ಬೇಡವೇ ಬೇಡ ಕ್ಯಾಂಟೀನ್‌ ಊಟ


Team Udayavani, Oct 30, 2018, 11:52 AM IST

bedave.jpg

ಬೆಂಗಳೂರು: ಇಂದಿರಾ ಕ್ಯಾಂಟೀನ್‌ಗಳಿಂದ ಪೂರೈಕೆ ಮಾಡಲಾಗಿದ್ದ ಊಟ ಮಾಡದೆ ಅಸಡ್ಡೆ ತೋರಿದ ಪಾಲಿಕೆ ಸದಸ್ಯರು, ಖಾಸಗಿ ಹೋಟೆಲ್‌ನಿಂದ ಭರ್ಜರಿ ಊಟ ತರಿಸಿದ ತಿಂದ ಪ್ರಸಂಗ ಸೋಮವಾರ ನಡೆಯಿತು.

ಇಂದಿರಾ ಕ್ಯಾಂಟೀನ್‌ಗಳಲ್ಲಿ ನೀಡಲಾಗುತ್ತಿರುವ ಆಹಾರದ ರುಚಿ ಹಾಗೂ ಗುಣಮಟ್ಟ ಹೇಗಿದೆ ಎಂಬುದನ್ನು ಪಾಲಿಕೆ ಸದಸ್ಯರಿಗೆ ತಿಳಿಸುವ ಉದ್ದೇಶದಿಂದ ನೂತನ ಮೇಯರ್‌ ಗಂಗಾಂಬಿಕೆ ಅವರು ಸೋಮವಾರ ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳಿಗಾಗಿ ಇಂದಿರಾ ಕ್ಯಾಂಟೀನ್‌ನಿಂದ 500 ಜನರಿಗೆ ಊಟ ತರಿಸಲಾಗಿತ್ತು. ಆದರೆ, ಊಟ ತಿನ್ನುವ ಮೊದಲೇ ಇಂದಿರಾ ಕ್ಯಾಂಟೀನ್‌ ಊಟ ಕಳೆಪೆಯಾಗಿರುತ್ತದೆ.

ಬಡವರು ತಿನ್ನುವ ಊಟ ನಾವೇಕೆ ತಿನ್ನಬೇಕೆಂದು ಊಟ ಮಾಡದೆ ಸದಸ್ಯರು ಹೊರಟು ಹೋದರು. ಮೇಯರ್‌, ಆಯುಕ್ತರು ಹಾಗೂ ಆಡಳಿತ ಪಕ್ಷ ನಾಯಕ ಸೇರಿ ಭದ್ರತಾ ಸಿಬ್ಬಂದಿ ಮಾತ್ರ ಊಟ ಮಾಡುವಂತಾಯಿತು. ಹೀಗಾಗಿ ಸುಮಾರು 400 ಜನರಿಗಾಗುಷ್ಟು ಊಟ ಉಳಿದಿತ್ತು. ಜತೆಗೆ ಪಾಲಿಕೆ ಸದಸ್ಯರಿಗಾಗಿ ತರಿಸಲಾಗಿದ್ದ ಚಿಪ್ಸ್‌, ಬಿಸ್ಕತ್ತು ಪ್ಲೇಟುಗಳಲ್ಲಿಯೇ ಉಳಿದಿತ್ತು. 

ಹೋಟೆಲ್‌ ಊಟ ಬಲು ರುಚಿ: ಇಂದಿರಾ ಕ್ಯಾಂಟೀನ್‌ಗಳಲ್ಲಿ ಊಟದ ಗುಣಮಟ್ಟ ಹೆಚ್ಚಾಗಿಲ್ಲ, ರುಚಿ ಸರಿಯಾಗಿರುವುದಿಲ್ಲವೆಂದು ಪಾಲಿಕೆ ಸಭೆಗಳಲ್ಲಿ ಸದಾ ಆಡಳಿತ ಪಕ್ಷದ ವಿರುದ್ಧ ಆರೋಪ ಮಾಡುವ ವಿರೋಧ ಪಕ್ಷ ನಾಯಕ ಪದ್ಮನಾಭರೆಡ್ಡಿ ಅವರು, ಸೋಮವಾರ ಇಂದಿರಾ ಕ್ಯಾಂಟೀನ್‌ನಿಂದ ತರಿಸಲಾಗಿದ್ದ ಊಟ ಮಾಡಲು ಮುಂದಾಗಲಿಲ್ಲ. ಬದಲಿಗೆ, ಖಾಸಗಿ ಹೋಟೆಲ್‌ನಿಂದ ಊಟವನ್ನು ತರಿಸಿಕೊಂಡು ಊಟ ಮಾಡಿದರು.

ಈ ಕುರಿತು ಕೇಳಿದರೆ, ಮೇಯರ್‌ ಪ್ರಚಾರಕ್ಕಾಗಿ ತರಿಸಿದ್ದಾರೆಂದು ಹೇಳಿದರು. ಇನ್ನು ಒಮ್ಮೆಯೂ ಇಂದಿರಾ ಕ್ಯಾಂಟೀನ್‌ಗಳಲ್ಲಿ ಊಟ ಮಾಡಿಲ್ಲವೆಂದು ತಾವೇ ಹೇಳುವ ಬಿಜೆಪಿ ಅಟ್ಟೂರು ಪಾಲಿಕೆ ಸದಸ್ಯೆ ನೇತ್ರಾ ಪಲ್ಲವಿ, ಇಂದಿರಾ ಕ್ಯಾಂಟೀನ್‌ ಊಟ ಕಳಪೆಯಾಗಿರುತ್ತದೆ. ಹೀಗಾಗಿ ಊಟ ಮಾಡುತ್ತಿಲ್ಲ ಎಂದು ಆರೋಪಿಸಿದರು. 

ಇಂದಿರಾ ಕ್ಯಾಂಟೀನ್‌ ಊಟ – ಗಂಗಾಂಬಿಕೆ: ಈ ಕುರಿತು ಪ್ರತಿಕ್ರಿಯಿಸಿದ ಮೇಯರ್‌ ಗಂಗಾಂಬಿಕೆ ಅವರು, ಉಪಮೇಯರ್‌ ರಮೀಳಾ ಉಮಾಶಂಕರ್‌ ಅವರಿಗೆ ನಿಧನದ ಸಂತಾಪ ನಡೆಸಿ ಸಭೆಯನ್ನು ಮುಂದೂಡಿದರಿಂದ ಸಭೆಯಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಲು ಸಾಧ್ಯವಾಗಲಿಲ್ಲ. ಆದರೆ, ಹೊರಗೆ ಬಂದ ಕೂಡಲೇ ಎಲ್ಲ ಸದಸ್ಯರಿಗೆ ಊಟ ಮಾಡಿಕೊಂಡು ಹೋಗುವಂತೆ ಹೇಳಿದ್ದೇನೆ ಎಂದು ಹೇಳಿದರು.

ಇನ್ನು ಸಭೆ ಅವಧಿಗೂ ಮುನ್ನವೇ ಮುಕ್ತಾಯವಾಗಿದ್ದರಿಂದ ಸದಸ್ಯರು ಊಟ ಮಾಡುವುದಕ್ಕೆ ಬಾರದೇ ಹೋಗಿದ್ದು, ಇಂದಿರಾ ಕ್ಯಾಂಟೀನ್‌ ಊಟ ಎಂಬ ಕಾರಣಕ್ಕೆ ಸದಸ್ಯರು ಊಟ ಮಾಡದೆ ಹೋಗಿಲ್ಲ. ಇಂದಿರಾ ಕ್ಯಾಂಟೀನ್‌ ಊಟವನ್ನು ಸ್ವತಃ ಊಟ ಮಾಡಿದ್ದು ತುಂಬಾ ರುಚಿಯಾಗಿತ್ತು.

ಇಂದಿರಾ ಕ್ಯಾಂಟೀನ್‌ಗಳಲ್ಲಿ ಗುಣಮಟ್ಟದ ಊಟ ದೊರೆಯುತ್ತಿಲ್ಲ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಹೇಳಿದರು. ಸೋಮವಾರ ತರಿಸಲಾಗಿದ್ದ ಊಟವನ್ನೂ ಇಂದಿರಾ ಕ್ಯಾಂಟೀನ್‌ಗಳಿಗೆ ವಾಪಸ್‌ ಕಳುಹಿಸಿದ್ದ ಊಟ ವ್ಯರ್ಥವಾಗಿಲ್ಲ. ತಮ್ಮ ಅವಧಿಯಲ್ಲಿ ನಡೆಯುವಂತಹ ಎಲ್ಲ ಸಭೆಗಳಿಯೂ ಇಂದಿರಾ ಕ್ಯಾಂಟೀನ್‌ನಿಂದಲೇ ಊಟ ತರಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಕೆಲ ಸದಸ್ಯರು ಇಂದಿರಾ ಕ್ಯಾಂಟೀನ್‌ನಿಂದ ತರಲಾದ ಊಟ ಮಾಡದೇ ಕಳಪೆ ಎಂದು ಆರೋಪ ಮಾಡಿವುದು ಸರಿಯಲ್ಲ.  ಮೇಯರ್‌, ಆಯುಕ್ತರು ಹಾಗೂ ತಾವು ಊಟ ಮಾಡಿದ್ದು, ತುಂಬಾ ಚನ್ನಾಗಿತ್ತು. ಇಂದಿರಾ ಕ್ಯಾಂಟೀನ್‌ನಲ್ಲಿ ಮುದ್ದೆ ಹಾಗೂ ಚಪಾತಿ ಬೇಕೆಂದು ಸಾರ್ವಜನಿಕರಿಂದ ಬೇಡಿಕೆ ಇದೆ. ಅದನ್ನು ಪಾಲಿಕೆ ಸಭೆಯಲ್ಲಿ ಚರ್ಚೆ ಮಾಡಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು.
-ಎಂ.ಶಿವರಾಜು, ಆಡಳಿತ ಪಕ್ಷ ನಾಯಕ 

ಸಾಮಾನ್ಯವಾಗಿ ಪಾಲಿಕೆ ಸದಸ್ಯರು 2 ಗಂಟೆಗೆ ಮೊದಲು ಊಟ ಮಾಡುವುದಿಲ್ಲ. ಆದರೆ, ಸಂತಾಪ ಸಭೆಯಿದ್ದರಿಂದ ಬೇಗ ಸಭೆ ಮುಂದೂಡಿದ ಕಾರಣ ಅವರು ತಿನ್ನದೇ ಹೋಗಿರಬಹುದು. 
-ಎನ್‌.ಮಂಜುನಾಥ ಪ್ರಸಾದ್‌

ಕ್ಯಾಂಟೀನ್‌ ಊಟದಲ್ಲಿ ಏನಿತ್ತು?: ಶಾವಿಗೆ ಕೀರು, ರೈಸ್‌ಬಾತ್‌, ಉರುಳಿಕಾಯಿ ಪಲ್ಯ, ಮೊಸರು ಬಜ್ಜಿ, ಅನ್ನ-ಸಂಬಾರು, ಉಪ್ಪಿನಕಾಯಿ ಹಾಗೂ ಮೊಸರನ್ನ

ರಮೀಳಾ ಅವರಿಗೆ ಸಂತಾಪ: ಉಪಮೇಯರ್‌ ರಮೀಳಾ ಉಮಾಶಂಕರ್‌ ಅವರ ಅಕಾಲಿಕ ನಿಧನರಾದ ಹಿನ್ನೆಲೆಯಲ್ಲಿ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಸಂತಾಪ ಸೂಚಿಸಿ, ಸಭೆಯನ್ನು ಅ. 31ಕ್ಕೆ ಮುಂದೂಡಲಾಯಿತು. ಈ ಅವಧಿಯ ಮೇಯರ್‌ ಹಾಗೂ ಉಪಮೇಯರ್‌ ಅವರು ಪ್ರಥಮ ಸಭೆಯಾಗಬೇಕಿತ್ತು.

ಸಂಪ್ರದಾಯದಂತೆ ನೂತನ ಮೇಯರ್‌ ಮತ್ತು ಉಪಮೇಯರ್‌ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುವ ಮೂಲಕ ಆರಂಭವಾಗಬೇಕಿದ್ದ ಸಭೆ ಇತ್ತೀಚೆಗೆ ಹೃದಯಾಘಾತದಿಂದ ನಿಧನರಾದ ಉಪಮೇಯರ್‌ ರಮೀಳಾ ಉಮಾಶಂಕರ್‌ ಅವರಿಗೆ ಸಂತಾಪ ಸೂಚಿಸಲು ಮೀಸಲಿಡಲಾಯಿತು. ಜತೆಗೆ ಕಾವೇರಿಪುರ, ವಿಜಯನಗರ ಯಾವುದಾದರೂ ಒಂದು ವೃತ್ತ, ರಸ್ತೆಗೆ ಅವರ ಹೆಸರಿಡಬೇಕು ಎಂದು ಹಲವು ಸದಸ್ಯರು ಮನವಿ ಮಾಡಿದರು.

ಮಧುಮೇಹಿಗಳಿಗಾಗಿ ಚಪಾತಿ, ಮುದ್ದೆ ಊಟ  
ಬೆಂಗಳೂರು:
ಮಧುಮೇಹಿಗಳ ಅನುಕೂಲಕ್ಕಾಗಿ ಇಂದಿರಾ ಕ್ಯಾಂಟೀನ್‌ಗಳು ಹಾಗೂ ಪಾಲಿಕೆ ಸಭೆಗಳಲ್ಲಿ ಮುದ್ದೆ ಹಾಗೂ ಚಪಾತಿ ಊಟ ನೀಡುವ ಕುರಿತು ಚರ್ಚೆ ನಡೆಯುತ್ತಿದ್ದು, ಶೀಘ್ರದಲ್ಲಿಯೇ ಈ ಕುರಿತು ನಿರ್ಧರ ಕೈಗೊಳ್ಳುವ ಸಾಧ್ಯತೆಯಿದೆ. 

ಮೇಯರ್‌ ಗಂಗಾಂಬಿಕೆ ಹಾಗೂ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಮಧುಮೇಹ ಇರುವ ಪಾಲಿಕೆ ಸದಸ್ಯರಿಗೆ ಅನುಕೂಲವಾಗುವಂತೆ ಮುಂದಿನ ದಿನಗಳಲ್ಲಿ ಚಪಾತಿ ಹಾಗೂ ಮುದ್ದೆ ಊಟ ನೀಡುವ ಕುರಿತು ಚರ್ಚೆ ನಡೆಸಿದ್ದು, ಶೀಘ್ರದಲ್ಲಿಯೇ ಈ ಕುರಿತು ತೀರ್ಮಾನ ಕೈಗೊಳ್ಳಲು ತೀರ್ಮಾನಿಸಿದ್ದಾರೆ. 

ಮುದ್ದೆ, ಚಪಾತಿ ಊಟ ನೀಡಬೇಕಾದರೆ ಹೆಚ್ಚಿನ ಅನುದಾನ ಬೇಕಾಗುತ್ತದೆ. ಪಾಲಿಕೆಯಿಂದ ಹೆಚ್ಚುವರಿ ಮೊತ್ತ ಭರಿಸಿದರೆ ಅಂತಹ ಊಟ ನೀಡಲು ಸಮಸ್ಯೆಯಿಲ್ಲ ಎಂದು ಆಯುಕ್ತರು ಹೇಳಿದ್ದಾರೆ. ಅಂತಿಮವಾಗಿ ಮುಂದಿನ ಪಾಲಿಕೆ ಸಭೆಯಲ್ಲಿ ಈ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳಲು ನಿರ್ಧರಿಸಿದ್ದು, ಕೌನ್ಸಿಲ್‌ ಒಪ್ಪಿಗೆ ಸಿಕ್ಕರೆ ಮುಂದೆ ಇಂದಿರಾ ಕ್ಯಾಂಟೀನ್‌ಗಳಲ್ಲಿ  ಮುದ್ದೆ, ಚಪಾತಿ ಊಟ ದೊರೆಯುವ ಸಾಧ್ಯತೆಯಿದೆ.

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Namma Metro: ಹಳದಿ ಮಾರ್ಗ ಪೂರ್ಣಗೊಂಡಿದ್ದರೂ ಬೋಗಿಗಳ ಕೊರತೆ

Namma Metro: ಹಳದಿ ಮಾರ್ಗ ಪೂರ್ಣಗೊಂಡಿದ್ದರೂ ಬೋಗಿಗಳ ಕೊರತೆ

Kidnapping Case: ವ್ಯಕ್ತಿಯ ಅಪಹರಿಸಿ ಸುಲಿಗೆಗೈದ 8 ಮಂದಿ ಬಂಧನ

Kidnapping Case: ವ್ಯಕ್ತಿಯ ಅಪಹರಿಸಿ ಸುಲಿಗೆಗೈದ 8 ಮಂದಿ ಬಂಧನ

Younis Zaroora: ಎಂಜಿ ರಸ್ತೇಲಿ ಇನ್‌ಸ್ಟಾಗ್ರಾಮ್‌ ಸ್ಟಾರ್‌ ಯೂನಿಸ್‌ ನೋಡಲು ಕಿಕ್ಕಿರಿದ ಜನ

Younis Zaroora: ಎಂಜಿ ರಸ್ತೇಲಿ ಇನ್‌ಸ್ಟಾಗ್ರಾಮ್‌ ಸ್ಟಾರ್‌ ಯೂನಿಸ್‌ ನೋಡಲು ಕಿಕ್ಕಿರಿದ ಜನ

Private bus: ಖಾಸಗಿ ಬಸ್‌ಗಳಿಂದ ಬೇಕಾಬಿಟ್ಟಿ ದರ ವಸೂಲಿ

Private bus: ಖಾಸಗಿ ಬಸ್‌ಗಳಿಂದ ಬೇಕಾಬಿಟ್ಟಿ ದರ ವಸೂಲಿ

2-bng

Bengaluru: ನಗರದೆಲ್ಲೆಡೆ ಟ್ರಾಫಿಕ್ ಜಾಮ್‌, ಮೆಜೆಸ್ಟಿಕ್‌ ರಷ್‌! ‌

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.