ಖಾಕಿ ಸೋಗಿನಲ್ಲಿ ಚಿನ್ನದ ಗಟ್ಟಿ ದರೋಡೆ 


Team Udayavani, Mar 14, 2023, 1:22 PM IST

tdy-10

ಬೆಂಗಳೂರು: ಪೊಲೀಸರ ಸೋಗಿನಲ್ಲಿ ಕೋಟ್ಯಂತರ ರೂ. ಮೌಲ್ಯದ ಚಿನ್ನದ ಗಟ್ಟಿಗಳನ್ನು ಕಸಿದುಕೊಂಡು ಪರಾರಿಯಾಗಿರುವ ಘಟನೆ ಉಪ್ಪಾರಪೇಟೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಈ ಸಂಬಂಧ ರಾಯಚೂರು ಮೂಲದ ಅಬ್ದುಲ್‌ ರಜಾಕ್‌ ಎಂಬುವರು ಉಪ್ಪಾರಪೇಟೆ ಠಾಣೆಯಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್‌ ದಾಖಲಿಸಿದ್ದಾರೆ.  ರಾಯಚೂರಿನ ನೇತಾಜಿನಗರದ ಅಬ್ದುಲ್‌ ರಜಾಕ್‌ ಮತ್ತು ಮಲ್ಲಯ್ಯ ಚಿನ್ನದ ಗಟ್ಟಿ ಕಳೆದುಕೊಂಡವರು.

ಮಾಲೀಕರ ಸೂಚನೆ ಮೇರೆಗೆ ಅಬ್ದುಲ್‌ ರಜಾಕ್‌ 56 ಲಕ್ಷ ರೂ. ಮತ್ತು ಮಲ್ಲಯ್ಯ 54 ಲಕ್ಷ ರೂ. ತಂದು ರಾಜಾ ಮಾರ್ಕೆಟ್‌ ನಲ್ಲಿರುವ ಬಾಪೂ ಭಾಯ್‌ ಹಾಗೂ ಅಜಯ್‌-ವಿಜಯ್‌ ಎಂಬುವರ ಬಳಿ ಚಿನ್ನದ ಗಟ್ಟಿ ಖರೀದಿಸಲು ಇಬ್ಬರು ಪ್ರತ್ಯೇಕವಾಗಿ ಮಾ.10ರಂದು ಬೆಂಗಳೂರಿಗೆ ಬಂದಿದ್ದರು. ಇದೇ ವೇಳೆ ಮತ್ತೂಬ್ಬ ಸುನೀಲ್‌ ಕುಮಾರ್‌ ಕೂಡ ಮಾಲೀಕರ ಸೂಚನೆ ಮೇರೆಗೆ ಚಿನ್ನದ ಗಟ್ಟಿ ಖರೀದಿಗೆ ಬಂದಿದ್ದರು. ಮಾ.11ರಂದು ಅಪರಾಹ್ನ ಅಬ್ದುಲ್‌ ರಜಾಕ್‌ ಮತ್ತು ಮಲ್ಲಯ್ಯ ಹಾಗೂ ಸುನೀಲ್‌ ಕುಮಾರ್‌ ರಾಜಾ ಮಾರ್ಕೆಟ್‌ ಗೆ ಹೋಗಿದ್ದಾರೆ. ಬಳಿಕ ಮೂವರು ಪ್ರತ್ಯೇಕವಾಗಿ ಚಿನ್ನಾಭರಣ ವ್ಯಾಪಾರಿಗಳ ಬಳಿ ತೆರಳಿ ಚಿನ್ನದ ಗಟ್ಟಿಗಳನ್ನು ಖರೀದಿಸಿದ್ದಾರೆ.

ನಂತರ ಲಾಡ್ಜ್ ಗೆ ಹೋಗಿ, ರಾತ್ರಿ 11 ಗಂಟೆಗೆ ರಾಯಚೂರಿಗೆ ವಾಪಸ್‌ ತೆರಳಲು ಗ್ರೀನ್ಸ್‌ ಟ್ರಾವೆಲ್ಸ್‌ ಕಚೇರಿ ಬಳಿ ಹೋಗಿದ್ದರು. ಈ ವೇಳೆ ಅಡ್ಡಗಟ್ಟಿದ್ದ ಇಬ್ಬರು ಅಪರಿಚಿತರು, ‘ನಾವು ಪೊಲೀಸರು 3 ತಿಂಗಳಿಂದ ನಿಮ್ಮನ್ನು ಗಮನಿಸುತ್ತಿದ್ದೇವೆ’ ಎಂದಿದ್ದಾರೆ. ಬಳಿಕ ಇಬ್ಬರ ಬಳಿಯಿದ್ದ 2 ಕೆ.ಜಿ.200 ಗ್ರಾಂ ‌ಚಿನ್ನಾಭರಣದ ಬ್ಯಾಗ್‌ ಕಸಿದುಕೊಂಡು, ರೇಸ್‌ಕೋರ್ಸ್‌ ರಸ್ತೆ ಮಾರ್ಗವಾಗಿ ನೆಹರೂ ತಾರಾಲಯ ಬಳಿ ಕರೆದೊಯ್ದು ಮಾರ್ಗ ಮಧ್ಯೆ ಇಳಿಸಿ ಜಿಲ್ಲಾಧಿಕಾರಿಗಳ ಕಚೇರಿಗೆ ಬರುವಂತೆ ತಿಳಿಸಿ, ಆಟೋದಲ್ಲಿ ಪರಾರಿಯಾಗಿದ್ದಾರೆ.

ಈ ಸಂಬಂಧ 2.2 ಕೆ.ಜಿ. ಚಿನ್ನದ ಗಟ್ಟಿ, ಚಿನ್ನಾಭರಣಗಳಿರುವ ಬ್ಯಾಗ್‌, 19 ಸಾವಿರ ರೂ. ನಗದು ಕದ್ದು ಪರಾರಿಯಾಗಿದ್ದಾರೆ.

ಟಾಪ್ ನ್ಯೂಸ್

yashapal

Udupi: ಭದ್ರತೆ ದೃಷ್ಟಿಯಿಂದ ಪ್ರಕರಣ ಉನ್ನತ ಮಟ್ಟದ ತನಿಖೆ ವಹಿಸಿ: ಶಾಸಕ ಯಶ್‌ಪಾಲ್‌ ಸುವರ್ಣ

ucchila

Udupi: ಉಚ್ಚಿಲ ದಸರಾ 2024; ಶಾರದೆ, ನವದುರ್ಗೆಯರ ಅದ್ದೂರಿ ಶೋಭಾಯಾತ್ರೆ

Krishna-Mutt

Udupi: ಶ್ರೀಕೃಷ್ಣ ಮಠದಲ್ಲಿ ಕದಿರುಹಬ್ಬ, ಸಾಂಪ್ರದಾಯಿಕ ಬಿರುದಾವಳಿಗಳೊಂದಿಗೆ ಮೆರವಣಿಗೆ

1-saasds

Mysore Dasara;ದೀಪಾಲಂಕಾರ 12 ದಿನ ವಿಸ್ತರಣೆ: ಡಿ.ಕೆ.ಶಿವಕುಮಾರ್‌

Bhatakal

Bhatkal: ತಿರುಪತಿಗೆ ನೇರ ರೈಲು ಸಂಪರ್ಕದಿಂದ ಜನರಿಗೆ ಅನುಕೂಲ: ಎಸ್.ಎಸ್. ಕಾಮತ್

1-ewss

T20 series; ಕ್ಲೀನ್‌ಸ್ವೀಪ್‌ ಸಾಧನೆ: ಬಾಂಗ್ಲಾ ಎದುರು ಭಾರತಕ್ಕೆ ಬೃಹತ್‌ ಗೆಲುವು

Joshi

Grants: ಕೇಂದ್ರ ಸರಕಾರ ದೂರುವುದೇ ರಾಜ್ಯ ಕಾಂಗ್ರೆಸ್‌ ಸರಕಾರದ ಚಾಳಿ: ಪ್ರಹ್ಲಾದ್‌ ಜೋಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-pg

Bengaluru: ಮಾರ್ಗಸೂಚಿ ಪಾಲಿಸದ ಪಿಜಿಗಳಿಗೆ ಪಾಲಿಕೆ ಬೀಗ

14-bng

ಮಾರುಕಟ್ಟೆಯಲ್ಲಿ ದಸರಾ ಹಬ್ಬದ ರಂಗು; ಕಳೆದ ವಾರಕ್ಕೆ ಹೋಲಿಸಿದರೆ ತರಕಾರಿ, ಹೂ ಬೆಲೆ ಹೆಚ್ಚಳ

8-bng

Bengaluru: ಬೇಕರಿ ಮಾಲಿಕರ ಬೆದರಿಸಿ ಸುಲಿಗೆ ಮಾಡುತ್ತಿದ್ದ ಯುಟ್ಯೂಬರ್‌ ಬಂಧನ

6-dasara

Dasara ಹಬ್ಬಕ್ಕೆ ಊರಿಗೆ ಹೊರಟ ಲಕ್ಷಾಂತರ ಜನ: ಹಲವೆಡೆ ಭಾರೀ ಸಂಚಾರ ದಟ್ಟಣೆ

5-bng

Bengaluru: ಜಾಗತಿಕ ವಿವಿ ರ್‍ಯಾಂಕಿಂಗ್‌: ದೇಶದಲ್ಲಿ ಐಐಎಸ್‌ಸಿಗೆ ಅಗ್ರಪಟ್ಟ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

yashapal

Udupi: ಭದ್ರತೆ ದೃಷ್ಟಿಯಿಂದ ಪ್ರಕರಣ ಉನ್ನತ ಮಟ್ಟದ ತನಿಖೆ ವಹಿಸಿ: ಶಾಸಕ ಯಶ್‌ಪಾಲ್‌ ಸುವರ್ಣ

1-paramm

G.Parameshwara; ಬೊಂಬೆ ಹೇಳುತೈತೆ ಹಾಡಿಗೆ ಗೃಹ ಸಚಿವರ ಹೆಜ್ಜೆ!

ucchila

Udupi: ಉಚ್ಚಿಲ ದಸರಾ 2024; ಶಾರದೆ, ನವದುರ್ಗೆಯರ ಅದ್ದೂರಿ ಶೋಭಾಯಾತ್ರೆ

HDK (4)

H.D. Kumaraswamy; ಹತ್ತು ವರ್ಷಗಳ ಹಿಂದಿನ ವರದಿ ಇಟ್ಟುಕೊಂಡು ಏನು ಮಾಡುತ್ತೀರಿ?

Krishna-Mutt

Udupi: ಶ್ರೀಕೃಷ್ಣ ಮಠದಲ್ಲಿ ಕದಿರುಹಬ್ಬ, ಸಾಂಪ್ರದಾಯಿಕ ಬಿರುದಾವಳಿಗಳೊಂದಿಗೆ ಮೆರವಣಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.