ನನ್ನೆಲ್ಲ ಸಾಧನೆಗೆ ರಂಗಭೂಮಿ ಕಾರಣ: ನಟ ಬಿರಾದಾರ್‌


Team Udayavani, Jan 23, 2017, 11:54 AM IST

biraadar.jpg

ಬೆಂಗಳೂರು: ಕಲಾವಿದರ ಪರವಾದ ಯೋಜನೆಗಳೆಲ್ಲವನ್ನೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸರ್ಕಾರ ವಹಿಸಿಕೊಡಬೇಕು. ಆಗ ಕಲಾವಿದರು ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತದೆ ಎಂದು ಹಿರಿಯ ರಂಗಕರ್ಮಿ ಹಾಗೂ ಚಲನಚಿತ್ರ ನಟ ವೈಜನಾಥ ಬಿರಾದಾರ್‌ ಅಭಿಪ್ರಾಯ ವ್ಯಕ್ತಪಡಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕನ್ನಡ ಭವನದ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ಮನೆಯಂಗಳದಲ್ಲಿ ಮಾತುಕತೆ-183 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಲಾವಿದರಿಗೆ ಮಾಸಾಶನ, ನಿವೇಶನ, ಮನೆ ಇತ್ಯಾದಿ ಸವಲತ್ತುಗಳನ್ನು ನೀಡುವ ಯೋಜನೆಗಳು ಬೇರೆ ಬೇರೆ ಇಲಾಖೆಗಳಲ್ಲಿ ಹಂಚಿ ಹೋಗಿವೆ.

ಆ ಇಲಾಖೆ ಅಧಿಕಾರಿಗಳಿಗೆ ಕಲಾವಿದರ ಮಾಹಿತಿ ಇರುವುದಿಲ್ಲ. ಶಿಫಾರಸು ಮಾಡಿಸುವ ಶಕ್ತಿ ಕಲಾವಿದರಿಗಿರುವುದಿಲ್ಲ. ಆದ್ದರಿಂದ ಕಲಾವಿದರಿಗಾಗಿ ಇರುವ ಯೋಜನೆಗಳೆಲ್ಲವನ್ನೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ವಹಿಸಿದರೆ ಸುಲಭವಾಗಿ ಅವು ಅರ್ಹ ಫ‌ಲಾನುಭವಿಗಳಿಗೆ ಸಿಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ನನ್ನೆಲ್ಲ ಸಾಧನೆಗೆ ರಂಗಭೂಮಿಯೇ ಕಾರಣ. ಪವಿತ್ರವಾದ ರಂಗಭೂಮಿಯಲ್ಲಿ ಕಷ್ಟಪಟ್ಟಷ್ಟು ಯಶಸ್ಸು ಸಿಗುತ್ತದೆ. ಯಾವುದೇ ಕಾರಣಕ್ಕೂ ಕಲಾವಿದರು ದುಶ್ಚಟಗಳಿಗೆ ಬಲಿಯಾಗಬಾರದು. ಕಲಾವಿದರ ಬಗ್ಗೆ ಜನರಿಗೆ ಅಪಾರವಾದ ಪ್ರೀತಿ ಇರುತ್ತದೆ. ದುಶ್ಚಟಗಳಿದ್ದರೆ ಯಾರು ನಮ್ಮನ್ನು ನಂಬುವುದಿಲ್ಲ ಮತ್ತು ಪ್ರೀತಿಗಳಿಸಲು ಸಾಧ್ಯವಾಗುವುದಿಲ್ಲ.

ಕಲಾವಿದರಿಗೆ ಸಂಪತ್ತು ಬರದಿದ್ದರೂ ಪರವಾಗಿಲ್ಲ. ಆರೋಗ್ಯ, ಆಯಸ್ಸು ಚೆನ್ನಾಗಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು. ಕಲಾವಿದ ಯಶಸ್ಸಿನ ಉತ್ತುಂಗಕ್ಕೆ ಏರಿದರೂ ಅಹಂಕಾರ ಬರಬಾರದು. ಪ್ರೇಕ್ಷಕರಿಂದ ಬರುವ ಒಳ್ಳೆಯ ಮತ್ತು ಕೆಟ್ಟ ವಿಮರ್ಶೆಗೆ ತೆರೆದುಕೊಂಡಿರಬೇಕು. ನಿಂದನೆ ಸಹಿಸಿಕೊಳ್ಳುವ ಸಹನೆ ಆತನಿಗಿರಬೇಕಾದ ದೊಡ್ಡ ಗುಣ. ಅದೆಲ್ಲವನ್ನೂ ರಂಗಭೂಮಿ ಕಲಿಸಿದೆ.

ಪ್ರಸ್ತುತ ರಂಗಭೂಮಿ ಕಷ್ಟದಲ್ಲಿದ್ದು, ಅದನ್ನು ಪುನಶ್ಚೇತನಗೊಳಿಸಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ. ಪ್ರತಿ ತಾಲೂಕು, ಜಿಲ್ಲಾ ಕೇಂದ್ರದಲ್ಲಿ ರಂಗಮಂಟಪ ಸ್ಥಾಪಿಸಿದರೆ ಕಲಾವಿದರಿಗೆ ಅನುಕೂಲವಾಗುತ್ತದೆ ಎಂದರು.ಕಳೆದ 30 ವರ್ಷಗಳಿಂದ ರಂಗಭೂಮಿ ಮತ್ತು ಚಲನಚಿತ್ರಗಳಲ್ಲಿ ನಟಿಸುತ್ತಿದ್ದೇನೆ.

ಈಗಲೂ ನನಗೆ ಸ್ವಂತ ಮನೆಯಿಲ್ಲ. ಒಬ್ಬ ಕಲಾವಿದನಿಗೆ ಆತನ ಪ್ರಮುಖ ಅಗತ್ಯತೆ ಈಡೇರಿಸಿಕೊಳ್ಳಲು ಸಾಧ್ಯವಾಗದಿದ್ದರೆ ಮುಂದೆ ರಂಗಭೂಮಿಗೆ ಯಾರು ಬರುವುದಿಲ್ಲ. ಹಿರಿಯ ಕಲಾವಿದರಿಗೆ 1500 ಮಾಶಾಸನ ನೀಡುತ್ತಿದ್ದು, ಅದು ಯಾವುದಕ್ಕೂ ಸಾಲದು. ಸರ್ಕಾರ ಕಲಾವಿದರ ಬಗ್ಗೆ ಸ್ವಲ್ಪ ಉದಾರ ಮನೋಭಾವ ತಾಳಬೇಕು ಎಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಕೆ.ಎ.ದಯಾನಂದ ಇದ್ದರು.

ಟಾಪ್ ನ್ಯೂಸ್

Belagavi: ಸಂತೋಷ ಪದ್ಮಣ್ಣವರ ಕೊಲೆ ಪ್ರಕರಣ: ನಾಲ್ಕಕ್ಕೇರಿದ ಬಂಧಿತರ ಸಂಖ್ಯೆ

Belagavi: ಸಂತೋಷ ಪದ್ಮಣ್ಣವರ ಕೊಲೆ ಪ್ರಕರಣ: ನಾಲ್ಕಕ್ಕೇರಿದ ಬಂಧಿತರ ಸಂಖ್ಯೆ

Rain-Kendriya

Cloud Burst: ಬೆಂಗಳೂರಿನ ಯಲಹಂಕದಲ್ಲಿ ದಾಖಲೆಯ ಮಳೆ; 10 ಬಡಾವಣೆ ಜಲಾವೃತ

Under construction building collapses in Bengaluru

Bengaluru: ಕುಸಿದ ನಿರ್ಮಾಣ ಹಂತದ ಕಟ್ಟಡ; ಮೂವರು ಸಾವು, ಹಲವರು ಸಿಲುಕಿರುವ ಶಂಕೆ

Stock Market: ಷೇರುಪೇಟೆ ಸೂಚ್ಯಂಕ 900ಕ್ಕೂ ಅಧಿಕ ಅಂಕ ಕುಸಿತ; 9 ಲಕ್ಷ ಕೋಟಿ ರೂ. ನಷ್ಟ

Stock Market: ಷೇರುಪೇಟೆ ಸೂಚ್ಯಂಕ 900ಕ್ಕೂ ಅಧಿಕ ಅಂಕ ಕುಸಿತ; 9 ಲಕ್ಷ ಕೋಟಿ ರೂ. ನಷ್ಟ

Prithvi Shaw out of the Ranji team too; Is Mumbai player’s cricket life over

Prithvi Shaw: ರಣಜಿ ತಂಡದಿಂದಲೂ ಪೃಥ್ವಿ ಔಟ್;‌ ಮುಗಿಯಿತಾ ಮುಂಬೈ ಆಟಗಾರನ ಕ್ರಿಕೆಟ್‌ ಜೀವನ?

JPC ವಕ್ಫ್ ಸಭೆಯಲ್ಲಿ ಅಶಿಸ್ತಿನ ವರ್ತನೆ: ಟಿಎಂಸಿಯ ಕಲ್ಯಾಣ್ ಬ್ಯಾನರ್ಜಿ ಅಮಾನತು

JPC ವಕ್ಫ್ ಸಭೆಯಲ್ಲಿ ಅಶಿಸ್ತಿನ ವರ್ತನೆ… ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಅಮಾನತು

ಕೃಷ್ಣಾ ನದಿಯಲ್ಲಿ ಈಜಲು ಹೋಗಿ ಯುವಕರಿಬ್ಬರು ಸಾವು

Yadagiri: ಕೃಷ್ಣಾ ನದಿಯಲ್ಲಿ ಈಜಲು ಹೋಗಿ ಯುವಕರಿಬ್ಬರು ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rain-Kendriya

Cloud Burst: ಬೆಂಗಳೂರಿನ ಯಲಹಂಕದಲ್ಲಿ ದಾಖಲೆಯ ಮಳೆ; 10 ಬಡಾವಣೆ ಜಲಾವೃತ

Under construction building collapses in Bengaluru

Bengaluru: ಕುಸಿದ ನಿರ್ಮಾಣ ಹಂತದ ಕಟ್ಟಡ; ಮೂವರು ಸಾವು, ಹಲವರು ಸಿಲುಕಿರುವ ಶಂಕೆ

Crime: ನಿಧಾನವಾಗಿ ಮಾತನಾಡಿ ಎಂದಿದ್ದಕ್ಕೆ  ಗಲಾಟೆ; ಪಾನಿಪೂರಿ ವ್ಯಾಪಾರಿ ಹತ್ಯೆ

Crime: ನಿಧಾನವಾಗಿ ಮಾತನಾಡಿ ಎಂದಿದ್ದಕ್ಕೆ  ಗಲಾಟೆ; ಪಾನಿಪೂರಿ ವ್ಯಾಪಾರಿ ಹತ್ಯೆ

Bengaluru Rain: ಪರಿಹಾರ ಕಾರ್ಯಕ್ಕೆ 1,000 ಕೋಟಿ ನೀಡಿ; ಅಶೋಕ್‌

Bengaluru Rain: ಪರಿಹಾರ ಕಾರ್ಯಕ್ಕೆ 1,000 ಕೋಟಿ ನೀಡಿ; ಅಶೋಕ್‌

Bengaluru: ಆಟವಾಡುವಾಗ ಕೆಂಗೇರಿ ಕೆರೆಗೆ ಬಿದ್ದ ಅಣ್ಣ- ತಂಗಿಗೆ ಹುಡುಕಾಟ

Bengaluru: ಆಟವಾಡುವಾಗ ಕೆಂಗೇರಿ ಕೆರೆಗೆ ಬಿದ್ದ ಅಣ್ಣ- ತಂಗಿಗೆ ಹುಡುಕಾಟ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Belagavi: ಸಂತೋಷ ಪದ್ಮಣ್ಣವರ ಕೊಲೆ ಪ್ರಕರಣ: ನಾಲ್ಕಕ್ಕೇರಿದ ಬಂಧಿತರ ಸಂಖ್ಯೆ

Belagavi: ಸಂತೋಷ ಪದ್ಮಣ್ಣವರ ಕೊಲೆ ಪ್ರಕರಣ: ನಾಲ್ಕಕ್ಕೇರಿದ ಬಂಧಿತರ ಸಂಖ್ಯೆ

Rain-Kendriya

Cloud Burst: ಬೆಂಗಳೂರಿನ ಯಲಹಂಕದಲ್ಲಿ ದಾಖಲೆಯ ಮಳೆ; 10 ಬಡಾವಣೆ ಜಲಾವೃತ

12

Chikkamagaluru: ಭಾರೀ ಮಳೆ; ರಸ್ತೆ ಕಾಣದೆ ಕಾರುಗಳು ಮುಖಾಮುಖಿ ಡಿಕ್ಕಿ

Under construction building collapses in Bengaluru

Bengaluru: ಕುಸಿದ ನಿರ್ಮಾಣ ಹಂತದ ಕಟ್ಟಡ; ಮೂವರು ಸಾವು, ಹಲವರು ಸಿಲುಕಿರುವ ಶಂಕೆ

Stock Market: ಷೇರುಪೇಟೆ ಸೂಚ್ಯಂಕ 900ಕ್ಕೂ ಅಧಿಕ ಅಂಕ ಕುಸಿತ; 9 ಲಕ್ಷ ಕೋಟಿ ರೂ. ನಷ್ಟ

Stock Market: ಷೇರುಪೇಟೆ ಸೂಚ್ಯಂಕ 900ಕ್ಕೂ ಅಧಿಕ ಅಂಕ ಕುಸಿತ; 9 ಲಕ್ಷ ಕೋಟಿ ರೂ. ನಷ್ಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.