ರೈತಮಿತ್ರ ಗಣಪನ ಅದ್ಧೂರಿ ವಿಸರ್ಜನೆ
Team Udayavani, Oct 10, 2017, 11:21 AM IST
ಯಲಹಂಕ: ಸ್ಥಳೀಯರು ಮಾತ್ರವಲ್ಲದೆ, ರಾಜಧಾನಿಯ ನಾಗರಿಕರನ್ನೂ ತನ್ನತ್ತ ಸೆಳೆದಿದ್ದ, ಇಲ್ಲಿನ ಹೊಸ ಬೀದಿಯ ರೈತಮಿತ್ರ ಗಣಪನ ಮೂರ್ತಿ ವಿಸರ್ಜನೆ ಇತ್ತೀಚೆಗೆ ಅದ್ಧೂರಿಯಾಗಿ ನೆರವೇರಿತು. ಹುಲಿ ಕುಣಿತ, ಅರ್ಜುನ ನೃತ್ಯ, ವಾದ್ಯ ಮೇಳ, ಶಿವ, ಪಾರ್ವತಿ ಒಳಗೊಂಡಂತೆ 30ಕ್ಕೂ ಹೆಚ್ಚು ಕಲಾ ತಂಡಗಳು ಭಾಗವಹಿಸಿದ್ದರಿಂದ ಮೆರವಣಿಗೆ ಮತ್ತಷ್ಟು ಕಳೆಗಟ್ಟಿತ್ತು.
ವಿನಾಯಕ ರೈತ ಬಾಲಕರ ಕನ್ನಡ ಸೇವಾ ಸಮಿತಿ ವತಿಯಿಂದ ಹೊಸಬೀದಿಯಲ್ಲಿ ಪ್ರತಿಷ್ಠಾಪಿಸಿದ್ದ ರೈತಮಿತ್ರನ ರೂಪದಲ್ಲಿನ ಗಣೇಶ ಮೂರ್ತಿ ಈ ಬಾರಿ ಗಣೇಶೋತ್ಸವದ ಆಕರ್ಷಣೆಯ ಕೇಂದ್ರವಾಗಿತ್ತು. ತ್ತುಗಳನ್ನು ಹೂಡಿಕೊಂಡು ಹೊಲ ಹೂಳುತ್ತಿರುವ ರೈತ ಗಣಪ, ಮಗನಿಗಾಗಿ ಅಡುಗೆ ತಯಾರಿಸುವ ಪಾರ್ವತಿ ಮೂರ್ತಿಗಳನ್ನು ನೋಡಲು ಜನ ಮುಗಿಬಿದ್ದಿದ್ದರು.
ಸುಮಾರು ಒಂದು ತಿಂಗಳ ಕಾಲ ಸ್ಥಾಪನೆಗೊಂಡಿದ್ದ ಮೂರ್ತಿಯ ವಿಸರ್ಜನೆ ವೇಳೆ ರಾಜ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಯಿತು. ಸ್ಥಳೀಯರು ನೂರಾರು ಸಂಖ್ಯೆಯಲ್ಲಿ ನೆರೆದಿದ್ದು ವಿಶೇಷವಾಗಿತ್ತು. ಆನೆಯೊಂದಿಗೆ ಭರ್ಜರಿ ಮೆರವಣಿಗೆಯಲ್ಲಿ ಸಾಗಿದ ಗಣಪನ ಮೂರ್ತಿಗೆ ಪಿರಂಗಿ ಮೂಲಕ ಪುಷ್ಪಾರ್ಚನೆ ಮಾಡಲಾಯಿತು.
ಚಂಡಿ ವಾದ್ಯ, ಸಾಸಿಕ್ ಡೋಲು, ಶಕ್ತಿ ತಮಟೆ, ಮಂಡ್ಯ ತಮಟೆ, ಕೋಲಾರ ತಮಟೆ, ಬಳ್ಳಾರಿ ತಮಟೆ, ಆಂಧ್ರ ತಮಟೆ ಸದ್ದುಗಳು ನೆರೆದವರು ನಿಂತಲ್ಲೇ ಕುಣಿಯುವಂತೆ ಮಾಡಿದ್ದು ಸುಳ್ಳಲ್ಲ. ಸ್ಥಳೀಯ ಮುಖಂಡರಾದ ಸಂಘದ ಅಧ್ಯಕ್ಷ ವೈ.ಸಿ.ವೆಂಕಟೇಶ್, ಮು.ಕೃಷ್ಣಮೂರ್ತಿ, ಶಾಸಕ ಎಸ್.ಅರ್.ವಿಶ್ವನಾಥ್, ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಅ.ಬ.ಶಿವಕುಮಾರ್ ಭಾಗವಸಿದ್ದರು. ಸಂಜೆವರೆಗೂ ಮೆರವಣಿಗೆ ನಡೆಸಿ ಅಮಾನಿ ಕೆರೆಯಲ್ಲಿ ಮೂರ್ತಿ ವಿಸರ್ಜನೆ ಮಾಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಪ್ರೇಯಸಿಯ ಪೀಡಿಸುತ್ತಿದ್ದವನಿಗೆ ಪ್ರಿಯಕರನಿಂದ ಚಾಕು ಇರಿತ!
Bengaluru: ಮೆಜೆಸ್ಟಿಕ್ ಬಳಿ ಬಿಎಂಟಿಸಿ ಬಸ್ ಡಿಕ್ಕಿ; ಅಂಗವಿಕಲ ಸ್ಥಳದಲ್ಲೇ ಸಾವು
Bengaluru: ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಮತ್ತೆ 9 ಮೊಬೈಲ್ ಫೋನ್ಗಳು ಪತ್ತೆ!
Leopard: ಎಲೆಕ್ಟ್ರಾನಿಕ್ ಸಿಟಿ ಎನ್ಟಿಟಿಎಫ್ ಆವರಣ ಬಳಿ ತಡರಾತ್ರಿ ಚಿರತೆ ಪ್ರತ್ಯಕ್ಷ
Anekal: ಶಾಲಾ ಬಸ್ ಅಡ್ಡಗಟ್ಟಿ ಚಾಲಕನಿಗೆ ತೀವ್ರ ಹಲ್ಲೆ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
ತಿಮ್ಮಾಪುರ ಮಾತಿಗೆ ಯತ್ನಾಳ ಪರೋಕ್ಷ ಟಾಂಗ್;ನಾನು ಕಾನೂನಿಗೆ ಗೌರವ ನೀಡುವ ನಿಯತ್ತಿನ ನಾಯಿ
Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ
Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ
Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ
Horoscope: ಆರಿಸಿದ ಮಾರ್ಗದ ಬಗೆಗೆ ಆತಂಕ ಬೇಡ, ಉದ್ಯೋಗ ಅರಸುತ್ತಿರುವವರಿಗೆ ಶುಭ ವಾರ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.