕ್ಷದಷ್ಟು ಹಿರಿಯ ನಾಗರಿಕರು ಇದ್ದರೆ, ಅವರಲ್ಲಿ 65 ಸಾವಿರ ವಯಸ್ಕರು ಮರೆವು ಕಾಯಿಲೆ(ಡಿಮೆನ್ಶಿಯಾ)ಯಿಂದ ಬಳಲುತ್ತಿದ್ದಾರೆ. ಸಾಮಾನ್ಯವಾಗಿ 60 ವರ್ಷ ಮೇಲ್ಪಟ್ಟವರಲ್ಲಿ ಹೆಚ್ಚು ಈ ರೋಗ ಕಾಣಿಸಿಕೊಳ್ಳುತ್ತದೆ.

ಒಂಟಿತನದಿಂದ ಹೆಚ್ಚು ಮರೆವು: ಇಂದಿನ ಆಧುನಿಕ ಸಮಾಜದಲ್ಲಿ ಮಕ್ಕಳು, ಸೊಸೆಂದಿರು, ಮೊಮ್ಮಕ್ಕಳು ಸೇರಿದಂತೆ ಎಲ್ಲರೂ ಅವರದ್ದೇ ಆದ ಕೆಲಸಗಳಲ್ಲಿ ತೊಡಗಿಕೊಂಡಿರುತ್ತಾರೆ. ಇದರಿಂ ದಾಗಿ ತಂದೆ-ತಾಯಿಗೆ ಅಥವಾ ಪೋಷಕರಿಗೆ ಸಮಯ ಕೊಡಲು ಸಾಧ್ಯವಾಗುವುದಿಲ್ಲ. ವಯಸ್ಸಾದಂತೆ ದಿನದಿಂದ ದಿನಕ್ಕೆ ಕಾಡುವ ಒಂಟಿತನ ಒಂದೆಡೆಯಾದರೆ, ಮತ್ತೂಂದೆಡೆಗೆ ದೈಹಿಕವಾಗಿ ದೃಢತೆ ಇದ್ದರೂ ಮೆದುಳಿನ ಕಾರ್ಯವು ಕ್ಷೀಣಿಸುತ್ತಿರುತ್ತದೆ.

ಜಾಗ್ರತೆಯಿಂದ ನೋಡಿಕೊಳ್ಳಬೇಕು: ಒಂದು ನಿರ್ದಿಷ್ಟ ವಯಸ್ಸಿನ ನಂತರ ನಮ್ಮ ದೇಹದಲ್ಲಿನ ಅಣುಗಳು ಅವನತಿಯಾಗುತ್ತಾ ಹೋಗುತ್ತವೆ. ಮೆದುಳಿನಲ್ಲಿನ ಅಣುಗಳು ಕ್ಷೀಣಿಸುತ್ತಿರುವಾಗ ಮರೆವು ಪ್ರಾರಂಭವಾಗುತ್ತದೆ. ಆದ್ದರಿಂದ ಮರೆವಿನ ಕಾಯಿಲೆಗೆ ತುತ್ತಾಗುತ್ತಿರುವವರಿಗೆ ಬೆಂಬಲವಾಗಿ ನಿಂತು, ಸೂಕ್ಷ್ಮವಾಗಿದ್ದಾಗಿಂದಲೇ ಜಾಗೃತದಿಂದ ನೋಡಿಕೊಳ್ಳುವುದು ತುಂಬಾ ಮುಖ್ಯ.

ಸಮಾಜದಲ್ಲಿ ಜಾಗೃತಿ ಇಲ್ಲ: ಸಾಮಾನ್ಯವಾಗಿ 60 ವರ್ಷ ದಾಟುತ್ತಿದ್ದಂತೆ ಮಾಸಿಕ/ತ್ತೈಮಾಸಿಕವಾಗಿಬಿಪಿ, ಡೈಯಾಬಿಟೀಸ್‌ ತಪಾಸಣೆ ಮಾಡಿಸುವ ಹಾಗೆ ಮೆಮೋರಿ ಸ್ಕ್ರೀನಿಂಗ್‌ ಮಾಡಿಸುವುದು ಅಷ್ಟೇ ಮುಖ್ಯ. ಆದರೆ, ಬಹುತೇಕರು ವಯಸ್ಸಾದಂತೆ ಮರೆವು ಸರ್ವೇ ಸಾಮಾನ್ಯವೆಂದು ನಿರ್ಲಕ್ಷ್ಯ ಮಾಡುತ್ತಾರೆ. ಮರೆವು ರೋಗ ಕುರಿತಂತೆ ಸಮಾಜದಲ್ಲಿ ಜಾಗೃತಿ ಇಲ್ಲ ಎನ್ನುತ್ತಾರೆ ಆರ್‌.ಟಿ. ನಗರದಲ್ಲಿನ ಡೇ ಕೇರ್‌ ಸೆಂಟರ್‌ನ ಮೇಲ್ವಿಚಾರಕಿ ಶ್ರೀಜಾರಾಣಿ.

ಕಾಳಜಿವಹಿಸದಿರುವುದು ಮರೆವಿಗೆ ಕಾರಣ: ವೃದ್ಧರ ಬಗ್ಗೆ ಕಾಳಜಿ ವಹಿಸದೇ ಇರುವುದರಿಂದ ಇಂದು ಮರೆವಿನ ಕಾಯಿಲೆಯ ಪ್ರಮಾಣ ತೀವ್ರ ವಾಗುತ್ತದೆ. ಅಂತವರಿಗೆ ತಾನು ಏನು ಮಾಡುತ್ತಿದ್ದೇನೆ ಎಂಬ ಅರಿವು ಕೂಡ ಇರುವುದಿಲ್ಲ. ತಾನು ಎಲ್ಲಿದ್ದೀನಿ, ಏನು ಮಾಡುತ್ತಿದ್ದೀನಿ ಎಂಬ ವಿಷಯಗಳನ್ನು ಅವರಿಗೆ ಸದಾ ತಿಳಿಸಿಕೊಡಬೇಕಾಗುತ್ತದೆ. ಆಗ ಮಾತ್ರ ಅವರು ಪ್ರಸ್ತುತತೆಯಲ್ಲಿ ಇರಲು ಸಾಧ್ಯವಾಗುತ್ತದೆ ಎನ್ನುತ್ತಾರೆ.

ಈ ಕಾಯಿಲೆಯಿಂದ ಬಳಲುತ್ತಿದ್ದವರಿಗೆ ಸಹಾಯವಾಗಲೆಂದು ನೈಟಿಂಗೈಲ್ಸ್‌ ಮೆಡಿಕಲ್‌ ಟ್ರಸ್ಟ್‌ ನಗರದ ಆರ್‌.ಟಿ. ನಗರ, ಜಯನಗರ ಹಾಗೂ ಕಸ್ತೂರಿ ನಗರ ಮೂರು ಪ್ರದೇಶಗಳಲ್ಲಿ “ಡೇ ಕೇರ್‌ ಸೆಂಟರ್‌’ ಅನ್ನು ಪ್ರಾರಂಭಿಸಿದೆ. ನಗರದ ವಿವಿಧ ಸ್ಥಳಗಳಿಂದ ಈ ಕೇಂದ್ರಗಳಿಗೆ ನಿತ್ಯ 40 ರಿಂದ 50 ವಯೋವೃದ್ಧರು ಆಗಮಿಸುತ್ತಾರೆ. ಇವರನ್ನು ಬೆಳಗ್ಗೆ ಮನೆಯವರೇ ಕೇಂದ್ರಕ್ಕೆ ಬಿಟ್ಟು, ಸಂಜೆ ಕರೆದುಕೊಂಡು ಹೋಗಲಾಗುತ್ತದೆ.

ಡೇ ಕೇರ್‌ಪ್ರಮುಖ ಚಟುವಟಿಕೆಗಳು: ನಿತ್ಯ ಬೆಳಗ್ಗೆಯಿಂದ ಸಂಜೆವರೆಗೆ ವಿವಿಧ ಚಟುವಟಿಕೆಗಳನ್ನು ಹೇಳಿಕೊಡಲಾಗುತ್ತದೆ. ಮುಂಜಾನೆ ಯಿಂದ ವಯಸ್ಸಿನ ಆಧಾರ ಮೇಲೆ ದೈಹಿಕ ಚಟುವಟಿಕೆಗಳು, ಪಾರ್ಥನೆ, ಗುಂಪು ಚಟುವಟಿಕೆ, ವೀಕ್ಷಣೆ ಮತ್ತು ಬರೆಯುವುದು ಹಾಗೂ ಗ್ರಹಿಕೆಗೆಸಂಬಂಧಿಸಿದಂತಹ ಚಟುವಟಿಕೆಗಳನ್ನು ಮಾಡಿಸಲಾಗುತ್ತದೆ. ನಂತರ ಕೇರಂ, ಮ್ಯೂಜಿಕ್‌, ವಸ್ತುಗಳನ್ನು ಗುರುತಿಸುವುದು ಸೇರಿ ದೈಹಿಕ ಸಾಮರ್ಥ್ಯಕ್ಕೆ ಸರಿಯಾಗಿ ಆಟೋಪಕರಣ ಹೊಂದಿರುತ್ತದೆ. ಹೆಚ್ಚು ಮರೆವು ಇರುವವರಿಗೆ ಇವತ್ತಿನ ವಾರ, ದಿನಾಂಕದಿಂದ ನಿತ್ಯ ಬಳಕೆಯ ವಸ್ತುಗಳ ಹೆಸರುಗಳನ್ನು ಪ್ರತಿದಿನವೂ ತಿಳಿಸಿಕೊಡಲಾಗುತ್ತದೆ. ಇಷ್ಟೇ ಅಲ್ಲದೇ, ಶಾಲಾ-ಕಾಲೇಜು, ಅಪಾರ್ಟ್ ಮೆಂಟ್‌ ಕಾಂಪ್ಲೆಕ್ಸ್‌, ಕ್ಲಬ್‌ಗಳು ಸೇರಿ ಇನ್ನಿತರೆ ಪ್ರದೇಶಗಳಲ್ಲಿ ಈ ಕಾಯಿಲೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ತಿಂಗಳಿಗೊಮ್ಮೆ “ಡಿಮೆನ್ಶಿಯಲ್‌ ಫ್ರೆಂಡ್ಸ್‌’ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ.

ಡಿಮೆನ್ಶಿಯಾ(ಮರೆವು)ದ ಎಲ್ಲಾ ಪ್ರಕರಣಗಳನ್ನು ತಡೆಗಟ್ಟಲು ಸಾಧ್ಯವಾಗುವುದಿಲ್ಲ. ಹಣ್ಣು, ತರಕಾರಿ, ಧಾನ್ಯಗಳಂತಹ ಪೌಷ್ಟಿಕಾಂಶ ಆಹಾರ ಸೇವನೆ, ಮೆದುಳಿಗೆ ಸರಿಯಾದ ರಕ್ತದ ಸಂಚಲನಕ್ಕಾಗಿ ನಿತ್ಯ ನಿಯಮಿತ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು, ಉತ್ತಮ ನಿದ್ರೆ ಹಾಗೂ ಸ್ನೇಹಿತರು ಥವಾ ಕುಟುಂಬದೊಂದಿಗೆ ಸಂವಹನ ನಡೆಸುವುದ ರಿಂದ ಈ ಕಾಯಿಲೆಯ ಅಪಾಯವನ್ನು ಕಡಿಮೆಮಾಡಬಹುದು.ಡಾ.ಎಚ್‌.ಸಂತೋಷ್‌, ನರರೋಗ ತಜ್ಞ.

ರೋಗದ ಲಕ್ಷಣಗಳು:

 ನಿತ್ಯ ಬಳಸುವ ವಸ್ತುಗಳನ್ನು ಮರೆಯುವುದು.

 ಯಾವ ಯಾವ ವಸ್ತುಗಳನ್ನು ಎಲ್ಲೆಲ್ಲಿ ಇಡಬೇಕು

ಎಂಬ ಅರಿವು ಇಲ್ಲದಿರುವುದು.

 ಅಸಭ್ಯವಾಗಿ ವರ್ತಿಸುವುದು

 ಮರದ ನೆರಳು ಕಂಡರೆ, ಯಾರೋ ನಮ್ಮನ್ನು ಗಮನಿಸುತ್ತಿದ್ದಾರೆ

ಅಥವಾ ಹಿಂಬಾಲಿಸುತ್ತಿದ್ದಾರೆ ಅನ್ನಿಸುವುದು.

 ರಸ್ತೆಯಲ್ಲಿ ಯಾರಾದರೂ ಹೋಗುತ್ತಿದ್ದರೆ, ನಮ್ಮನ್ನು

ಹೊಡೆಯಲಿಕ್ಕೆ ಬರುತ್ತಿದ್ದಾರೆ ಎಂದು ಭಯಪಡುವುದು

ಅಥವಾ ಅವರಿಗೆ ಹೊಡೆಯಲಿಕ್ಕೆ ಹೋಗುವುದು.

 ನಮ್ಮ ಮನೆಯ ವಸ್ತುಗಳನ್ನು ಯಾರೋ ಬಂದು

ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಭಾಸವಾಗುವುದು.

 ವರ್ತನೆಗಳಲ್ಲಿ ಬದಲಾವಣೆ (ಕೋಪ, ಸಂತೋಷ) ಜತೆಗೆ

ವರ್ತನೆಯಲ್ಲಿ ನಿಯಂತ್ರಣ ಇಲ್ಲದಿರುವುದು.

 ಪದಗಳು, ಅಂಕಿ-ಸಂಖ್ಯೆಯ ಅರಿವು ಕ್ರಮೇಣ ಕ್ಷೀಣಿಸುವುದು.

 

ಭಾರತಿ ಸಜ್ಜನ್‌

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Instagram provides clues to finding suspect who had been on the run for 9 years

Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್

21-cancer

Bengaluru: ಪ್ರತಿವರ್ಷ 500 ಮಕಳಲ್ಲಿ ಕ್ಯಾನ್ಸರ್‌ ಪತ್ತೆ !

20-metro

Metro: ಮರುಪರಿಷ್ಕರಣೆ: ತಪ್ಪದ ಮೆಟ್ರೋ ದರ ಗೊಂದಲ

19-bng

Bengaluru: 1.84 ಲಕ್ಷ ಬೀದಿ ನಾಯಿಗಳಿಗೆ ಸಂಯುಕ್ತ ಲಸಿಕೆ

18-bng

Bengaluru: ಇಂಧನ, ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.