ನಗರ ಜಿ.ಪಂ ಆಸ್ತಿಗೂ ಜಿಐಎಸ್‌


Team Udayavani, Jun 28, 2018, 3:16 PM IST

blore-1.jpg

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ ಎಲ್ಲ ಆಸ್ತಿಗಳನ್ನು ಭೌಗೋಳಿಕ ಮಾಹಿತಿ ಪದ್ಧತಿ (ಜಿಐಎಸ್‌) ಅಡಿಯಲ್ಲಿ ತರುವ ಬಿಬಿಎಂಪಿ ಕ್ರಮ ಯಶಸ್ವಿಯಾಗಿ ರುವ ಬೆನ್ನಲ್ಲೇ, ಬೆಂಗಳೂರು ನಗರ ಜಿಲ್ಲಾ
ಪಂಚಾಯಿತಿ ಕೂಡ ಇದೇ ಮಾದರಿ ಅನುಸರಿಸಲು ಸಿದ್ಧತೆ ನಡೆಸಿದೆ.

ಜಿಐಎಸ್‌ ಅನುಷ್ಠಾನದ ನಂತರ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಸಂಗ್ರಹ ಪ್ರಮಾಣ ಹೆಚ್ಚಾಗಿತ್ತು. ಹೀಗಾಗಿ ತೆರಿಗೆ ಸಂಗ್ರಹದಲ್ಲಿ ತೀರಾ ಕಳಪೆ ಪ್ರದರ್ಶನ ತೋರುತ್ತಿರುವ ನಗರ ಜಿಲ್ಲೆಯ ತಾಲೂಕುಗಳ ಆಯ್ದ ಗ್ರಾಮ ಪಂಚಾಯಿತಿಗಳನ್ನು ಈ ಪದ್ಧತಿ ವ್ಯಾಪ್ತಿಗೆ ತರಲು ಜಿ.ಪಂ ನಿರ್ಧರಿಸಿದೆ. 

ನಗರ ಜಿ.ಪಂ ವ್ಯಾಪ್ತಿಯಲ್ಲಿ 96 ಗ್ರಾ.ಪಂಗಳಿದ್ದು, ದಾಖಲೆಗಳ ಪ್ರಕಾರ 5,64,926 ಆಸ್ತಿಗಳಿವೆ. ಆದರೆ ಈ ಪೈಕಿ ತೆರಿಗೆ ಪಾವತಿ ಆಗುತ್ತಿರುವುದು 1,35,803 ಆಸ್ತಿಗಳಿಂದ ಮಾತ್ರ. ಅಂದರೆ, ಆಸ್ತಿ ತೆರಿಗೆ ಸಂಗ್ರಹ ಶೇ.25ರಷ್ಟೂ ಇಲ್ಲ. ಕಾರಣ, ತೆರಿಗೆ ಜಾಲದಿಂದ ತಪ್ಪಿ ಹೋಗಿರುವ ಭೂಮಿ ಅಥವಾ ಆಸ್ತಿಗಳನ್ನು ಜಿಐಎಸ್‌ ವ್ಯಾಪ್ತಿಗೆ ತರಲು ಉದ್ದೇಶಿಸಲಾಗಿದೆ.
 
ಮೊದಲ ಹಂತದಲ್ಲಿ ಬೆಂಗಳೂರು ಉತ್ತರ, ದಕ್ಷಿಣ, ಪೂರ್ವ ಹಾಗೂ ಆನೇಕಲ್‌ ತಾಲೂಕಿನ 25 ಗ್ರಾ.ಪಂಗಳನ್ನು ಜಿಐಎಸ್‌ ವ್ಯಾಪ್ತಿಗೆ ತರಲಾಗುತ್ತಿದೆ. ಈ ಪ್ರಯತ್ನ ಯಶಸ್ವಿ ಯಾದರೆ ಎಲ್ಲ ಪಂಚಾಯಿತಿಗಳಲ್ಲೂ ವ್ಯವಸ್ಥೆ ಜಾರಿಗೊಳಿಸುವುದಾಗಿ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.

ವ್ಯವಸ್ಥೆ ಜಾರಿಗೆ ಮೊದಲು ಗ್ರಾ.ಪಂ ವ್ಯಾಪ್ತಿಯ ಗಣಕೀಕೃತ ಆಸ್ತಿ ನಕ್ಷೆ ರೂಪಿಸಿ, ಅದರಂತೆ ಪ್ರತಿಯೊಂದು ಆಸ್ತಿಯ ಮಾಹಿತಿಯನ್ನೂ ಡಿಜಿಟಲೀಕರಣ ಮಾಡಲಾಗುತ್ತದೆ. ಜತೆಗೆ ಜಿಪಿಎಸ್‌ ಆಧಾರಿತ ಭಾವಚಿತ್ರದೊಂದಿಗೆ ಆಸ್ತಿ ಗುರುತಿಸಲಾಗುತ್ತದೆ. ಹಾಗೇ, ಸರ್ಕಾರದಿಂದ ಮಂಜೂರಾದ ನಿವೇಶನಗಳ ವಿವರ, ಒಂದೊಮ್ಮೆ ಅಲ್ಲಿ ಕಟ್ಟಡ ನಿರ್ಮಾಣವಾಗಿದ್ದರೆ ನಿರ್ಮಾಣದ ದಿನಾಂಕ, ಆಸ್ತಿ ಮಾಲೀಕರ ಮತ್ತು ಪರಿವರ್ತಿತ ಕೃಷಿ ಭೂಮಿ ಮಾಹಿತಿ, ಕಟ್ಟಡದ ಚೆಕ್‌ಬಂದಿಗಳ ಸಂಪೂರ್ಣ ವಿವರ ಕೂಡ ದೊರೆಯಲಿದೆ. ಅಷ್ಟೇ ಅಲ್ಲ, ಭೂ ಮಾಲೀಕರು ಪಾವತಿಸಬೇಕಿರುವ ಬಾಕಿ
ತೆರಿಗೆ ವಿವರ ಕೂಡ ಲಭ್ಯವಾಗಲಿದೆ. 

ಜಿಐಎಸ್‌ ವ್ಯಾಪ್ತಿಗೆ ಬರಲಿರುವ ಗ್ರಾ.ಪಂಗಳು
ಬೆಂಗಳೂರು ಉತ್ತರ: ಚಿಕ್ಕಬಾಣಾವಾರ, ದಾಸನಪುರ, ದೊಡ್ಡಜಾಲ, ಚಿಕ್ಕಜಾಲ, ಸಾತನೂರು, ಕಡಬಗೆರೆ, ರಾಜಾನುಕುಂಟೆ, ಸಿಂಗನಾಯಕನಹಳ್ಳಿ, ಚಿಕ್ಕಬಿದರಕಲ್ಲು
ಬೆಂಗಳೂರು ದಕ್ಷಿಣ: ಸೋಮನಹಳ್ಳಿ, ರಾಮೋಹಳ್ಳಿ, ಚೋಳನಾಯಕನಹಳ್ಳಿ, ಕುಂಬಳಗೋಡು 
ಬೆಂಗಳೂರು ಪೂರ್ವ: ಅವಲಹಳ್ಳಿ, ಶೀಗೆಹಳ್ಳಿ, ಕಣ್ಣೂರು, ಬಿದರಹಳ್ಳಿ, ದೊಡ್ಡಗುಬ್ಬಿ ಆನೇಕಲ್‌ ತಾಲೂಕು: ಮಂಟಪ, ಹೆನ್ನಾಗರ, ಬಿದರಗುಪ್ಪೆ, ಶಾಂತಿಪುರ, ಹುಸ್ಕೂರು, ನೆರಳೂರು ಮತ್ತು ದೊಮ್ಮಸಂದ್ರ

ಭೌಗೋಳಿಕ ಮಾಹಿತಿ ಪದ್ಧತಿ ಜಾರಿಯಿಂದ ಪಂಚಾಯತಿ ವ್ಯಾಪ್ತಿಯ ಸರ್ಕಾರಿ ಆಸ್ತಿಗಳು ಒತ್ತುವರಿ ಯಾಗದಂತೆ ತಡೆಯಲು ಸಾಧ್ಯವಿದೆ. ಜಿ.ಪಂ ಆಸ್ತಿ ಕಬಳಿಕೆಯಾಗಿರುವುದು ಸಹ ಇದರಿಂದ ತಿಳಿಯಲಿದೆ. ಅಲ್ಲದೆ, ಜಿ.ಪಂ ಆಸ್ತಿ, ಕಟ್ಟಡಗಳು, ಸೇರಿ ಇನ್ನಿತರ ಮಾಹಿತಿ ಸುಲಭವಾಗಿ ಲಭ್ಯವಾಗಲಿದೆ. ತೆರಿಗೆ ಸಂಗ್ರಹ ವೃದ್ಧಿಗೂ ಜಿಐಎಸ್‌ ಸಹಕಾರಿ.
ಎಂ.ಎಸ್‌.ಅರ್ಚನಾ, ಬೆಂಗಳೂರು ನಗರ ಜಿ.ಪಂ ಸಿಇಒ

ಐದು ವರ್ಷಗಳಲ್ಲಿ ಗ್ರಾಮ ಪಂಚಾಯಿತಿಗಳಿಂದ ಶೇ.24ರಷ್ಟು ಆಸ್ತಿ ತೆರಿಗೆ ಸಂಗ್ರಹವಾಗಿದೆ. ಇನ್ನೂ ಶೇ.76ರಷ್ಟು ಆಸ್ತಿಗಳ ಮಾಲೀಕರು ತೆರಿಗೆ ಪಾವತಿಸಿಲ್ಲ. ಈ ಹಿನ್ನೆಲೆಯಲ್ಲಿ ಜಿಐಎಸ್‌ ಆಧಾರಿತ ಆಸ್ತಿ ತೆರಿಗೆ ಪಾವತಿ ವ್ಯವಸ್ಥೆ ಜಾರಿಗೊಳಿಸಲು ಮುಂದಾಗಿದ್ದೇವೆ.
ಕೆ.ಜಿ.ಜಗದೀಶ್‌, ಸಹಾಯಕ ಯೋಜನಾಧಿಕಾರಿ

ದೇವೇಶ ಸೂರಗುಪ್ಪ

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Instagram provides clues to finding suspect who had been on the run for 9 years

Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್

21-cancer

Bengaluru: ಪ್ರತಿವರ್ಷ 500 ಮಕಳಲ್ಲಿ ಕ್ಯಾನ್ಸರ್‌ ಪತ್ತೆ !

20-metro

Metro: ಮರುಪರಿಷ್ಕರಣೆ: ತಪ್ಪದ ಮೆಟ್ರೋ ದರ ಗೊಂದಲ

19-bng

Bengaluru: 1.84 ಲಕ್ಷ ಬೀದಿ ನಾಯಿಗಳಿಗೆ ಸಂಯುಕ್ತ ಲಸಿಕೆ

18-bng

Bengaluru: ಇಂಧನ, ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.