ಪ್ರತಿ ವಾರ್ಡ್‌ನಲ್ಲೂ ತಪಾಸಣೆ, ಆಹಾರ ಧಾನ್ಯ, ಔಷಧ ಪೂರೈಕೆ


Team Udayavani, Jun 3, 2021, 1:31 PM IST

Food grain, medicine supply

ಬೆಂಗಳೂರು: “ಕ್ಷೇತ್ರದ ಪ್ರತಿ ವಾರ್ಡ್‌ನಲ್ಲೂತಪಾಸಣೆ, ಕೊರೊನಾ ಸೋಂಕು ಪತ್ತೆಯಾದರೆತಕ್ಷಣ ಆಸ್ಪತ್ರೆಗೆ ದಾಖಲು, ಮನೆ ಬಾಗಿಲಿಗೆ ಉಚಿತಆಹಾರ ಧಾನ್ಯ ಔಷಧ ಪೂರೈಕೆ’ ಚಾಮರಾಜಪೇಟೆ ಕ್ಷೇತ್ರದಲ್ಲಿ ಕೊರೊನಾ ನಿಯಂತ್ರಣ ಹಾಗೂ ನೆರವು ಕಾರ್ಯಗಳ ಕುರಿತು ಸ್ಥಳೀಯ ಶಾಸಕರು ಆದ ಮಾಜಿಸಚಿವ ಜಮೀರ್‌ ಅಹಮದ್‌ಮಾತುಗಳಿವು.

ಕೊರೊನಾ ಪರಿಸ್ಥಿತಿ ನಿರ್ವಹಣೆಕುರಿತು”ಉದಯವಾಣಿ’ ಜತೆ ಮಾತನಾಡಿದ ಅವರು, ನಿರಂತರ ಕ್ರಮಗಳಿಂದಾಗಿ ನಮ್ಮ ಕ್ಷೇತ್ರದ ಏಳೂ ವಾರ್ಡ್‌ಗಳಲ್ಲಿಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಸಕ್ರಿಯಪ್ರಕರಣಗಳ ಸಂಖ್ಯೆ15 ರಿಂದ20 ಇವೆ.

ಕ್ಷೇತ್ರದಲ್ಲಿ ಕೊರೊನಾ ಪರಿಸ್ಥಿತಿ ಹೇಗಿದೆ?

ಪ್ರಸ್ತುತ ಪ್ರಕರಣಗಳು ಕಡಿಮೆ ಇವೆ. ಕ್ಷೇತ್ರದ ಪ್ರತಿ ವಾರ್ಡ್‌ನಲ್ಲೂ ವಾರಕ್ಕೆರಡು ಬಾರಿಸ್ಯಾನಿಟೈಸ್‌ ಮಾಡಿಸಲಾಗುತ್ತಿದೆ. ಪ್ರತಿ ಮನೆಗೂತೆರಳಿ ತಪಾಸಣೆ ಮಾಡಿ ಕೊರೊನಾ ಪತ್ತೆಯಾದತಕ್ಷಣ ಆಸ್ಪತ್ರೆಗೆ ದಾಖಲು ಮಾಡಲಾಗುತ್ತಿದೆ.

ನಿಮ್ಮ ಕ್ಷೇತ್ರದ ಕೊರೊನಾ ಸೋಂಕಿತರಿಗೆಎಲ್ಲಿಚಿಕಿತ್ಸೆ ಕೊಡಿಸಲಾಗುತ್ತಿದೆ?

ಕ್ಷೇತ್ರದಲ್ಲಿ 80 ಆಕ್ಸಿಜನ್‌ ಯುಕ್ತ ಹಾಸಿಗೆ ಆಸ್ಪತ್ರೆಸ್ಥಾಪಿಸಲಾಗಿದ್ದು ಅಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.ಉಚಿತ ಊಟ, ತಿಂಡಿ, ಔಷಧ ಎಲ್ಲ ವ್ಯವಸ್ಥೆಮಾಡಲಾಗಿದೆ. ಇದಲ್ಲದೆ 18 ಕೋಟಿ ರೂ. ವೆಚ್ಚದ50 ಹಾಸಿಗೆಯ ಜಗಜೀವನರಾಂ ಆಸ್ಪತ್ರೆಯನ್ನುಕೊರೊನಾ ಆಸ್ಪತ್ರೆಯಾಗಿ ಪರಿವರ್ತಿಸಲಾಗಿದೆ.

 ಕೊರೊನಾ ಸೋಂಕಿತರ ಅಂತ್ಯ ಸಂಸ್ಕಾರಕ್ಕೆ ತೊಂದರೆಯಾಗುತ್ತಿಲ್ಲವೇ?

ಇಲ್ಲ.ಕಳೆದಬಾರಿಅದೇದೊಡ್ಡಸಮಸ್ಯೆಯಾಗಿತ್ತು.ಯಾರೂ ಮೃತದೇಹ ಪಡೆಯಲು ಬರುತ್ತಿರಲಿಲ್ಲ.ಅಂತಹ ಸಂದರ್ಭದಲ್ಲಿ ನಮ್ಮ ಸ್ವಯಂಸೇವಕರ ತಂಡಖುದ್ದು ನಾನೇ ಪಿಪಿಇ ಕಿಟ್‌ ಧರಿಸಿ 586 ಜನರಅಂತ್ಯಕ್ರಿಯೆ ನಡೆಸಿದೆವು. ಅದರಲ್ಲಿ181 ಹಿಂದೂಗಳು,ಅವರ ಸಂಪ್ರದಾಯದ ಪ್ರಕಾರವೇ ಅಂತ್ಯಸಂಸ್ಕಾರಮಾಡಿದ್ದೆವು. ಈ ಬಾರಿ ಆ ರೀತಿಯ ಸಮಸ್ಯೆ ಇಲ್ಲ.

ಕ್ಷೇತ್ರದ ಬಡವರ್ಗಕ್ಕೆ ಕೈಗೊಂಡಿರುವ ನೆರವು ಕಾರ್ಯಕ್ರಮಗಳೇನು?

ಅತಿ ಹೆಚ್ಚು ಆಟೋ ಚಾಲಕರು ಇರುವುದು ನಮ್ಮಕ್ಷೇತ್ರದಲ್ಲಿ. ಗುರುತಿನ ಚೀಟಿ ಆಧಾರದಲ್ಲಿ ಮೂರುಸಾವಿರ ರೂ. ನಗದು, ಆಹಾರಧಾನ್ಯಕಿಟ್‌ ನೀಡಿದ್ದೇವೆ.ಬೀದಿ ವ್ಯಾಪಾರಿಗಳಿಗೆ 2 ಸಾವಿರ ರೂ. ನೀಡಿದ್ದೇವೆ.ನಿತ್ಯ25 ಸಾವಿರಜನರಿಗೆಊಟದಪ್ಯಾಕೇಟ್‌ ನೀಡಲಾಗುತ್ತಿದೆ. ಒಟ್ಟು 60 ಸಾವಿರ ಕುಟುಂಬಗಳಿಗೆ ಎರಡುತಿಂಗಳಿಗೆ ಆಗುವಷ್ಟು ಆಹಾರ ಧಾನ್ಯ ನೀಡಲಾಗಿದೆ.

ಕೊರೊನಾ ಸೋಂಕಿತರಿಗೆ ನೀಡುತ್ತಿರುವವೈದ್ಯಕೀಯ ಸೇವೆಗಳೇನು?

ಕ್ಷೇತ್ರದಲ್ಲಿ ಮಧುಮೇಹ, ರಕ್ತದೊತ್ತಡ,ಮೂತ್ರಪಿಂಡ, ಹೃದ್ರೋಗ ಸಮಸ್ಯೆ ಇರುವವರುಹೆಚ್ಚಾಗಿದ್ದಾರೆ. ಅವರಿಗೆ ಅಗತ್ಯವಾದ ಉಚಿತ ಔಷಧಮನೆ ಮನೆಗೆ ತಲುಪಿಸುತ್ತಿದ್ದೇವೆ.

ಲಸಿಕೆ ಅಭಿಯಾನ ಯಾವ ರೀತಿ ಇದೆ?

ಲಸಿಕೆ ದಾಸ್ತಾನು ಇಲ್ಲದ ಕಾರಣ ವಿಳಂಬವಾಗಿದೆ.45 ವರ್ಷ ಮೇಲ್ಪಟ್ಟವರಿಗೆ ಮೊದಲನೇ ಡೋಸ್‌ಕೊಡಿಸಲಾಗಿದೆ. 18 ರಿಂದ 44 ವರ್ಷದವರಿಗೆ ಲಸಿಕೆಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿದ್ದು ದಾಸ್ತಾನು ಬಂದತಕ್ಷಣ ಆ ಕೆಲಸಕ್ಕೆ ಆದ್ಯತೆ ನೀಡಲಾಗುವುದು.

ಎಸ್‌. ಲಕ್ಷ್ಮೀನಾರಾಯಣ

ಟಾಪ್ ನ್ಯೂಸ್

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Instagram provides clues to finding suspect who had been on the run for 9 years

Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್

21-cancer

Bengaluru: ಪ್ರತಿವರ್ಷ 500 ಮಕಳಲ್ಲಿ ಕ್ಯಾನ್ಸರ್‌ ಪತ್ತೆ !

20-metro

Metro: ಮರುಪರಿಷ್ಕರಣೆ: ತಪ್ಪದ ಮೆಟ್ರೋ ದರ ಗೊಂದಲ

19-bng

Bengaluru: 1.84 ಲಕ್ಷ ಬೀದಿ ನಾಯಿಗಳಿಗೆ ಸಂಯುಕ್ತ ಲಸಿಕೆ

18-bng

Bengaluru: ಇಂಧನ, ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

1-neyge-1

Udayavani-MIC ನಮ್ಮ ಸಂತೆ:ಗಮನ ಸೆಳೆದ ನೇಯ್ಗೆ ಯಂತ್ರ

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.