ವಾಸ್ತು ಪ್ರಕಾರ ಬಿಡಿಎ ನಿವೇಶನ ನೀಡಿ!

22 ಸಾವಿರ ಸೈಟ್‌; 10 ಸಾವಿರ ಹಂಚಿಕೆ | ವಾಸ್ತು ದೋಷ ತಂದ ಅಡ್ಡಿ

Team Udayavani, Oct 4, 2020, 11:24 AM IST

bng-tdy-1

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಭೂಮಿ ಸಿಗುವುದೇ ಅಪರೂಪ. ಇದಕ್ಕಾಗಿ ವರ್ಷಗಟ್ಟಲೆ ಕಾಯುವ ಸ್ಥಿತಿ ಇದೆ. ಆದರೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ದಿಂದಹಂಚಿಕೆಯಾದ ನೂರಾರು ನಿವೇಶನಗಳನ್ನು ಜನ ತಮಗೆ ಬೇಡ ಎಂದು ವಾಪಸ್‌ ನೀಡುತ್ತಿದ್ದಾರೆ. ಈ ಪೈಕಿ ಬಹುತೇಕರು ನೀಡುತ್ತಿರುವ ಕಾರಣ- ವಾಸ್ತು ದೋಷ!

ಬಿಡಿಎ ಅಭಿವೃದ್ಧಿಪಡಿಸಿರುವ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಸುಮಾರು 22 ಸಾವಿರ ನಿವೇಶನಗಳಿವೆ. ಇದರಲ್ಲಿ ತಲಾ ಐದು ಸಾವಿರದಂತೆ ಎರಡು ಹಂತಗಳಲ್ಲಿ ಲಾಟರಿ ಮೂಲಕ ಹಂಚಿಕೆ ಮಾಡಲಾಗಿದ್ದು, ಇದುವರೆಗೆ 9,970 ನಿವೇಶನಗಳ ಹಂಚಿಕೆ ಕಾರ್ಯಪೂರ್ಣಗೊಂಡಿದೆ. ಅದರಲ್ಲಿ ಶೇ. 10ರಷ್ಟು ಅಂದರೆ 930 ಮಧ್ಯಂತರ ನಿವೇಶನಗಳನ್ನು ಫ‌ಲಾನುಭವಿಗಳು “ತಮ್ಮ ಇಚ್ಛೆಗೆ ತಕ್ಕಂತೆ ಸೈಟ್‌ ಸಿಕ್ಕಿಲ್ಲ. ಹಾಗಾಗಿ, ಈ ಸೈಟ್‌ ಬೇಡ’ ಎಂದು ಹಿಂತಿರುಗಿಸಿದ್ದಾರೆ.

“ಫ‌ಲಾನುಭವಿಗಳು ಹೀಗೆ ಹಿಂತಿರುಗಿಸಲು ಅಧಿಕೃತವಾಗಿ ಯಾವುದೇ ನಿರ್ದಿಷ್ಟ ಕಾರಣಗಳನ್ನು ನೀಡಿಲ್ಲ. ಆದರೆ ನಾವಾಗಿಯೇ ವಿಚಾರಿಸಿದಾಗ, ಅವರಿಂದಬರುವಉತ್ತರವಾಸ್ತು ಸರಿಇಲ್ಲ.ಆದ್ದರಿಂದ ಬದಲಿ ಸೈಟ್‌ ಹಂಚಿಕೆ ಮಾಡಿ. ಬೇಕಿದ್ದರೆ ಅಲ್ಲಿಯವರೆಗೂ ಕಾಯಲು ನಾವು ತಯಾರಿದ್ದೇವೆ’ ಎಂಬ ಉತ್ತರ ಬರುತ್ತಿದೆ. ಇನ್ನು ಹಲವರು ಹತ್ತಿರದಲ್ಲಿ ಸ್ಮಶಾನಇದೆ,ಆರ್ಥಿಕ ಸಮಸ್ಯೆ ಮತ್ತಿತರ ಕಾರಣಗಳನ್ನು ನೀಡುತ್ತಾರೆ. ಆದರೆ, ಒಟ್ಟಾರೆ 930 ಜನರಲ್ಲಿ ಬಹುತೇಕರಿಗೆ ವಾಸ್ತುದೋಷವೇ ಅಡ್ಡಿಆಗಿದೆ’ ಎಂದು ಹೆಸರು ಹೇಳಲಿಚ್ಛಿಸದ ಬಿಡಿಎ ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದರು.

ಮಾರ್ಗಸೂಚಿ ದರದ ಅನ್ವಯ ಚದರಡಿಗೆ 2,500 ರೂ. ಇದೆ. 30×40 ಚದರಡಿ ಎಂದು ಲೆಕ್ಕಹಾಕಿದರೂ 930 ನಿವೇಶನಗಳಿಗೆ ಸುಮಾರು 300-350 ಕೋಟಿ ರೂ. ಆಗುತ್ತದೆ. ಮುಂದಿನ ದಿನಗಳಲ್ಲಾದರೂ ಇವುಗಳು ಮಾರಾಟ ಆಗುತ್ತವೆ. ಹೆಚ್ಚು ಹಣವೂ ಬರಬಹುದು. ಕೆಲ ಫ‌ಲಾನುಭವಿಗಳಿಗೆ ವಾಸ್ತು ಸರಿಇಲ್ಲದಿದ್ದರೂ, ಇನ್ನು ಹಲವರಿಗೆ ಸರಿ ಬರಬಹುದು. ಆದೆ, ಈಗ ಸರ್ಕಾರಕ್ಕೆ ಹಣಕಾಸಿನ ತುರ್ತು ಇರುವ ಕಾರಣ ಶೀಘ್ರ ಹಂಚಿಕೆ ಆಗಬೇಕಿದೆ. ಸದ್ಯದ ಸ್ಥಿತಿಯಲ್ಲಿ ಇದು ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ ಅಧಿಕಾರಿಗಳು, “ಇದೇ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಇನ್ನೂ ಆರು ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಲು ಸಿದ್ಧತೆ ನಡೆಯುತ್ತಿದೆ. ಆಗ, ವಾಪಸ್‌ ನೀಡಿದ ಈ 930 ನಿವೇಶನಗಳನ್ನೂ ಸೇರಿಸಲಾಗುವುದು’ ಎಂದೂ ಹೇಳಿದರು.

 ಅಧಿಕಾರಿಗಳಿಗೆ ವಾಸ್ತು ತೊಡಕು :  ಹಿಂದೆ ಸೈಟ್‌ಗಳಿಗಾಗಿ ಜನ ಹತ್ತಾರು ವರ್ಷ ಕಾದು ಕುಳಿತ ಉದಾಹರಣೆಗಳಿವೆ. ಹಂಚಿಕೆಯಾದ ನಂತರ ವಾಪಸ್‌ ಮಾಡಿದವರ ಸಂಖ್ಯೆ ತುಂಬಾ ವಿರಳ. ಅದಕ್ಕೆ ಕೆರೆಪಕ್ಕದಲ್ಲಿಬಫ‌ರ್‌ಝೋನ್‌ನಂತಹಸಕಾರಣಗಳೂ ಇರುತ್ತಿದ್ದವು. ಇತ್ತೀಚಿನ ದಿನಗಳಲ್ಲಿ ವಾಸ್ತು ಹಾವಳಿ ಹೆಚ್ಚಾಗಿದೆ. “ನಮಗೆ ಉತ್ತರ-ದಕ್ಷಿಣದಲ್ಲಿ ಬೇಕಿತ್ತು. ಪೂರ್ವ-ಪಶ್ಚಿಮದಲ್ಲಿನ ನಿವೇಶನ ದೊರಕಿದೆ’ “ನನ್ನ ಹೆಸರು, ರಾಶಿ ಮತ್ತು ಸೈಟ್‌ ಹಂಚಿಕೆಯಾದ ದಿಕ್ಕು ಒಂದಕ್ಕೊಂದು ಪೂರಕವಾಗಿಲ್ಲ’ ಎನ್ನುವುದು ಸೇರಿ ದಂತೆಹಲವುಕಾರಣನೀಡಿವಾಪಸ್‌ಮಾಡುತ್ತಿದ್ದಾರೆ. ಇವೆಲ್ಲವೂ ಮಧ್ಯಂತರ ನಿವೇಶನಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದರು.

ಹೊಸ ತಲೆನೋವು :  ವಾಸ್ತುದೋಷ ಸಮಸ್ಯೆ ಬಿಡಿಎಗೆ ತಲೆನೋವಾಗಿ ಪರಿಣಮಿಸಿದೆ. ಹೀಗೆ ಹಿಂತಿರುಗಿಸಿದ ನಿವೇಶನಗಳನ್ನು ಹೈಕೋರ್ಟ್‌ ಆದೇಶದಂತೆ ಸದ್ಯಕ್ಕೆ ಹರಾಜು  ಮಾಡುವಂತಿಲ್ಲ. ಅತ್ತ ಕೋವಿಡ್‌ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟ ಇರುವುದರಿಂದ ಸಂಪನ್ಮೂಲ ಕ್ರೋಡೀಕರಣಕ್ಕೆ ಸರ್ಕಾರ ಒತ್ತಡ ಹಾಕುತ್ತಿದೆ. ಇದು ಕಗ್ಗಂಟಾಗಿದ್ದು, ಪ್ರಾಧಿಕಾರವು ಪರ್ಯಾಯ ಮಾರ್ಗಗಳ ಹುಡುಕಾಟ ನಡೆಸಿದೆ.

 

ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Instagram provides clues to finding suspect who had been on the run for 9 years

Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್

21-cancer

Bengaluru: ಪ್ರತಿವರ್ಷ 500 ಮಕಳಲ್ಲಿ ಕ್ಯಾನ್ಸರ್‌ ಪತ್ತೆ !

20-metro

Metro: ಮರುಪರಿಷ್ಕರಣೆ: ತಪ್ಪದ ಮೆಟ್ರೋ ದರ ಗೊಂದಲ

19-bng

Bengaluru: 1.84 ಲಕ್ಷ ಬೀದಿ ನಾಯಿಗಳಿಗೆ ಸಂಯುಕ್ತ ಲಸಿಕೆ

18-bng

Bengaluru: ಇಂಧನ, ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.