ಐಐಎಸ್‌ಸಿ ವಿದ್ಯಾರ್ಥಿಗಳಿಗೆ ಚಿನ್ನದ ಪದಕ


Team Udayavani, Nov 18, 2017, 11:26 AM IST

iisc.jpg

ಬೆಂಗಳೂರು: ಅಮೆರಿಕದ ಬಾಸ್ಟನ್‌ನಲ್ಲಿ ನ.9ರಿಂದ 13ರವರೆಗೆ ನಡೆದ “ಇಂಟರ್‌ನ್ಯಾಷನಲ್‌ ಜೆನೆಟಿಕಲಿ ಎಂಜಿನೀಯರ್‌ ಮಷಿನ್‌-ಐಜೆಮ್‌’ ಸ್ಪರ್ಧೆಯಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಬಿಎಸ್‌ಸಿ (ರೀಸರ್ಚ್‌) ಪದವಿ ವಿದ್ಯಾರ್ಥಿಗಳು ಚಿನ್ನದ ಪದಕ ಗೆದ್ದಿದ್ದಾರೆ.

ಐಜೆಮ್‌ ಸ್ಪರ್ಧೆಯು ಜಾಗತಿಕ ಮಟ್ಟದಲ್ಲಿ ಸಿಂಥೆಟಿಕ್‌ ಜೀವ ವಿಜ್ಞಾನ ಕ್ಷೇತ್ರದ ಅತ್ಯಂತ ಪ್ರತಿಷ್ಠೆಯ ಸ್ಪರ್ಧೆಯಾಗಿದೆ. ನೈಜ ಜೀವನದಲ್ಲಿ ವ್ಯಕ್ತಿ ಎದುರಿಸುತ್ತಿರುವ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕಳೆದ 10 ವರ್ಷಗಳಿಂದ ಸ್ಪರ್ಧೆ ಆಯೋಜಿಸುತ್ತಿದ್ದು, ಪ್ರಸಕ್ತ ಸಾಲಿನ ಸ್ಪರ್ಧೆಯಲ್ಲಿ ವಿಶ್ವದ 300ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು.

ರಿಕಾಂಬಿನಂಟ್‌ ಪ್ರೊಟೀನ್‌ ಶುದ್ಧೀಕರಿಸುವ ನೂತನ ಐಡಿಯಾದೊಂದಿಗೆ “ಐಐಎಸ್‌ಸಿ-ಐಜೆಮ್‌’ ತಂಡವು ಕಳೆದ ಎಂಟು ತಿಂಗಳಿನಿಂದ ಮೈಕ್ರೋ ಬಯಾಲಜಿ ಹಾಗೂ ಸೆಲ್‌ ಬಯಾಲಜಿ ವಿಭಾಗದ ಪ್ರೊ.ದೀಪ್‌ಶಿಖಾ ಚಕ್ರವರ್ತಿ ಹಾಗೂ ಪ್ರೊ.ಉತ್ಪಲ್‌ನಾಥ್‌ ಅವರ ಮಾರ್ಗದರ್ಶನದಲ್ಲಿ ಸತತ ಪ್ರಯೋಗ ನಡೆಸಿ, “ಐ-ಫ್ಲೋಟ್‌’ ಎಂಬ ಹೆಸರಿನ ಈ ಯೋಜನೆಯಲ್ಲಿ ಹ್ಯಾಲೋ ಬ್ಯಾಕ್ಟೀರಿಯಲ್‌ ಸ್ಪೀಸೀಸ್‌ನ ಬೇರ್ಪಡಿಸುವಿಕೆಯಿಂದ ಲಭ್ಯವಾಗುವ ಗ್ಯಾಸ್‌ ವೆಸಿಕಲ್ಸ್‌ ಉಪಯೋಗಿಸಿಕೊಳ್ಳುವ ತಂತ್ರವನ್ನ ಸಿದ್ಧಪಡಿಸಿದ್ದರು. 

ಈ ಅನಿಲ ವೆಸಿಕಲ್‌ಗ‌ಳ ಪರಿಣಾಮದಿಂದ ಬ್ಯಾಕ್ಟೀರಿಯಾಗಳು ದ್ರವ ಮಾಧ್ಯಮದಲ್ಲಿ ಮೇಲ್ಮುಖವಾಗಿ ಚಲಿಸಿ, ಮೇಲಕ್ಕೆ ಬಂದು ತೇಲುತ್ತವೆ. ಇದನ್ನು ಬಳಸಿಕೊಂಡ ಐಐಎಸ್‌ಸಿ “ಐ-ಫ್ಲೋಟ್‌’ ವಿದ್ಯಾರ್ಥಿಗಳ ತಂಡವು ರಿಕಾಂಬಿನಂಟ್‌ ಪ್ರೋಟೀನ್‌ ಶುದ್ಧೀಕರಿಸುವ ತಂತ್ರಜ್ಞಾವನ್ನು ಅಭಿವೃದ್ಧಿಪಡಿಸಿದ್ದರು.

ಈ ನೂತನ ತಂತ್ರಜ್ಞಾನದಲ್ಲಿ ಜೈವಿಕ ತಂತ್ರಜ್ಞಾನ ಮತ್ತು ಜೀನ್‌ ಕ್ಲೋನಿಂಗ್‌ ತಂತ್ರಜ್ಞಾನವನ್ನು ವಿದ್ಯಾರ್ಥಿಗಳು ಬಳಸಿದ್ದರು. ನಂತರದಲ್ಲಿ ಬಯೋಕೆಮಿಕಲ್‌ ಪರೀಕ್ಷಾ ತಂತ್ರಗಳೆನಿಸಿದ “ಎಸ್‌ಡಿಎಸ್‌-ಪೇಜ್‌’ ಪರೀಕ್ಷೆಯ ಮೂಲಕ ಪರೀಕ್ಷೆಗೆ ಒಳಪಡಿಸಿ, ಎಲ್ಲ ಪರೀಕ್ಷೆಗಳಲ್ಲಿ ತಂತ್ರಜ್ಞಾನ ಯಶಸ್ವಿಯಾದ ನಂತರದಲ್ಲಿ ಸ್ಪರ್ಧೆ ಕಳುಹಿಸಲಾಗಿದ್ದ ತಂತ್ರಜ್ಞಾನಕ್ಕೆ ಚಿನ್ನದ ಪದಕ ದೊರಕಿದೆ. 

ಚಿನ್ನದ ಪದಕ ವಿಜೇತ ತಂಡದಲ್ಲಿ ರಾಜ್‌ ಮಗೇಶ್‌, ಸಾಯಿ ಪದ್ಮಪ್ರಿಯಾ, ಕುನಾಲ್‌ ಹೆಳಂಬೆ, ರಜಸ್‌ ಪೂರ್ಣ, ಶರತ್‌ ಕೆ.ಮೆನನ್‌, ರೋಹಿತ್‌ ಕೆ.ಎಂ.ಎಸ್‌., ಭಾಸ್ಕರ್‌ ಕುಮಾವತ್‌, ದುರ್ಜಯ ಪ್ರಮಾಣಿಕ್‌, ಪ್ರತ್ಯೂಷಾ ಮಧೂರೆ, ಜೂಲಿಯನ್‌ ಡಿ’ಕೋಸ್ಟ, ಮುಕುಲ್‌ ಸಾಗರ್‌, ಶ್ರೇಯ್‌ ಗುಪ್ತಾ, ಆದಿತ್ಯ ಅಯ್ಯರ್‌ ಮತ್ತು ಪ್ರೀತಮ್‌ ವೆಂಕಟೇಶ್‌ ಇದ್ದಾರೆ. ಜತೆಗೆ ಪಿಎಚ್‌ಡಿ ವಿದ್ಯಾರ್ಥಿ ಅಕ್ಷಯ್‌ ದಾತೆ ವಿದ್ಯಾರ್ಥಿಗಳಿಗೆ ಸಹಾಯ ಮಾಡಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. 

ಬಾಸ್ಟನ್‌ನಿಂದ ಭಾರತಕ್ಕೆ ಗುರುವಾರ ಬಂದಿಳಿದ 14 ವಿದ್ಯಾರ್ಥಿಗಳಿದ್ದ ತಂಡವು ಐಐಎಸ್‌ಸಿ ನಿರ್ದೇಶಕರಾದ ಪ್ರೊ.ಅನುರಾಗ್‌ ಕುಮಾರ್‌ ಅವರನ್ನು ಭೇಟಿ ಮಾಡಿ ಸಂತಸ ಹಂಚಿಕೊಂಡಿದ್ದು, ಇದೇ ವೇಳೆ ನಿರ್ದೇಶಕರು ವಿದ್ಯಾರ್ಥಿಗಳಿಗೆ ಸಿಹಿ ಹಂಚಿ ಅಭಿನಂದಿಸಿದ್ದಾರೆ.

ಟಾಪ್ ನ್ಯೂಸ್

Uttar Pradesh: ಹಾವಿನ ದ್ವೇಷ…45 ದಿನಗಳಲ್ಲಿ 5 ಬಾರಿ ಹಾವು ಕಚ್ಚಿದರೂ ಬದುಕುಳಿದ ವ್ಯಕ್ತಿ!

Chikkamagaluru: ಬಸ್ ಹತ್ತುವ ವೇಳೆ ತುಂಡಾದ ಡೋರ್ ಲಾಕ್… ಮಹಿಳೆಗೆ ಗಾಯ

Chikkamagaluru: ಡೋರ್ ಲಾಕ್ ತುಂಡಾಗಿ ಬಸ್ಸಿನಿಂದ ಹೊರಬಿದ್ದ ಮಹಿಳೆ…

Sirsi: ಕೇಂದ್ರ ಸಚಿವರನ್ನು ಭೇಟಿಯಾದ ಕಾಗೇರಿ: ಚತುಷ್ಪತ ರಾ.ಹೆದ್ದಾರಿ ತ್ವರಿತಕ್ಕೆ ಮನವಿ

Sirsi: ಕೇಂದ್ರ ಸಚಿವರನ್ನು ಭೇಟಿಯಾದ ಕಾಗೇರಿ: ಚತುಷ್ಪತ ರಾ.ಹೆದ್ದಾರಿ ತ್ವರಿತಕ್ಕೆ ಮನವಿ

18

Actress Akshita Bopaiah: ತಮಿಳಿನತ್ತ ನವನಟಿ ಅಕ್ಷಿತಾ ಸಿನಿಯಾನ

Hubballi: ಪಾಲಿಕೆ ಆಯುಕ್ತರು, ಸಿಬ್ಬಂದಿಗಳಿಂದ ದಾಳಿ… ನಿಷೇಧಿತ ಪ್ಲಾಸ್ಟಿಕ್ ವಶ

Hubballi: ಪಾಲಿಕೆ ಆಯುಕ್ತರು, ಸಿಬ್ಬಂದಿಗಳಿಂದ ದಾಳಿ… ನಿಷೇಧಿತ ಪ್ಲಾಸ್ಟಿಕ್ ವಶ

16

ಮದುವೆ ಆಗಲು ನಿರಾಕರಿಸಿದ್ದಕ್ಕೆ ಪ್ರಿಯಕರನ ಖಾಸಗಿ ಅಂಗವನ್ನೇ ಕತ್ತರಿಸಿದ ಪ್ರಿಯತಮೆ.!

ವಿದೇಶ ಪ್ರವಾಸಿ ಕಥನ ಭಾಗ-1:| ಉಡುಪಿಯಿಂದ ಮರಳು ನಾಡಿನ ರಾಜಧಾನಿಯತ್ತ ಪಯಣ

ವಿದೇಶ ಪ್ರವಾಸಿ ಕಥನ ಭಾಗ-1:| ಉಡುಪಿಯಿಂದ ಮರಳು ನಾಡಿನ ರಾಜಧಾನಿಯತ್ತ ಪಯಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10

Bengaluru: ನಿಮ್ಮ ಮನೆ ಬಳಿ ಸಸಿ ನೆಡಬೇಕಾ? ಹಸಿರು ತೇರು ಸಂಪರ್ಕಿಸಿ

Kidnap Case: ಕಾಲೇಜು ವಿದ್ಯಾರ್ಥಿನಿ ಕಿಡ್ನಾಪ್‌; ಯುವಕನ ವಿರುದ್ಧ ಎಫ್ಐಆರ್‌

Kidnap Case: ಕಾಲೇಜು ವಿದ್ಯಾರ್ಥಿನಿ ಕಿಡ್ನಾಪ್‌; ಯುವಕನ ವಿರುದ್ಧ ಎಫ್ಐಆರ್‌

BBMP: ಪಾಲಿಕೆಯಲ್ಲಿ ಬಹುಕೋಟಿ ಅವ್ಯವಹಾರ; ಅಧಿಕಾರಿಗಳ ತನಿಖೆಗೆ ಆಯುಕ್ತರ ಸಮ್ಮತಿ

BBMP: ಪಾಲಿಕೆಯಲ್ಲಿ ಬಹುಕೋಟಿ ಅವ್ಯವಹಾರ; ಅಧಿಕಾರಿಗಳ ತನಿಖೆಗೆ ಆಯುಕ್ತರ ಸಮ್ಮತಿ

Missing Case: ನಾಪತ್ತೆಯಾಗಿದ್ದ ಕಾನ್‌ಸ್ಟೇಬಲ್ ಮೃತದೇಹ ಶಂಕಾಸ್ಪದವಾಗಿ ಪತ್ತೆ

Missing Case: ನಾಪತ್ತೆಯಾಗಿದ್ದ ಕಾನ್‌ಸ್ಟೇಬಲ್ ಮೃತದೇಹ ಶಂಕಾಸ್ಪದವಾಗಿ ಪತ್ತೆ

Bengaluru Crime: ಹವಾ ತೋರಿಸಲು ಹೋಗಿ ಹೆಣವಾದ!

Bengaluru Crime: ಹವಾ ತೋರಿಸಲು ಹೋಗಿ ಹೆಣವಾದ!

MUST WATCH

udayavani youtube

ಉಡುಪಿ ಪತ್ರಿಕಾ ಭವನ ಸಮಿತಿ ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆ

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

udayavani youtube

Congress ಪಾರ್ಟಿಯ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ ಬಸವರಾಜ ಬೊಮ್ಮಾಯಿ

udayavani youtube

ರುಚಿ ರುಚಿ ಮನೆ ತಿಂಡಿ ಬೇಕು ಅನ್ನೋರು ವಿವಿ ಪುರಂಗೆ ಹೋಗಲೇಬೇಕು

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

ಹೊಸ ಸೇರ್ಪಡೆ

Uttar Pradesh: ಹಾವಿನ ದ್ವೇಷ…45 ದಿನಗಳಲ್ಲಿ 5 ಬಾರಿ ಹಾವು ಕಚ್ಚಿದರೂ ಬದುಕುಳಿದ ವ್ಯಕ್ತಿ!

1-mng-protest

Mangaluru: ನೀಟ್ ಅವ್ಯವಹಾರ: ಎನ್.ಎಸ್.ಯು.ಐ., ಕಾಂಗ್ರೆಸ್ ಪ್ರತಿಭಟನೆ

Chikkamagaluru: ಬಸ್ ಹತ್ತುವ ವೇಳೆ ತುಂಡಾದ ಡೋರ್ ಲಾಕ್… ಮಹಿಳೆಗೆ ಗಾಯ

Chikkamagaluru: ಡೋರ್ ಲಾಕ್ ತುಂಡಾಗಿ ಬಸ್ಸಿನಿಂದ ಹೊರಬಿದ್ದ ಮಹಿಳೆ…

Sirsi: ಕೇಂದ್ರ ಸಚಿವರನ್ನು ಭೇಟಿಯಾದ ಕಾಗೇರಿ: ಚತುಷ್ಪತ ರಾ.ಹೆದ್ದಾರಿ ತ್ವರಿತಕ್ಕೆ ಮನವಿ

Sirsi: ಕೇಂದ್ರ ಸಚಿವರನ್ನು ಭೇಟಿಯಾದ ಕಾಗೇರಿ: ಚತುಷ್ಪತ ರಾ.ಹೆದ್ದಾರಿ ತ್ವರಿತಕ್ಕೆ ಮನವಿ

18

Actress Akshita Bopaiah: ತಮಿಳಿನತ್ತ ನವನಟಿ ಅಕ್ಷಿತಾ ಸಿನಿಯಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.