ಅಭ್ಯರ್ಥಿಗಳ ಹುಡುಕಾಟದಲ್ಲಿ ಸೋತ ಮತದಾರ!


Team Udayavani, Dec 13, 2021, 10:58 AM IST

elelction

ನೆಲಮಂಗಲ: ತಾಲೂಕಿನಲ್ಲಿ ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಯ ಅಬ್ಬರ ಜೋರಾಗಿದ್ದರೂ 141 ಅಭ್ಯರ್ಥಿಗಳು ಕಣದಲ್ಲಿರುವ ಪರಿಣಾಮ ಮತ ದಾರರು ಬೇಸರಗೊಂಡರೂ ಶೇ.80 ಮತದಾನ ಮಾಡಿದ್ದಾರೆ. ತಾಲೂಕಿನಲ್ಲಿ ಒಟ್ಟಾರೆ 2898 ಮತದಾರರಿದ್ದು, ನಗರದ ಸರಕಾರಿ ಪದವಿಪೂರ್ವಕಾಲೇಜು ಆವರಣ ದಲ್ಲಿ 6ಮತಗಟ್ಟೆಗಳ ವ್ಯವಸ್ಥೆ ಮಾಡಲಾಗಿತ್ತು.

ಒಬ್ಬ ಮತದಾರನಿಗೆ 15 ಅಭ್ಯರ್ಥಿಗಳಿಗೆ ಮತದಾನ ಮಾಡುವ ಅವಕಾಶ ಇತ್ತು. ತಾಲೂಕಿನ ಎಲ್ಲಾ ಮತ ದಾರರು ನಗರದಲ್ಲಿನ ಮತಕೇಂದ್ರದಲ್ಲಿಯೇ ಮತ ದಾನ ಮಾಡಲು ಅವಕಾಶವಿದ್ದ ಪರಿಣಾಮ ಜನಸಾಂದ್ರತೆ ಹೆಚ್ಚಾಗಿತ್ತು. ಚುನಾವಣೆಯ ಸ್ಥಳದಲ್ಲಿ 10ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿತ್ತು.

ಇದನ್ನೂ ಓದಿ:- ಭಾರತದಲ್ಲಿ 24 ಗಂಟೆಗಳಲ್ಲಿ 7,350 ಕೋವಿಡ್ ಪ್ರಕರಣ ಪತ್ತೆ, 7,973 ಮಂದಿ ಗುಣಮುಖ

ಬೆಳಗ್ಗೆ 7ರಿಂದ ಆರಂಭವಾದ ಚುನಾವಣೆ ಸಂಜೆ 5ಗಂಟೆಗೆ ಮುಕ್ತಾ ಯವಾಗಿದ್ದು ಬೆಳಗ್ಗೆ 11ಗಂಟೆ ಸುಮಾರಿಗೆ 350 ಜನ ಮತದಾನ ಮಾಡಿದರೇ 4ಗಂಟೆ ಸುಮಾರಿಗೆ 2260 ಜನ ಮತದಾನ ಮಾಡುವ ಮೂಲಕ ನಿರ್ದೇಶಕರ ಆಯ್ಕೆಗೆ ಮುಂದಾದರು. ಮತಗಟ್ಟೆಗಳನ್ನು ಬೆಂಗಳೂರಿನ ಪೂರ್ಣಪ್ರಜ್ಞಾ ಪಿಯು ಕಾಲೇಜಿಗೆ ಸ್ಥಳಾಂತರಿಸಲಾಗುತ್ತದೆ ಎಂದು ಕ್ಲಸ್ಟರ್‌ ಅಧಿಕಾರಿ ಆರ್‌.ರಾಮಾಂಜನೇಯ ತಿಳಿಸಿದರು.

ನಿಯಮಕ್ಕೆ ಎಳ್ಳುನೀರು: ಕೊರೊನಾ ಆತಂಕದಲ್ಲಿ ಎಚ್ಚರಿಕೆ ವಹಿಸಲು ಸರ್ಕಾರ ಆದೇಶ ನೀಡಿದ್ದರೂ ಒಕ್ಕಲಿಗರ ಚುನಾವಣೆಯಲ್ಲಿ ಮತದಾರರು ಹಾಗೂ ಪ್ರಚಾರ ಮಾಡುತ್ತಿದ್ದವರು ಮಾಸ್ಕ್, ಸಾಮಾಜಿಕ ಅಂತರ, ಕೊರೊನಾ ನಿಯಮ ಸಂಪೂರ್ಣವಾಗಿ ಮರೆತಿದ್ದರು.

ಕೆಲವು ಅಭ್ಯರ್ಥಿಗಳು, ಬೆಂಬಲಿಗರು ಮತಕೇಂದ್ರದ ಸಮೀಪ ಪ್ರಚಾರ ಮಾಡಿದರೂ ಈ ಬಗ್ಗೆ ತಾಲೂಕಿನಲ್ಲಿ ನೇಮಕ ಮಾಡಲಾಗಿದ್ದ ಕ್ಲಸ್ಟರ್‌ ಅಧಿಕಾರಿಗಳು ಕಂಡರೂ ಕಾಣದಂತೆ ಸುಮ್ಮನಿದ್ದರು.

ಗೊಂದಲದಲ್ಲಿ ಮತದಾರರು: ಬೆಂಗಳೂರು ಗ್ರಾಮಾಂತರ, ಬೆಂಗಳೂರು, ರಾಮನಗರ ಹಾಗೂ ಕೃಷ್ಣಗಿರಿ ಜಿಲ್ಲೆಗಳಲ್ಲಿ ರಾಜ್ಯ ಒಕ್ಕಲಿಗರ ಸಂಘದ 15 ನಿರ್ದೇಶಕರ ಸ್ಥಾನದ ಆಯ್ಕೆಗೆ ಚುನಾವಣೆ ನಡೆ ದಿದ್ದು, 141ಅಭ್ಯರ್ಥಿಗಳು ಸ್ಪರ್ಧೆ ಮಾಡಿರುವ ಪರಿಣಾಮ ಮತದಾರರು ಬ್ಯಾಲೇಟ್‌ ಪೇಪರ್‌ ನೋಡು ತ್ತಿದಂತೆ ಗಾಬರಿಯಾಗಿದ್ದರು. ಕೆಲವರು ಗೊಂದಲ ದಲ್ಲಿ ಮತಚಲಾವಣೆ ಮಾಡಿದರೇ, ಕೆಲವರು ಪೇಪರ್‌ಗಳಲ್ಲಿ ನಂಬರ್‌ ಬರೆದುಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಚಾಪೆಯಂತೆ ಇದ್ದ ಬ್ಯಾಲೇಟ್‌ ಪೇಪರ್‌ನಲ್ಲಿ ಗೊಂದಲದಿಂದ ಜನರು 15ಕ್ಕೂ ಹೆಚ್ಚು ಮತಗಳನ್ನು ಹಾಕಿರುವ ಮಾತುಗಳು ಕೇಳಿಬಂದಿದೆ. ನೆಚ್ಚಿನ ಅಭ್ಯರ್ಥಿಗಳ ಹುಡುಕಾಟದಲ್ಲಿ ಸಮಯ ಸಾಲದೇ ಸಿಕ್ಕವರಿಗೆ ಮತಚಲಾವಣೆ ಮಾಡಿರುವ ಮಾತುಗಳು ಮತದಾರರಿಂದ ಕೇಳಿಬಂತು.

ಎಂಎಲ್‌ಸಿ ಚುನಾವಣೆಗಿಂತ ಭರ್ಜರಿ: ಡಿ.10ರಂದು ನಡೆದ ವಿಧಾನಪರಿಷತ್‌ ಚುನಾವಣೆಗಿಂತ ಭರ್ಜರಿ ಪ್ರಚಾರ ಹಾಗೂ ಮತದಾನ ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ನಡೆದಿದ್ದು, ಒಂದು ಸಂಘದ ಚುನಾವಣೆ ಈ ಮಟ್ಟದಲ್ಲಿ ನಡೆದಿ ರುವುದು ಆಶ್ಚರ್ಯ ಎಂಬುದು ಸಾರ್ವಜನಿಕ ಅಭಿ ಪ್ರಾಯ. ತಾಲೂಕಿನಲ್ಲಿ ಕಡಿಮೆ ಮತದಾರರಿದ್ದರು ಗ್ರಾಮ ಗ್ರಾಮಗಳಲ್ಲಿ ಕೆಲವು ಅಭ್ಯರ್ಥಿಗಳು ಪ್ರಚಾರ ಮಾಡಿರುವುದು ವಿಶೇಷ.

ಟಾಪ್ ನ್ಯೂಸ್

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Instagram provides clues to finding suspect who had been on the run for 9 years

Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್

21-cancer

Bengaluru: ಪ್ರತಿವರ್ಷ 500 ಮಕಳಲ್ಲಿ ಕ್ಯಾನ್ಸರ್‌ ಪತ್ತೆ !

20-metro

Metro: ಮರುಪರಿಷ್ಕರಣೆ: ತಪ್ಪದ ಮೆಟ್ರೋ ದರ ಗೊಂದಲ

19-bng

Bengaluru: 1.84 ಲಕ್ಷ ಬೀದಿ ನಾಯಿಗಳಿಗೆ ಸಂಯುಕ್ತ ಲಸಿಕೆ

18-bng

Bengaluru: ಇಂಧನ, ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.