![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Apr 15, 2024, 11:23 AM IST
ಬೆಂಗಳೂರು: ಫ್ಲ್ಯಾಟ್ ಖರೀದಿಸುವ ಸೋಗಿನಲ್ಲಿ ನಕಲಿದಾಖಲೆ ಸಲ್ಲಿಸಿ ಖಾಸಗಿ ಫೈನಾನ್ಸ್ ಕಂಪನಿಯಿಂದ 60.85 ಲಕ್ಷ ರೂ. ಸಾಲ ಪಡೆದು ವಂಚಿಸಿದ ಆರೋಪದಡಿ ದಂಪತಿ ಸೇರಿ ಮೂವರ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಜಯನಗರ 8ನೇ ಬ್ಲಾಕ್ನ ಖಾಸಗಿ ಫೈನಾನ್ಸ್ ಲಿಮಿಟೆಡ್ ಕಂಪನಿಯಲ್ಲಿ ಸೇಲ್ಸ್ ಮ್ಯಾನೇಜರ್ ಎಲ್. ಗಜೇಂದ್ರ ಎಂಬವರು ನೀಡಿದ ದೂರಿನ ಮೇರೆಗೆ ಆರ್ಎಂವಿ 2ನೇ ಹಂತದ ರೈಲ್ವೆ ಕಾಲೋನಿ ನಿವಾಸಿಗಳಾದ ಕೋಮಲ ಮೋಹಿತೆ(33), ಆಕೆಯ ಪತಿ ವಿಜಯಕುಮಾರ್ ಗೋಪಾಲ್ ರಾವ್ (38) ಹಾಗೂ ಉತ್ತರಹಳ್ಳಿಯ ಅನುಸೂಯದೇವಿ(42) ಎಂಬವರ ವಿರುದ್ಧ ವಂಚನೆ, ನಕಲಿ ದಾಖಲೆ ಸೃಷ್ಟಿ, ನಂಬಿಕೆ ದ್ರೋಹ ಸೇರಿ ವಿವಿಧ ಆರೋಪಗಳ ಅಡಿ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
ಏನಿದು ವಂಚನೆ?: 2 ವರ್ಷಗಳ ಹಿಂದೆ ಆರೋಪಿತ ದಂಪತಿ ಜಯನಗರದ ಖಾಸಗಿ ಫೈನಾನ್ಸ್ಗೆ ಹೋಗಿ, ಉತ್ತರಹಳ್ಳಿಯ ಬಿಕಾಸಿಪುರ ಗ್ರಾಮದ ಆನಂದಕುಟೀರಅಪಾರ್ಟ್ಮೆಂಟ್ನ 2ನೇ ಮಹಡಿಯ ಫ್ಲ್ಯಾಟ್ವೊಂದನ್ನು ಮಾಲೀಕರಾದ ಎಚ್.ಕೆ.ಅನುಸೂಯದೇವಿ ಎಂಬವರಿಂದ ಖರೀದಿಸುತ್ತಿದ್ದೇವೆ. ಹೀಗಾಗಿ ನಿಮ್ಮ ಫೈನಾನ್ಸ್ನಿಂದ ಸಾಲಬೇಕೆಂದು ಕೇಳಿದ್ದು, ಅದಕ್ಕೆ ಪೂರಕ ದಾಖಲೆಗಳನ್ನು ನೀಡಿದ್ದರು. ಈ ದಾಖಲೆಗಳ ಪರಿಶೀಲಿಸಿದಾಗ ಫೈನಾನ್ಸ್ ಅಧಿಕಾರಿಗಳು 2022ರ ಸೆ.2ರಂದು ದಂಪತಿಗೆ 60.85 ಲಕ್ಷ ರೂ. ಸಾಲ ಮಂಜೂರು ಮಾಡಿದ್ದಾರೆ. ಫ್ಲ್ಯಾಟ್ ಮಾಲೀಕರಾದ ಅನುಸೂಯದೇವಿ ಹೆಸರಿಗೆ ಚೆಕ್ ನೀಡಲಾಗಿದ್ದು, ಹಣ ಕೂಡ ಅನುಸೂಯದೇವಿ ಖಾತೆಗೆ ಜಮೆ ಆಗಿತ್ತು. ಹೀಗಾಗಿ ಆರೋಪಿತ ದಂಪತಿ ಪ್ರತಿ ತಿಂಗಳು 48 ಸಾವಿರ ರೂ. ಪಾವತಿಸುತ್ತಿದ್ದರು. ಈ ಮಧ್ಯೆ ಕಳೆದ 4 ತಿಂಗಳಿಂದ ಆರೋಪಿತರು ಹಣ ಪಾವತಿಸಿಲ್ಲ. ಅದರಿಂದ ಅನುಮಾನಗೊಂಡ ಫೈನಾನ್ಸ್ ಅಧಿಕಾರಿಗಳು ಆರೋಪಿತರು ನೀಡಿದ ದಾಖಲೆಗಳನ್ನು ಪರಿಶೀಲಿಸಿದಾಗ ನಕಲಿ ಎಂಬುದು ಗೊತ್ತಾಗಿದೆ.
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
You seem to have an Ad Blocker on.
To continue reading, please turn it off or whitelist Udayavani.