ಜಿಎಸ್ಟಿ ವಂಚನೆ: ಉದ್ಯಮಿ ಬಂಧನ
Team Udayavani, Jul 8, 2018, 6:00 AM IST
ಬೆಂಗಳೂರು: ಜಿಎಸ್ಟಿಯಡಿ 15 ಕೋಟಿ ರೂ.ತೆರಿಗೆ ವಂಚಿಸಿದ ಆರೋಪದಡಿ ಬೆಂಗಳೂರಿನ ಉದ್ಯಮಿಯೊಬ್ಬರನ್ನು ಬಂಧಿಸಲಾಗಿದೆ. ಜಿಎಸ್ಟಿ ವಂಚನೆ ಸಂಬಂಧ ರಾಜ್ಯದಲ್ಲಿ ಇದು ಪ್ರಥಮ ಬಂಧನವಾಗಿದೆ.
ಕೇಂದ್ರೀಯ ತೆರಿಗೆಗಳ ಇಲಾಖೆಯ ಬೆಂಗಳೂರು ದಕ್ಷಿಣ ಜಿಎಸ್ಟಿ ಆಯುಕ್ತಾಲಯದ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿ ಉದ್ಯಮಿಯನ್ನು ಬಂಧಿಸಿದರು. ಜಿಎಸ್ಟಿಯಡಿ ಗ್ರಾಹಕರಿಂದ ಸಂಗ್ರಹಿಸಿದ್ದ ತೆರಿಗೆಯನ್ನು ಪಾವತಿಸದ ಬೆಂಗಳೂರಿನ ಬೊಮ್ಮಸಂದ್ರದಲ್ಲಿನ ಆಟೋಮೊಬೈಲ್ ಕೈಗಾರಿಕೆಯೊಂದರ ವ್ಯವಸ್ಥಾಪಕ ನಿರ್ದೇಶಕರೇ ಬಂಧನ ಕ್ಕೊಳಗಾದ ವ್ಯಕ್ತಿ. ಬಳಿಕ ಮ್ಯಾಜಿಸ್ಟ್ರೇಟರ್ ಮುಂದೆ ಹಾಜರುಪಡಿಸಿದಾಗ ಎರಡು ವಾರದೊಳಗೆ 15 ಕೋಟಿ ರೂ. ಪಾವತಿಸುವಾಗಿ ಉದ್ಯಮಿ ಮುಚ್ಚಳಿಕೆ ನೀಡಿದ ಹಿನ್ನೆ ಲೆಯಲ್ಲಿ ಅವರು ಮಧ್ಯಂತರ ಜಾಮೀನು ಪಡೆದುಕೊಂಡಿದ್ದಾ ರೆ.
ನೂತನ ಜಿಎಸ್ಟಿ ವ್ಯವಸ್ಥೆ ಜಾರಿಯಾಗಿ ವರ್ಷ ಕಳೆದಿದ್ದು, ಎಲ್ಲ ತೆರಿಗೆದಾರರು ಸಮರ್ಪಕವಾಗಿ ತೆರಿಗೆ ಪಾವತಿಸುವಂತೆ ಕೇಂದ್ರೀಯ ತೆರಿಗೆ ಇಲಾಖೆಯೂ ಮೇಲ್ವಿಚಾರಣೆ ನಡೆಸುತ್ತಿದೆ. ಅದರಂತೆ ಮೇಲ್ವಿಚಾರಣೆ ನಡೆಸುವಾಗ ಆಟೋಮೊಬೈಲ್ ಕೈಗಾರಿಕೆಯೊಂದು ಭಾರಿ ಮೊತ್ತದ ತೆರಿಗೆ ಬಾಕಿ ಉಳಿಸಿಕೊಂಡಿರುವುದು ಕಂಡುಬಂತು. ಕೂಡಲೇ ಅಧಿಕಾರಿಗಳು ಆ ಕಂಪೆನಿಯ ವಹಿವಾಟು, ತೆರಿಗೆ ಬಗ್ಗೆ ಪರಿಶೀಲನೆ ಆರಂಭಿಸಿದ್ದರು.
ವಂಚನೆ ನಡೆಸಿರುವುದು ಮೇಲ್ನೋಟಕ್ಕೆ ಕಂಡುಬಂದ ಕೂಡಲೇ ಕಂಪೆನಿಯ ಮೇಲೆ ದಾಳಿ ನಡೆಸಿ ವ್ಯವಹಾರಕ್ಕೆ ಸಂಬಂಧಪಟ್ಟ ರಸೀದಿ, ಇನ್ವಾಯ್ಸಗಳು, ಪಾವತಿಗಳನ್ನು ಪರಿಶೀಲಿಸಲಾಯಿತು. ಜಿಎಸ್ಟಿ ಜಾರಿಯಾದ 2017ರ ಜುಲೈ ತಿಂಗಳ ತೆರಿಗೆಯನ್ನಷ್ಟೇ ಕಂಪೆನಿ ಪಾವತಿಸಿತ್ತು. ನಂತರದ ಅಂದರೆ 2017ರ ಆಗಸ್ಟ್ನಿಂದ 2018ರ ಮೇ ತಿಂಗಳವರೆಗಿನ ತೆರಿಗೆ ಪಾವತಿಸದಿರುವುದು ಕಂಡುಬಂತು. ಕಂಪೆನಿಯು ತನ್ನ ಗ್ರಾಹಕರಿಗೆ ಜಿಎಸ್ಟಿ ತೆರಿಗೆ ವಿಧಿಸಿ ಅವರಿಂದ ಸಂಗ್ರಹಿಸಿದ್ದರೂ ಅದನ್ನು ಇಲಾಖೆಗೆ ಪಾವತಿಸದೆ ಸುಮಾರು 15 ಕೋಟಿ ರೂ. ವಂಚಿಸಿರುವುದು ಬಯಲಾಯಿತು.
ಕೂಡಲೇ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕರನ್ನು ಬಂಧಿಸಲಾಯಿತು. ಬಳಿಕ ಮ್ಯಾಜಿಸ್ಟೇಟ್ ಮುಂದೆ ಹಾಜರುಪಡಿಸಿದಾಗ ಉದ್ಯಮಿಯು ಎರಡು ವಾರಗಳಲ್ಲಿ ತೆರಿಗೆ ಪಾವತಿಸುವುದಾಗಿ ಭರವಸೆ ನೀಡಿದರು ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ದೊಡ್ಡ ತೆರಿಗೆದಾರರ ಮೇಲೆ ಕಣ್ಣು
ಜಿಎಸ್ಟಿ ಜಾರಿಯಾಗಿ ಒಂದು ವರ್ಷ ಕಳೆದಿದ್ದು, ಪ್ರತಿ ತೆರಿಗೆದಾರರು ನಿಯಮಾನುಸಾರ ಸೂಕ್ತ ತೆರಿಗೆ ಪಾವತಿಸುತ್ತಿದ್ದಾರೆ ಎಂಬ ಬಗ್ಗೆ ನಿರಂತರ ಮೇಲ್ವಿಚಾರಣೆ ನಡೆದಿದೆ. ಅದರಲ್ಲೂ ಒಂದು ಕೋಟಿ ರೂ., ಐದು ಕೋಟಿ ರೂ. ಮೊತ್ತದ ತೆರಿಗೆ ಪಾವತಿದಾರರ ಮೇಲೆ ವಿಶೇಷ ನಿಗಾ ಇರಿಸಲಾಗಿದೆ. ಅವರ ವಹಿವಾಟು, ವಿಧಿಸುತ್ತಿರುವ ಜಿಎಸ್ಟಿ, ಪಾವತಿಯ ಬಗ್ಗೆ ಸಲ್ಲಿಸುವ ವಿವರಗಳನ್ನು ಪರಿಶೀಲಿಸಲಾಗುತ್ತಿದೆ. ತೆರಿಗೆ ವಂಚನೆದಾರರ ವಿರುದ್ಧ ನಿದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರೀಯ ತೆರಿಗೆಗಳ ಇಲಾಖೆಯ ಬೆಂಗಳೂರು ದಕ್ಷಿಣ ಜಿಎಸ್ಟಿ ಆಯುಕ್ತಾಲಯದ ತಡೆ ಘಟಕವು (ಪ್ರಿವೆನÒನ್ ಯುನಿಟ್) ಕಾರ್ಯಾಚರಣೆ ನಡೆಸಿ 15 ಕೋಟಿ ರೂ. ತೆರಿಗೆ ಪಾವತಿಸದ ಆಟೋಮೊಬೈಲ್ ಕಂಪೆನಿಯೊಂದರ ವ್ಯವಸ್ಥಾಪಕ ನಿರ್ದೇಶಕರನ್ನು ಬಂಧಿಸಲಾಗಿದೆ. ತೆರಿಗೆ ವಂಚಿಸಿರುವುದನ್ನು ಉದ್ಯಮಿ ಒಪ್ಪಿಕೊಂಡಿದ್ದಾರೆ. ಮುಂದಿನ ತನಿಖೆ ಪ್ರಗತಿಯಲ್ಲಿದೆ.
– ಜಿ.ನಾರಾಯಣಸ್ವಾಮಿ, ಕೇಂದ್ರೀಯ ತೆರಿಗೆ ಆಯುಕ್ತ, ಬೆಂಗಳೂರು ದಕ್ಷಿಣ ಆಯುಕ್ತಾಲಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Koppal: ಚಿಕನ್, ಮಟನ್ ಸೆಂಟರ್ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ
Malleshwaram: ಪ್ರಕರಣದಲ್ಲಿ ಭಾಗಿಯಾಗಿದ್ದ ಕೈದಿಯಿಂದ ಹನಿಟ್ರ್ಯಾಪ್?
Caste census: ನಾಡಿದ್ದು ಸಿಎಂ ಸಿದ್ದರಾಮಯ್ಯ ಮಹತ್ವದ ಸಭೆ
Result: ಇಂದು ಯುಜಿನೀಟ್ ಪರಿಷ್ಕೃತ ತಾತ್ಕಾಲಿಕ ಫಲಿತಾಂಶ ಪ್ರಕಟ
MUST WATCH
ಹೊಸ ಸೇರ್ಪಡೆ
Aranthodu: ಅರಮನೆಗಯ ಶಿಥಿಲಗೊಂಡ ತೂಗು ಸೇತುವೆಯಿಂದ ಕೆಳಗೆ ಬಿದ್ದು ಮೂವರಿಗೆ ಗಾಯ
Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.